ಉ: ಸುಧಾದಲ್ಲಿ ಕುತೂಹಲಕರ ರಹಸ್ಯಮಯ ಧಾರಾವಾಹಿ ಆರಂಭ-ಓದಿ.
- ಉ: ಸುಧಾದಲ್ಲಿ ಕುತೂಹಲಕರ ರಹಸ್ಯಮಯ ಧಾರಾವಾಹಿ ಆರಂಭ-ಓದಿ. By: hamsanandi (Dec 21 2007 - 11:21pm)
- ಉ: ಸುಧಾದಲ್ಲಿ ಕುತೂಹಲಕರ ರಹಸ್ಯಮಯ ಧಾರಾವಾಹಿ ಆರಂಭ-ಓದಿ. By: shreekant.mishrikoti (Dec 22 2007 - 11:35am)
- ಉ: ಸುಧಾದಲ್ಲಿ ಕುತೂಹಲಕರ ರಹಸ್ಯಮಯ ಧಾರಾವಾಹಿ ಆರಂಭ-ಓದಿ. By: ASHOKKUMAR (Dec 23 2007 - 10:14am)
- ಉ: ಸುಧಾದಲ್ಲಿ ಕುತೂಹಲಕರ ರಹಸ್ಯಮಯ ಧಾರಾವಾಹಿ ಆರಂಭ-ಓದಿ. By: shreekant.mishrikoti (Dec 22 2007 - 11:35am)

RSS:
ಉ: ಸುಧಾದಲ್ಲಿ ಕುತೂಹಲಕರ ರಹಸ್ಯಮಯ ಧಾರಾವಾಹಿ ಆರಂಭ-ಓದಿ.
ಸೊಲ್ಪದರಲ್ಲಿ ಹೇಳುಕ್ಕೆ ಆಗುಲ್ಲ ;
ಗಣೇಶಯ್ಯನವರ ಅನೇಕ ಕುತೂಲಕಾರಿ ರಹಸ್ಯಮಯ ಕತೆಗಳು ಈಗಾಗಲೇ ಸುಧಾ ವಾರಪತ್ರಿಕೆ ,ವಿಶೇಷಾಂಕ , ಪ್ರಜಾವಾಣಿ ವಿಶೇಷಾಂಕಗಳಲ್ಲಿ ಬಂದಿವೆ . ಇತಿಹಾಸ , ದಂತಕತೆ , ಪತ್ತೇದಾರಿ , ಸಾಹಸಗಳ ರಮ್ಯ ಸಂಯೋಜನೆ ಅಲ್ಲಿರುತ್ತದೆ ,
ಒಂದು ಸಂಕಲನವೂ ಪೇಟೆಗೆ ಬಂದಿದೆ .
ಅದರ ಬಗ್ಗೆ ವಿಮರ್ಶಕರ ಅಭಿಪ್ರಾಯ ಏನೇ ಇರಲಿ . ಒಂದು ಸಲ ಓದಲೇಬೇಕು .
ಉದಾಹರಣೆಗೆ , ತಿರುಪತಿಯ ದೇವರು ನಿಜಕ್ಕೂ ಯಾರು ? ಅಲ್ಲಿ ನಡೆದಿದೆ ಎಂದು ಹೇಳುವ ಪವಾಡದ ನಿಜಸ್ವರೂಪ ಏನು ?
ಅವನಿಗೂ ವಿಜಯನಗರಕ್ಕೂ ಏನು ಸಂಬಂಧ ? ರಾಜಕೀಯವೋ ಹಣದ ಸಂರಕ್ಷಣೆಯೋ ?
ವಿಜಯನಗರದ ಐಶ್ವರ್ಯ ಬಂದದ್ದು ಎಲ್ಲಿಂದ ? ಅವರು ಅದನ್ನು ಇಟ್ಟದ್ದು ಎಲ್ಲಿ ? ಆ ನಿಧಿಯ ಹುಡುಕಾಟ , ಅದರಲ್ಲಿ ಆಸಕ್ತಿ ಹೊಂದಿರುವವರಾರು ? ಇತ್ಯಾದಿ ’ಕರಿಸಿರಿಯಾನ’ದಲ್ಲಿದೆ .
ಈ ತರಹ ಅನೇಕ ಕತೆ/ಕಾದಂಬರಿ ಬರೆದಿದ್ದಾರೆ , ಎಲ್ಲದರಲ್ಲೂ
ಸಾಕಷ್ಟು ಶಾಸನಗಳು , ನಿಜಸಂಗತಿಗಳು , ಉಲ್ಲೇಖಗಳನ್ನೂ ಒದಗಿಸುತ್ತಾರೆ ,
ವಾಸ್ತವ ಮತ್ತು ಕಲ್ಪನೆಯ ಹಿತಮಿತ ಸಂಯೋಜನೆ ಅವರ ಬರಹದಲ್ಲಿರುತ್ತದೆ .
ಪುಸ್ತಕ ಹುಡುಕಿ ಕೊಂಡು ಓದಿ , ಅವರ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳಿ , ಎಲ್ಲಾದರೂ ಕತೆಗಳನ್ನು ಓದುವಾಗ ಅನುಕೂಲ ಆಗುತ್ತದೆ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"