ಇದೇನು ಸ್ವಾಮಿ ಒಂದು ಶೀರ್ಷಿಕೆಯಡಿ ಮೂರು ಬೇರೆ ಬೇರೆ ವಿಷಯಗಳ ಬಗ್ಗೆ ಬರಹ?
ಇರಲಿ.
ಕರ್ನಾಟಕಕ್ಕೆ ಕೃಷ್ಣಾಗಮನ ಕಾಂಗ್ರೆಸ್ಸಿನ ಒಂದು ಹತಾಶೆಯ ನಡೆ. ಇಲ್ಲಿ ಅವರಿಗೆ ಚರಿಶ್ಮಾ ಇರುವಂತಹ ಒಂದೇ ಒಂದು ಕ್ಯಾಂಡಿಡೇಟೂ ಕಾಣುತ್ತಿಲ್ಲವೆಂದು ಕಾಣುತ್ತದೆ. ಅಲ್ಲದೆ ಇಲ್ಲಿ ಪರಸ್ಪರ ಕಾಲೆಳೆಯುವ ರಾಜಕಾರಣಿಗಳೇ ಕಾಸಿಗೊಂದು ಕೊಸರಿಗೆರಡರಂತೆ ಸಿಗುತ್ತಿದ್ದಾರಲ್ಲ. ಹಾಗಿರುವಾಗ ಹೈಕಮಾಂಡ್ ತಾನೆ ಏನು ಮಾಡುತ್ತದೆ. ಸೋಲಿಗೊಬ್ಬ ಸರದಾರನ ಹೆಸರೂ ಬೇಕಾಗಿದೆ. ಕೃಷ್ಣರು ಅದಕ್ಕೆ ಸಿದ್ದವಾಗಿದ್ದಾರೆ. ಅಲ್ಲದೆ ಅವರಿಗೆ ಮಹಾರಾಷ್ಟ್ರದ ರಾಜಕೀಯದಲ್ಲಿರುವುದು ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡಂತಾಗಿದೆ. ಅಲ್ಲಿಂದ ಎಷ್ಟು ಬೇಗ ತಪ್ಪಿಸಿಕೊಂಡರೆ ಅಷ್ಟು ಬೇಗ ಒಳ್ಳೆಯದೆಂಬ ಲೆಕ್ಕಾಚಾರದಿಂದ ಕರ್ನಾಟಕಕ್ಕೆ ಮರಳಿದ್ದಾರೆ.
ಇನ್ನು ಕ್ರಿಕೆಟ್ಟಿನ ವಿಚಾರ. ಅದು ಕೆಟ್ಟು, ಕುಲಗೆಟ್ಟು ಹೋಗಿದೆ. ಈಗ ಕಿರಿಯ ಆಟಗಾರರನ್ನೂ ಖರೀದಿಸುತ್ತಾ, ಅವರನ್ನೂ ಆಟದಿಂದ ನೋಟಿನ ಕಡೆ ಎಳೆಯುತ್ತಿದ್ದಾರಲ್ಲ, ಇದಕ್ಕಿಂತಲೂ ವ್ಯಥೆಯ ಸಂಗತಿ ಇನ್ನೇನಿದೆ? ಕ್ರಿಕೆಟ್ಟಿಗೆ ಮಾಧ್ಯಮದವರು ಯಾವ ಬೆಲೆಯನ್ನೂ ಕೊಡದಿದ್ದರೆ, ತಂತಾನೆ ಎಲ್ಲಾ ಸರಿಹೋಗುತ್ತದೆ.
ಸ್ವಾಮಿಗಳೊಬ್ಬರು ಪರಪ್ಪನ ಅಗ್ರಹಾರದ ಜೈಲಿನಿಂದ ಬಂದ ವಿಚಾರ: ಇದಕ್ಕೆ ಅಳಬೇಕೋ ನಗಬೇಕೋ ದೇವರಿಗೆ ಹಾಗೂ ಆ ಸ್ವಾಮಿಗಳಿಗೇ ಗೊತ್ತು. ಏಕೆಂದರೆ ಹಗರಣದ ಹೂರಣ ಅವರಿಬ್ಬರಿಗೇ ತಿಳಿದಿರುವ ವಿಚಾರ. ನ್ಯಾಯಾಲಯ ಕೇವಲ ಸಾಕ್ಷಿಗಳನ್ನು ಮಾತ್ರ ಅವಲಂಭಿಸಿರುತ್ತದೆ ಅಲ್ಲವೆ? ಸಾಕ್ಷಿಗಳು ಇಂದು ಪರವಾಗಿದ್ದು, ನಾಳೆ ವಿರೋಧವಾದರೆ ಅಥವಾ ವಿರೋಧ ಪರವಾದರೆ, ಅಂತಹ ಸಾಕ್ಷಿಗಳಿಗೆ ಯಾವ ಶಿಕ್ಷೆಯೂ ಇಲ್ಲದಿರುವಾಗ ನ್ಯಾಯವು ನಮಗೆ ಬೇಕಾದ ದಾರಿಯಲ್ಲಿ ಹೋಗುವಂತೆ ಮಾಡಿಕೊಳ್ಳುವುದು ಸುಲಭವಲ್ಲವೆ?
ಉ: ಕೃಷ್ಣಾಗಮನ : ಕಾಂಗ್ರೆಸ್ಸಿನ ಸೋಲಿನ ರಾಜಕಾರಣ
ಇದೇನು ಸ್ವಾಮಿ ಒಂದು ಶೀರ್ಷಿಕೆಯಡಿ ಮೂರು ಬೇರೆ ಬೇರೆ ವಿಷಯಗಳ ಬಗ್ಗೆ ಬರಹ?
ಇರಲಿ.
ಕರ್ನಾಟಕಕ್ಕೆ ಕೃಷ್ಣಾಗಮನ ಕಾಂಗ್ರೆಸ್ಸಿನ ಒಂದು ಹತಾಶೆಯ ನಡೆ. ಇಲ್ಲಿ ಅವರಿಗೆ ಚರಿಶ್ಮಾ ಇರುವಂತಹ ಒಂದೇ ಒಂದು ಕ್ಯಾಂಡಿಡೇಟೂ ಕಾಣುತ್ತಿಲ್ಲವೆಂದು ಕಾಣುತ್ತದೆ. ಅಲ್ಲದೆ ಇಲ್ಲಿ ಪರಸ್ಪರ ಕಾಲೆಳೆಯುವ ರಾಜಕಾರಣಿಗಳೇ ಕಾಸಿಗೊಂದು ಕೊಸರಿಗೆರಡರಂತೆ ಸಿಗುತ್ತಿದ್ದಾರಲ್ಲ. ಹಾಗಿರುವಾಗ ಹೈಕಮಾಂಡ್ ತಾನೆ ಏನು ಮಾಡುತ್ತದೆ. ಸೋಲಿಗೊಬ್ಬ ಸರದಾರನ ಹೆಸರೂ ಬೇಕಾಗಿದೆ. ಕೃಷ್ಣರು ಅದಕ್ಕೆ ಸಿದ್ದವಾಗಿದ್ದಾರೆ. ಅಲ್ಲದೆ ಅವರಿಗೆ ಮಹಾರಾಷ್ಟ್ರದ ರಾಜಕೀಯದಲ್ಲಿರುವುದು ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡಂತಾಗಿದೆ. ಅಲ್ಲಿಂದ ಎಷ್ಟು ಬೇಗ ತಪ್ಪಿಸಿಕೊಂಡರೆ ಅಷ್ಟು ಬೇಗ ಒಳ್ಳೆಯದೆಂಬ ಲೆಕ್ಕಾಚಾರದಿಂದ ಕರ್ನಾಟಕಕ್ಕೆ ಮರಳಿದ್ದಾರೆ.
ಇನ್ನು ಕ್ರಿಕೆಟ್ಟಿನ ವಿಚಾರ. ಅದು ಕೆಟ್ಟು, ಕುಲಗೆಟ್ಟು ಹೋಗಿದೆ. ಈಗ ಕಿರಿಯ ಆಟಗಾರರನ್ನೂ ಖರೀದಿಸುತ್ತಾ, ಅವರನ್ನೂ ಆಟದಿಂದ ನೋಟಿನ ಕಡೆ ಎಳೆಯುತ್ತಿದ್ದಾರಲ್ಲ, ಇದಕ್ಕಿಂತಲೂ ವ್ಯಥೆಯ ಸಂಗತಿ ಇನ್ನೇನಿದೆ? ಕ್ರಿಕೆಟ್ಟಿಗೆ ಮಾಧ್ಯಮದವರು ಯಾವ ಬೆಲೆಯನ್ನೂ ಕೊಡದಿದ್ದರೆ, ತಂತಾನೆ ಎಲ್ಲಾ ಸರಿಹೋಗುತ್ತದೆ.
ಸ್ವಾಮಿಗಳೊಬ್ಬರು ಪರಪ್ಪನ ಅಗ್ರಹಾರದ ಜೈಲಿನಿಂದ ಬಂದ ವಿಚಾರ: ಇದಕ್ಕೆ ಅಳಬೇಕೋ ನಗಬೇಕೋ ದೇವರಿಗೆ ಹಾಗೂ ಆ ಸ್ವಾಮಿಗಳಿಗೇ ಗೊತ್ತು. ಏಕೆಂದರೆ ಹಗರಣದ ಹೂರಣ ಅವರಿಬ್ಬರಿಗೇ ತಿಳಿದಿರುವ ವಿಚಾರ. ನ್ಯಾಯಾಲಯ ಕೇವಲ ಸಾಕ್ಷಿಗಳನ್ನು ಮಾತ್ರ ಅವಲಂಭಿಸಿರುತ್ತದೆ ಅಲ್ಲವೆ? ಸಾಕ್ಷಿಗಳು ಇಂದು ಪರವಾಗಿದ್ದು, ನಾಳೆ ವಿರೋಧವಾದರೆ ಅಥವಾ ವಿರೋಧ ಪರವಾದರೆ, ಅಂತಹ ಸಾಕ್ಷಿಗಳಿಗೆ ಯಾವ ಶಿಕ್ಷೆಯೂ ಇಲ್ಲದಿರುವಾಗ ನ್ಯಾಯವು ನಮಗೆ ಬೇಕಾದ ದಾರಿಯಲ್ಲಿ ಹೋಗುವಂತೆ ಮಾಡಿಕೊಳ್ಳುವುದು ಸುಲಭವಲ್ಲವೆ?