ಉ: ಗಾಳಿಪಟ
- ಉ: ಗಾಳಿಪಟ By: ravee... (Jan 19 2008 - 8:36pm)
- ಉ: ಗಾಳಿಪಟ By: kpbolumbu (Jan 19 2008 - 11:16pm)
- ಉ: ಗಾಳಿಪಟ By: ಸಂಗನಗೌಡ (Jan 21 2008 - 12:43am)
- ಉ: ಗಾಳಿಪಟ By: ASHOKKUMAR (Jan 21 2008 - 5:39pm)
- ಉ: ಗಾಳಿಪಟ By: ಸಂಗನಗೌಡ (Jan 21 2008 - 6:16pm)
- ಉ: ಗಾಳಿಪಟ By: ಸಂಗನಗೌಡ (Jan 21 2008 - 6:16pm)
- ಉ: ಗಾಳಿಪಟ By: ಹರೀಶ್ (Jan 21 2008 - 4:34pm)
- ಉ: ಗಾಳಿಪಟ By: ASHOKKUMAR (Jan 21 2008 - 5:39pm)
- ಉ: ಗಾಳಿಪಟ By: uniquesupri (Jan 20 2008 - 1:31pm)
- ಉ: ಗಾಳಿಪಟ By: ಸಂಗನಗೌಡ (Jan 21 2008 - 12:43am)
- ಉ: ಗಾಳಿಪಟ By: kpbolumbu (Jan 19 2008 - 11:16pm)
- ಉ: ಗಾಳಿಪಟ By: ವೈಭವ (Jan 19 2008 - 6:58pm)
- ಉ: ಗಾಳಿಪಟ By: kpbolumbu (Jan 19 2008 - 7:53pm)
- ಉ: ಗಾಳಿಪಟ By: ಶಿವ (Jan 19 2008 - 3:24pm)
- ಉ: ಗಾಳಿಪಟ By: ವೈಭವ (Jan 19 2008 - 7:12pm)
- ಉ: ಗಾಳಿಪಟ By: ಶಿವ (Jan 19 2008 - 7:28pm)
- ಉ: ಗಾಳಿಪಟ By: kpbolumbu (Jan 19 2008 - 5:34pm)
- ಉ: ಗಾಳಿಪಟ By: ವೈಭವ (Jan 19 2008 - 7:12pm)

RSS:
ಉ: ಗಾಳಿಪಟ
ನೋಡುವವರ ಮನರಂಜಿಸುವಲ್ಲಿ 'ಗಾಳಿಪಟ' ಗೆದ್ದಿದೆ ಎನ್ನಬಹುದು. ಕನ್ನಡತನ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದಾರೆ.ರತ್ನವೇಲು ಕ್ಯಾಮರಾ ಕೆಲಸ ಅದ್ಭುತ. ಕನ್ನಡಕ್ಕೆ ಸಹಜವಾದ ಮಾತುಕತೆಗಳು, ಕನ್ನಡದಲ್ಲಿ ಇಲ್ಲಿಯವರೆಗೆ ಬಳಕೆಯಾಗದ ಸೂಪರ್ ೩೫ ಎಂಎಂ, ಸಂದರ್ಭಕ್ಕೆ ತಕ್ಕಂತಹ ಹಾಡುಗಳು,ಅತಿಯೆನಿಸದ ನಟನೆ, ಹೀಗೆ ಹಲವಾರು ಒಳ್ಳೆಯ ಅಂಶಗಳಿವೆ.( ಹಾಡಿನಲ್ಲಿ ಉದಿತ್ ನಾರಾಯಣ್ ಕಾಟ.)
ಮುಂಗಾರುಮಳೆಯ ಮಾತಿನ ಶೈಲಿಯನ್ನೇ ಮುಂದುವರಿಸಿದಂತೆ ಕಾಣುವುದೂ ನಿಜ. ಆದರೆ ಈ ಚಿನಕುರಳಿ ಮಾತುಗಳು ನಾಯಕರ ಪೈಕಿ ಗಣೇಶಂಗೆ ಮಾತ್ರ. ಉಳಿದವರಿಬ್ಬರು ಬೆದರುಬೊಂಬೆಗಳು. ಒಬ್ಬ ಶ್ರೇಷ್ಠ ಹಾಡುಗಾರನನ್ನು ಬದಿಗಿಟ್ಟುಕೊಂಡು ಆತನಿಂದ ಒಂದು ಹಾಡನ್ನಾದರೂ ಹಾಡಿಸಬಾರದಿತ್ತೇ? ಜಾಗಟೆಗೆ ಗುಂಡು ಮೊದಲು ಬಡಿಯಿತು ಎನ್ನುತ್ತಾರೆ, ಆದರೆ ವಿರಾಮಕ್ಕೆ ಮುಂಚಿನ ದೃಶ್ಯದಲ್ಲಿ ಗುಂಡೇಟು ಬಿದ್ದ ಜಾಗಟೆ ಕಾಣಿಸುವುದೇ ಇಲ್ಲ.ಗುಂಡು ನೇರವಾಗಿ ಬಡಿಯುವಂತೆಯೇ ಕಾಣಿಸುತ್ತದೆ.ಜಾಗಟೆಯಲ್ಲಿ ತೂತಿದೆ-ಹಾಗಿದ್ದರೆ ಗುಂಡು ಹಿಂದಕ್ಕೆ ಬಡಿಯುವುದು ಹೇಗೆ?
ನಧೀಂ ಧೀಂ ತನಾ ಹಾಡಿನಲ್ಲಿ ಯಕ್ಷಗಾನದ ವೇಷಗಳೂ ಕುಣಿಯುತ್ತವೆ, ಆದರೆ ಆಹಾ ಎಂಬಂತಹ ಒಂದು ದೃಶ್ಯಸಂಯೋಜನೆ ಸಾಧ್ಯವಾಗಲಿಲ್ಲ. ಹಂದಿ ಹೊಡೆಯಲು ಹೋಗಿ ಹಂದಿಯಿಂದ ಏಟು ತಿಂದು, ಹೋದ ಕಾಲಿನ ಶಕ್ತಿ ಮರಳಿ ಸಿಗುವ ಸನ್ನಿವೇಶ 'ಮುರಿಯದ ಮನೆ' ಚಿತ್ರದಲ್ಲಿ ಚಿಕ್ಕಂದಿನಲ್ಲಿ ವಿದ್ಯುತ್ ಶಾಕ್ ತಗುಲಿ ಒಂದು ಕಯ್ಯ ಶಕ್ತಿಯನ್ನು ಕಳೆದುಕೊಳ್ಳುವ ರಾಜ್ಕುಮಾರ್ ಇನ್ನೊಮ್ಮೆ ವಿದ್ಯುತ್ ಶಾಕ್ ತಗುಲಿದಾಗ ಪುನಃ ಮೊದಲಿನಂತಾಗುವುದನ್ನು ನೆನಪಿಸುತ್ತದೆ. ('ಸ್ಪೈನಲ್ ಕಾರ್ಡ್ ಫೈಲ್ಯೂರ್' ಅಂತೆ ಅದು.) ಇಂತಾದರೂ ಇದಕ್ಕಾಗಿಯೇ ಅಲ್ಲದೆ ಇನ್ನೂ ಹಲವು ಕಾರಣಗಳಿಗಾಗಿ ಭಟ್ಟರು ಅಭಿನಂದನೆಗೆ ಅರ್ಹರು.
ಇತ್ತೀಚೆಗೆ ಬಂದ ಸತ್ಯವಾನ್ ಸಾವಿತ್ರಿ ಚಿತ್ರದ ಸಂಭಾಷಣೆಗಳು(ರಾಜೇಂದ್ರ ಕಾರಂತ್) ಒಂದು ರೀತಿಯಲ್ಲಿ ಮಾದರಿಯಾಗಬಹುದಿತ್ತು. ಯೋಗರಾಜ ಭಟ್ಟರಂತಹ ನಿರ್ದೇಶಕರು ಹೆಚ್ಚಲ್ಲದಿದ್ದರೂ ಹತ್ತು ಮಂದಿ ಕನ್ನಡದಲ್ಲಿ ಇರಬೇಕು.
ಗಾಳಿಪಟದ ಬಗ್ಗೆ ಪ್ರಕಟವಾದ ಮೊದಲ ವಿಮರ್ಶೆ ಹೀಗೆನ್ನುತ್ತದೆ .
ನನಗೆ ಹಿಡಿಸಿದ ಇನ್ನೊಂದು ವಿಮರ್ಶೆ
ತಮ್ಮನ್ನು ವಿಮರ್ಶಕರೆಂದುಕೊಳ್ಳುವವರ ಬಗ್ಗೆ ಯೋಗರಾಜ ಭಟ್ ಹೀಗೆನ್ನುತ್ತಾರೆ
ಎಲ್ಲರೂ ಒಳ್ಳೆಯ ವಿಮರ್ಶೆಯನ್ನೇ ನೀಡಬೇಕೆಂದೇನೂ ಇಲ್ಲ.ವಿಜಯಕರ್ನಾಟಕದಲ್ಲಾದರೆ ಪರ್ವಾಯಿಲ್ಲ, ಚಿತ್ರ ಬಿಡುಗಡೆಯಾದ ನಂತರ ವಿಮರ್ಶೆ ಪ್ರಕಟವಾಗಿದೆ. ಅವರಿಗೆ ಅನ್ನಿಸಿದ್ದನ್ನು ಅವರು ಬರೆದಿದ್ದಾರೆ; ಲಂಕೇಶ್ ಪತ್ರಿಕೆಯಲ್ಲಿರುವಂತೆ ಬಿಡುಗಡೆಯಾಗುವುದಕ್ಕೆ ಮುಂಚಿನ ಹಾಳು ಊಹೆಗಳನ್ನಲ್ಲ. ಅವರು ಹೇಳುವಂತೆ ಕಾಡುಹಂದಿ ಎಂಬ ಕಲ್ಪನೆಯೇ ಇಂಗ್ಲಿಷ್ ಚಿತ್ರದಿಂದ ಬಂದದ್ದಂತೆ.
ವಿಜಯಕರ್ನಾಟಕದ ಲೇಖನಗಳು ಸುಲಭವಾಗಿ ಜಾಲಿಸಲು ಸಿಗುವುದರಿಂದ ಧಾರಾಳವಾಗಿ ಟೀಕಿಸಬಹುದು. ಆದರೆ ಈ ಕೆಳಗಿನ ಅಂಶಗಳು ಬಂದಿರುವುದು ಲಂಕೇಶ್ ಪತ್ರಿಕೆಯಲ್ಲಿ:
೧.ತನಗೆ ಸರಿಸಾಟಿ ಯಾರೂ ಇಲ್ಲ ಎಂದು ಬೀಗುವ ನಿರ್ದೇಶಕ ಯೋಗರಾಜ ಭಟ್.
೨.ಜೊತೆಗೆ ದುಡಿದವರೊಂದಿಗೆ ಗೆಲುವು ಹಂಚಿಕೊಳ್ಳಬಾರದೆಂಬ ಕಾರಣಕ್ಕಾಗಿ ತಾಂತ್ರಿಕ ವರ್ಗದಲ್ಲಿ ಬದಲಾವಣೆ ಮಾಡಿಕೊಂಡರು.
೩.ಹರಿಕೃಷ್ಣ ಅವರ ಸಂಗೀತ ಸಪ್ಪೆಯಾಗಿದೆ.
೪.ದಿಲ್ ಚಾಹ್ತಾ ಹೈ ಚಿತ್ರದ ನೆರಳು ಗಾಳಿಪಟದಲ್ಲಿದೆ, ಇನ್ನೂ ಕೆಲವು ಚಿತ್ರಗಳ ನೆರಳಿದೆ.
೫.ಐದುಕೋಟಿ ಕನ್ನಡಕ್ಕೆ ಆಪತ್ತು: ಐದುಕೋಟಿಗಿಂತ ಹೆಚ್ಚಿಗೆ ಬಜೆಟ್ಟಿನಲ್ಲಿ ತಯಾರಾದುದರಿಂದ ಚಿತ್ರ ಸೋತೇ ಸೋಲಲಿದೆ.
______
ಬೊಳುಂಬು