ಇದಕ್ಕೆ ಪರಿಹಾರವೊಂದೇ. ತಪ್ಪು ಕಲ್ಪನೆಗಳನ್ನ ಹೋಗಲಾಡಿಸುವುದು. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಇದ್ದವರಿಗೆ ಗಣಕಯಂತ್ರದಲ್ಲಿ ಕನ್ನಡ ಉಪಯೋಗಿಸಬಹುದು ಎಂದು ಪ್ರಚುರಪಡಿಸುವುದು. ಇಂಗ್ಲೀಷನ್ನು ಎಷ್ಟು ಸಲೀಸಾಗಿ ಟೈಪಿಸಬಹುದೋ ಹಾಗೆಯೇ ಕನ್ನಡವನ್ನೂ ಅಷ್ಚೇ ಸುಲಭವಾಗಿ ಉಪಯೋಗಿಸಬಹುದು. ಸಾಧ್ಯವಾದಷ್ಟು ಮಟ್ಟಿಗೆ ಯೂನಿಕೋಡ್ ಎನೇಬಲ್ಡ್ ಮೇಲ್ ಕ್ಲಯಂಟ್ನಿಂದ ಕನ್ನಡದ ಮೇಲ್ ಕಳುಹಿಸುವುದು.
ಕೇವಲ ಹಲೋ ಮೇಯ್ಲ್ ನಿಂದಲೇ ಕನ್ನಡದಲ್ಲಿ ಮೇಯ್ಲ್ ಕಳುಹಿಸಬಹುದು, ಚಾಟ್ ಮಾಡಬಹುದು ಎಂದು ಬಹಳ ಜನಗಳಿಗೆ ತಿಳಿ ಹೇಳಿದ್ದೇನೆ. ಆದರೂ ಏನು ಮಾಡುವುದು. ನಾವಿರೋದೇ ಹಾಗೆ, ಯಾರಾದರೂ ತಿಳಿಸಿಕೊಡಲಿ ಅಂತಲೇ ಕಾಯ್ತಿರ್ತೀವಿ. ಸುಲಭವಾಗಿ ಕಂಗ್ಲೀಷ್ ಟೈಪಿಸಿಬಿಡುತ್ತೇವೆ. ಅದರ ಜೊತೆಗೆ, ಕೆಟ್ಟ ಪತ್ರಿಕಾ ಲೇಖನಗಳೂ ಬೇರೆ.
ಆ ಲೇಖನ ಪ್ರಕಟವಾದ ದಿನ ನಮ್ಮ ಮನೇಲೂ ಚರ್ಚೆ ನಡೀತು. ನಾನು ನಮ್ಮ ತಂದೆಗೆ ಇದು ಎಷ್ಟು ಸುಳ್ಳು ಎಂದು ತೋರಿಸಿಕೊಟ್ಟೆ.
ಯಾವಾಗ ಜನರಿಗೆ (ಇಲ್ಲಿ ಜನ ಎಂದರೆ ಎಲ್ಲರೂ, ಕೇವಲ ತಾಂತ್ರಿಕ ಮಂದಿಯಲ್ಲ) ಕನ್ನಡ ಟೈಪಿಸುವುದು ಸುಲಭ ಎಂದು ಮನವರಿಕೆ ಯಾಗುವುದೋ ಅಂದೇ ಅವರು ವಿಷಯ ತಿಳಿಯಲು ತವಕಪಡುತ್ತಾರೆ.
ಉದಾ: ಪವನಜರೇ ಅನೇಕ ಲೇಖನ ಬರೆದಿದ್ದಾರೆ. ಆದರೆ ಅದನ್ನು ಎಷ್ಟು ಮಂದಿ ಓದಿದ್ದಾರೋ ಕಾಣೆ. ಇದಕ್ಕೆ ಕಾರಣ, ಅನೇಕ ವೇಳೆ ಇಂತಹ ಲೇಖನಗಳು ವಾರದ ಪುರವಣೆಗಳಾಗುತ್ತವೆ. ಬಹಳ ಮಂದಿಗೆ ಮುಖ್ಯ ಸಮಾಚಾರಗಳು ಮಾತ್ರ ಬೇಕಿರುತ್ತವೆ. ಪುರವಣೆಗಳನ್ನು ಓದುವವರು ಕಡಿಮೆ. ನಮ್ಮ ಪತ್ರಿಕಾ ವಲಯಕ್ಕೆ ಈ ಸುದ್ದಿಗಳು ಪ್ರಮುಖವೆನಿಸುವುದಿಲ್ಲ. ಅವಕ್ಕೆ ಕೇವಲ ಜಗಳ, ಯುದ್ಧ, ಕೊಲೆ, ಪಕ್ಷಾಂತರ ಇಂತಹ ಸುದ್ದಿಗಳೇ ಬೇಕಿರುತ್ತವೆ.
ತಪ್ಪು ಕಲ್ಪನೆಗಳು
ಇದಕ್ಕೆ ಪರಿಹಾರವೊಂದೇ. ತಪ್ಪು ಕಲ್ಪನೆಗಳನ್ನ ಹೋಗಲಾಡಿಸುವುದು. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಇದ್ದವರಿಗೆ ಗಣಕಯಂತ್ರದಲ್ಲಿ ಕನ್ನಡ ಉಪಯೋಗಿಸಬಹುದು ಎಂದು ಪ್ರಚುರಪಡಿಸುವುದು. ಇಂಗ್ಲೀಷನ್ನು ಎಷ್ಟು ಸಲೀಸಾಗಿ ಟೈಪಿಸಬಹುದೋ ಹಾಗೆಯೇ ಕನ್ನಡವನ್ನೂ ಅಷ್ಚೇ ಸುಲಭವಾಗಿ ಉಪಯೋಗಿಸಬಹುದು. ಸಾಧ್ಯವಾದಷ್ಟು ಮಟ್ಟಿಗೆ ಯೂನಿಕೋಡ್ ಎನೇಬಲ್ಡ್ ಮೇಲ್ ಕ್ಲಯಂಟ್ನಿಂದ ಕನ್ನಡದ ಮೇಲ್ ಕಳುಹಿಸುವುದು.
ಕೇವಲ ಹಲೋ ಮೇಯ್ಲ್ ನಿಂದಲೇ ಕನ್ನಡದಲ್ಲಿ ಮೇಯ್ಲ್ ಕಳುಹಿಸಬಹುದು, ಚಾಟ್ ಮಾಡಬಹುದು ಎಂದು ಬಹಳ ಜನಗಳಿಗೆ ತಿಳಿ ಹೇಳಿದ್ದೇನೆ. ಆದರೂ ಏನು ಮಾಡುವುದು. ನಾವಿರೋದೇ ಹಾಗೆ, ಯಾರಾದರೂ ತಿಳಿಸಿಕೊಡಲಿ ಅಂತಲೇ ಕಾಯ್ತಿರ್ತೀವಿ. ಸುಲಭವಾಗಿ ಕಂಗ್ಲೀಷ್ ಟೈಪಿಸಿಬಿಡುತ್ತೇವೆ. ಅದರ ಜೊತೆಗೆ, ಕೆಟ್ಟ ಪತ್ರಿಕಾ ಲೇಖನಗಳೂ ಬೇರೆ.
ಉದಾ: ಇತ್ತೀಚಿನ ಪ್ರಜಾವಾಣಿಯ ಒಂದು ಲೇಖನ.
ಪವನಜರು ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದರು ಕೂಡ ಸರಿಯಾಗಿಯೇ ಇದೆ.. http://sampada.net/node/808
ಆ ಲೇಖನ ಪ್ರಕಟವಾದ ದಿನ ನಮ್ಮ ಮನೇಲೂ ಚರ್ಚೆ ನಡೀತು. ನಾನು ನಮ್ಮ ತಂದೆಗೆ ಇದು ಎಷ್ಟು ಸುಳ್ಳು ಎಂದು ತೋರಿಸಿಕೊಟ್ಟೆ.
ಯಾವಾಗ ಜನರಿಗೆ (ಇಲ್ಲಿ ಜನ ಎಂದರೆ ಎಲ್ಲರೂ, ಕೇವಲ ತಾಂತ್ರಿಕ ಮಂದಿಯಲ್ಲ) ಕನ್ನಡ ಟೈಪಿಸುವುದು ಸುಲಭ ಎಂದು ಮನವರಿಕೆ ಯಾಗುವುದೋ ಅಂದೇ ಅವರು ವಿಷಯ ತಿಳಿಯಲು ತವಕಪಡುತ್ತಾರೆ.
ಉದಾ: ಪವನಜರೇ ಅನೇಕ ಲೇಖನ ಬರೆದಿದ್ದಾರೆ. ಆದರೆ ಅದನ್ನು ಎಷ್ಟು ಮಂದಿ ಓದಿದ್ದಾರೋ ಕಾಣೆ. ಇದಕ್ಕೆ ಕಾರಣ, ಅನೇಕ ವೇಳೆ ಇಂತಹ ಲೇಖನಗಳು ವಾರದ ಪುರವಣೆಗಳಾಗುತ್ತವೆ. ಬಹಳ ಮಂದಿಗೆ ಮುಖ್ಯ ಸಮಾಚಾರಗಳು ಮಾತ್ರ ಬೇಕಿರುತ್ತವೆ. ಪುರವಣೆಗಳನ್ನು ಓದುವವರು ಕಡಿಮೆ. ನಮ್ಮ ಪತ್ರಿಕಾ ವಲಯಕ್ಕೆ ಈ ಸುದ್ದಿಗಳು ಪ್ರಮುಖವೆನಿಸುವುದಿಲ್ಲ. ಅವಕ್ಕೆ ಕೇವಲ ಜಗಳ, ಯುದ್ಧ, ಕೊಲೆ, ಪಕ್ಷಾಂತರ ಇಂತಹ ಸುದ್ದಿಗಳೇ ಬೇಕಿರುತ್ತವೆ.
ಏನು ಮಾಡುವುದು ...ದೊಡ್ಡ ?????