ಉ: ಚಿಂತಕರ selective criticism
- ಉ: ಚಿಂತಕರ selective criticism By: ramesh-m (Feb 14 2008 - 11:29am)
- ಉ: ಚಿಂತಕರ selective criticism By: uniquesupri (Feb 14 2008 - 1:41pm)
- ಉ: ಚಿಂತಕರ selective criticism By: ramesh-m (Feb 16 2008 - 1:33am)
- ಉ: ಚಿಂತಕರ selective criticism By: kpbolumbu (Feb 16 2008 - 10:33am)
- ಉ: ಚಿಂತಕರ selective criticism By: ramesh-m (Feb 16 2008 - 1:33am)
- ಉ: ಚಿಂತಕರ selective criticism By: uniquesupri (Feb 14 2008 - 1:41pm)


RSS:
ಉ: ಚಿಂತಕರ selective criticism
ಎನ್ ಡಿ ಟಿ ವಿಯ ಅಭಿಪ್ರಾಯ ಸಂಗ್ರಹದ ವಿಷಯಕ್ಕೇ ಬರುವುದಾದರೆ ನೀವೇ ಹೇಳಿದಂತೆ ಅದು ಅವರ ಬೌದ್ಧಿಕ ಪ್ರಬುದ್ಧತೆಯ ಲಕ್ಷಣ ಎಂಬುದು ನಿಜ. ಇನ್ನು ಹುಸೇನ್ ರಚಿಸಿದ ಭಾರತ ಮಾತೆಯ ಚಿತ್ರ ಯಾರಿಗೆ ನೋವುಂಟು ಮಾಡಿದ್ದು? ನಿರ್ದಿಷ್ಟ ರಾಜಕೀಯ ಐಡಿಯಾಲಜಿಯೊಂದರಿಂದ ಪ್ರೇರಿತರಾದವರನ್ನು ಮಾತ್ರ ಎಂಬುದನ್ನು ನಾವು ಮರೆಯುವಂತೆ ಇಲ್ಲ. ಈ ಬಗೆಯ ರಾಜಕೀಯ ಅಜೆಂಡಾ ಇಲ್ಲದವರನ್ನು ಇಂಥ ವಿಷಯಗಳು ಕಾಡುವುದಿಲ್ಲ. ಇಲ್ಲಿ ಗೌರವ, ಪೂಜನೀಯ ಭಾವನೆ ಎಂಬ ಪದಗಳ ದುರ್ಬಳಕೆಯಷ್ಟೇ ಆಗಿದೆ. ಹುಸೇನ್ ಈ ಚಿತ್ರ ಬರೆದು ಎಷ್ಟೋ ವರ್ಷಗಳಾದ ನಂತರ ಇದ್ದಕ್ಕಿದ್ದಂತೇ ಅಥವಾ ಸಂಘಪರಿವಾರದ ರಾಜಕೀಯ ಶಕ್ತಿ ಹೆಚ್ಚಾದ ತಕ್ಷಣ ಮಾತ್ರ 'ಭಾವನೆಗಳಿಗೆ ನೋವು' ಉಂಟಾದದ್ದು ಹೇಗೆ.
ಹೀಗೆ ಭಾವನೆಗಳಿಗೆ ನೋವುಂಟಾಗುವುದಾದರೆ ನಮ್ಮ ದೇವಾನುದೇವತೆಗಳನ್ನೆಲ್ಲಾ ಹೊಗಳುವಾಗಲೂ ಈ ಶೃಂಗಾರ ಭಾವನೆಯೇ ಇದೆಯಲ್ಲವೇ. ಶಂಕಾರಾಚಾರ್ಯರ ಸೌಂದರ್ಯ ಲಹರಿ, ಜಯದೇವನ ಗೀತಗೋವಿಂದ, ಅಷ್ಟೇಕೆ ರಾಮಾಯಣದಲ್ಲೂ ಈ ಬಗೆಯ ವರ್ಣನೆಗಳೇ ಇವೆಯಲ್ಲವೇ? ಶಂಕರಾಚಾರ್ಯರು ದೇವರನ್ನು ಕಾಮಿಸಿದರು ಎಂದು ಹೇಳಲು ಸಾಧ್ಯವೇ?
ಪೂಜನೀಯ ಭಾವನೆಯನ್ನು ಹೊಂದಿದ್ದ ಅನೇಕರು ಈಗಾಗಲೇ ಕೇಸು ದಾಖಲಿಸಿದ್ದಾರೆ. ಅದರ ಕುರಿತು ನ್ಯಾಯಾಲಯ ತೀರ್ಮಾನ ಕೈಗೊಳ್ಳುತ್ತದೆ. ಅದನ್ನು ಯಾರೂ ನೀವೇ ಹೇಳುವ ಒಂದು ಧರ್ಮವನ್ನು ಮಾತ್ರ ಟೀಕಿಸುತ್ತಿರುವವರೂ ಟೀಕಿಸಿಲ್ಲ. ಎಲ್ಲರೂ ಟೀಕಿಸುತ್ತಿರುವುದು ಹುಸೇನ್ ಚಿತ್ರ ಪ್ರದರ್ಶನಗಳ ಮೇಲೆ ದಾಳಿ ನಡೆಸುವುದನ್ನು. ಎನ್ ಡಿ ಟಿ ವಿಯ ಮೇಲೆ ದಾಳಿ ನಡೆಸುವುದನ್ನು.
ತಸ್ಲೀಮಾ ಹಾಗೂ ರಶ್ದೀ ಇಬ್ಬರೂ ಭಾರತೀಯರಲ್ಲ. ಭಾರತೀಯರಲ್ಲದವರಿಗೆ ಭಾರತ ರತ್ನ ಅಥವಾ ಭಾರತದ ಯಾವುದೇ ನಾಗರಿಕ ಪ್ರಶಸ್ತಿಗಳನ್ನು ಕೊಡಬೇಕಾದಾಗ ಅನುಸರಿಸುವ ಮಾನದಂಡಗಳೇ ಬೇರೆ. ಈ ದೃಷ್ಟಿಯಲ್ಲಿ ಅವರಿಗಿಂತ ಮುಖ್ಯರಾದ ಇನ್ನೂ ಅನೇಕರು ಜಗತ್ತಿನಲ್ಲಿದ್ದಾರೆ. ಹಾಗಾಗಿ ಅವರಿಗೆ ಭಾರತದ ಪ್ರಮುಖ ನಾಗರಿಕ ಪ್ರಶಸ್ತಿಗಳನ್ನು ನೀಡುವ ಚರ್ಚೆಯೇ ಉದ್ಭವಿಸುವುದಿಲ್ಲ. ಒಂದು ವೇಳೆ ಅಂಥದ್ದೊಂದು ಚರ್ಚೆ ಬಂದಿದ್ದರೂ ಏನೂ ಆಗುತ್ತಿರಲಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಇತ್ತೀಚೆಗೆ ಹೊರ ಬಂದ ಎಸ್ ಎಲ್ ಭೈರಪ್ಪನವರ ಕಾದಂಬರಿ 'ಆವರಣದ' ಕುರಿತಂತೆ ಯಾವ ಮುಸ್ಲಿಮ್ ಸಂಘಟನೆಯೂ ಪ್ರತಿಕ್ರಿಯಿಸಲಿಲ್ಲ. ತಸ್ಲೀಮಾ ಮತ್ತು ರಶ್ದೀಯ ಕುರಿತಂತೆ ಬಂದ ಪ್ರತಿಕ್ರಿಯೆಗಳ ಹಿಂದೆಯೂ ರಾಜಕೀಯ ಅಜೆಂಡಾಗಳೇ ಕೆಲಸ ಮಾಡಿದ್ದವು. ಇವಕ್ಕೂ ಸಂಘಪರಿವಾರ ಕೈಗೆತ್ತಿಕೊಳ್ಳುವ 'ಹೋರಾಟ'ಗಳ ಮಧ್ಯೆ ರಚನಾತ್ಮಕ ವ್ಯತ್ಯಾಸವೇನೂ ಇರುವುದಿಲ್ಲ.
ರಶ್ದೀ ಮತ್ತು ತಸ್ಲೀಮಾರಿಗೆ ಬೇರೆ ಎಲ್ಲರಿಗಿಂತಲೂ ಹೆಚ್ಚು ಬೆಂಬಲಿಸಿದ್ದು ಭಾರತದ ಸಂವೇದನಾಶೀಲ ಬುದ್ಧಿಜೀವಿಗಳು. ಇವರು ಸಂಘಪರಿವಾರವನ್ನೂ ವಿರೋಧಿಸುತ್ತಾರೆ. ತಮಾಷೆಯೆಂದರೆ ಸಂಘಪರಿವಾರವನ್ನು ಇವರು ವಿರೋಧಿಸುವುದನ್ನು ಮಾತ್ರ ನೀವು ಗಮನಿಸುತ್ತೀರಿ. ತಸ್ಲೀಮಾ ಮತ್ತು ರಶ್ದೀಗೆ ಬೆಂಬಲ ನೀಡಿದ್ದನ್ನು ಮರೆತು 'ಹಾನಿ ಮಾಡದವರನ್ನು ಮಾತ್ರ ವಿರೋಧಿಸುತ್ತಾರೆ' ಎನ್ನುತ್ತೀರಿ.
ರಮೇಶ್ ಸಮಗಾರ