ಉ: ಕರುಣಾನಿಧಿಯ ಉದಾರ ತಮಿಳು
- ಉ: ಕರುಣಾನಿಧಿಯ ಉದಾರ ತಮಿಳು By: csomsekraiah (Apr 5 2008 - 4:11pm)
- ಉ: ಕರುಣಾನಿಧಿಯ ಉದಾರ ತಮಿಳು By: mahesha (Apr 5 2008 - 10:53am)
- ಉ: ಕರುಣಾನಿಧಿಯ ಉದಾರ ತಮಿಳು By: mahesha (Apr 5 2008 - 10:56am)
- ಉ: ಕರುಣಾನಿಧಿಯ ಉದಾರ ತಮಿಳು By: csomsekraiah (Apr 4 2008 - 9:04pm)
- ಉ: ಕರುಣಾನಿಧಿಯ ಉದಾರ ತಮಿಳು By: varunbhatbm (Apr 4 2008 - 12:13pm)

RSS:
ಉ: ಕರುಣಾನಿಧಿಯ ಉದಾರ ತಮಿಳು
everything is fair in love and war
ಶಬ್ದಮಣಿದರ್ಪಣದಲ್ಲಿ ಒಂದು ಪದ್ಯದಲ್ಲೇ ಹೇಳಿದೆ..
"ಆ ತಿಗಳರು/ತಮಿಳರು ಏನು ನಮಗೆ ಕಾವೇರಿಯನ್ನು ಕಡಕ್ಕೆ ಕೊಟ್ಟಿದ್ದಾರೋ" ಎಂಬ ಸಿಟ್ಟು ಬಂದಿದೆ...
ಆ ಹೊಯ್ಸಳರ ಕಾಲದಿಂದಲೂ ತಮಿಳರು ನಾವ್ ಕನ್ನಡಿಗರ ಮೇಲೆ ಕಾವೇರಿ-ನೀರಿಗಾಗಿ ಬವರ/ಯುದ್ದದಲ್ಲಿ ಇದ್ದಾರೆ.
ಹೊಯ್ಸಳರು ಕನ್ನಂಬಾಡಿಯಲ್ಲಿ ಕಟ್ಟಿದ್ದ ಅಣೆಯನ್ನು ಚೋಳದೊರೆ ಒಡೆಯುವನು......
ಬುದ್ದಿವಂತೆ ಮಯ್ಸೂರಸರೂ, ದಿವಾನ ವಿಶ್ವೇಶ್ವರಯ್ಯನೋರು, ಅದೇ ಜಾಗದಲ್ಲಿ ಕನ್ನಂಬಾಡಿ ಕಟ್ಟೆಯನ್ನು ಮತ್ತೆ ಕಟ್ಟಿದರು.. ಆಗ ತಮಿಳರು ಏನೆಲ್ಲ ಮಾಡಿದ್ರು ಗೊತ್ತಲ್ಲ.. ಬ್ರಿಟಿಶರ ಮದ್ರಾಸು ಪಡೆಯಿಂದ ಕೇಆರ್-ಎಸ್ ಅನ್ನು ಮುತ್ತಿಸಿದರು. ಸೊತಂತ್ರ ಬಂದ ಮೇಲೂ ಆ ಪಡೆ ೨೦-೨೫ ವರ್ಶ ಕನ್ನಂಬಾಡಿ ಕಾಯಿತು..
ಅದೆಲ್ಲ ಹಾಳಾಗಲಿ.. ಈ ನೀರಿಗಾಗಿ ಹೋರಾಡಿದ ಸತ್ತ ಪೆಟ್ಟು ತಿಂದ ಮಂಡ್ಯ ಮಯ್ಸೂರು, ಹಾಸನ , ಚಾಮರಾಜನಗರದ ರೈತರು ಕಡಮೆಯೇ, ಅವರು ೪೦೦ ವರ್ಶದಿಂದ ಹೋರಾಡ್ತಿದ್ದಾರೆ.. ಅವರ ಗವ್ರವಕ್ಕಾದ್ರೂ ಹೊಗೇನಕಲ್ ತಪ್ಪಿಸಬೇಕು..
ನಾನ್ ನಮ್ ಮಂಡ್ಯದಲ್ಲಿ ಚಿಕ್ಕಂದಿನಲ್ಲಿ ನೋಡಿದ್ದೀನಿ... ಬಂಗಾರಪ್ಪನೋರ ಕಾಲದಲ್ಲಿ, ಪೋಲಿಸರ ಲಾಟಿ ಏಟುಗಳನ್ನು ತಾಳಿಕೊಂಡು ಪಟ್ಟು ಸಡಿಲಿಸದಂತೆ ಹೋರಾಡಿದರು; ಮಾದೇಗೌಡರು ಮುಂದಾಳು; ಆಗ ಯಾವ ಕರಮೇ ಇತ್ತು? ಆದ್ರೆ ಕಾವೇರಿ ಮೇಲೆ ಹಕ್ಕು ಇತ್ತೇ ಇಲ್ಲ..
ಮಂಡ್ಯದ ಒಬ್ಬ ರಯ್ತರ ಹುಡುಗ ಹೀಗೆ ಯೋಚಿಸ್ತಾನೆ
"
ನನ್ನ ತಾತ, ಅವನ ತಾತ, ಅವನ ತಾತ, ಈ ನೆಲವನ್ನು ಉತ್ತಿ ಬಿತ್ತಿದ್ದಾರೆ.. ಕನ್ನಂಬಾಡಿ ಕಟ್ಟೆಗೆ ನಮ್ಮ ಬೆವರ ಜೊತೆಗೆ ನಮ್ಮ ನೆಲವನ್ನೂ ತೆತ್ತಿದ್ದಾರೆ. ಕಾವೇರಿ ನನ್ ತಲೆಮಾರಿನ ಆಸ್ತಿ.. ನನ್ನ ಅಜ್ಜನ ಬಳುವಳಿ, ಉಡುಗೊರೆ, ಅವರ ಗವ್ರವ, ಹೋರಾಟ, ಗಟ್ಟಿತನದ ಚಿನ್ನೆ.
ಇಂದು ಅದನ್ನ ಈ ರಾಜಕೀಯದೋರು ಆ ನಮ್ ತಲೆತಲೆಮಾರಿನ ಹಗೆಗಳಾದ ತಮಿಳಿಗೆ ಕಸಿದು ಈಯ್ಯುತ್ತಿದ್ದಾರೆ..
ಇಲ್ವೇ
ಆ ತಮಿಳುನೆಲದವರು ಮೋಸದಿಂದಲೇ, ಕೂಳತನದಿಂದಲೇ ಎರಗಿ ಕಸಿದುಕೊಳ್ಳುತ್ತಿದ್ದಾರೆ..
ನಾನು ನನ್ ತಂದೆ ಆಸ್ತಿ ಕಾವೇರಿಯನ್ನ ಕಾಪಾಡಿಕೊಳ್ಳಬೇಕು" ಅಂತ....
ಈ ಬಾವೆನ ಕಾವೇರಿಸೀಮೆಯಲ್ಲಿ ಇರದ ಕನ್ನಡಿಗರಲ್ಲಿ ಇಲ್ಲದಿದ್ರೇ ಏನು ನಿಬ್ಬರ/ಅತಿಶಯವಲ್ಲ.... ಇವರಿಗೆ ಬೆಂಬಲ ಕೊಡದಿದ್ರೂ ಇವರ ನಿರಂತರ ಹೋರಾಟಕ್ಕೆ ಗವ್ರವವನ್ನು, ತಮ್ಮ ಎದೆಯಲ್ಲೊಂದು ಮೆದುಜಾಗವನ್ನು ಕೊಡದ ದೇಶಭಕ್ತರು, ಮಹಾಧರ್ಮಪಾಲಿರಿದ್ದಾರೆ. ಅದೇ ನಮ್ಮ ಕನ್ನಡದೇಶಕ್ಕೆ ಗೆದ್ದಲು.!!