ಪ್ರೀತಿಯ ಸುನಿಲ್ ಜಯಪ್ರಕಾಶ್ ತಮ್ಮ ’ಶಂಕರ ಮತ್ತು ಅಲ್ಲಮ’ ಲಿಂಕ್ ಓದಿದೆ. ಇಲ್ಲಿ ನನ್ನ ಪ್ರತಿಕ್ರಿಯೆಯನ್ನು ದಾಖಲಿಸುತ್ತಿದ್ದೇನೆ . ತಾವು ಬರೆದಿರುವ ಪ್ರಕಾರ ಅಲ್ಲಮನು ಉಪಯೋಗಿಸಿರುವ ’ಅದ್ವ್ಯೆತಿ’ ಶಬ್ದ ಶಂಕರರಿಗೆ ಅನ್ವಯಿಸುವ ಮಾತು . ಎಂಬುದೇ ಪ್ರಶ್ನಾರ್ಹ ಏಕೆಂದರೆ , ಅಲ್ಲಮನ ಅನೇಕ ವಚನಗಳಲ್ಲಿ ಈ ದ್ವೈತ, ಅದ್ವೈತ ಇತ್ಯಾದಿ ಶಬ್ದಗಳು ಧಾರಾಳವಾಗಿ ಉಪಯೋಗಿಸಲ್ಪಟ್ಟಿವೆ .
’ಅಹಂ ಬ್ರಹ್ಮಾಸ್ಮಿ’ ಆಗಲಿ ’ ಆಯಮಾತ್ಮಾಬ್ರಹ್ಮ’ ಆಗಲೀ ಇವೆಲ್ಲಾ ಮೂಲತಃ ಶಂಕರರವಲ್ಲ; ಉಪನಿಷತ್ತುಗಳ ಘೋಷ ವಾಕ್ಯಗಳು . ಋಷಿಗಳು ತಮಗೆ, ಈ ಜಗತ್ತಿಗೆ, ಇವೆಲ್ಲವುಗಳ ಮೂಲಕ್ಕೆ ಇರುವ ಸಂಭಂಧಗಳ ಬಗ್ಗೆ ನಡೆಸಿದ ಜಿಜ್ಞಾಸೆಗಳಲ್ಲಿ ಮೂಡಿ ಬಂದ ಶಬ್ದಗಳಿವು .
ಶಂಕರರು ತಮ್ಮ ತಾತ್ವಿಕ ಪ್ರತಿಪಾದನೆಗೆ ಅದ್ವೈತವನ್ನೇ ಅಡಿಪಾಯವಾಗಿಸಿಕೊಂಡರು ಎನ್ನುವುದು ಸರಿ . ಆದರೆ ಈ ಅದ್ವೈತ ತತ್ವ ಮೂಲತಃ ಅವರದೇ ಎನ್ನುವುದು ಮಾತ್ರ ಸರಿಯಾದ ಕ್ರಮವಲ್ಲ .ಅದೊಂದು ತತ್ವ ಜಿಜ್ಞಾಸೆಯ ದಾರಿ , ಆ ದಾರಿಯ ಯಾತ್ರಿಕರಲ್ಲೊಬ್ಬರು ಶಂಕರರು .
ಎಲ್ಲಿಯ ವರೆಗೆ ಈ ಎಲ್ಲ ಘೋಷ ವಾಕ್ಯಗಳು ಒಂದು ಪ್ರಮೇಯವಾಗಿ ದಾರಿ ತೋರಿಸುತ್ತವೆಯೋ ಅಲ್ಲಿಯ ವರೆಗೆ ಮಾತ್ರ ಅವು ಸರಿ .ಅವೇ ಪಂಥೀಕರಣಗೊಂಡರೆ ಅಪಾಯಕಾರಿ ಆಗುತ್ತವೆ ,’ನಾನು ದ್ವೈತಿ’ ’ನಾನು ಅದ್ವೈತಿ’ ಎಂಬ ಕುರುಡು ಬಡಿದಾಟಗಳು ಶುರುವಾಗುತ್ತವೆ . ಇವತ್ತು ನಾವು ಕಾಣುತ್ತಿರುವ ಧಾರ್ಮಿಕ ಕಲಹಗಳ ಮೂಲ ಈ ಪಂಥೀಯವಾದ .
ಬಸವಣ್ಣನವರು ನೆಚ್ಚಿಕೊಂಡ ವೀರಶೈವ ಮಾರ್ಗ ಸಹ ಈ ಪಂಥೀಕರಣಕ್ಕೆ ಒಳಗಾಗುವ ಅಪಾಯವನ್ನು ಮೊದಲೇ ಮುಂಗಂಡವರು ಈ ಅಲ್ಲಮಪ್ರಭು , ಅವರು ಈ ಬಗೆಯ ಪಂಥೀಕರಣವನ್ನೂ ಸಹ ನಿರ್ದಾಕ್ಷಿಣ್ಯವಾಗಿ ವಿಡಂಬಿಸಿದರು , ವಿರೋಧಿಸಿದರು. ನೋಡಿ ಅವರ ಈ ವಚನವನ್ನು
ಸೃಷ್ಟಿಗೆ ಹುಟ್ಟಿದ ಶಿಲೆ,
ಕಲ್ಲು ಕುಟಿಕಂಗೆ ಹುಟ್ಟಿದ ಮೂರುತಿ ,
ಮಂತ್ರಕ್ಕೆ ಅಂಗವಾಯಿತ್ತಲ್ಲಾ
ಈ ಮೂವರಿಗೆ ಹುಟ್ಟಿದ ಮಗನ ಲಿಂಗವೆಂದು ಕೈವಿಡಿದ
ಅಚ್ಚ ವ್ರತಗೇಡೀಗಳನೇನೆಂಬೆ ಗುಹೇಶ್ವರ
ಇಡಿಯಾಗಿ ಅಲ್ಲಮನನ್ನು ಅರ್ಥ ಮಾಡಿಕೊಂಡರೆ ಎಲ್ಲ ಕುರುಡು ಧಾರ್ಮಿಕ ಪಂಥಗಳ ವಿರೋಧಿ ಅಲ್ಲಮ .ಸ್ವತಃ ಅಲ್ಲಮನೆ ಅದ್ವೈತ ತತ್ವವನ್ನು ಒಂದು ಮಾರ್ಗ ದರ್ಶಕ ತತ್ವವಾಗಿ ಒಪ್ಪಿರುವ ವಚನಗಳೂ ಇವೆ. ಹಾಗಾಗಿ ತಾವು ತಿಳಿಸಿರುವ ವಚನ ಶಂಕರರನ್ನೇ ಕುರಿತು ಬರೆದುದು ಎಂಬುದನ್ನು ತಮ್ಮ ವಿವೇಚನೆಗೇ ಬಿಡುತ್ತೇನೆ
ಉ: ಅನನ್ಯ ಅಲ್ಲಮ ೭
ಪ್ರೀತಿಯ ಸುನಿಲ್ ಜಯಪ್ರಕಾಶ್ ತಮ್ಮ ’ಶಂಕರ ಮತ್ತು ಅಲ್ಲಮ’ ಲಿಂಕ್ ಓದಿದೆ. ಇಲ್ಲಿ ನನ್ನ ಪ್ರತಿಕ್ರಿಯೆಯನ್ನು ದಾಖಲಿಸುತ್ತಿದ್ದೇನೆ . ತಾವು ಬರೆದಿರುವ ಪ್ರಕಾರ ಅಲ್ಲಮನು ಉಪಯೋಗಿಸಿರುವ ’ಅದ್ವ್ಯೆತಿ’ ಶಬ್ದ ಶಂಕರರಿಗೆ ಅನ್ವಯಿಸುವ ಮಾತು . ಎಂಬುದೇ ಪ್ರಶ್ನಾರ್ಹ ಏಕೆಂದರೆ , ಅಲ್ಲಮನ ಅನೇಕ ವಚನಗಳಲ್ಲಿ ಈ ದ್ವೈತ, ಅದ್ವೈತ ಇತ್ಯಾದಿ ಶಬ್ದಗಳು ಧಾರಾಳವಾಗಿ ಉಪಯೋಗಿಸಲ್ಪಟ್ಟಿವೆ .
’ಅಹಂ ಬ್ರಹ್ಮಾಸ್ಮಿ’ ಆಗಲಿ ’ ಆಯಮಾತ್ಮಾಬ್ರಹ್ಮ’ ಆಗಲೀ ಇವೆಲ್ಲಾ ಮೂಲತಃ ಶಂಕರರವಲ್ಲ; ಉಪನಿಷತ್ತುಗಳ ಘೋಷ ವಾಕ್ಯಗಳು . ಋಷಿಗಳು ತಮಗೆ, ಈ ಜಗತ್ತಿಗೆ, ಇವೆಲ್ಲವುಗಳ ಮೂಲಕ್ಕೆ ಇರುವ ಸಂಭಂಧಗಳ ಬಗ್ಗೆ ನಡೆಸಿದ ಜಿಜ್ಞಾಸೆಗಳಲ್ಲಿ ಮೂಡಿ ಬಂದ ಶಬ್ದಗಳಿವು .
ಶಂಕರರು ತಮ್ಮ ತಾತ್ವಿಕ ಪ್ರತಿಪಾದನೆಗೆ ಅದ್ವೈತವನ್ನೇ ಅಡಿಪಾಯವಾಗಿಸಿಕೊಂಡರು ಎನ್ನುವುದು ಸರಿ . ಆದರೆ ಈ ಅದ್ವೈತ ತತ್ವ ಮೂಲತಃ ಅವರದೇ ಎನ್ನುವುದು ಮಾತ್ರ ಸರಿಯಾದ ಕ್ರಮವಲ್ಲ .ಅದೊಂದು ತತ್ವ ಜಿಜ್ಞಾಸೆಯ ದಾರಿ , ಆ ದಾರಿಯ ಯಾತ್ರಿಕರಲ್ಲೊಬ್ಬರು ಶಂಕರರು .
ಎಲ್ಲಿಯ ವರೆಗೆ ಈ ಎಲ್ಲ ಘೋಷ ವಾಕ್ಯಗಳು ಒಂದು ಪ್ರಮೇಯವಾಗಿ ದಾರಿ ತೋರಿಸುತ್ತವೆಯೋ ಅಲ್ಲಿಯ ವರೆಗೆ ಮಾತ್ರ ಅವು ಸರಿ .ಅವೇ ಪಂಥೀಕರಣಗೊಂಡರೆ ಅಪಾಯಕಾರಿ ಆಗುತ್ತವೆ ,’ನಾನು ದ್ವೈತಿ’ ’ನಾನು ಅದ್ವೈತಿ’ ಎಂಬ ಕುರುಡು ಬಡಿದಾಟಗಳು ಶುರುವಾಗುತ್ತವೆ . ಇವತ್ತು ನಾವು ಕಾಣುತ್ತಿರುವ ಧಾರ್ಮಿಕ ಕಲಹಗಳ ಮೂಲ ಈ ಪಂಥೀಯವಾದ .
ಬಸವಣ್ಣನವರು ನೆಚ್ಚಿಕೊಂಡ ವೀರಶೈವ ಮಾರ್ಗ ಸಹ ಈ ಪಂಥೀಕರಣಕ್ಕೆ ಒಳಗಾಗುವ ಅಪಾಯವನ್ನು ಮೊದಲೇ ಮುಂಗಂಡವರು ಈ ಅಲ್ಲಮಪ್ರಭು , ಅವರು ಈ ಬಗೆಯ ಪಂಥೀಕರಣವನ್ನೂ ಸಹ ನಿರ್ದಾಕ್ಷಿಣ್ಯವಾಗಿ ವಿಡಂಬಿಸಿದರು , ವಿರೋಧಿಸಿದರು. ನೋಡಿ ಅವರ ಈ ವಚನವನ್ನು
ಸೃಷ್ಟಿಗೆ ಹುಟ್ಟಿದ ಶಿಲೆ,
ಕಲ್ಲು ಕುಟಿಕಂಗೆ ಹುಟ್ಟಿದ ಮೂರುತಿ ,
ಮಂತ್ರಕ್ಕೆ ಅಂಗವಾಯಿತ್ತಲ್ಲಾ
ಈ ಮೂವರಿಗೆ ಹುಟ್ಟಿದ ಮಗನ ಲಿಂಗವೆಂದು ಕೈವಿಡಿದ
ಅಚ್ಚ ವ್ರತಗೇಡೀಗಳನೇನೆಂಬೆ ಗುಹೇಶ್ವರ
ಇಡಿಯಾಗಿ ಅಲ್ಲಮನನ್ನು ಅರ್ಥ ಮಾಡಿಕೊಂಡರೆ ಎಲ್ಲ ಕುರುಡು ಧಾರ್ಮಿಕ ಪಂಥಗಳ ವಿರೋಧಿ ಅಲ್ಲಮ .ಸ್ವತಃ ಅಲ್ಲಮನೆ ಅದ್ವೈತ ತತ್ವವನ್ನು ಒಂದು ಮಾರ್ಗ ದರ್ಶಕ ತತ್ವವಾಗಿ ಒಪ್ಪಿರುವ ವಚನಗಳೂ ಇವೆ. ಹಾಗಾಗಿ ತಾವು ತಿಳಿಸಿರುವ ವಚನ ಶಂಕರರನ್ನೇ ಕುರಿತು ಬರೆದುದು ಎಂಬುದನ್ನು ತಮ್ಮ ವಿವೇಚನೆಗೇ ಬಿಡುತ್ತೇನೆ