ಬಾಲ್ಯಕಾಲದ ಶಿಕ್ಷಕರ ಹೆಸರು ನೆನಪಿಸಿಕೊಳ್ಳುವುದಕ್ಕೆ ಸ್ಫೂರ್ತಿ ನೀಡಿದ್ದಕ್ಕೆ ಧನ್ಯವಾದಗಳು.
.............
"ಈಗಿನ ಮಕ್ಕಳ ಉತ್ಸಾಹ ನೋಡಿ ಸಂತೋಷವಾಗುತ್ತದೆ ಜೊತೆಗೆ ಆಶ್ಚ್ರರ್ಯವೂ ಆಗುತ್ತದೆ, ಈಗಿನ ಮಕ್ಕಳಿಗೆ ನಿಜವಾಗಿಯೂ ತಮ್ಮ ಟೀಚರ್ ಮೇಲೆ ಪ್ರೀತಿಯಿದೆಯೇ ಎಂದು"
....................................................
ನಾಲ್ಕು ದಿನಗಳ ಹಿಂದೆ ಒಂದು ಸಣ್ಣ ಘಟನೆ.
ಮಾಸ್ತರು ಕರ್ರಗಿದ್ರು. ಕ್ಲಾಸಿನಲ್ಲಿ ಒಬ್ಬ ಹುಡ್ಗ ಹಾಡೊದಿಕ್ಕೆ ಶುರು ಹಚ್ಕೊಂಡ ‘ಕರಿಯ ಐ ಲವ್ ಯು’. ಬಿತ್ತು ಅವನಿಗೆ ಒಂದು ಲತ್ತೆ. ಶಾಲೆಗೆ ಪೋಷಕರ ಮುತ್ತಿಗೆ, ಪ್ರತಿಭಟನೆ. ಆ ಮಾಸ್ತರ್ರಿಗೆ ಬೇರೆ ಕಡೆಗೆ ಬಲವಂತದ ವರ್ಗ.
ಯಾಕೆ ಹೀಗಾಗುತ್ತಿದ್ದಾರೆ ಮಕ್ಕಳು? ಟಿವಿ ಪ್ರಭಾವಾನಾ?
ಗುರು ವ್ರಂದದ ಸಮಸ್ಯೆನೇ ಬೇರೆ? ಬೇರೆಯವರಿಗೆ ಹೋಲಿಸಿದ್ರೆ ವ್ರತ್ತಿಯಲ್ಲಿ ಅಂಥ ಬೆಳವಣಿಗೆ ಏನಿಲ್ಲ (ಸಂಬಳ, ಸವಲತ್ತು ಇತ್ಯಾದಿ). ಬಿಸಿಯೂಟ, ಪ್ರತಿಭಾ ಕಾರಂಜಿ ಅದೂ ಇದೂ ಹತ್ತಾರು ತಲೆನೋವು. ‘ನೀವು ಮಕ್ಕಳನ್ನು ರೂಪಿಸೋ ಶಿಲ್ಪಿಗಳು, ಅವ್ರ, ದೇಶದ ಭವಿಶ್ಯ ನಿಮ್ಮ ಕೈಲಿ’ ಅನ್ನೋ ಬೆಣ್ಣೆ ಮಾತುಗಳು. ಪಾಸ್ಸಿಂಗ್ ಪರ್ಸೆಂಟೇಜ್ ಜಾಸ್ತಿಯಾಗ್ಬೇಕು, ಸಿಲೇಬಸ್ ಮುಗಿಸ್ಬೇಕು ಅನ್ನೋ ಓಟದಲ್ಲಿ ಶಿಕ್ಷಕರು ಶಿಕ್ಷಣದ ಮೌಲ್ಯಯುತ ಉದ್ದೇಶಗಳನ್ನು ನೆನಪಿಟ್ಟುಕೊಂಡಿದ್ದಾರಾ?
ಹೆಚ್ಚು ಶಾಲೆ, ಹೆಚ್ಚು ಕಾಲೇಜು ಅಂದ್ರೆ ಶಿಕ್ಷಣ ಕ್ಷೇತ್ರದ ಅಭಿವ್ರದ್ಧಿನಾ?
ಶಿಕ್ಷಣ ಒಂದು ಸೇವೆಯಾಗಿ ಉಳಿದಿದೆಯಾ? ಶಿಕ್ಷಕರೂ ಏಕೆ ನಗರಾಭಿಮುಖರಾಗುತ್ತಿದ್ದಾರೆ? ಹೀಗೆ ನೋಡುತ್ತ ಹೋದರೆ ನೂರಾರು ಪ್ರಶ್ನೆಗಳು ಶಿಕ್ಷಕರ ದಿನದ ಸಂಭ್ರಮಕ್ಕೆ ಮಂಕು ಕವಿಸುತ್ತವೆ. ಹಾಗಂತ ಎಲ್ಲವೂ ನಿರಾಶದಾಯಕ ಅಂತೇನೂ ಅಲ್ಲ.
ಆದ್ರೆ ಸುಡುವ ಸಮಸ್ಯೆಗಳಿಗೆ ಪರಿಹಾರ ಇದ್ರೆ ಅದು ಏನು?
ಇದೇ ಸಮಯದಲ್ಲಿ, ಶಿವಮೊಗ್ಗದ ಹಳ್ಳಿಯೊಂದರಲ್ಲಿ ನಡೆಯುತ್ತಿರುವ ಮೌಲ್ಯಯುತ ಶಿಕ್ಷಣದ ಕುರಿತಾದ ಶಿಬಿರದ ನೆನಪಾಗುತ್ತಿದೆ. ಸಮಯ ಸಿಕ್ಕಾಗ ಮತ್ತೆ ಅದರ ಬಗ್ಗೆ ಬರೆಯುತ್ತೇನೆ.
ನಾನು ಮರೆಯದ, ಮರೆಯಲಾಗದ ಗುರುಗಳೆನ್ನೆಲ್ಲ ಸ್ಮರಿಸಿಕೊಳ್ಳುತ್ತ
ಗುರುಭ್ಯೋ ನಮಹ.
ಉ: ಟೀಚರ್ಸ್ ಡೇ!
ಬಾಲ್ಯಕಾಲದ ಶಿಕ್ಷಕರ ಹೆಸರು ನೆನಪಿಸಿಕೊಳ್ಳುವುದಕ್ಕೆ ಸ್ಫೂರ್ತಿ ನೀಡಿದ್ದಕ್ಕೆ ಧನ್ಯವಾದಗಳು.
.............
"ಈಗಿನ ಮಕ್ಕಳ ಉತ್ಸಾಹ ನೋಡಿ ಸಂತೋಷವಾಗುತ್ತದೆ ಜೊತೆಗೆ ಆಶ್ಚ್ರರ್ಯವೂ ಆಗುತ್ತದೆ, ಈಗಿನ ಮಕ್ಕಳಿಗೆ ನಿಜವಾಗಿಯೂ ತಮ್ಮ ಟೀಚರ್ ಮೇಲೆ ಪ್ರೀತಿಯಿದೆಯೇ ಎಂದು"
....................................................
ನಾಲ್ಕು ದಿನಗಳ ಹಿಂದೆ ಒಂದು ಸಣ್ಣ ಘಟನೆ.
ಮಾಸ್ತರು ಕರ್ರಗಿದ್ರು. ಕ್ಲಾಸಿನಲ್ಲಿ ಒಬ್ಬ ಹುಡ್ಗ ಹಾಡೊದಿಕ್ಕೆ ಶುರು ಹಚ್ಕೊಂಡ ‘ಕರಿಯ ಐ ಲವ್ ಯು’. ಬಿತ್ತು ಅವನಿಗೆ ಒಂದು ಲತ್ತೆ. ಶಾಲೆಗೆ ಪೋಷಕರ ಮುತ್ತಿಗೆ, ಪ್ರತಿಭಟನೆ. ಆ ಮಾಸ್ತರ್ರಿಗೆ ಬೇರೆ ಕಡೆಗೆ ಬಲವಂತದ ವರ್ಗ.
ಯಾಕೆ ಹೀಗಾಗುತ್ತಿದ್ದಾರೆ ಮಕ್ಕಳು? ಟಿವಿ ಪ್ರಭಾವಾನಾ?
ಗುರು ವ್ರಂದದ ಸಮಸ್ಯೆನೇ ಬೇರೆ? ಬೇರೆಯವರಿಗೆ ಹೋಲಿಸಿದ್ರೆ ವ್ರತ್ತಿಯಲ್ಲಿ ಅಂಥ ಬೆಳವಣಿಗೆ ಏನಿಲ್ಲ (ಸಂಬಳ, ಸವಲತ್ತು ಇತ್ಯಾದಿ). ಬಿಸಿಯೂಟ, ಪ್ರತಿಭಾ ಕಾರಂಜಿ ಅದೂ ಇದೂ ಹತ್ತಾರು ತಲೆನೋವು. ‘ನೀವು ಮಕ್ಕಳನ್ನು ರೂಪಿಸೋ ಶಿಲ್ಪಿಗಳು, ಅವ್ರ, ದೇಶದ ಭವಿಶ್ಯ ನಿಮ್ಮ ಕೈಲಿ’ ಅನ್ನೋ ಬೆಣ್ಣೆ ಮಾತುಗಳು. ಪಾಸ್ಸಿಂಗ್ ಪರ್ಸೆಂಟೇಜ್ ಜಾಸ್ತಿಯಾಗ್ಬೇಕು, ಸಿಲೇಬಸ್ ಮುಗಿಸ್ಬೇಕು ಅನ್ನೋ ಓಟದಲ್ಲಿ ಶಿಕ್ಷಕರು ಶಿಕ್ಷಣದ ಮೌಲ್ಯಯುತ ಉದ್ದೇಶಗಳನ್ನು ನೆನಪಿಟ್ಟುಕೊಂಡಿದ್ದಾರಾ?
ಹೆಚ್ಚು ಶಾಲೆ, ಹೆಚ್ಚು ಕಾಲೇಜು ಅಂದ್ರೆ ಶಿಕ್ಷಣ ಕ್ಷೇತ್ರದ ಅಭಿವ್ರದ್ಧಿನಾ?
ಶಿಕ್ಷಣ ಒಂದು ಸೇವೆಯಾಗಿ ಉಳಿದಿದೆಯಾ? ಶಿಕ್ಷಕರೂ ಏಕೆ ನಗರಾಭಿಮುಖರಾಗುತ್ತಿದ್ದಾರೆ? ಹೀಗೆ ನೋಡುತ್ತ ಹೋದರೆ ನೂರಾರು ಪ್ರಶ್ನೆಗಳು ಶಿಕ್ಷಕರ ದಿನದ ಸಂಭ್ರಮಕ್ಕೆ ಮಂಕು ಕವಿಸುತ್ತವೆ. ಹಾಗಂತ ಎಲ್ಲವೂ ನಿರಾಶದಾಯಕ ಅಂತೇನೂ ಅಲ್ಲ.
ಆದ್ರೆ ಸುಡುವ ಸಮಸ್ಯೆಗಳಿಗೆ ಪರಿಹಾರ ಇದ್ರೆ ಅದು ಏನು?
ಇದೇ ಸಮಯದಲ್ಲಿ, ಶಿವಮೊಗ್ಗದ ಹಳ್ಳಿಯೊಂದರಲ್ಲಿ ನಡೆಯುತ್ತಿರುವ ಮೌಲ್ಯಯುತ ಶಿಕ್ಷಣದ ಕುರಿತಾದ ಶಿಬಿರದ ನೆನಪಾಗುತ್ತಿದೆ. ಸಮಯ ಸಿಕ್ಕಾಗ ಮತ್ತೆ ಅದರ ಬಗ್ಗೆ ಬರೆಯುತ್ತೇನೆ.
ನಾನು ಮರೆಯದ, ಮರೆಯಲಾಗದ ಗುರುಗಳೆನ್ನೆಲ್ಲ ಸ್ಮರಿಸಿಕೊಳ್ಳುತ್ತ
ಗುರುಭ್ಯೋ ನಮಹ.