ಕಾರ್ಯಕ್ರಮದ ವಿವರ
- ಉ:ಇಂದಿನ ನಮ್ಮ ತವಕ ತಲ್ಲಣಗಳು By: hpn (Feb 21 2006 - 11:03pm)
- ಕಾರ್ಯಕ್ರಮದ ವಿವರ By: ಪ್ರಶಾಂತ.ಪಂಡಿತ (Feb 22 2006 - 3:03pm)
- ಉ:ಇಂದಿನ ನಮ್ಮ ತವಕ ತಲ್ಲಣಗಳು By: (Feb 18 2006 - 10:20am)
- ಕುಟ್ಟಣ ದೋಷ!! By: ಪ್ರಶಾಂತ.ಪಂಡಿತ (Feb 20 2006 - 1:00pm)
- Re: ಕುಟ್ಟಣ ದೋಷ!! By: pavanaja (Feb 20 2006 - 5:02pm)
- ಅಚ್ಚಿನ ದೋಷ - ಅಚ್ಚಣದೋಷ - ಕನ್ನಡ By: shreekant.mishrikoti (Feb 18 2006 - 11:56am)
- ಅಚ್ಚಿನ, ಅಚ್ಚಣ By: bhatpp (Feb 18 2006 - 10:35pm)
- ಉಃ ಅಚ್ಚಿನ ದೋಷ - ಅಚ್ಚಣದೋಷ - ಕನ್ನಡ By: Sunil Jayaprakash (Feb 18 2006 - 6:50pm)
- ಹೊಸ ಪದಗಳು By: tvsrinivas41 (Feb 18 2006 - 8:33pm)
- ಉ ಹೊಸ ಪದಗಳು By: Sunil Jayaprakash (Feb 20 2006 - 1:32pm)
- ಹೊಸ ಪದಗಳು By: tvsrinivas41 (Feb 18 2006 - 8:33pm)
- ಕುಟ್ಟಣ ದೋಷ!! By: ಪ್ರಶಾಂತ.ಪಂಡಿತ (Feb 20 2006 - 1:00pm)

RSS:
ಕಾರ್ಯಕ್ರಮದ ವಿವರ
ನಾಡಿಗ್, ನನ್ನ ಮಟ್ಟಿಗಂತೂ ಬಹಳ ದಿನ ನೆನಪಿನಲ್ಲುಳಿಯುವ, ಗಂಭೀರ ಚಿಂತನೆಗೆ ಅವಕಾಶಮಾಡಿಕೊಡುವ ಕಾರ್ಯಕ್ರಮ ಅದಾಗಿತ್ತು. ಭಾಗವಹಿಸಿದ್ದ ಎಲ್ಲ ಚಿಂತಕರು ನಮ್ಮ ಸಮಾಜದ ಇಂದಿನ ಆಗುಹೋಗುಗಳ ಬಗ್ಗೆ, ಅವುಗಳ ಕುರಿತಾದ ನಮ್ಮ ಧೋರಣೆಗಳು, ಇದರಲ್ಲಿ public intellectualಗಳ ಪಾತ್ರ ಇತ್ಯಾದಿ ವಿಷಯಗಳನ್ನು ಮಂಡಿಸಿದರು. ನಂತರ ಚರ್ಚೆ ನಡೆಯಿತು. ಅವೆಲ್ಲವನ್ನು ಇಲ್ಲಿ ವಿವರಿಸುವುದು ಸ್ವಲ್ಪ ಕಷ್ಟ. ನಾನು ಆ ದಿನ record ಮಾಡಲಾದ ಭಾಷಣ/ಚರ್ಚೆಯನ್ನು ಕೇಳಿಸಿಕೊಂಡು ಲೇಖನವೊಂದನ್ನು ಬರೆಯಬೇಕೆಂದಿದ್ದೇನೆ.
ಸಾರಾಂಶ ಕೊಡಬಲ್ಲೆ:
೧. ಎಂ.ಪಿ. ಪ್ರಕಾಶ್ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಅವುಗಳನ್ನು ಎದುರಿಸಿ ಹೊಸ ನಾಳೆಗಳನ್ನು ಕಟ್ಟುವ ಬಗ್ಗೆ ಆಶಾವಾದಿಯಾಗಿ ಮಾತನಾಡಿದರು
೨. ಯು.ಆರ್. ಅನಂತಮೂರ್ತಿಯವರು ಎಂ.ಪಿ. ಪ್ರಕಾಶರ ಮಾತಿಗೆ ಪ್ರತಿಕ್ರಿಯಿಸುತ್ತ 'ನಿಮ್ಮಂತ ಅಪರೂಪದ ರಾಜಕಾರಣಿಗಳನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ, ನಿಮ್ಮಿಂದ ಬಹಳ ನಿರೀಕ್ಷೆಯಿದೆ' ಎಂದರು
೩. Outlook ಪತ್ರಿಕೆಯ ಸುಗತ ಶ್ರೀನಿವಾಸರಾಜು Infosysನ ಭೂಮಿ ಹಗರಣದ ಹಿನ್ನೆಲೆಯಲ್ಲಿ corporate ಸಂಸ್ಥೆಗಳ ಉಢಾಫೆ ಧೋರಣೆ, ರಾಜಕಾರಣಿಗಳ/ಅಧಿಕಾರಿಗಳ ವರ್ತನೆ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರ - ಈ ಎಲ್ಲ ವಿಷಯಗಳ ಬಗ್ಗೆ ವಿವರವಾಗಿ ಚರ್ಚಿಸಲು ಕಾರಣರಾದರು
೪. ಶರತ್ ಅನಂತಮೂರ್ತಿಯವರು ವಿಜ್ಞಾನ (basic science) ಹಾಗು ತಂತ್ರಜ್ಞಾನ (technology) ಗಳ ನಡುವಿನ ಸೂಕ್ಷ್ಮ ವ್ಯತ್ಯಾಸ, ಇಂದಿನ ಸಮಾಜದಲ್ಲಿ ಅವುಗಳ ಬಳಕೆಗಳ ಬಗ್ಗೆ ಪ್ರಬಂಧ ಮಂಡಿಸಿದರು
೫. ವಿಜಯಶಂಕರ ಅವರು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸಮಾಡುತ್ತ (beneficiary ಗಳಾಗಿ), ನಮ್ಮ ನೆಲದ ಸಮಸ್ಯೆಗಳ ಬಗ್ಗೆ ಎಚ್ಚರದಿಂದಿರುವ ಅಗತ್ಯ, ಜಾಗತೀಕರಣದ ಸಂದರ್ಭದಲ್ಲಿ ಸುತ್ತಲ ಆಗುಹೋಗುಗಳ ಬಗೆಗಿನ ಅರಿವು, ಅವುಗಳನ್ನು ಗ್ರಹಿಸುವ ಪರಿ - ಈ ವಿಷಯಗಳ ಬಗ್ಗೆ ಮಾತಾಡಿದರು
೬. ಖ್ಯಾತ ರಂಗಕರ್ಮಿ ರಘುನಂದನ ಅವರು TVಯ ಕಾರ್ಯಕ್ರಮಗಳು ಹಂತ ಹಂತವಾಗಿ ಭಾಷೆಯನ್ನು ಕೊಲ್ಲುತ್ತಿರುವ ಬಗ್ಗೆ, ನಾಟಕ ಹಾಗು ಸಿನಿಮಾ ಕಲೆಯ ಸಾಧ್ಯತೆಗಳ ಬಗ್ಗೆ (ಅವರ ಪ್ರಕಾರ ನಾಟಕ ಮತ್ತು ಸಿನಿಮಾ ಕಲಾಪ್ರಕಾರಗಳು - TV ಕೇವಲ ಮಾಧ್ಯಮ) ಪ್ರಬಂಧ ಮಂಡಿಸಿದರು
೭. ಕೊನೆಯಲ್ಲಿ ರಾಘವೇಂದ್ರ ರಾವ್ 'ಇಷ್ಟೆಲ್ಲ ತವಕ ತಲ್ಲಣಗಳ ಮಧ್ಯೆ ಅರಿವು, ಎಚ್ಚರಗಳನ್ನಿಟ್ಟುಕೊಂಡು, ಹೊಸ ಕನಸುಗಳನ್ನು ಕಾಣುವ, ಬದುಕುವ challenge'ಗಳ ಬಗ್ಗೆ ಮಾತನಾಡಿದರು