ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ಚಿಂತಕರ selective criticism

February 16, 2008 - 1:33am — ramesh-m

ಉ: ಚಿಂತಕರ selective criticism

ramesh-m's picture

ಎನ್ ಡಿ ಟಿ ವಿಯ ಅಭಿಪ್ರಾಯ ಸಂಗ್ರಹದ ವಿಷಯಕ್ಕೇ ಬರುವುದಾದರೆ ನೀವೇ ಹೇಳಿದಂತೆ ಅದು ಅವರ ಬೌದ್ಧಿಕ ಪ್ರಬುದ್ಧತೆಯ ಲಕ್ಷಣ ಎಂಬುದು ನಿಜ. ಇನ್ನು ಹುಸೇನ್ ರಚಿಸಿದ ಭಾರತ ಮಾತೆಯ ಚಿತ್ರ ಯಾರಿಗೆ ನೋವುಂಟು ಮಾಡಿದ್ದು? ನಿರ್ದಿಷ್ಟ ರಾಜಕೀಯ ಐಡಿಯಾಲಜಿಯೊಂದರಿಂದ ಪ್ರೇರಿತರಾದವರನ್ನು ಮಾತ್ರ ಎಂಬುದನ್ನು ನಾವು ಮರೆಯುವಂತೆ ಇಲ್ಲ. ಈ ಬಗೆಯ ರಾಜಕೀಯ ಅಜೆಂಡಾ ಇಲ್ಲದವರನ್ನು ಇಂಥ ವಿಷಯಗಳು ಕಾಡುವುದಿಲ್ಲ. ಇಲ್ಲಿ ಗೌರವ, ಪೂಜನೀಯ ಭಾವನೆ ಎಂಬ ಪದಗಳ ದುರ್ಬಳಕೆಯಷ್ಟೇ ಆಗಿದೆ. ಹುಸೇನ್ ಈ ಚಿತ್ರ ಬರೆದು ಎಷ್ಟೋ ವರ್ಷಗಳಾದ ನಂತರ ಇದ್ದಕ್ಕಿದ್ದಂತೇ ಅಥವಾ ಸಂಘಪರಿವಾರದ ರಾಜಕೀಯ ಶಕ್ತಿ ಹೆಚ್ಚಾದ ತಕ್ಷಣ ಮಾತ್ರ 'ಭಾವನೆಗಳಿಗೆ ನೋವು' ಉಂಟಾದದ್ದು ಹೇಗೆ.

ಹೀಗೆ ಭಾವನೆಗಳಿಗೆ ನೋವುಂಟಾಗುವುದಾದರೆ ನಮ್ಮ ದೇವಾನುದೇವತೆಗಳನ್ನೆಲ್ಲಾ ಹೊಗಳುವಾಗಲೂ ಈ ಶೃಂಗಾರ ಭಾವನೆಯೇ ಇದೆಯಲ್ಲವೇ. ಶಂಕಾರಾಚಾರ್ಯರ ಸೌಂದರ್ಯ ಲಹರಿ, ಜಯದೇವನ ಗೀತಗೋವಿಂದ, ಅಷ್ಟೇಕೆ ರಾಮಾಯಣದಲ್ಲೂ ಈ ಬಗೆಯ ವರ್ಣನೆಗಳೇ ಇವೆಯಲ್ಲವೇ? ಶಂಕರಾಚಾರ್ಯರು ದೇವರನ್ನು ಕಾಮಿಸಿದರು ಎಂದು ಹೇಳಲು ಸಾಧ್ಯವೇ?

ಪೂಜನೀಯ ಭಾವನೆಯನ್ನು ಹೊಂದಿದ್ದ ಅನೇಕರು ಈಗಾಗಲೇ ಕೇಸು ದಾಖಲಿಸಿದ್ದಾರೆ. ಅದರ ಕುರಿತು ನ್ಯಾಯಾಲಯ ತೀರ್ಮಾನ ಕೈಗೊಳ್ಳುತ್ತದೆ. ಅದನ್ನು ಯಾರೂ ನೀವೇ ಹೇಳುವ ಒಂದು ಧರ್ಮವನ್ನು ಮಾತ್ರ ಟೀಕಿಸುತ್ತಿರುವವರೂ ಟೀಕಿಸಿಲ್ಲ. ಎಲ್ಲರೂ ಟೀಕಿಸುತ್ತಿರುವುದು ಹುಸೇನ್ ಚಿತ್ರ ಪ್ರದರ್ಶನಗಳ ಮೇಲೆ ದಾಳಿ ನಡೆಸುವುದನ್ನು. ಎನ್ ಡಿ ಟಿ ವಿಯ ಮೇಲೆ ದಾಳಿ ನಡೆಸುವುದನ್ನು.

ತಸ್ಲೀಮಾ ಹಾಗೂ ರಶ್ದೀ ಇಬ್ಬರೂ ಭಾರತೀಯರಲ್ಲ. ಭಾರತೀಯರಲ್ಲದವರಿಗೆ ಭಾರತ ರತ್ನ ಅಥವಾ ಭಾರತದ ಯಾವುದೇ ನಾಗರಿಕ ಪ್ರಶಸ್ತಿಗಳನ್ನು ಕೊಡಬೇಕಾದಾಗ ಅನುಸರಿಸುವ ಮಾನದಂಡಗಳೇ ಬೇರೆ. ಈ ದೃಷ್ಟಿಯಲ್ಲಿ ಅವರಿಗಿಂತ ಮುಖ್ಯರಾದ ಇನ್ನೂ ಅನೇಕರು ಜಗತ್ತಿನಲ್ಲಿದ್ದಾರೆ. ಹಾಗಾಗಿ ಅವರಿಗೆ ಭಾರತದ ಪ್ರಮುಖ ನಾಗರಿಕ ಪ್ರಶಸ್ತಿಗಳನ್ನು ನೀಡುವ ಚರ್ಚೆಯೇ ಉದ್ಭವಿಸುವುದಿಲ್ಲ. ಒಂದು ವೇಳೆ ಅಂಥದ್ದೊಂದು ಚರ್ಚೆ ಬಂದಿದ್ದರೂ ಏನೂ ಆಗುತ್ತಿರಲಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಇತ್ತೀಚೆಗೆ ಹೊರ ಬಂದ ಎಸ್ ಎಲ್ ಭೈರಪ್ಪನವರ ಕಾದಂಬರಿ 'ಆವರಣದ' ಕುರಿತಂತೆ ಯಾವ ಮುಸ್ಲಿಮ್ ಸಂಘಟನೆಯೂ ಪ್ರತಿಕ್ರಿಯಿಸಲಿಲ್ಲ. ತಸ್ಲೀಮಾ ಮತ್ತು ರಶ್ದೀಯ ಕುರಿತಂತೆ ಬಂದ ಪ್ರತಿಕ್ರಿಯೆಗಳ ಹಿಂದೆಯೂ ರಾಜಕೀಯ ಅಜೆಂಡಾಗಳೇ ಕೆಲಸ ಮಾಡಿದ್ದವು. ಇವಕ್ಕೂ ಸಂಘಪರಿವಾರ ಕೈಗೆತ್ತಿಕೊಳ್ಳುವ 'ಹೋರಾಟ'ಗಳ ಮಧ್ಯೆ ರಚನಾತ್ಮಕ ವ್ಯತ್ಯಾಸವೇನೂ ಇರುವುದಿಲ್ಲ.

ರಶ್ದೀ ಮತ್ತು ತಸ್ಲೀಮಾರಿಗೆ ಬೇರೆ ಎಲ್ಲರಿಗಿಂತಲೂ ಹೆಚ್ಚು ಬೆಂಬಲಿಸಿದ್ದು ಭಾರತದ ಸಂವೇದನಾಶೀಲ ಬುದ್ಧಿಜೀವಿಗಳು. ಇವರು ಸಂಘಪರಿವಾರವನ್ನೂ ವಿರೋಧಿಸುತ್ತಾರೆ. ತಮಾಷೆಯೆಂದರೆ ಸಂಘಪರಿವಾರವನ್ನು ಇವರು ವಿರೋಧಿಸುವುದನ್ನು ಮಾತ್ರ ನೀವು ಗಮನಿಸುತ್ತೀರಿ. ತಸ್ಲೀಮಾ ಮತ್ತು ರಶ್ದೀಗೆ ಬೆಂಬಲ ನೀಡಿದ್ದನ್ನು ಮರೆತು 'ಹಾನಿ ಮಾಡದವರನ್ನು ಮಾತ್ರ ವಿರೋಧಿಸುತ್ತಾರೆ' ಎನ್ನುತ್ತೀರಿ.

ರಮೇಶ್ ಸಮಗಾರ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಚಿಂತಕರ selective criticism By: uniquesupri (4 replies) February 14, 2008 - 10:09am
  • ಉ: ಚಿಂತಕರ selective criticism By: ramesh-m (Feb 14 2008 - 11:29am)
    • ಉ: ಚಿಂತಕರ selective criticism By: uniquesupri (Feb 14 2008 - 1:41pm)
      • ಉ: ಚಿಂತಕರ selective criticism By: ramesh-m (Feb 16 2008 - 1:33am)
        • ಉ: ಚಿಂತಕರ selective criticism By: kpbolumbu (Feb 16 2008 - 10:33am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಮನಹ್ಪಠಲ
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 7:35pm
  • shashikannada
    ಉ: ಕನ್ನಡ ಭಾಷೆ ಎಷ್ಟು ಹಳೆಯದು?
    August 30, 2008 - 6:26pm
  • spruhi
    ಉ: ಅಮ್ಮ ನ ನೆನಪು ಮತ್ತು ಫಾರಿನ್ನು .:)
    August 30, 2008 - 6:21pm
  • spruhi
    ಉ: ಕನ್ನಡ ಮಾತಾಡಿ, ಮಜಾ ಮಾಡಿ
    August 30, 2008 - 6:16pm
  • cmariejoseph
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 5:56pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:48pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:39pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:35pm
  • csomsekraiah
    ಉ: ಬಿಡುಗಡೆಯ ನಂತರದ ಬೇಡಿಗಳು (೩)
    August 30, 2008 - 5:12pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 5:01pm
ಇನ್ನಷ್ಟು


ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator