ಸಿಡ್ನಿಯಲ್ಲಿ ನಿಮ್ಮನ್ನು ಕಾಡುವ ಈ ರಾಮಾನುಜರು ನನಗೆ ಬೆಂಗಳೂರಿನಲ್ಲಿ ಕಾಡುತ್ತಾರೆ. ಹೀಗೊಮ್ಮೆ ಕಾಡಿದಾಗ ಅವರ ಸಾಲುಗಳಿಗೆ ನನ್ನದೂ ಒಂದೆರಡು ಸಾಲುಗಳನ್ನು ಹಚ್ಚಿ ಸಂತೋಷಪಟ್ಟಿದ್ದೇನೆ. ಅದರ ಹಿನ್ನೆಲೆ ಹೀಗಿದೆ - ನಾವೊಮ್ಮೆ ಕೆಲವು ವಿದೇಶಿ ಮಿತ್ರರೊಂದಿಗೆ ಚಾರಣ ಹೋಗಿದ್ದೆವು. ಅಲ್ಲಿಂದ ಹಿಂದಿರುಗುವಾಗ ಹಳ್ಳಿಯ ಅಂಗಡಿಯೊಂದರಲ್ಲಿ ದಣಿವಾರಿಸಿಕೊಳ್ಳಲು ನಿಂತಿದ್ದೆವು. ನಮ್ಮಲ್ಲಿ ಕೆಲವರು ಗೋಲಿ ಸೋಡಾ ಕುಡಿಯುತ್ತ ತಮ್ಮ ಬಾಲ್ಯಕ್ಕೆ ಮರಳಿದರೆ ಇನ್ನಿತರರು ಕೋಕ್ ಕುಡಿಯುತ್ತಿದ್ದರು. ಆದರೆ ನಮ್ಮ ವಿದೇಶಿ ಮಿತ್ರನೊಬ್ಬ ಮಂಗಳೂರು ಗಣೇಶ ಬೀಡಿಯನ್ನು ಗುರುತುಹಚ್ಚಿ ಕೊಂಡು ಸೇದಿ ಸುಖಿಸುತ್ತಿದ್ದ. ಕೇಳಿದರೆ ಅವನ ದೇಶದಲ್ಲಿ ಈ ಬೀಡಿಗೆ ಭಾರೀ ಬೇಡಿಕೆಯಿದೆ ಎಂದ. ಇಲ್ಲಿ ಇದಕ್ಕೆ ಇಷ್ಟು ಕಡಿಮೆ ಬೆಲೆಯೆಂದು ಸಿಕ್ಕಾಪಟ್ಟೆ ಖುಷಿಯಾಗಿ ಒಂದು ದೊಡ್ಡ ಪೆಟ್ಟಿಗೆಯನ್ನೇ ಖರೀದಿಸಿದ ! ಆಗ ತುಂಬಾ ನೆನಪಾದ ರಾಮಾನುಜಂ ಪದ್ಯಕ್ಕೆ ನನ್ನದೂ ಎರಡು ಸಾಲು ಸೇರಿಸಿಬಿಟ್ಟೆ -
ಕಾಡುಮರಗಳ ಮಧ್ಯೆ ಮನೆ
ಸಿಮೆಂಟು ಬಿರುಕಿನ ನಡುವೆ ಹುಲ್ಲು
ಅಮೆರಿಕನ್ ಮಾರ್ಕೆಟ್ಟಿನಲ್ಲಿ ಹಚ್ಚಗೆ
ಹೆಚ್ಚಿದ ಕೊತ್ತಂಬರಿ ಸೊಪ್ಪು
ಉಜಿರೆಯಲ್ಲಿ ಕೋಕಾಕೋಲಾ
ಟೆಕ್ಸಾಸಿನಲ್ಲಿ ಗಣೇಶ ಬೀಡಿ ...
ಉ: ಜಗದಗಲ
ಚೆನ್ನಾಗಿದೆ ಅನಿವಾಸಿಗಳೇ...
ಸಿಡ್ನಿಯಲ್ಲಿ ನಿಮ್ಮನ್ನು ಕಾಡುವ ಈ ರಾಮಾನುಜರು ನನಗೆ ಬೆಂಗಳೂರಿನಲ್ಲಿ ಕಾಡುತ್ತಾರೆ. ಹೀಗೊಮ್ಮೆ ಕಾಡಿದಾಗ ಅವರ ಸಾಲುಗಳಿಗೆ ನನ್ನದೂ ಒಂದೆರಡು ಸಾಲುಗಳನ್ನು ಹಚ್ಚಿ ಸಂತೋಷಪಟ್ಟಿದ್ದೇನೆ. ಅದರ ಹಿನ್ನೆಲೆ ಹೀಗಿದೆ - ನಾವೊಮ್ಮೆ ಕೆಲವು ವಿದೇಶಿ ಮಿತ್ರರೊಂದಿಗೆ ಚಾರಣ ಹೋಗಿದ್ದೆವು. ಅಲ್ಲಿಂದ ಹಿಂದಿರುಗುವಾಗ ಹಳ್ಳಿಯ ಅಂಗಡಿಯೊಂದರಲ್ಲಿ ದಣಿವಾರಿಸಿಕೊಳ್ಳಲು ನಿಂತಿದ್ದೆವು. ನಮ್ಮಲ್ಲಿ ಕೆಲವರು ಗೋಲಿ ಸೋಡಾ ಕುಡಿಯುತ್ತ ತಮ್ಮ ಬಾಲ್ಯಕ್ಕೆ ಮರಳಿದರೆ ಇನ್ನಿತರರು ಕೋಕ್ ಕುಡಿಯುತ್ತಿದ್ದರು. ಆದರೆ ನಮ್ಮ ವಿದೇಶಿ ಮಿತ್ರನೊಬ್ಬ ಮಂಗಳೂರು ಗಣೇಶ ಬೀಡಿಯನ್ನು ಗುರುತುಹಚ್ಚಿ ಕೊಂಡು ಸೇದಿ ಸುಖಿಸುತ್ತಿದ್ದ. ಕೇಳಿದರೆ ಅವನ ದೇಶದಲ್ಲಿ ಈ ಬೀಡಿಗೆ ಭಾರೀ ಬೇಡಿಕೆಯಿದೆ ಎಂದ. ಇಲ್ಲಿ ಇದಕ್ಕೆ ಇಷ್ಟು ಕಡಿಮೆ ಬೆಲೆಯೆಂದು ಸಿಕ್ಕಾಪಟ್ಟೆ ಖುಷಿಯಾಗಿ ಒಂದು ದೊಡ್ಡ ಪೆಟ್ಟಿಗೆಯನ್ನೇ ಖರೀದಿಸಿದ ! ಆಗ ತುಂಬಾ ನೆನಪಾದ ರಾಮಾನುಜಂ ಪದ್ಯಕ್ಕೆ ನನ್ನದೂ ಎರಡು ಸಾಲು ಸೇರಿಸಿಬಿಟ್ಟೆ -
ಕಾಡುಮರಗಳ ಮಧ್ಯೆ ಮನೆ
ಸಿಮೆಂಟು ಬಿರುಕಿನ ನಡುವೆ ಹುಲ್ಲು
ಅಮೆರಿಕನ್ ಮಾರ್ಕೆಟ್ಟಿನಲ್ಲಿ ಹಚ್ಚಗೆ
ಹೆಚ್ಚಿದ ಕೊತ್ತಂಬರಿ ಸೊಪ್ಪು
ಉಜಿರೆಯಲ್ಲಿ ಕೋಕಾಕೋಲಾ
ಟೆಕ್ಸಾಸಿನಲ್ಲಿ ಗಣೇಶ ಬೀಡಿ ...
ರಾಮಾನುಜರ ನೆನಪಿಗೆ ಕಾರಣವಾದ ಸಿಡ್ನಿಗೂ ನಿಮಗೂ ನಮೋ ನಮಃ