"ಹೂ ಒಂದೋ ಗಿಡದಲ್ಲಿ,ಇಲ್ಲಾ ಹೆಣ್ಣಿನ ಜತೆ ಇರಬೇಕು. ಹೆಚ್ಚೆಂದರೆ ದೇವರ ಅಲಂಕಾರಕ್ಕೆ ಉಪಯೋಗಿಸಲಿ. ಆದರೆ ಈ ಬೊಕೆ ನೀಡುವ ಕ್ರಮ
ಸರಿಯಿಲ್ಲ. ಕ್ಯಾಮರ ಫೋಸಿಗೆ ಮಾತ್ರ ಇದನ್ನು ಉಪಯೋಗಿಸುವರು,ನಂತರ ಪಕ್ಕಕೆ ಎಸೆಯುವರು. ಹೂವಿನ ಚಲುವಿಗೆ ಅವಮಾನ ಮಾಡುತ್ತಾರೆ."
ಘಮಘಮಿಪ ಹೂ ಗೊಂಚಲಿನಂತೆ
ಎರಡೆ ಎಡೆ ಜಗದಲಗ್ಗಳರಿಗೆ
ಮೆರೆದರೆ ಸುಂದರಿಯರ ಮುಡಿಯಲ್ಲಿ
ಅಳಿದರೆ ತಾಯಿ ಗಿಡದ ಅಡಿಯಲ್ಲಿ
(ಭರ್ತೃಹರಿ ಇದನ್ನು ಬರೆದ ಸಮಯದಲ್ಲಿ, ಭಾರತದಲ್ಲಿ ಗಂಡಸರೂ ಹೆಂಗಸರೂ ಅಲಂಕಾರಕ್ಕೆಂದು ಹೂಮುಡಿಯುವ ಪರಿಪಾಠವಿದ್ದಿರಬೇಕು. ಕಾಲಧರ್ಮಕ್ಕೆ ಹೊಂದಿಕೆಯಾಗುವಂತೆ ಮೂಲದ ಸರ್ವಲೋಕವನ್ನು ಸುಂದರಿಯರ ಮುಡಿಯಾಗಿ ಮಾರ್ಪಡಿಸುವ ಸ್ವಾತಂತ್ರ್ಯ ತೆಗೆದುಕೊಂಡಿದ್ದೇನೆ.)
ಉ: ಪುಷ್ಪಬನದಲ್ಲೊಂದು ಸುತ್ತಾಟ
ಗಣೇಶ ಅವರ ಈ ಪ್ರತಿಕ್ರಿಯೆ ನೋಡಿದೆ:
"ಹೂ ಒಂದೋ ಗಿಡದಲ್ಲಿ,ಇಲ್ಲಾ ಹೆಣ್ಣಿನ ಜತೆ ಇರಬೇಕು. ಹೆಚ್ಚೆಂದರೆ ದೇವರ ಅಲಂಕಾರಕ್ಕೆ ಉಪಯೋಗಿಸಲಿ. ಆದರೆ ಈ ಬೊಕೆ ನೀಡುವ ಕ್ರಮ
ಸರಿಯಿಲ್ಲ. ಕ್ಯಾಮರ ಫೋಸಿಗೆ ಮಾತ್ರ ಇದನ್ನು ಉಪಯೋಗಿಸುವರು,ನಂತರ ಪಕ್ಕಕೆ ಎಸೆಯುವರು. ಹೂವಿನ ಚಲುವಿಗೆ ಅವಮಾನ ಮಾಡುತ್ತಾರೆ."
ಆ ಕೂಡಲೆ, ಭರ್ತೃಹರಿಯ ಒಂದು ಸುಭಾಷಿತ ನೆನಪಿಗೆ ಬಂತು:
ಕುಸುಮಸ್ತಬಕಸ್ಯೇವ ದ್ವೇ ವೃತ್ತಿರ್ಮನಸ್ವಿನಃ|
ಮೂರ್ಧ್ನಿ ವಾ ಸರ್ವಲೋಕಸ್ಯ ಶೀರ್ಯತೇ ವನ ಏವ ವಾ||
ಘಮಘಮಿಪ ಹೂ ಗೊಂಚಲಿನಂತೆ
ಎರಡೆ ಎಡೆ ಜಗದಲಗ್ಗಳರಿಗೆ
ಮೆರೆದರೆ ಸುಂದರಿಯರ ಮುಡಿಯಲ್ಲಿ
ಅಳಿದರೆ ತಾಯಿ ಗಿಡದ ಅಡಿಯಲ್ಲಿ
(ಭರ್ತೃಹರಿ ಇದನ್ನು ಬರೆದ ಸಮಯದಲ್ಲಿ, ಭಾರತದಲ್ಲಿ ಗಂಡಸರೂ ಹೆಂಗಸರೂ ಅಲಂಕಾರಕ್ಕೆಂದು ಹೂಮುಡಿಯುವ ಪರಿಪಾಠವಿದ್ದಿರಬೇಕು. ಕಾಲಧರ್ಮಕ್ಕೆ ಹೊಂದಿಕೆಯಾಗುವಂತೆ ಮೂಲದ ಸರ್ವಲೋಕವನ್ನು ಸುಂದರಿಯರ ಮುಡಿಯಾಗಿ ಮಾರ್ಪಡಿಸುವ ಸ್ವಾತಂತ್ರ್ಯ ತೆಗೆದುಕೊಂಡಿದ್ದೇನೆ.)
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/