Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?

November 2, 2007 - 12:55pm — Sunil Jayaprakash

ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?

Sunil Jayaprakash's picture

ಮಿಶ್ರಿಕೋಟಿ, ನಾನು ಪ್ರಜಾವಾಣಿಯಲ್ಲಿ ಪ್ರಕಟವಾದ ಆ ಬರಹಗಳನ್ನು ಓದಿದೆ. ಒಂದಂತೂ ನನಗೆ ತೀರಾ ಅಂದರೆ ತೀರಾ ಎಳಸು ಅನಿಸಿತು. ಅದರಲ್ಲಿ ಹವ್ಯಕರನ್ನೂ ಕನ್ನಡದಿಂದ ಬೇರೆ ಎಂಬಂತೆ ತೋರಿಸಲಾಗಿದೆ. ಈ ಮಾಧ್ಯಮಗಳು ಇಷ್ಟೆಲ್ಲ ಸಾಹಿತ್ಯವಿದ್ದರೂ, ಕನ್ನಡ ಎಂಬ ಪದದ ಅರ್ಥವ್ಯಾಪ್ತಿಯನ್ನು ತೀರಾ ಸಂಕುಚಿತಗೊಳಿಸಿ ನಾವು ಬೇರೆ ಬೇರೆ ಸೀಮೆಯ ಜನರು ಒಂದಾಗುವುದಕ್ಕೆ ದೊಡ್ಡ ಅಪಾಯ ತಂದೊಡ್ಡಿದ್ದಾರೆ. ಕನ್ನಡ ಎಂದರೆ ಬರೀ ನುಡಿಯಲ್ಲ, ಅದೊಂದು ನಾಡು, ಆ ನಾಡಿನಲ್ಲಿ ಬದುಕುತ್ತಿರುವ ಜನರು, ಅವರ ನಾಡವಳಿ. ಇದು ನನ್ನ ಮಾತಲ್ಲ. ೯ನೇ ಶತಮಾನದ ಕವಿರಾಜಮಾರ್ಗದ ಈ ಮಾತುಗಳನ್ನು ಗಮನಿಸಿ.

೧. ಕಾವೇರಿಯಿಂದಮಾ...
೨. ವಸುಧಾವಳಯವಿಲೀನವಿಷಯವಿಶದವಿಶೇಷಂ
೩. "ನಾಡೇ ನಾಡೇ ಕನ್ನಡ" (ಇದರ ಪದ್ಯದ ಸಂಖ್ಯೆಯನ್ನು ಬೇಕಿದ್ದರೆ ನಾನು ನೀಡಬಲ್ಲೆ)

ಇವೆಲ್ಲವೂ ತಿಳಿಸುವುದು, ಸೋಲಿಗ, ಬಡಗ, ಕೊಡವ, ಇವರೆಲ್ಲರೂ ಕನ್ನಡಿಗರೆಂಬ ಅಧಿಕೃತ ಮನ್ನಣೆ ಎಂದೋ ಸಿಕ್ಕಿದೆ. ಈಗಲೂ ಕೂಡ, ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ಸಂದರ್ಭದಲ್ಲಿ ಸಿಇಟಿ ಸೆಲ್ ಪ್ರಕಟಿಸುವ ಬ್ರೌಚರ್ ತೆಗೆದುನೋಡಲಿ. ಕನ್ನಡ ಅಂದರೆ ಬರೀ ನುಡಿ ಅಲ್ಲ ಅದೊಂದು ಸಂಸ್ಕೃತಿ ಎಂದು ಜನ ತಿಳಿದುಕೊಂಡಿರುವಾಗ, ಮಾಧ್ಯಮದವರು, ಇಲ್ಲ ಸೋಲಿಗರು ಬೇರೆ, ಹವ್ಯಕರು ಬೇರು, ಕೊಡವರು ಬೇರೆ ಅಂತೆಲ್ಲ ಬರೆದರೆ ಆ ದೇವರೇ ಕಾಪಾಡಬೇಕು.

ಸೋಲಿಗರ ಮಗು ’ ನಮ್ಮ ನಾಡು ಕನ್ನಡ , ನಮ್ಮ ನುಡಿಯು ಕನ್ನಡ’ ಎಂದು ಹಾಡಿದರೆ ಸೋಲಿಗರಲ್ಲಿ ಆತಂಕ

ನೋಡಿ, ಈ ಯೋಚನೆಯನ್ನು ಮೆಟ್ಟಿನಿಲ್ಲಬೇಕೆಂದರೆ, ಸೋಲಿಗರು(ಹಾಗು ಮುಖ್ಯವಾಗಿ ಕನ್ನಡ ಪಂಡಿತರು) ತಮ್ಮ ಪಾರಿಭಾಷಿಕ ಪದಗಳನ್ನು ಸಾಹಿತ್ಯದಲ್ಲಿ ಬಳಸುತ್ತಾ, ಗಟ್ಟಿಯಾಗಿರಬಹುದಾದಂತಹ ಅವರ ನುಡಿಗಟ್ಟಿಗಳಿಗೆ ಅಧಿಕೃತ ಮನ್ನಣೆಯನ್ನು ನೀಡುವುದು. ಆಗ "ಸೋಲಿಗ ಕನ್ನಡವೂ" ಉಳಿಯತ್ತೆ ಮತ್ತು "ಮಾಧ್ಯಮದವರ ಕನ್ನಡವೂ" ಸೋಲಿಗವನ್ನು ಆಶ್ರಯಿಸುತ್ತಾ ತಾನೂ ಬೆಳೆಯತ್ತೆ. ನಾನು ಸಂಪದದಲ್ಲಿಯೇ ಅನೇಕ ಬಾರಿ ಪ್ರಸ್ತಾಪಿಸಿದ ಹಾಗೆ ಕನ್ನಡಿಗರು ಬೆಳೆಯಬೇಕೆಂದರೆ ನಮ್ಮಲ್ಲಿಯ ಪಾರಿಭಾಷಿಕ ಪದಗಳಿಗೆ ಮನ್ನಣೆ ಸಿಗಬೇಕು. ಸುಮ್ಮನೆ "ಭಾರತ ಜನನಿಯ ತನುಜಾತೆ..." ಅಂತ ಜಪಮಾಡುತ್ತಾ ಕೂತಿರುವುದಲ್ಲ.

ನಾನು ಮೊದಲೇ ಹೇಳಿದ ಹಾಗೆ ಪ್ರಜಾವಾಣಿಯ ಆ ಬರಹ ನನಗೆ ತೀರಾ ತೀರಾ ಎಳೆಸು ಎನಿಸಿತು. ಏಕೆಂದರೆ ಸೋಲಿಗ, ಬಡಗ, ಹವ್ಯಕ ಇವುಗಳನ್ನು ಕುರಿತು ಮಾತು ಬಂದಾಗ ನಾವು ಹೇಳುವುದು "ಸೋಲಿಗ ಕನ್ನಡ", "ಬಡಗ ಕನ್ನಡ", "ಹವ್ಯಕ ಕನ್ನಡ", "ಕುಂದಗನ್ನಡ" ಮುಂತಾಗಿ. ಇಂತಹ ಗಂಭೀರ ವಿಚಾರಗಳನ್ನ ಎಳಸು ಎಳಸಾಗಿ ಓದುಗರ ಮುಂದಿಡುವ ಮುಂಚೆ ಬರೆಯುವವರು ಯೋಚಿಸಬೇಕು.

  • Login or register to post comments
  • Email this ಪ್ರತಿಕ್ರಿಯೆ
ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: shreekant.mishrikoti (8 replies) November 2, 2007 - 11:33am
  • ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: srinivasps (Nov 2 2007 - 6:04pm)
    • ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: srinivasps (Nov 2 2007 - 9:55pm)
  • ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: Sunil Jayaprakash (Nov 2 2007 - 12:55pm)
    • ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: ವೈಭವ (Nov 2 2007 - 2:23pm)
      • ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: savithru (Nov 2 2007 - 3:18pm)
        • ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: ವೈಭವ (Nov 2 2007 - 8:09pm)
    • ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: mahesha (Nov 2 2007 - 1:08pm)
      • ಉ: ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ? By: mahesha (Nov 2 2007 - 1:09pm)

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:23pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:19pm
ಇನ್ನಷ್ಟು

ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.

— ಅಲ್‌ಬರ್ಟ್ ಐನ್‌ಸ್ಟೀನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator