ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ

ಉ: ಗಾಳಿಪಟ

January 19, 2008 - 11:16pm — kpbolumbu

ಉ: ಗಾಳಿಪಟ

kpbolumbu's picture

ನೋಡುವವರ ಮನರಂಜಿಸುವಲ್ಲಿ 'ಗಾಳಿಪಟ' ಗೆದ್ದಿದೆ ಎನ್ನಬಹುದು. ಕನ್ನಡತನ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದಾರೆ.ರತ್ನವೇಲು ಕ್ಯಾಮರಾ ಕೆಲಸ ಅದ್ಭುತ. ಕನ್ನಡಕ್ಕೆ ಸಹಜವಾದ ಮಾತುಕತೆಗಳು, ಕನ್ನಡದಲ್ಲಿ ಇಲ್ಲಿಯವರೆಗೆ ಬಳಕೆಯಾಗದ ಸೂಪರ್ ೩೫ ಎಂಎಂ, ಸಂದರ್ಭಕ್ಕೆ ತಕ್ಕಂತಹ ಹಾಡುಗಳು,ಅತಿಯೆನಿಸದ ನಟನೆ, ಹೀಗೆ ಹಲವಾರು ಒಳ್ಳೆಯ ಅಂಶಗಳಿವೆ.( ಹಾಡಿನಲ್ಲಿ ಉದಿತ್ ನಾರಾಯಣ್ ಕಾಟ.)

ಮುಂಗಾರುಮಳೆಯ ಮಾತಿನ ಶೈಲಿಯನ್ನೇ ಮುಂದುವರಿಸಿದಂತೆ ಕಾಣುವುದೂ ನಿಜ. ಆದರೆ ಈ ಚಿನಕುರಳಿ ಮಾತುಗಳು ನಾಯಕರ ಪೈಕಿ ಗಣೇಶಂಗೆ ಮಾತ್ರ. ಉಳಿದವರಿಬ್ಬರು ಬೆದರುಬೊಂಬೆಗಳು. ಒಬ್ಬ ಶ್ರೇಷ್ಠ ಹಾಡುಗಾರನನ್ನು ಬದಿಗಿಟ್ಟುಕೊಂಡು ಆತನಿಂದ ಒಂದು ಹಾಡನ್ನಾದರೂ ಹಾಡಿಸಬಾರದಿತ್ತೇ? ಜಾಗಟೆಗೆ ಗುಂಡು ಮೊದಲು ಬಡಿಯಿತು ಎನ್ನುತ್ತಾರೆ, ಆದರೆ ವಿರಾಮಕ್ಕೆ ಮುಂಚಿನ ದೃಶ್ಯದಲ್ಲಿ ಗುಂಡೇಟು ಬಿದ್ದ ಜಾಗಟೆ ಕಾಣಿಸುವುದೇ ಇಲ್ಲ.ಗುಂಡು ನೇರವಾಗಿ ಬಡಿಯುವಂತೆಯೇ ಕಾಣಿಸುತ್ತದೆ.ಜಾಗಟೆಯಲ್ಲಿ ತೂತಿದೆ-ಹಾಗಿದ್ದರೆ ಗುಂಡು ಹಿಂದಕ್ಕೆ ಬಡಿಯುವುದು ಹೇಗೆ? Smiling ನಧೀಂ ಧೀಂ ತನಾ ಹಾಡಿನಲ್ಲಿ ಯಕ್ಷಗಾನದ ವೇಷಗಳೂ ಕುಣಿಯುತ್ತವೆ, ಆದರೆ ಆಹಾ ಎಂಬಂತಹ ಒಂದು ದೃಶ್ಯಸಂಯೋಜನೆ ಸಾಧ್ಯವಾಗಲಿಲ್ಲ. ಹಂದಿ ಹೊಡೆಯಲು ಹೋಗಿ ಹಂದಿಯಿಂದ ಏಟು ತಿಂದು, ಹೋದ ಕಾಲಿನ ಶಕ್ತಿ ಮರಳಿ ಸಿಗುವ ಸನ್ನಿವೇಶ 'ಮುರಿಯದ ಮನೆ' ಚಿತ್ರದಲ್ಲಿ ಚಿಕ್ಕಂದಿನಲ್ಲಿ ವಿದ್ಯುತ್ ಶಾಕ್ ತಗುಲಿ ಒಂದು ಕಯ್ಯ ಶಕ್ತಿಯನ್ನು ಕಳೆದುಕೊಳ್ಳುವ ರಾಜ್‍ಕುಮಾರ್ ಇನ್ನೊಮ್ಮೆ ವಿದ್ಯುತ್ ಶಾಕ್ ತಗುಲಿದಾಗ ಪುನಃ ಮೊದಲಿನಂತಾಗುವುದನ್ನು ನೆನಪಿಸುತ್ತದೆ. ('ಸ್ಪೈನಲ್ ಕಾರ್ಡ್ ಫೈಲ್ಯೂರ್' ಅಂತೆ ಅದು.) ಇಂತಾದರೂ ಇದಕ್ಕಾಗಿಯೇ ಅಲ್ಲದೆ ಇನ್ನೂ ಹಲವು ಕಾರಣಗಳಿಗಾಗಿ ಭಟ್ಟರು ಅಭಿನಂದನೆಗೆ ಅರ್ಹರು.

ಇತ್ತೀಚೆಗೆ ಬಂದ ಸತ್ಯವಾನ್ ಸಾವಿತ್ರಿ ಚಿತ್ರದ ಸಂಭಾಷಣೆಗಳು(ರಾಜೇಂದ್ರ ಕಾರಂತ್) ಒಂದು ರೀತಿಯಲ್ಲಿ ಮಾದರಿಯಾಗಬಹುದಿತ್ತು. ಯೋಗರಾಜ ಭಟ್ಟರಂತಹ ನಿರ್ದೇಶಕರು ಹೆಚ್ಚಲ್ಲದಿದ್ದರೂ ಹತ್ತು ಮಂದಿ ಕನ್ನಡದಲ್ಲಿ ಇರಬೇಕು.

ಗಾಳಿಪಟದ ಬಗ್ಗೆ ಪ್ರಕಟವಾದ ಮೊದಲ ವಿಮರ್ಶೆ ಹೀಗೆನ್ನುತ್ತದೆ .
ನನಗೆ ಹಿಡಿಸಿದ ಇನ್ನೊಂದು ವಿಮರ್ಶೆ

ತಮ್ಮನ್ನು ವಿಮರ್ಶಕರೆಂದುಕೊಳ್ಳುವವರ ಬಗ್ಗೆ ಯೋಗರಾಜ ಭಟ್ ಹೀಗೆನ್ನುತ್ತಾರೆ

ಎಲ್ಲರೂ ಒಳ್ಳೆಯ ವಿಮರ್ಶೆಯನ್ನೇ ನೀಡಬೇಕೆಂದೇನೂ ಇಲ್ಲ.ವಿಜಯಕರ್ನಾಟಕದಲ್ಲಾದರೆ ಪರ್ವಾಯಿಲ್ಲ, ಚಿತ್ರ ಬಿಡುಗಡೆಯಾದ ನಂತರ ವಿಮರ್ಶೆ ಪ್ರಕಟವಾಗಿದೆ. ಅವರಿಗೆ ಅನ್ನಿಸಿದ್ದನ್ನು ಅವರು ಬರೆದಿದ್ದಾರೆ; ಲಂಕೇಶ್ ಪತ್ರಿಕೆಯಲ್ಲಿರುವಂತೆ ಬಿಡುಗಡೆಯಾಗುವುದಕ್ಕೆ ಮುಂಚಿನ ಹಾಳು ಊಹೆಗಳನ್ನಲ್ಲ. ಅವರು ಹೇಳುವಂತೆ ಕಾಡುಹಂದಿ ಎಂಬ ಕಲ್ಪನೆಯೇ ಇಂಗ್ಲಿಷ್ ಚಿತ್ರದಿಂದ ಬಂದದ್ದಂತೆ.

ವಿಜಯಕರ್ನಾಟಕದ ಲೇಖನಗಳು ಸುಲಭವಾಗಿ ಜಾಲಿಸಲು ಸಿಗುವುದರಿಂದ ಧಾರಾಳವಾಗಿ ಟೀಕಿಸಬಹುದು. ಆದರೆ ಈ ಕೆಳಗಿನ ಅಂಶಗಳು ಬಂದಿರುವುದು ಲಂಕೇಶ್ ಪತ್ರಿಕೆಯಲ್ಲಿ:
೧.ತನಗೆ ಸರಿಸಾಟಿ ಯಾರೂ ಇಲ್ಲ ಎಂದು ಬೀಗುವ ನಿರ್ದೇಶಕ ಯೋಗರಾಜ ಭಟ್.
೨.ಜೊತೆಗೆ ದುಡಿದವರೊಂದಿಗೆ ಗೆಲುವು ಹಂಚಿಕೊಳ್ಳಬಾರದೆಂಬ ಕಾರಣಕ್ಕಾಗಿ ತಾಂತ್ರಿಕ ವರ್ಗದಲ್ಲಿ ಬದಲಾವಣೆ ಮಾಡಿಕೊಂಡರು.
೩.ಹರಿಕೃಷ್ಣ ಅವರ ಸಂಗೀತ ಸಪ್ಪೆಯಾಗಿದೆ.
೪.ದಿಲ್ ಚಾಹ್‍ತಾ ಹೈ ಚಿತ್ರದ ನೆರಳು ಗಾಳಿಪಟದಲ್ಲಿದೆ, ಇನ್ನೂ ಕೆಲವು ಚಿತ್ರಗಳ ನೆರಳಿದೆ.
೫.ಐದುಕೋಟಿ ಕನ್ನಡಕ್ಕೆ ಆಪತ್ತು: ಐದುಕೋಟಿಗಿಂತ ಹೆಚ್ಚಿಗೆ ಬಜೆಟ್ಟಿನಲ್ಲಿ ತಯಾರಾದುದರಿಂದ ಚಿತ್ರ ಸೋತೇ ಸೋಲಲಿದೆ.
______
ಬೊಳುಂಬು

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಗಾಳಿಪಟ By: mahesha (14 replies) January 18, 2008 - 10:23pm
  • ಉ: ಗಾಳಿಪಟ By: ravee... (Jan 19 2008 - 8:36pm)
    • ಉ: ಗಾಳಿಪಟ By: kpbolumbu (Jan 19 2008 - 11:16pm)
      • ಉ: ಗಾಳಿಪಟ By: ಸಂಗನಗೌಡ (Jan 21 2008 - 12:43am)
        • ಉ: ಗಾಳಿಪಟ By: ASHOKKUMAR (Jan 21 2008 - 5:39pm)
          • ಉ: ಗಾಳಿಪಟ By: ಸಂಗನಗೌಡ (Jan 21 2008 - 6:16pm)
          • ಉ: ಗಾಳಿಪಟ By: ಸಂಗನಗೌಡ (Jan 21 2008 - 6:16pm)
        • ಉ: ಗಾಳಿಪಟ By: ಹರೀಶ್ (Jan 21 2008 - 4:34pm)
      • ಉ: ಗಾಳಿಪಟ By: uniquesupri (Jan 20 2008 - 1:31pm)
  • ಉ: ಗಾಳಿಪಟ By: ವೈಭವ (Jan 19 2008 - 6:58pm)
    • ಉ: ಗಾಳಿಪಟ By: kpbolumbu (Jan 19 2008 - 7:53pm)
  • ಉ: ಗಾಳಿಪಟ By: ಶಿವ (Jan 19 2008 - 3:24pm)
    • ಉ: ಗಾಳಿಪಟ By: ವೈಭವ (Jan 19 2008 - 7:12pm)
      • ಉ: ಗಾಳಿಪಟ By: ಶಿವ (Jan 19 2008 - 7:28pm)
    • ಉ: ಗಾಳಿಪಟ By: kpbolumbu (Jan 19 2008 - 5:34pm)

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • gurubaliga
    ಉ: ಓಶೋ ಕಂಡಂತೆ ಗಾಂಧಿ!
    November 21, 2008 - 12:15pm
  • shashidhars
    ಉ: ಓಶೋ ಕಂಡಂತೆ ಗಾಂಧಿ!
    November 21, 2008 - 12:14pm
  • harshavardhan v...
    ಉ: ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
    November 21, 2008 - 11:59am
  • mahesha
    ಉ: ಭಯ
    November 21, 2008 - 11:58am
  • mahesha
    ಉ: ಅರಮನೆ ಮೈದಾನದಲ್ಲಿ ಪುಸ್ತಕ ಸ೦ತೆ
    November 21, 2008 - 11:54am
  • mahesha
    ಉ: ಓಶೋ ಕಂಡಂತೆ ಗಾಂಧಿ!
    November 21, 2008 - 11:49am
  • ASHOKKUMAR
    ಉ: ಮಹಾತ್ಮಾ ಗಾಂಧಿ ಅಂತರ್ಜಾಲವನ್ನು ಹೇಗೆ ಬಳಸುತ್ತಿದ್ದರು?
    November 21, 2008 - 11:43am
  • srinivasps
    ಉ: ಬಾ...ಬಿಳಿ-ಕುದುರೆಯ ಹತ್ತು...
    November 21, 2008 - 11:39am
  • palachandra
    ಉ: ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
    November 21, 2008 - 11:30am
  • gurubaliga
    ಉ: ಬಾ...ಬಿಳಿ-ಕುದುರೆಯ ಹತ್ತು...
    November 21, 2008 - 11:21am
ಇನ್ನಷ್ಟು


ಪರಸ್ಥಳದಲ್ಲಿ ವಿದ್ಯೆಯೇ ಧನ, ವಿಪತ್ಕಾಲದಲ್ಲಿ ಬುಧ್ಧಿಯೇ ಧನ, ಪರಲೋಕದಲ್ಲಿ ಧರ್ಮವೇ ಧನ, ಒಳ್ಳೆಯ ನೆಡೆತೆಯಾದರೋ ಎಲ್ಲೆಡೆಯಲ್ಲಿಯೂ ಅಖಂಡ ಧನ.

— ಭಾರತ ಮಂಜರೀ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator