Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಉ: ಕನ್ನಡ ಎಂದದ್ದಕ್ಕೆ

March 28, 2008 - 4:23pm — Sunil Jayaprakash

ಉ: ಕನ್ನಡ ಎಂದದ್ದಕ್ಕೆ

Sunil Jayaprakash's picture

ರೂಪಾ ಅವರೇ, ನಿಮ್ಮ ಕನ್ನಡ-ಪ್ರೇಮಕ್ಕೆ ಮೊದಲು ಎರಡೆರೆಡು ಚಪ್ಪಾಳೆ. ನಂತರ ನನ್ನ ಈ ಮಾತನ್ನು ಗಮನಿಸಿ.

ಏನು ಮೇಡಮ್ ಇಂಗ್ಲೀಶ್ ಎಲ್ಲ ನಿಮ್ಮವರ ಗಂಟಾ. ನೀವು ಮಾತ್ರ ಹೀಗೆ ಮೇಲೆ ಬಂದಿದೀರ ನಮ್ಮ ಮಕ್ಕಳು ಕೂಡ ನಿಮ್ಮ ಹಾಗೆ ಆಗಬಾರದಾ?

ರೂಪಾ ಅವರೇ, ಈ ಮೇಲಿನ ವಾಕ್ಯದ ರೀತಿಯಲ್ಲಿ ಅನೇಕ ಪತ್ರಗಳು ವಾಚಕರ ವಾಣಿ, ಹಾಗು ಅಲ್ಲಲ್ಲಿ ಕೆಲವು ಪ್ರಕಟಣೆಗಳಲ್ಲಿಯೂ ಕಾಣುತ್ತಿರುತ್ತದೆ. ಇಲ್ಲಿ ಬೇಡವೆಂದರೂ ನಮ್ಮ ದೇಶವನ್ನು ಅಡ್ಡಡ್ಡ ಉದ್ದುದ್ದ ಸೀಳಿರುವ ಜಾತಿಯ ವಿಷಯ ಬರುತ್ತದೆ. ಇಂದು ವಾಚಕರ ವಾಣಿಯಲ್ಲಿ ಪ್ರಕಟವಾಗುವ ಈ ರೀತಿಯ ಪತ್ರಗಳಲ್ಲಿ ಈ ರೀತಿಯ ಟೀಕೆಗಳು ಇರುತ್ತವೆ.

೧. "ಹಿಂದೆ ಬ್ರಾಹ್ಮಣರು ನಮಗೆ ಸಂಸ್ಕೃತ ಕಲಿಸದೆ ಎಲ್ಲ ಜ್ಞಾನ ಅವರೇ ಇಟ್ಟುಕೊಂಡರು" ಎಂಬ ಸಂಶಯ ಅನೇಕರಲ್ಲಿದೆ.
೨. "ಈಗ ಎಲ್ಲ ಬ್ರಾಹ್ಮಣರೂ ಇಂಗ್ಲೀಷ್ ಕಲೀತಾರೆ, ಆದರೆ ಬೇರೆಯವರಿಗೆ ಮಾತ್ರ ಇಂಗ್ಲೀಷ್ ಕಲಿಯಬೇಡಿ ಅಂತಾರೆ" ಎಂಬುದು ಮತ್ತೊಂದು ಆರೋಪ.
೩. "ಬ್ರಾಹ್ಮಣರಿಗಾದರೆ ಸಂಸ್ಕೃತ, ಇಂಗ್ಲೀಷ್ ಎಲ್ಲ ಬೇಕು, ನಮಗೆ ಮಾತ್ರ ಬೇಡ್ವಾ ?" ಎಂಬುದು ಮತ್ತೊಂದು.

"ಒಂದನೇ ತರಗತಿಯಿಂದ ಇಂಗ್ಲೀಷನ್ನು ಒಂದು ಭಾಷೆಯಾಗಿ ಕಲಿಸುವ" ಒಂದು ಒಳ್ಳೆಯ ಯೋಜನೆಯನ್ನು ಸರ್ಕಾರ ಆರಂಭಿಸಿದಾಗ ಕೆಲವು ಟ್ರೆಡೀಶನಲಿಸ್ಟುಗಳು ವಿರೋಧಿಸಿದರು. ಆದರೆ ದಲಿತ ಸಂಘಟನೆಗಳು ಬೆಂಬಲಿಸಿದವು. "ಇಂಗ್ಲೀಷೇನು ನಿಮ್ಮನೆ ಗಂಟಾ ?" ಎಂದು ಕೇಳುವುದರ ಹಿಂದೆ ಜಾತಿ ಅಲ್ಲದಿದ್ದರೂ, ಎಲ್ಲೋ ಒಂದು ಕಡೆ "ಜ್ಞಾನದ ಕೊಂಡಿಯನ್ನು ನಮಗೆ ನಿರಾಕರಿಸಲಾಗುತ್ತಿದೆ" ಎಂಬ ಭಾವನೆ ಮನೆ ಮಾಡಿಯೇ ಮಾಡುತ್ತದೆ.

"ಇಂಗ್ಲೀಷ್ ಬಿಟ್ಟು ಕನ್ನಡ ಮಾತಾಡು ಎಂದಾಗ, ತಮ್ಮ ಮಗು ಈ ಜಗತ್ತಿಗೆ ಬೇಕಾದ ಜ್ಞಾನ ಪಡೆಯೋಲ್ಲ" ಎಂಬುದಾಗಿ ಆ ಮಗುವಿನ ತಾಯಿಗೆ ಅನಿಸಿರುವುದೇ ಇಲ್ಲಿನ ದೊಡ್ಡ ಸಮಸ್ಯೆ. ಇಲ್ಲಿ ನೀವು ಉದಾಹರಿಸಿದ "ಆ ಒಂದು ತಾಯಿ-ಮಗು" ಒಂದು ನೆಪ ಅಷ್ಟೇ. ಆದರೆ ಇಂತಹ ಘಟನೆ ಎಷ್ಟೋ ಕುಟುಂಬಗಳಲ್ಲಿ ಇಂದು ನಡೀತಾ ಇದೆ. ನಮ್ಮ ನಮ್ಮ ಮನೆಗಳಲ್ಲಿ, ಅಕ್ಕಪಕ್ಕದ ಮನೆಗಳಲ್ಲಿ ಸ್ವಲ್ಪ ಕಣ್ಣುತೆರೆದು ನೋಡಿದರೆ ಇದು ಗೊತ್ತಾಗುತ್ತದೆ.

ಹಾಗಾಗಿ, ರೂಪಾ ಅವರೆ, ಆ ಮಗುವಿನೊಡನೆ, ಕನ್ನಡದ ಬಗ್ಗೆ ಎಮೋಶನಲ್ಲಾಗಿ ಮಾತನಾಡುವುದಕ್ಕಿಂತ ಬುದ್ಧಿವಂತಿಕೆಯಿಂದ, ಕನ್ನಡದಲ್ಲಿ ಯೋಚಿಸಿದರೆ ಹೇಗೆ ಹೆಚ್ಚು ಪ್ರಬುದ್ಧರಾಗಬಹುದು ಎಂಬುದನ್ನು ನಿರೂಪಿಸಿದಿರಾದರೆ ಆಗ ನಿಮಗೆ ೧೦೦೦೦೦ ಚಪ್ಪಾಳೆಗಳು ಸಿಗುತ್ತವೆ.

(ಈ ಕಾಮೆಂಟಿನಲ್ಲಿ ಜಾತಿಯ ಪ್ರಸ್ತಾಪ ಆಗುತ್ತಿರುವುದರಿಂದ ಯಾರಿಗಾದರೂ ಅಫೆನ್ಸೀವ್ ಎನ್ನಿಸಿದರೆ ಮನ್ನಿಸಿಬಿಡಿ. ಬೇಕಿದ್ದರೆ, ಪೇಟೆಯವರು ಮತ್ತು ಹಳ್ಳಿಯವರು ಎಂದುಕೊಳ್ಳಿ)

  • Login or register to post comments
  • Email this ಪ್ರತಿಕ್ರಿಯೆ
ಕನ್ನಡ ಎಂದದ್ದಕ್ಕೆ By: roopablrao (13 replies) March 28, 2008 - 11:59am
  • ಉ: ಕನ್ನಡ ಎಂದದ್ದಕ್ಕೆ By: kalpana (Mar 30 2008 - 5:30am)
  • ಉ: ಕನ್ನಡ ಎಂದದ್ದಕ್ಕೆ By: Sunil Jayaprakash (Mar 28 2008 - 4:23pm)
    • ಉ: ಕನ್ನಡ ಎಂದದ್ದಕ್ಕೆ By: roopablrao (Mar 28 2008 - 4:57pm)
      • ಉ: ಕನ್ನಡ ಎಂದದ್ದಕ್ಕೆ By: Sunil Jayaprakash (Mar 28 2008 - 6:15pm)
        • ಉ: ಕನ್ನಡ ಎಂದದ್ದಕ್ಕೆ By: hamsanandi (Mar 28 2008 - 10:38pm)
          • ಉ: ಕನ್ನಡ ಎಂದದ್ದಕ್ಕೆ By: Narayana (Mar 28 2008 - 10:50pm)
  • ಉ: ಕನ್ನಡ ಎಂದದ್ದಕ್ಕೆ By: varunbhatbm (Mar 28 2008 - 12:44pm)
    • ಉ: ಕನ್ನಡ ಎಂದದ್ದಕ್ಕೆ By: mahesha (Mar 28 2008 - 12:55pm)
      • ಉ: ಕನ್ನಡ ಎಂದದ್ದಕ್ಕೆ By: ASHMYA (Mar 28 2008 - 1:53pm)
        • ಉ: ಕನ್ನಡ ಎಂದದ್ದಕ್ಕೆ By: ವೈಭವ (Mar 29 2008 - 8:34pm)
        • ಉ: ಕನ್ನಡ ಎಂದದ್ದಕ್ಕೆ By: mahesha (Mar 28 2008 - 2:25pm)
          • ಉ: ಕನ್ನಡ ಎಂದದ್ದಕ್ಕೆ By: gururajkodkani (Mar 28 2008 - 4:09pm)
  • ಉ: ಕನ್ನಡ ಎಂದದ್ದಕ್ಕೆ By: mahesha (Mar 28 2008 - 12:04pm)

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
    May 17, 2008 - 4:38pm
  • Narayana
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 17, 2008 - 2:00pm
  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
ಇನ್ನಷ್ಟು

ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.

— ಜೇನ್ ಫೊಂಡಾ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator