ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ
- ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ By: aniljoshi (Sep 5 2007 - 7:57am)
- ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ By: muralihr (Sep 5 2007 - 9:19am)
- ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ By: hamsanandi (Sep 4 2007 - 10:06pm)
- ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ By: muralihr (Sep 4 2007 - 10:47pm)

RSS:
ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ
ನಮಸ್ಕಾರ. ಇದು ಸಂಪದದಲ್ಲಿ ನನ್ನ ಮೊದಲ ಕಮೆಂಟು.
ಯಾವದೋ ಒಂದು ಸಿನೆಮಾ ನೋಡಿ ಬಂದು ಅದರ ನಿರ್ದೇಶಕ/ನಾಯಕ/ನಾಯಕಿಯ ಬಗ್ಗೆ ತಾಸುಗಟ್ಟಲೆ ಕೊಚ್ಚುವದನ್ನು ಇವತ್ತು ಕಾಣಬಹುದಾದರೆ, ಆಗ ತಾನೇ ನೋಡಿದಂತಹ ವಿಶ್ವರೂಪದಿಂದ ಪ್ರಭಾವಿತನಾಗಿ ಅರ್ಜುನ ಹಾಗೆ ದೇವರನ್ನ ಹೊಗಳಿದ್ದು ಆಶ್ಚರ್ಯವೇನೂ ಅಲ್ಲ ಅಲ್ಲವೆ? ಹೊಗಳ್ತಾ ಇರೋದು ನಾನಲ್ಲ ಅರ್ಜುನ ಅಂತಲೇ ಹೇಳಬಹುದು ಕುಮಾರ ವ್ಯಾಸ! ಅಷ್ಟಕ್ಕೂ ಅರ್ಜುನ ಮಾಡುತ್ತಿರುವದು ಬರೀ ಮುಖಸ್ತುತಿಯೇನೂ ಅಲ್ಲವಲ್ಲ? ಅವನು ಆಗ ತಾನೇ ಕಣ್ಣಾರೆ ಕಂಡ ಸತ್ಯವನ್ನೇ ಅಲ್ಲವೇ ಹೇಳುತ್ತ ಇರೋದು?
ವ್ಯಾಸರ ಗೀತೆ ಓದಿದ್ದೀರಾ? ವಿಶ್ವರೂಪದಲ್ಲಿ ಹೋಗಿ ಮಾಯವಾಗ್ತ ಇದ್ದ ಭೀಷ್ಮ, ದ್ರೋಣ, ಕರ್ಣ ಇವರೆನ್ನಲ್ಲ ಕಂಡು, ಆ ರೂಪದ ಸರ್ವ ಭಕ್ಷಣ ಸ್ವರೂಪವನ್ನ ಕಂಡು ಅರ್ಜುನ ನಡುಗಿಹೋಗುತ್ತಾನೆ. ಮತ್ತೆ ಮತ್ತೆ ನಮಸ್ಕರಿಸುತ್ತಾನೆ. ಕೊನೆಗೆ ಕೃಷ್ಣನ ಸೌಮ್ಯ ರೂಪವನ್ನೇ ನೋಡಬಯಸುತ್ತಾನೆ!
ಇದರಲ್ಲಿ ಯಾವುದನ್ನ ಕೃಷ್ಣ 'ಪ್ರಜ್ಞಾವಾದಂಶ್ಚ ಭಾಷಸೆ` ಎಂದು ಹೊಡೆದು ಹಾಕುತ್ತಾನೋ ಅದನ್ನ ಅರ್ಥ ಪೂರ್ಣ ವಿಷಾದ ಎನ್ನುತ್ತೀದ್ದೀರಾ?
ಕೃಷ್ಣ ಅರ್ಜುನನಿಗೆ ಅದ್ವೈತಕಲೆಯನ್ನ ಬೋಧಿಸಬೇಕು ಅಂದುಕೊಂಡಿದ್ದು ನಿಮ್ಮ ಷರಾ ಮಾತ್ರವಾ ಅಥವಾ ಅದನ್ನೇ ಕುಮಾರವ್ಯಾಸನೂ ನೀವು ಹೇಳಿದಷ್ಟೇ ನೇರವಾಗಿ ಹೇಳಿದ್ದಾನೊ?
Anil