ಮಹೇಶರೆ ಗಮನಿಸಿದೆ. ಇನ್ನೊಂದು ಎಳೆಯಲ್ಲಿ ಈಗಾಗಲೇ ಕನ್ನಡದಲ್ಲಿ ಗೌರೀಶ ಕಾಯ್ಕಿಣಿಯರ 'ಚಾರ್ವಾಕ ದರ್ಶನ' ದ ಬಗ್ಗೆ ಮಿಶ್ರಿಕೋಟಿಯರು ಹೇಳಿದ್ದಾರೆ.
ಒಂದೆರಡು ಅನಿಸಿಕೆ-
ಚಟ್ಟೋಪಾಧ್ಯಾಯರ ಪುಸ್ತಕ ನನ್ನ ಬಳಿ ಇದೆ. ಒಮ್ಮೆ ತುಂಬ ಹಿಂದೆ ಓದಿ ಈಗ ರೆಫೆರ್ ಮಾಡಲು ಬಳಸುತ್ತೀನಿ. ಅದರಲ್ಲಿ ಗಣಪತಿಯ ಬಗ್ಗೆ ಇರುವ ಒಂದು ಭಾಗ ತುಂಬಾ ಚೆನ್ನಾಗಿದೆ. ಅದರಲ್ಲಿ ನಮ್ಮ ಪುರಾಣಗಳಲ್ಲಿರುವ ಪ್ರತಿಮೆಗಳು ಹೇಗೆ ಹಿಂದಿನ ಬುಡಕಟ್ಟುಗಳ 'totem'ಗಳ ಮುಂದುವರಿಕೆ ಎಂದು ತೋರಿದ್ದಾರೆ. ಆನೆ ಟೋಟೆಮಿನ, ಇಲಿಯ ಟೋಟೆಮಿನ ಬುಡಕಟ್ಟು ಜನರ ನಡುವಿನ ಜಗಳದ ಬಗ್ಗೆ ತುಂಬಾ ಕುತೂಹಲಕಾರಿ ಮಾತಿದೆ. (ಮೂಷಕವಾಹನ ಗಣೇಶ!) ಇದು ನೇರವಾಗಿ ಚಾರ್ವಾಕ ದರ್ಶನದ ಬಗ್ಗೆ ಅಲ್ಲವಾದರೂ, ಅಂದಿನ ತಾತ್ವಿಕ ಜಗಳಗಳ ಬಗ್ಗೆ, ಚಾರ್ವಾಕ ದರ್ಶನದ ಹಿಂದಿನ ಬೇರುಗಳ ಬಗ್ಗೆ ತುಂಬಾ ಮಾಹಿತಿ ನೀಡುತ್ತದೆ. ನಮ್ಮ ತತ್ವಶಾಸ್ತ್ರಗಳ ಹಿಂದಿನ ರಾಜಕೀಯವೂ ಅದರಲ್ಲಿ ಇರುವ ಮತ್ತೊಂದು ಎಳೆ.
ಮೇಲೆ ಹೇಳಿದ ಮಹಾಭಾರತದ ಉಲ್ಲೇಖದ ಮುಖ್ಯ ಭಾಗ ಹೇಳಬೇಕು. ಯುದ್ಧ ಗೆದ್ದು ಪಾಂಡವರು ರಾಜರಾಗುವ ವೇಳೆ. ಎಲ್ಲರೂ ಅವರನ್ನು ಹರಿಸಿದಾಗ ಚಾರ್ವಾಕ "ಅಣ್ಣ ತಮ್ಮಂದಿರನ್ನು ಕೊಂದ ನೀವು ಹಾರೈಕೆಗೆ ಅನರ್ಹರು" ಅಂದನಂತೆ. ಆಗ ಕೃಷ್ಣನ ಆದೇಶದ ಮೇಲೆ ಅವನನ್ನು ಸುಟ್ಟು ಕೊಂದರಂತೆ. ಸುಟ್ಟಿದ್ದು ಯಾಕೆಂದರೆ-ಚಾರ್ವಾಕನ ಪ್ರಕಾರ ಸತ್ತ ಮೇಲೆ ಬೂದಿಯಷ್ಟೇ ಉಳಿಯುವುದು ಎಂಬ ನಿಲುವಿನಿಂದಾಗಿ.
ಪ್ರಸಾದರೆ,
"ಚಾರ್ವಾಕ ದರ್ಶನದ ಹಿನ್ನಡೆ ಅದರ ಅಭಾವವಾದದಲ್ಲಿದೆ" ಇದು ನಿಮ್ಮ ಅನಿಸಿಕೆಯೆ? ಯೋಚಿಸುವಂತೆ ಮಾಡಿತು. ಮೊದಲ ನೋಟದಲ್ಲಿ ಒಪ್ಪಿಗೆಯಾಗಲಿಲ್ಲ.
ಚಟ್ಟೋಪಾಧ್ಯಾಯರು ತಮ್ಮ ಮುನ್ನುಡಿಯಲ್ಲೇ ಇವರ ಇತಿಹಾಸವನ್ನು 'ಪುನರ್ ರಚಿಸಬೇಕಾದ' ಅನಿವಾರ್ಯದ ಬಗ್ಗೆ ಚೆನ್ನಾಗಿ ಹೇಳಿದ್ದಾರೆ.
ಅಂದ ಹಾಗೆ ಚಾರ್ವಾಕ ಪದದ ಅರ್ಥ ನನಗೆ ನೆನಪಿಲ್ಲ. ಹಲವಾರು ಬೇರುಗಳಿದೆ ಎಂದು ಓದಿದ ನೆನಪು.
ಉ: ಚಾರ್ವಾಕ ದರ್ಶನ-ಒಂದು ಚಿಂತನೆ
ಮಹೇಶರೆ ಗಮನಿಸಿದೆ.
ಇನ್ನೊಂದು ಎಳೆಯಲ್ಲಿ ಈಗಾಗಲೇ ಕನ್ನಡದಲ್ಲಿ ಗೌರೀಶ ಕಾಯ್ಕಿಣಿಯರ 'ಚಾರ್ವಾಕ ದರ್ಶನ' ದ ಬಗ್ಗೆ ಮಿಶ್ರಿಕೋಟಿಯರು ಹೇಳಿದ್ದಾರೆ.
ಒಂದೆರಡು ಅನಿಸಿಕೆ-
ಚಟ್ಟೋಪಾಧ್ಯಾಯರ ಪುಸ್ತಕ ನನ್ನ ಬಳಿ ಇದೆ. ಒಮ್ಮೆ ತುಂಬ ಹಿಂದೆ ಓದಿ ಈಗ ರೆಫೆರ್ ಮಾಡಲು ಬಳಸುತ್ತೀನಿ. ಅದರಲ್ಲಿ ಗಣಪತಿಯ ಬಗ್ಗೆ ಇರುವ ಒಂದು ಭಾಗ ತುಂಬಾ ಚೆನ್ನಾಗಿದೆ. ಅದರಲ್ಲಿ ನಮ್ಮ ಪುರಾಣಗಳಲ್ಲಿರುವ ಪ್ರತಿಮೆಗಳು ಹೇಗೆ ಹಿಂದಿನ ಬುಡಕಟ್ಟುಗಳ 'totem'ಗಳ ಮುಂದುವರಿಕೆ ಎಂದು ತೋರಿದ್ದಾರೆ. ಆನೆ ಟೋಟೆಮಿನ, ಇಲಿಯ ಟೋಟೆಮಿನ ಬುಡಕಟ್ಟು ಜನರ ನಡುವಿನ ಜಗಳದ ಬಗ್ಗೆ ತುಂಬಾ ಕುತೂಹಲಕಾರಿ ಮಾತಿದೆ. (ಮೂಷಕವಾಹನ ಗಣೇಶ!) ಇದು ನೇರವಾಗಿ ಚಾರ್ವಾಕ ದರ್ಶನದ ಬಗ್ಗೆ ಅಲ್ಲವಾದರೂ, ಅಂದಿನ ತಾತ್ವಿಕ ಜಗಳಗಳ ಬಗ್ಗೆ, ಚಾರ್ವಾಕ ದರ್ಶನದ ಹಿಂದಿನ ಬೇರುಗಳ ಬಗ್ಗೆ ತುಂಬಾ ಮಾಹಿತಿ ನೀಡುತ್ತದೆ. ನಮ್ಮ ತತ್ವಶಾಸ್ತ್ರಗಳ ಹಿಂದಿನ ರಾಜಕೀಯವೂ ಅದರಲ್ಲಿ ಇರುವ ಮತ್ತೊಂದು ಎಳೆ.
ಮೇಲೆ ಹೇಳಿದ ಮಹಾಭಾರತದ ಉಲ್ಲೇಖದ ಮುಖ್ಯ ಭಾಗ ಹೇಳಬೇಕು. ಯುದ್ಧ ಗೆದ್ದು ಪಾಂಡವರು ರಾಜರಾಗುವ ವೇಳೆ. ಎಲ್ಲರೂ ಅವರನ್ನು ಹರಿಸಿದಾಗ ಚಾರ್ವಾಕ "ಅಣ್ಣ ತಮ್ಮಂದಿರನ್ನು ಕೊಂದ ನೀವು ಹಾರೈಕೆಗೆ ಅನರ್ಹರು" ಅಂದನಂತೆ. ಆಗ ಕೃಷ್ಣನ ಆದೇಶದ ಮೇಲೆ ಅವನನ್ನು ಸುಟ್ಟು ಕೊಂದರಂತೆ. ಸುಟ್ಟಿದ್ದು ಯಾಕೆಂದರೆ-ಚಾರ್ವಾಕನ ಪ್ರಕಾರ ಸತ್ತ ಮೇಲೆ ಬೂದಿಯಷ್ಟೇ ಉಳಿಯುವುದು ಎಂಬ ನಿಲುವಿನಿಂದಾಗಿ.
ಪ್ರಸಾದರೆ,
"ಚಾರ್ವಾಕ ದರ್ಶನದ ಹಿನ್ನಡೆ ಅದರ ಅಭಾವವಾದದಲ್ಲಿದೆ" ಇದು ನಿಮ್ಮ ಅನಿಸಿಕೆಯೆ? ಯೋಚಿಸುವಂತೆ ಮಾಡಿತು. ಮೊದಲ ನೋಟದಲ್ಲಿ ಒಪ್ಪಿಗೆಯಾಗಲಿಲ್ಲ.
ಚಟ್ಟೋಪಾಧ್ಯಾಯರು ತಮ್ಮ ಮುನ್ನುಡಿಯಲ್ಲೇ ಇವರ ಇತಿಹಾಸವನ್ನು 'ಪುನರ್ ರಚಿಸಬೇಕಾದ' ಅನಿವಾರ್ಯದ ಬಗ್ಗೆ ಚೆನ್ನಾಗಿ ಹೇಳಿದ್ದಾರೆ.
ಅಂದ ಹಾಗೆ ಚಾರ್ವಾಕ ಪದದ ಅರ್ಥ ನನಗೆ ನೆನಪಿಲ್ಲ. ಹಲವಾರು ಬೇರುಗಳಿದೆ ಎಂದು ಓದಿದ ನೆನಪು.