ನಾಗಭೂಷಣರೆ, ಯುವಕರ ಜತೆಗಿನ ನಿಮ್ಮ ಅನುಭವದ ದಾಖಲೆ ಕುತೂಹಲಕಾರಿಯಾಗಿದೆ. ಇದರಲ್ಲಿ ನೀವು ಎತ್ತಿರುವ ಒಂದೆರಡು ಮಾತುಗಳ ಬಗ್ಗೆ. ಇವನ್ನು ನೀವೇ ಹೇಳಿಲ್ಲ ಮತ್ತು ಬೇರೆಯವರ ಮಾತುಗಳು ಎಂದು ಗಮನಿಸಿದ್ದೇನೆ.
ನಮ್ಮ ಪೂರ್ವಿಕರು ರಾಮಾಯಣ/ಮಹಾಭಾರತ "ನಿಜವೋ ಸುಳ್ಳೋ ಎಂಬ ಪರಿವೆಯೇ ಇಲ್ಲದೆ" ಇದ್ದರು ಎಂಬುದು ತುಂಬಾ ಹಾರಿಕೆಯ ವಿಚಾರವಾಗಿ ಕಾಣುತ್ತದೆ. ಮೂಲಭೂತವಾಗಿ ಮನುಷ್ಯನಿಗಿರುವ ಪ್ರಶ್ನಿಸುವ ಗುಣ ನಮ್ಮ ಪೂರ್ವಿಕರಲ್ಲಿ ಇರಲಿಲ್ಲ ಎಂಬುದು ಮೇಲಿನ ಮಾತಿನ ಇಂಗಿತವೆ? ಹಲವಾರು ರಾಮಾಯಣ, ಮಹಾಭಾರತವನ್ನು ಹುಟ್ಟು ಹಾಕಿರುವುದಕ್ಕೆ ಹಲವು ಕಾರಣಗಳು ಒತ್ತಡಗಳು ಇದ್ದೀತಲ್ಲವೆ? "ನಿಜವೋ ಸುಳ್ಳೋ" ಎಂದು ಪ್ರಶ್ನಿಸುವುದು ಅದರಲ್ಲಿ ಒಂದಲ್ಲ ಅನ್ನುವುದು ಎಷ್ಟು ಸರಿ? ನಮ್ಮ ಪೂರ್ವಿಕರು ರಾಮಾಯಣ/ಮಹಾಭಾರತವನ್ನು "ಆಧಾರಪೂರಿತ ನಿಜ" ಎಂದು ನಂಬದಿದ್ದರೂ ಭಾವನಾತ್ಮಕ ಸತ್ಯ, "ಪೌರಾಣಿಕ" ಸತ್ಯ ಎಂದು ನಂಬಿದ್ದರು ಅನಿಸುತ್ತದೆ. ತಾರ್ಕಿಕ ಪ್ರಶ್ನೆಗಳನ್ನು ಅದುಮಲು, ಅಳಿಸಿ ಹಾಕಲು ನಮ್ಮ ಧರ್ಮಗಳು ಸಕ್ರಿಯವಾಗಿ ಕೆಲಸಮಾಡುತ್ತಲೇ ಬಂದಿವೆ ಅಲ್ಲವೆ? ಇವನ್ನೆಲ್ಲಾ ವಿಶ್ಲೇಷಿಸದೆ "ಪರಿವೆ ಇರಲಿಲ್ಲ" ಎಂದುಕೊಂಡು ಹೊರಟರೆ ಆ ನಂಬಿಕೆಯ ಸಂಕೀರ್ಣತೆಯನ್ನು ಅರ್ಥೈಸಲು ಸಾಧ್ಯವೆ?
Quote:
ಇಂತಹ ಪ್ರಶ್ನೆಗಳೆದ್ದಿರುವುದು ಪಾಶ್ಚಾತ್ಯ ಇತಿಹಾಸ ಕಲ್ಪನೆಯನ್ನೇ ಇತಿಹಾಸ ಕಲ್ಪನೆಯ ಏಕೈಕ ಹಾಗೂ ನಿಜವಾದ ಮಾದರಿ ಎಂದು ನಂಬಿರುವವರಿಂದ
ಇಂಡಿಯಾದ ಓದಿದವರ ಎಡಬಿಡಂಗಿತನದ ಇನ್ನೊಂದು ಮುಖ ಇದು ಎಂದು ನನಗೆ ಅನಿಸುತ್ತದೆ. ಅಂದರೆ ಇಂಡಿಯಾದವರಿಗೆ ಇತಿಹಾಸದ ಬಗ್ಗೆ ಬೇರೆಯದೇ ರೀತಿಯ ಕಲ್ಪನೆ ಇದೆ ಅಂದ ಹಾಗಾಯಿತು. ಅದು ಏನು? ಅದನ್ನು ಗಂಭೀರವಾಗಿ ಆಧರಿಸಿಕೊಂಡವರು ಯಾರಾದರೂ ಇದ್ದಾರೆಯೆ? ಇದ್ದರೆ ಓದಲು, ಕಲಿಯಲು ನಾನು ಆಶಿಸುತ್ತೇನೆ. ಗಾಂಧೀಜಿಯವರು ಪಾಶ್ಚಿಮಾತ್ಯರ ಇತಿಹಾಸದ ಪರಿಕಲ್ಪನೆಯನ್ನು ಟೀಕಿಸುತ್ತಾ - ಅವರ ಇತಿಹಾಸದ ಪರಿಕಲ್ಪನೆ ಕಾಲಘಟ್ಟಗಳಲ್ಲೇಳುವ ಒಡಕು, ತೊಡಕುಗಳಿಂದಲೇ ವಿವರಿಸುವ ರೀತಿಯದು ಎಂಬ ಅರ್ಥಬರುವ ಮಾತು ಹೇಳಿರುವುದನ್ನು ಓದಿದ್ದೇನೆ. ಆದರೆ ಪಾಶ್ಚಿಮಾತ್ಯರ ಪರಿಕಲ್ಪನೆಗೆ ಪರ್ಯಾಯವಾದ ಇಂತಹ ಇತಿಹಾಸದ ಕಲ್ಪನೆ ಮತ್ತು ಒಳನೋಟ ರೂಪಗೊಂಡಿರುವುದನ್ನು ನಾನು ಕೇಳಿಲ್ಲ. ಇದ್ದರೆ ಕೇಳಲು ಇಷ್ಟಪಡುತ್ತೇನೆ. ನಾನು ಇತಿಹಾಸದ ವಿದ್ಯಾರ್ಥಿ ಅಲ್ಲದಿದ್ದರೂ ಕೂಡ ಅಲ್ಲಲ್ಲಿ ಆಗಾಗ ಓದಿಕೊಂಡ ಆಧಾರದ ಮೇಲೇ ಹೇಳುವುದಾದರೆ- ಇಂಡಿಯಾದ ಹಲವಾರು ಇತಿಹಾಸಕಾರರು ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಪಾಶ್ಚಾತ್ಯರಿಗೆ ಸುಲಭವಾಗಿ ದಕ್ಕದ ಸಾಂಸ್ಕೃತಿಕ ಹಾಗು ಇನ್ನಿತಿರ ಪದರಗಳ ಒಳನೋಟಗಳನ್ನು ಬಳಸಿಕೊಂಡಿದ್ದಾರೆ. ಆದರೆ ಇತಿಹಾಸದ ಭಿನ್ನ ಪರಿಕಲ್ಪನೆ ಅಲ್ಲಿ ಇದೆಯೆ? ನನ್ನ ಗುಮಾನಿ ಇಷ್ಟು: ಅಂತಹ ಗಟ್ಟಿಯಾದ ಪರಿಕಲ್ಪನೆಯ ಅಭಾವದಿಂದಾಗಿಯೋ, ಅಥವಾ ಇರಬಹುದಾದ ಅಂತಹ ಪರಿಕಲ್ಪನೆಯ ಜನಪ್ರಚಾರದ ಅಭಾವದಿಂದಾಗಿಯೋ ಇಂದು - ಪುರಾಣ, ನಂಬಿಕೆ, ಧರ್ಮ - ಇವುಗಳು ಇತಿಹಾಸದ ಪಾಟವನ್ನು ಆವರಿಸಿಕೊಂಡುವೆ. ಈಗ ಎದ್ದಿರುವ ಈ ಅವಾಂತರಕ್ಕೆ ಯಾರು ಕಾರಣ? "ಭಾರತೀಯ ಇತಿಹಾಸ ಪರಿಕಲ್ಪನೆ" ಎಂದು ಸಾಧಿಸ ಹೊರಡುವುದಕ್ಕೆ ಇರುವ ಮೂಲ ಪರಿಕರಗಳು ಏನು? ಅವು ಎಷ್ಟು ನಿಜ ಮತ್ತು ಇದು ಎಷ್ಟು ಲಾಭದಾಯಕ?
"ವಿಷ ಬೀಜ" ಬಿತ್ತಲಾಗಿರುವುದು ಹೊಸ ವಿಚಾರವೇನಲ್ಲ. ಅದು ಹಳೆಯ ಸುದ್ದಿಯಲ್ಲವೆ? ಅದು ಎದೆ ನಡುಗಿಸುವಂತಹುದು ಎಂಬುದಂತೂ ನಿಜವೆ. ಆದರೆ, ಸಂಶೋಧನೆ ವಿಚಾರವಂತಿಕೆಗಳಲ್ಲಿ "ಭಾರತೀಯ/ಪಾಶ್ಚಿಮಾತ್ಯ", "ನಮ್ಮದು/ಅವರದು" ಎಂಬಂತಹ ಎಡಬಿಡಂಗಿತನವನ್ನು ಹುಟ್ಟುಹಾಕುವ, ಪ್ರಚಾರ ಮಾಡುವ ಕೆಲಸದಲ್ಲಿ ಎಡ/ಬಲ ಪಂಥವೆನ್ನದೆ ನಾವೆಲ್ಲರೂ ಸಮಾನಹೊಣೆಗಾರರು ಎಂದು ಅನಿಸುತ್ತದೆ.
ಉ: ಸೆಕ್ಯುಲರ್ ರಾಜಕಾರಣದ ಅವಾಂತರಗಳು...
ನಾಗಭೂಷಣರೆ, ಯುವಕರ ಜತೆಗಿನ ನಿಮ್ಮ ಅನುಭವದ ದಾಖಲೆ ಕುತೂಹಲಕಾರಿಯಾಗಿದೆ. ಇದರಲ್ಲಿ ನೀವು ಎತ್ತಿರುವ ಒಂದೆರಡು ಮಾತುಗಳ ಬಗ್ಗೆ. ಇವನ್ನು ನೀವೇ ಹೇಳಿಲ್ಲ ಮತ್ತು ಬೇರೆಯವರ ಮಾತುಗಳು ಎಂದು ಗಮನಿಸಿದ್ದೇನೆ.
ನಮ್ಮ ಪೂರ್ವಿಕರು ರಾಮಾಯಣ/ಮಹಾಭಾರತ "ನಿಜವೋ ಸುಳ್ಳೋ ಎಂಬ ಪರಿವೆಯೇ ಇಲ್ಲದೆ" ಇದ್ದರು ಎಂಬುದು ತುಂಬಾ ಹಾರಿಕೆಯ ವಿಚಾರವಾಗಿ ಕಾಣುತ್ತದೆ. ಮೂಲಭೂತವಾಗಿ ಮನುಷ್ಯನಿಗಿರುವ ಪ್ರಶ್ನಿಸುವ ಗುಣ ನಮ್ಮ ಪೂರ್ವಿಕರಲ್ಲಿ ಇರಲಿಲ್ಲ ಎಂಬುದು ಮೇಲಿನ ಮಾತಿನ ಇಂಗಿತವೆ? ಹಲವಾರು ರಾಮಾಯಣ, ಮಹಾಭಾರತವನ್ನು ಹುಟ್ಟು ಹಾಕಿರುವುದಕ್ಕೆ ಹಲವು ಕಾರಣಗಳು ಒತ್ತಡಗಳು ಇದ್ದೀತಲ್ಲವೆ? "ನಿಜವೋ ಸುಳ್ಳೋ" ಎಂದು ಪ್ರಶ್ನಿಸುವುದು ಅದರಲ್ಲಿ ಒಂದಲ್ಲ ಅನ್ನುವುದು ಎಷ್ಟು ಸರಿ? ನಮ್ಮ ಪೂರ್ವಿಕರು ರಾಮಾಯಣ/ಮಹಾಭಾರತವನ್ನು "ಆಧಾರಪೂರಿತ ನಿಜ" ಎಂದು ನಂಬದಿದ್ದರೂ ಭಾವನಾತ್ಮಕ ಸತ್ಯ, "ಪೌರಾಣಿಕ" ಸತ್ಯ ಎಂದು ನಂಬಿದ್ದರು ಅನಿಸುತ್ತದೆ. ತಾರ್ಕಿಕ ಪ್ರಶ್ನೆಗಳನ್ನು ಅದುಮಲು, ಅಳಿಸಿ ಹಾಕಲು ನಮ್ಮ ಧರ್ಮಗಳು ಸಕ್ರಿಯವಾಗಿ ಕೆಲಸಮಾಡುತ್ತಲೇ ಬಂದಿವೆ ಅಲ್ಲವೆ? ಇವನ್ನೆಲ್ಲಾ ವಿಶ್ಲೇಷಿಸದೆ "ಪರಿವೆ ಇರಲಿಲ್ಲ" ಎಂದುಕೊಂಡು ಹೊರಟರೆ ಆ ನಂಬಿಕೆಯ ಸಂಕೀರ್ಣತೆಯನ್ನು ಅರ್ಥೈಸಲು ಸಾಧ್ಯವೆ?
ಇಂಡಿಯಾದ ಓದಿದವರ ಎಡಬಿಡಂಗಿತನದ ಇನ್ನೊಂದು ಮುಖ ಇದು ಎಂದು ನನಗೆ ಅನಿಸುತ್ತದೆ. ಅಂದರೆ ಇಂಡಿಯಾದವರಿಗೆ ಇತಿಹಾಸದ ಬಗ್ಗೆ ಬೇರೆಯದೇ ರೀತಿಯ ಕಲ್ಪನೆ ಇದೆ ಅಂದ ಹಾಗಾಯಿತು. ಅದು ಏನು? ಅದನ್ನು ಗಂಭೀರವಾಗಿ ಆಧರಿಸಿಕೊಂಡವರು ಯಾರಾದರೂ ಇದ್ದಾರೆಯೆ? ಇದ್ದರೆ ಓದಲು, ಕಲಿಯಲು ನಾನು ಆಶಿಸುತ್ತೇನೆ. ಗಾಂಧೀಜಿಯವರು ಪಾಶ್ಚಿಮಾತ್ಯರ ಇತಿಹಾಸದ ಪರಿಕಲ್ಪನೆಯನ್ನು ಟೀಕಿಸುತ್ತಾ - ಅವರ ಇತಿಹಾಸದ ಪರಿಕಲ್ಪನೆ ಕಾಲಘಟ್ಟಗಳಲ್ಲೇಳುವ ಒಡಕು, ತೊಡಕುಗಳಿಂದಲೇ ವಿವರಿಸುವ ರೀತಿಯದು ಎಂಬ ಅರ್ಥಬರುವ ಮಾತು ಹೇಳಿರುವುದನ್ನು ಓದಿದ್ದೇನೆ. ಆದರೆ ಪಾಶ್ಚಿಮಾತ್ಯರ ಪರಿಕಲ್ಪನೆಗೆ ಪರ್ಯಾಯವಾದ ಇಂತಹ ಇತಿಹಾಸದ ಕಲ್ಪನೆ ಮತ್ತು ಒಳನೋಟ ರೂಪಗೊಂಡಿರುವುದನ್ನು ನಾನು ಕೇಳಿಲ್ಲ. ಇದ್ದರೆ ಕೇಳಲು ಇಷ್ಟಪಡುತ್ತೇನೆ. ನಾನು ಇತಿಹಾಸದ ವಿದ್ಯಾರ್ಥಿ ಅಲ್ಲದಿದ್ದರೂ ಕೂಡ ಅಲ್ಲಲ್ಲಿ ಆಗಾಗ ಓದಿಕೊಂಡ ಆಧಾರದ ಮೇಲೇ ಹೇಳುವುದಾದರೆ- ಇಂಡಿಯಾದ ಹಲವಾರು ಇತಿಹಾಸಕಾರರು ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ಪಾಶ್ಚಾತ್ಯರಿಗೆ ಸುಲಭವಾಗಿ ದಕ್ಕದ ಸಾಂಸ್ಕೃತಿಕ ಹಾಗು ಇನ್ನಿತಿರ ಪದರಗಳ ಒಳನೋಟಗಳನ್ನು ಬಳಸಿಕೊಂಡಿದ್ದಾರೆ. ಆದರೆ ಇತಿಹಾಸದ ಭಿನ್ನ ಪರಿಕಲ್ಪನೆ ಅಲ್ಲಿ ಇದೆಯೆ? ನನ್ನ ಗುಮಾನಿ ಇಷ್ಟು: ಅಂತಹ ಗಟ್ಟಿಯಾದ ಪರಿಕಲ್ಪನೆಯ ಅಭಾವದಿಂದಾಗಿಯೋ, ಅಥವಾ ಇರಬಹುದಾದ ಅಂತಹ ಪರಿಕಲ್ಪನೆಯ ಜನಪ್ರಚಾರದ ಅಭಾವದಿಂದಾಗಿಯೋ ಇಂದು - ಪುರಾಣ, ನಂಬಿಕೆ, ಧರ್ಮ - ಇವುಗಳು ಇತಿಹಾಸದ ಪಾಟವನ್ನು ಆವರಿಸಿಕೊಂಡುವೆ. ಈಗ ಎದ್ದಿರುವ ಈ ಅವಾಂತರಕ್ಕೆ ಯಾರು ಕಾರಣ? "ಭಾರತೀಯ ಇತಿಹಾಸ ಪರಿಕಲ್ಪನೆ" ಎಂದು ಸಾಧಿಸ ಹೊರಡುವುದಕ್ಕೆ ಇರುವ ಮೂಲ ಪರಿಕರಗಳು ಏನು? ಅವು ಎಷ್ಟು ನಿಜ ಮತ್ತು ಇದು ಎಷ್ಟು ಲಾಭದಾಯಕ?
"ವಿಷ ಬೀಜ" ಬಿತ್ತಲಾಗಿರುವುದು ಹೊಸ ವಿಚಾರವೇನಲ್ಲ. ಅದು ಹಳೆಯ ಸುದ್ದಿಯಲ್ಲವೆ? ಅದು ಎದೆ ನಡುಗಿಸುವಂತಹುದು ಎಂಬುದಂತೂ ನಿಜವೆ. ಆದರೆ, ಸಂಶೋಧನೆ ವಿಚಾರವಂತಿಕೆಗಳಲ್ಲಿ "ಭಾರತೀಯ/ಪಾಶ್ಚಿಮಾತ್ಯ", "ನಮ್ಮದು/ಅವರದು" ಎಂಬಂತಹ ಎಡಬಿಡಂಗಿತನವನ್ನು ಹುಟ್ಟುಹಾಕುವ, ಪ್ರಚಾರ ಮಾಡುವ ಕೆಲಸದಲ್ಲಿ ಎಡ/ಬಲ ಪಂಥವೆನ್ನದೆ ನಾವೆಲ್ಲರೂ ಸಮಾನಹೊಣೆಗಾರರು ಎಂದು ಅನಿಸುತ್ತದೆ.