ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ

September 13, 2007 - 7:58pm — ramesh-m

ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ

ramesh-m's picture

ಈ ಚರ್ಚೆ ಕುತೂಹಲಕಾರಿಯಾಗಿದೆ. ಆಸ್ತಿಕರು-ನಾಸ್ತಿಕರ ವಿಚಾರ ಬಿಟ್ಟುಬಿಡಿ. ರಾಜಕೀಯ ಪಕ್ಷಗಳನ್ನೂ ಬದಿಗಿಡೋಣ. ರಾಮ ಸೇತು ಇತ್ತು ಅದನ್ನು ಉಳಿಸಬೇಕು ಎಂದು ಹೋರಾಡುತ್ತಿರುವವರು ಯಾರು ಎಂಬುದನ್ನೊಮ್ಮೆ ನೋಡೋಣ. ರಾಮನಿದ್ದ ಅವನು ನಿರ್ಮಿಸಿದ್ದ ಸೇತುವೆ ಇತ್ತು. ಅದನ್ನು ಉಳಿಸಬೇಕು ಎನ್ನುವ ವಿಶ್ವಹಿಂದೂ ಪರಿಷತ್ತಿಗೆ ನರ್ಮದಾ ಅಣೆಕಟ್ಟೆಯಿಂದಾಗಿ ಮುಳುಗಿಹೋಗುತ್ತಿದ್ದ ಯಾವ ದೇವಸ್ಥಾನದ ಬಗ್ಗೆಯೂ ಕಾಳಜಿ ಇರಲಿಲ್ಲ. ಅಷ್ಟೇಕೆ ಸಮುದ್ರದ ಅಡಿಯಲ್ಲಿರುವ ರಾಮನ ಸೇತುವೆಗೆ ದೇಶವ್ಯಾಪಿಯಾಗಿ ಚಳವಳಿ ಹೂಡುವ ಇವರಿಗೆ ದಲಿತರನ್ನು ಕೊಲ್ಲಬೇಡಿ ಎಂದು ತಮ್ಮ ಹಿಂದೂ ಸೋದರರಿಗೆ ಹೇಳಲು ನಾಲಿಗೆ ಇರುವುದಿಲ್ಲ. ಚಾತುರ್ ವರ್ಣ್ಯವನ್ನು ಜಾರಿಗೆ ತಂದುಬಿಡುವ ಉತ್ಸಾಹದಲ್ಲಿರುವವರಿಂದ ಇಂಥದ್ದನ್ನೆಲ್ಲಾ ನಿರೀಕ್ಷಿಸಬಾರದು ಎಂದುಕೊಂಡು ಯೋಚಿಸೋಣ. ನಂದಗುಡಿ, ಚಾಮಲಾಪುರ, ನಂದಿಕೂರು ಮುಂತಾದ ಕರ್ನಾಟಕದ ಊರುಗಳಲ್ಲಿ ತಥಾಕಥಿತ ಇಂಡಸ್ಟ್ರಿಗಳಿಗೆ ಬಲಿಯಾಗುತ್ತಿರುವ ಪರಿಸರವೂ ರಾಮನಾಳಿದ ದೇಶದ ಪರಿಸರ ಎನಿಸುವುದಿಲ್ಲವೇಕೆ? ಅದು ಬಿಡಿ ಇಲ್ಲಿ ಜಮೀನು ಕಳೆದುಕೊಳ್ಳುತ್ತಿರುವವರೆಲ್ಲರೂ ಅಲ್ಲದಿದ್ದರೂ ಹೆಚ್ಚಿನವರು ಹಿಂದೂ ಸೋದರರೇ ಎಂಬುದೇಕೆ ಕಾಣಿಸುವುದಿಲ್ಲ?

ರಾಮಸೇತುವಿನ ವಿಷಯಕ್ಕೆ ಬಂದಾಗ ಮುಖ್ಯವಾಗುವ ಪರಿಸರ, ಸಾಗರದಾಳದ ಸೂಕ್ಷ್ಮ ಜೈವಿಕ ಕ್ರಿಯೆಗಳು ನಂದಿಕೂರಿನ ಉಷ್ಣ ವಿದ್ಯುತ್ ಸ್ಥಾವರಕ್ಕೆ ಅನ್ವಯಿಸುವುದಿಲ್ಲ. ಟನ್ ಗಟ್ಟಳೆ ಹಾರುಬೂದಿ ಅರಬಿ ಕಡಲಿನ ಮೇಲೆ ಸುರಿದರೂ ಪರಿಸರ ಹಾನಿಯಾಗುವುದಿಲ್ಲ ಎಂದು ಇವರು ಭಾವಿಸಿದ್ದಾರೆಯೇ?

ರಾಮಸೇತು ಇತ್ತೆಂದು ನಾಸಾ ಹೇಳಿದ್ದು ಮುಖ್ಯವಾಗುತ್ತದೆಯಾದರೆ ಪಶ್ಚಿಮಘಟ್ಟಗಳು ಜಗತ್ತಿನ ಹತ್ತು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಒಂದು ಎಂದು WWF, WCS ಗಳು ಹೇಳಿದ್ದೂ ಮುಖ್ಯವಾಗಬೇಕಲ್ಲ. ಇವೂ ಅಮೆರಿಕದ ಸಂಸ್ಥೆಗಳೇ. ಪಶ್ಚಿಮಘಟ್ಟವನ್ನು ಹಾಳುಗೆಡವಲು ಟೊಂಕಕಟ್ಟಿರುವವರು ಸದ್ಯಕ್ಕಂತೂ ಹಿಂದೂ ಐಕ್ಯತೆಯನ್ನು ಸದಾ ಜಪಿಸುವ ಪಕ್ಷವಾದ ಬಿಜೆಪಿಯ ಪ್ರಮುಖ ನಾಯಕರಾಗಿರುವ ವಿ.ಎಸ್. ಆಚಾರ್ಯರು. ನಾಗಾರ್ಜುನ ಯೋಜನೆಯಿಂದ ನೆಲೆ ಕಳೆದುಕೊಳ್ಳುವವರು, ತೊಂದರೆ ಅನುಭವಿಸುವ ಮೀನುಗಾರರು ಹಿಂದೂ ಸೋದರರೇ ಎಂಬುದನ್ನು ಅವರು ಸದ್ಯ ಮರೆತಿದ್ದಾರೆಯೇ?

ಅವರೇನೋ ರಾಜಕಾರಣಿ. ಕರ್ನಾಟಕಾದ್ಯಂತ ರಾಮಸೇತುವಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ವಿಶ್ವ ಹಿಂದೂ ಪರಿಷತ್ ಮತ್ತು ಆರ್ ಎಸ್ ಎಸ್ ನ ನಾಯಕರಾರೂ ರಾಜಕಾರಣಿಗಳೆಲ್ಲವಲ್ಲ. ಇವರಿಗಾದರೂ ಇದರ ವಿರುದ್ಧ ಒಂದು ಪ್ರತಿಭಟನೆ ನಡೆಸಬಹುದಿತ್ತಲ್ಲ. ನರ್ಮದಾ ತಟದ ಜೀವಿಗಳನ್ನೂ, ಈ ಜೀವಿಗಳ ನಂಬಿಕೆಗಳನ್ನೂ ಉಳಿಸಲು ಹೋರಾಡುತ್ತಿರುವ ಮೇಧಾ ಪಾಟ್ಕರ್ ಶೃಂಗೇರಿಗೆ ಬಂದಾಗ ಅವರನ್ನು ವಿರೋಧಿಸಿದವರೇ ರಾಮ ಸೇತುವಿಗಾಗಿ ಕರ್ನಾಟಕದಲ್ಲಿ ಚಳವಳಿ ನಿರತರಾಗಿದ್ದಾರೆ. ಅಂದರೆ ಇವರಾರಿರೂ ಸಜೀವ ಪರಂಪರೆ ಬೇಡ.
ರಮೇಶ್ ಸಮಗಾರ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ರಾಮನೂ ಇಲ್ಲ, ರಾಮಾಯಣವೂ ಇಲ್ಲ By: mahesha (26 replies) September 12, 2007 - 7:21pm
  • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: Ennares (Sep 28 2007 - 6:58pm)
  • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: kpbolumbu (Sep 14 2007 - 3:42pm)
    • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: kpbolumbu (Sep 20 2007 - 7:27pm)
  • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: Sunil Jayaprakash (Sep 14 2007 - 12:40pm)
    • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: Sunil Jayaprakash (Sep 14 2007 - 12:57pm)
  • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: muralihr (Sep 13 2007 - 11:59pm)
  • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: Aravinda (Sep 13 2007 - 5:46pm)
    • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: ramesh-m (Sep 13 2007 - 7:58pm)
      • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: muralihr (Sep 14 2007 - 1:05pm)
        • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: roshan_netla (Sep 14 2007 - 3:07pm)
          • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: ramesh-m (Sep 14 2007 - 4:19pm)
            • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: roshan_netla (Sep 17 2007 - 11:00am)
        • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: Sunil Jayaprakash (Sep 14 2007 - 1:10pm)
  • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: Sunil Jayaprakash (Sep 13 2007 - 4:13pm)
    • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: mahesha (Sep 13 2007 - 4:27pm)
      • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: Sunil Jayaprakash (Sep 13 2007 - 5:01pm)
        • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: mahesha (Sep 13 2007 - 5:29pm)
          • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: kishorpatwardhan (Sep 13 2007 - 5:47pm)
            • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: mahesha (Sep 13 2007 - 6:00pm)
              • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: kishorpatwardhan (Sep 13 2007 - 6:31pm)
                • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: kpbolumbu (Sep 13 2007 - 6:33pm)
                  • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: mahesha (Sep 13 2007 - 6:39pm)
                    • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: kpbolumbu (Sep 13 2007 - 6:53pm)
                      • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: mahesha (Sep 13 2007 - 6:57pm)
                    • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: kpbolumbu (Sep 13 2007 - 6:52pm)
  • ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: mahesha (Sep 13 2007 - 4:04pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • veeravenki
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:54pm
  • yogeshkrbhat1
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:41pm
  • savithru
    ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು
    September 5, 2008 - 2:30pm
  • yogeshkrbhat1
    ಉ: ಪದಬೆಳಗು: ೩: ಸಜ್ಜನ
    September 5, 2008 - 2:28pm
  • anil.ramesh
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:27pm
  • ASHMYA
    ಉ: ನೀರವತೆ!
    September 5, 2008 - 2:17pm
  • savithru
    ಉ: ನೀರವತೆ!
    September 5, 2008 - 2:08pm
  • JAYADEV
    ಉ: ನೀರವತೆ!
    September 5, 2008 - 1:50pm
  • hpn
    ಉ: ನೀರವತೆ!
    September 5, 2008 - 1:31pm
  • JAYADEV
    ಉ: ನೀರವತೆ!
    September 5, 2008 - 1:25pm
ಇನ್ನಷ್ಟು


ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator