ಉ: ಮಹಾಶಿವರಾತ್ರಿ.....
- ಉ: ಮಹಾಶಿವರಾತ್ರಿ..... By: prasadbshetty (Mar 9 2008 - 10:11pm)
- ಉ: ಮಹಾಶಿವರಾತ್ರಿ..... By: Sunil Jayaprakash (Mar 9 2008 - 8:52am)
- ಉ: ಮಹಾಶಿವರಾತ್ರಿ..... By: nagesamrat (Mar 8 2008 - 4:49pm)
- ಉ: ಮಹಾಶಿವರಾತ್ರಿ..... By: prasadbshetty (Mar 8 2008 - 9:49pm)
- ಉ: ಮಹಾಶಿವರಾತ್ರಿ..... By: Ennares (Mar 9 2008 - 10:16pm)
- ಉ: ಮಹಾಶಿವರಾತ್ರಿ..... By: prasadbshetty (Mar 9 2008 - 10:28pm)
- ಉ: ಮಹಾಶಿವರಾತ್ರಿ..... By: Ennares (Mar 9 2008 - 10:26pm)
- ಉ: ಮಹಾಶಿವರಾತ್ರಿ..... By: prasadbshetty (Mar 9 2008 - 10:39pm)
- ಉ: ಮಹಾಶಿವರಾತ್ರಿ..... By: Ennares (Mar 9 2008 - 10:16pm)
- ಉ: ಮಹಾಶಿವರಾತ್ರಿ..... By: prasadbshetty (Mar 8 2008 - 9:49pm)

RSS:
ಉ: ಮಹಾಶಿವರಾತ್ರಿ.....
೮ನೇ ಮಾರ್ಚ್ ೨೦೦೮ರಂದು ರಾತ್ರಿ ದೂರದರ್ಶನದ “ಚಂದನ” ಚಾನೆಲ್ನಲ್ಲಿ ಶಿವರಾತ್ರಿಯ ಆಚರಣೆಯ ಬಗ್ಗೆ ಶ್ರೀ ಪಾವಗಢ ಪ್ರಕಾಶರಾವ್ರವರ ಉಪನ್ಯಾಸ ಬಿತ್ತರಿಸಲಾಯಿತು.
ಅವರ ಪ್ರಕಾರ ಒಮ್ಮೆ ಸೃಷ್ಟಿಕರ್ತನಾದ ಬ್ರಹ್ಮ ಅಹಂಕಾರ ಮತ್ತು ಉಧ್ಧಟತನದಿಂದ ತನ್ನ ತಂದೆಯಾದ ವಿಷ್ಣುವನ್ನು ಒಂದು ಪಂಥಕ್ಕೆ ಅಹ್ವಾನಿಸಿ ಅದರಲ್ಲಿ ಸೋತವರು ಗೆದ್ದವರಿಗೆ ಪೂಜೆ ಮಾಡಬೇಕು ಎಂದು ಶರತ್ತು ಹಾಕಿದನಂತೆ. ಸುಳ್ಳು ಸಾಕ್ಷ್ಯದ ಆಧಾರದ ಮೇಲೆ ಪಂಥವನ್ನು ಗೆದ್ದನಂತೆ. ಬಡಪಾಯಿ ವಿಷ್ಣು ಪಂಥದ ಶರತ್ತನ್ನು ನಿಭಾಯಿಸಲೋಸುಗ ತನ್ನ ಮಗನ ಪೂಜೆ ಮಾಡಲಾರಂಭಿಸಿದನಂತೆ. ಇನ್ನೇನು ಬ್ರಹ್ಮನ ಪೂಜೆ ಮುಗಿಸುವ ಕ್ಷಣದಲ್ಲಿ ಮಹಾಮಂಗಳಾರತಿ ಎತ್ತಬೇಕು ಎನ್ನುವಷ್ಟರಲ್ಲಿ ಕೋಪಾವಿಷ್ಟನಾದ ಪರಮಶಿವ ಮಧ್ಯೆ ಉದ್ಭವಿಸಿ ಬ್ರಹ್ಮನನ್ನು ತಂದೆಯಿಂದಲೇ ಪೂಜೆಮಾಡಿಸಿಕೊಳ್ಳುತ್ತಿರುವ ಅಧಿಕಪ್ರಸಂಗಿತನಕ್ಕಾಗಿ ನಿಂದಿಸಿದನಂತೆ. ಹಿಂದೊಮ್ಮೆ ಬ್ರಹ್ಮನ ತಪಸ್ಸಿನ ಕೋರಿಕೆಯ ಮೇರೆಗೆ ಶಿವನ ಒಂದು ಅಂಶ ಬ್ರಹ್ಮನ ಸೃಷ್ಟಿಯ ಅಂಗವಾಗಿ ಅವತರಿಸಿತ್ತು. ಅಹಂಕಾರದಿಂದ ಅಂಧನಾಗಿದ್ದ ಬ್ರಹ್ಮ ಶಿವನನ್ನು ಕುರಿತು ನೀನೂ ಕೂಡಾ ನನ್ನ ಸೃಷ್ಟಿಯಿಂದಲೇ ಅಸ್ತಿತ್ವಕ್ಕೆ ಬಂದದ್ದರಿಂದ ನೀನೂ ನನ್ನ ಮಗನ ಹಾಗೆಯೇ ಅಂದನಂತೆ. ಕೋಪ ತಡೆಯಲಾಗದ ಶಿವ ತನ್ನ ಮೂರನೆ ಕಣ್ಣಿನಿಂದ ಒಂದು ಮಾಂಸದ ತುಂಡನ್ನು ತೆಗೆದು ಕಾಲ ಭೈರವನನ್ನು ಸೃಷ್ಟಿಸಿದನಂತೆ. ಕಾಲಭೈರವ ತನ್ನ ಉಗುರಿನಿಂದ ಬ್ರಹ್ಮನ ನಾಲ್ಕು ಮುಖಗಳಲ್ಲಿ ಒಂದನ್ನು ಕಿತ್ತಿ ಬಿಟ್ಟನಂತೆ. ಹಾಗೆಯೇ ಬ್ರಹ್ಮನಿಗೆ ನಿನಗೆ ಈಗ ಆದದ್ದೇ ಕೊನೆಯ ಪೂಜೆ. ಮತ್ತೆಂದಿಗೂ ನಿನಗೆ ಯಾರೂ ಪೂಜೆ ಮಾಡಕೂಡದು ಎಂದು ಶಾಪವಿತ್ತನಂತೆ. ಅದಕ್ಕೇ ಬ್ರಹ್ಮನಿಗೆ ದೇವಾಲಯಗಳಿಲ್ಲ ಅಂತ ಪ್ರತೀತಿ.
ಶಿವನ ಅಂಶವಾದ ಕಾಲಭೈರವ ಹುಟ್ಟಿದ ಈ ರಾತ್ರಿ ಶಿವರಾತ್ರಿ ಅಂತ ಅವರ ವ್ಯಾಖ್ಯಾನ. ಶಿವನ Birthday ಅಂತೂ ಅಲ್ಲ!
ಬೇರೆ ಯಾರಾದರೂ ಈ ಕಥೆಯನ್ನು ಕೇಳಿದ್ದೀರಾ?
- ನವರತ್ನ ಸುಧೀರ್