ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: poornimas (Jan 11 2008 - 7:34pm)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: hamsanandi (Jan 11 2008 - 11:56pm)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: kpbolumbu (Jan 12 2008 - 8:46am)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: naasomeswara (Jan 14 2008 - 10:54am)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: kpbolumbu (Jan 12 2008 - 8:46am)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: hamsanandi (Jan 11 2008 - 11:56pm)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: benaka (Jan 5 2008 - 6:10pm)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: benaka (Dec 23 2007 - 3:04am)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: benaka (Dec 20 2007 - 2:27am)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: Sunil Jayaprakash (Dec 20 2007 - 5:43pm)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: hamsanandi (Dec 20 2007 - 3:31am)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: hamsanandi (Dec 20 2007 - 3:41am)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: hamsanandi (Dec 21 2007 - 1:45pm)
- ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] By: hamsanandi (Dec 20 2007 - 3:41am)

RSS:
ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]
ಬೆನಕರೆ,
ನಿಮ್ಮ ವಿವರಗಳಿಗೆ ಧನ್ಯವಾದಗಳು.
ಒಂದೆರಡು ಮರುನುಡಿಗಳು:
>>೧. ನಮ್ಮ ದೇಶದಲ್ಲಿ ರಾಶಿಚಕ್ರದ ವಿಂಗಡನೆ ಇರಲಿಲ್ಲ; ಅದು ನಮಗೆ (ರೋಮನ್ನರಲ್ಲ) ಗ್ರೀಕರ ಕೊಡುಗೆ ಎಂಬುದು ಪಾಶ್ಚಾತ್ಯ
>>ಪೂರ್ವಾಗ್ರಹಿಗಳ ಮತ.
ರೋಮನ್ನರಂದದ್ದು ನನ್ನ ತಪ್ಪು. ಇದನ್ನು ಲೇಖನದಲ್ಲಿ ತಿದ್ದುತ್ತೇನೆ.
ಆದರೆ, ನಕ್ಷತ್ರಗಳ ವಿಂಗಡಣೆ ರಾಶಿಗಳಿಗಿಂತ ಬಹಳ ಹಿಂದೇ ಬಂದದ್ದು ಎನ್ನುವುದು, ರಾಮಾಯಣ ಮಹಾಭಾರತಗಳಲ್ಲೂ ರಾಶಿಗಳ ಬಗ್ಗೆ ಎಲ್ಲೂ ಹೇಳಿಲ್ಲ ಅನ್ನುವುದು ನನಗೆ ಗೊತ್ತಿರುವಂತೆ ಸತ್ಯ. ಇದು ತಪ್ಪಿದ್ದರೆ ದಯವಿಟ್ಟು ತಿಳಿಸಿ.
ಈ ವಿಷಯಗಳಲ್ಲಿ, ಪೂರ್ವಾಗ್ರಹ ಬಹಳವಾಗಿರುವುದು ನಿಜವಾದ ಮಾತೇ.
>>೨. ವೇದಾಂಗ ಜ್ಯೋತಿಷದಲ್ಲಿ ಇದ್ದುದು ೨೭ ನಕ್ಷತ್ರಗಳು ಮಾತ್ರ; ಈಗಲೂ ಅಷ್ಟೇ. ಇದಕ್ಕೆ ಪುರಾವೆಗಳು ವೇದಗಳಲ್ಲಿ
>>ಹೇರಳವಾಗಿ ಸಿಗುತ್ತವೆ. ನೀವೇ ಪರಿಗಣಿಸಿರುವ ಋಗ್ವೇದಸಂಹಿತೆಯಿಂದ ಹಿಡಿದು ಅಥರ್ವಣವೇದದ ಸೂಕ್ತಗಳವರೆಗೂ
>>ಕಾಣಸಿಗುವುದು ೨೭ ತಾರೆಗಳು ಮಾತ್ರ.
ಅಥರ್ವ ವೇದದಲ್ಲಿ ೨೮ ತಾರೆಗಳನ್ನು ಹೇಳಿದೆ ಎಂದು ಡಾ.ಬಾಲಕೃಷ್ಣರು ಹೇಳುತ್ತಾರಲ್ಲ? ಆದರೆ, ನಾನು ಜ್ಯೋತಿಷ್ಶಾಸ್ತ್ರವನ್ನೇ ಆಗಲಿ, ಫಲಜ್ಯೋತಿಷ್ಯವನ್ನಾಗಲೀ ನೇರವಾಗಿ ಕಲಿತಿಲ್ಲ. ಹಾಗಾಗಿ, ಮೊದಲು ೨೮ ಇದ್ದದ್ದು ನಂತರ ೨೭ ಆದವು ಎಂದು ಹೇಳಲು ನನಗೆ ಗಟ್ಟಿ ಆಧಾರಗಳಿಲ್ಲ ಎಂಬುದನ್ನು ಒಪ್ಪುತ್ತೇನೆ. ಇದು ನಾನು ಕೇಳಿ/ಓದಿರುವ ವಿಷಯವಷ್ಟೆ. ನೀವು ಹೇಳಿದಂತೆ, ೨೭ ಇದ್ದು, ನಂತರ ೨೮ ಆಗಿ, ಮರಳಿ ೨೭ಕ್ಕೆ ಹೋಗಿದ್ದರೂ, ಸರಿ, ನನ್ನ ಬರಹದ ಮಟ್ಟಿಗೆ ಅದರಿಂದ ಹೆಚ್ಚು ವ್ಯತ್ಯಾಸವಾಗುವುದಿಲ್ಲ ಎಂದುಕೊಂಡಿದ್ದೇನೆ.
>>೩.ಕಾಲಕಳೆದಂತೆ ಧ್ರುವನಕ್ಷತ್ರ ಬದಲಾಗುವುದಿಲ್ಲ; ಏಕೆಂದರೆ, ಸಪ್ತರ್ಷಿಮಂಡಲದ(ಅರ್ಸಾ ಮೇಜರ್) ಕೊನೆಗೆ ಹೆಚ್ಚು
>>ಪ್ರಕಾಶಮಾನವಾಗಿ ಕಾಣುವ ತಾರೆ ಅದೊಂದೇ ಎಂದು ನಿಮಗೂ ಗೊತ್ತು!! ಆದರೆ, ಅದರ ಸುತ್ತಲೂ
>>ಬುಗುರಿಯಾಡುವ "ಉತ್ತರ ದಿಕ್ಕು" ಬದಲಾಗುತ್ತದೆ!
ಇದನ್ನು ನಾನು ಒಪ್ಪಲಾರೆ. ಸದ್ಯಕ್ಕೆ ನಿಜ ಉತ್ತರ ಧ್ರುವ (True geographic north pole) ಗೆ ಹತ್ತಿರದಲ್ಲಿರುವ ನಕ್ಷತ್ರ ಆಲ್ಫ ಅರ್ಸ್ ಮೈನಾರಿಸ್ ( ಲಘು ಸಪ್ತರ್ಷಿಯ ಬಾಲದ ತುದಿಯ ನಕ್ಷತ್ರ). ಸುಮಾರು ೨-೩ ಸಹಸ್ರಮಾನಗಳು ಇದು ಈ ಖ್ಯಾತಿಗೆ ಪಾತ್ರವಾಗಿರುತ್ತೆ. ಉದಾಹರಣೆಗೆ ಇನ್ನು ನಾಕು ಸಾವಿರ ವರ್ಷ ಬಿಟ್ಟು ನೋಡಿದರೆ, ಆಗ ಈಗ ನಾವು ಯಾವುದನ್ನು ಧ್ರುವ ಎನ್ನುತ್ತೇವೋ ಅದು ನಿಜ ಧ್ರುವದಿಂದ ನಾಕೈದು ಡಿಗ್ರಿ ಆಚೆ ಇದ್ದರೆ, ಖಂಡಿತ ಅದು ಧ್ರುವವೆನ್ನಿಸಿಕೊಳ್ಳಲು ಅಯೋಗ್ಯವಾಗುತ್ತೆ. ಆ ಸಂದರ್ಭದಲ್ಲಿ, ನಿಜ ಧ್ರುವದ ಹತ್ತ್ತಿರ ಒಂದು ತಾರೆ ಇದೆಯೋ ಇಲ್ಲವೋ ಎನ್ನುವುದು ಧ್ರುವ ನಕ್ಷತ್ರವಿರುತ್ತೋ ಇಲ್ಲವೋ ಎನ್ನುವುದನ್ನು ನಿರ್ಧರಿಸುತ್ತೆ.
ವೇದಗಳಲ್ಲಿ ಹೇಳಿರುವ ಧ್ರುವ ಅಲ್ಫಾ ಡ್ರೇಕೋನಿಸ್ ಇರಬೇಕೆಂದು ನಾನು ಓದಿದ್ದೇನೆ. ಕಾಲವನ್ನು ನೋಡಿದರೆ ಅದು ಸರಿ ಎನಿಸುತ್ತದೆ ನನಗೆ. ವಿಕಿಪಿಡಿಯಾ ಕೂಡ, ಗಾಮಾ ಅರ್ಸ ಮೈನಾರಿಸ್ ಮತ್ತು ಬೀಟಾ ಅರ್ಸ ಮೈನಾರಿಸ್ ಗಳು ಕೂಡ ಕ್ರಿ.ಪೂ.೧೫೦೦ ರಿಂದ್ಸ್ ಕ್ರಿ.ಶ.೫೦೦ ರವರೆಗೆ pole star ಪಟ್ಟ ಹೊಂದಿದ್ದವೆಂದು ಹೇಳುತ್ತೆ. ನನಗೆ ನಮ್ಮ ದೇಶದವರೂ ಈ ವಿಷಯ ಅರಿತಿದ್ದರೆಂದು ಖಂಡಿತ ಅನಿಸುತ್ತೆ. ನಿಮಗೆ ವೇದಾಂಗ ಜ್ಯೋತಿಷ ದಲ್ಲೇ ಆಗಲಿ, ಇನ್ನೆಲ್ಲೆ ಆಗಲಿ ಧ್ರುವವನ್ನು ಹೇಗೆ ಗುರುತಿಸುತ್ತಿದ್ದರು ಎಂದು ತಿಳಿದ್ದರೆ, ಮರೆಯದೆ ಬರೆಯಿರಿ.
ಗಾಮಾ ಅರ್ಸ ಮೈನಾರಿಸ್ ಮತ್ತು ಬೀಟಾ ಅರ್ಸ ಮೈನಾರಿಸ್ ಗಳು (ಫೇರ್ಕಾಡ್ ಮತ್ತು ಕೊಚಾಬ್) ಇಂದಿನ ಧ್ರುವ (ಪೋಲಾರಿಸ್) ಗಿಂತ ತುಂಬ ಕಮ್ಮಿ ಪ್ರಕಾಶದವೇನಲ್ಲ ( 2.1 and 3.2 magnitude, when compared to 2.0 of Polaris).
ಹಾಗಾಗಿ ಕಾಲದ ಜೊತೆಗೆ ಧ್ರುವ ನಕ್ಷತ್ರ ಬದಲಾಗಿದೆ ಅನ್ನುವ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ.
>>೪.ಮಕರ ಸಂಕ್ರಮಣ ಹಾಗೂ ಉತ್ತರಾಯಣ ಬೇರೆ ಬೇರೆ ಎಂದು ಜ್ಯೋತಿಷಿಗಳಿಗೆ, ಪಂಚಾಗಕರ್ತರಿಗೆ ಹಿಂದಿನಿಂದಲೂ
>>ಚೆನ್ನಾಗಿಯೇ ತಿಳಿದಿದ್ದರೂ, ಹಬ್ಬ-ಹರಿದಿನಗಳ ಆಚರಣೆಗೆ ಬುನಾದಿಯಾಗಿರುವ ಧರ್ಮಸಿದ್ಧಾಂತಗಳ ವಾಕ್ಯಗಳಂತೆಯೇ,
>>ಇಂದಿಗೂ ಉತ್ತರಾಯಣವನ್ನು ನಿರಯಣರೀತ್ಯಾ ಗುಣಿಸುತ್ತಿದ್ದಾರೆ. ಆದ್ದರಿಂದಲೇ ಇಂದು ಪಂಚಾಂಗ
>>ಹೊರಬಂದಾಗ "ಸಿದ್ಧಾಂತ-ವಾಕ್ಯ-ಆರ್ಯಭಟೀಯ-ದೃಗ್ಗಣಿತ ಈ ನಾಲ್ಕೂ ಸೇರಿದ" ಎಂದು ಮುದ್ರಿಸುತ್ತಿದ್ದಾರೆ!! ಇದು
>>ತಿಳಿಯದೆ ಆಗುತ್ತಿರುವ ತಪ್ಪು ನಿರ್ಣಯವಲ್ಲ; ತಿಳಿದೇ ಮಾಡುತ್ತಿರುವ "ಧರ್ಮಾಚರಣೆ"!!
ಇದರ ಬಗ್ಗೆ ನನ್ನದು ಎರಡನೇ ಮಾತಿಲ್ಲ
ಮತ್ತೊಮ್ಮೆ, ನಿಮ್ಮ ವಿವರವಾದ ಟಿಪ್ಪಣಿಗೆ ಧನ್ಯವಾದಗಳು.
-ಹಂಸಾನಂದಿ