ಉ:
- ಉ: ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನೇನು ಮಾಡುವೆ? By: ravikreddy (Mar 25 2008 - 11:14pm)
- ಉ: ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನೇನು ಮಾಡುವೆ? By: Sunil Jayaprakash (Mar 25 2008 - 9:17pm)
- ಉ: ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನೇನು ಮಾಡುವೆ? By: beLagu (Mar 26 2008 - 10:52am)
- ಉ: By: ಶ್ಯಾಮ ಕಶ್ಯಪ (Mar 26 2008 - 1:09pm)
- ಉ: ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನೇನು ಮಾಡುವೆ? By: beLagu (Mar 26 2008 - 10:52am)

RSS:
ಉ:
ಕೆಲ ದಿನಗಳ ಹಿಂದೆ ಇಸ್ಮಾಯಿಲ್ ಇದರ ಬಗ್ಗೆ ಬರದಿದ್ದರು ಸಂಖ್ಯೆಯಷ್ಟೇ ಆಗಿಬಿಟ್ಟ ರೈತನ ಸಾವು ಎಂಬ ಲೇಖನದಲ್ಲಿ. ನೀವೆಲ್ಲರೂ ಹೇಳಿದ ಹಾಗೆ ಈ ಮಾಹಿತಿಯನ್ನು ಸಂಗ್ರಹಿಸುವ ಅವಶ್ಯಕತೆಯಿದೆ. ಅದನ್ನು ಮಾಡಲಿಕ್ಕೂ ಜನರಿದ್ದಾರೆ. ಆದರೆ, ನನ್ನ ಮತ್ತು ಇಸ್ಮಾಯಿಲರ ವೃತ್ತಿಯಲ್ಲಿ (ಪತ್ರಿಕೋದ್ಯಮ, ಸಂಶೋಧನೆ, ಇತ್ಯಾದಿ) ರೈತರ ಸಾವುಗಳು (ಕೇವಲ ರೈತರ ಸಾವುಗಳಷ್ಟೇ) ಸಂಖ್ಯೆಯಷ್ಟೇ ಆಗಿ ಉಳಿದಿರುವುದರ ಬಗ್ಗೆ ದುಃಖದಿಂದ ಬಂದ ಮಾತು ಇದು.
ಇದರ ಹಿಂದೆ, ನಮ್ಮ ಸಂಶೋಧನಾ ವೈಫಲ್ಯಗಳು, ನಮ್ಮ ಸಮಾಜದ ಸಂಕುಚಿತ ದೃಷ್ಟಿಕೋನಗಳು, ಇದನ್ನೆಲ್ಲ ತಿಳಿದೂ ಏನೂ ಮಾಡಲಿಕ್ಕಾಗದ ಅಸಹಾಯಕತೆ ಇವೆಲ್ಲ ಆಡಗಿದೆ. ಇದನ್ನು ಇಸ್ಮಾಯಿಲ್ ಕೂಡ ಒಪ್ಪುತ್ತಾರೆ ಎಂದುಕೊಳ್ಳುತ್ತೇನೆ.
@belagu, ನಿಮ್ಮ ಕಳಕಳಿಯನ್ನು ಮೆಚ್ಚುವೆ. ನನ್ನ ಮಾತುಗಳನ್ನು ತಪ್ಪಾಗಿ ತಿಳಿಯಬೇಡಿ.
ಭಾರತೀಯ ಕೃಷಿಯ ಜಟಿಲತೆಯನ್ನು ಅರ್ಥಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ. ಸಂಖ್ಯೆಗಳನ್ನು ಬಳಸಲು ಆಗದಿರುವುದಕ್ಕೆ ಇದೂ ಒಂದು ಕಾರಣವೇ. ಇದರ ಜೊತೆಗೆ ಯಾವ ತರಹದ ಸಂಖ್ಯೆಗಳಿಲ್ಲದೇ, ಅಂಕಿ ಅಂಶಗಳಿಲ್ಲದೇ ಹುಟ್ಟುಕೊಂಡಿರುವ ಹಲವು ಅಸತ್ಯಗಳಿವೆ. ಅವುಗಳಲ್ಲಿ ಕೆಲವನ್ನು belagu ಇಲ್ಲಿ ಹೇಳಿದ್ದಾರೆ. ವಿಷಯವನ್ನು romanticize ಮಾಡಬಹುದಷ್ಟೇ ವಿನಃ ಇವುಗಳಿಂದ ಕೇವಲ ಸಂಖ್ಯೆಗಳಿಂದಾಗಬಹುದಾದಷ್ಟೂ ಉಪಯೋಗವಿಲ್ಲ.
ಉದಾಹರಣೆಗೆ:
೧. ಇವತ್ತಿಗೆ ರೈತರು(ರೈತರೆಲ್ಲರೂ) ನಮ್ಮ ದೇಶದ ಬೆನ್ನೆಲುಬಾಗಿ ಉಳಿದಿಲ್ಲ. ನಮ್ಮ ದೇಶದ ತುಂಬಾ ಇರುವರೇ ಅವರು. ಅವರಿಗೆ ಬೆನ್ನೆಲುಬಾಗಿ ಇತರರು ನಿಲ್ಲಬೇಕಷ್ಟೇ.
೨. ರೈತರೆಲ್ಲ ಅನ್ನದಾತರಲ್ಲ. ಕೇವಲ ಅನ್ನವನ್ನು ನೀಡುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ.
೩. ರೈತರೆಲ್ಲರೂ ಬಡವರಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರೆಲ್ಲರೂ ಬಡವರಾಗಿರಲಿಲ್ಲ.
--
ನೀ ಲೋಕದ ಕಾಳಜಿ ಮಾಡುವೆನಂತಿ, ಯಾರ ಬ್ಯಾಡಂದಾರ ಮಾಡಪ್ಪ ಚಿಂತಿ - ಸಂತ ಶಿಶುನಾಳ ಶರೀಫ