ಪ್ರಿಯ ಸವಿತೃ
ಇಲ್ಲಿ ಇಷ್ಟಲಿಂಗವನ್ನು ಯಾವ ಭೌತಿಕ ಪದಾರ್ಥದಿಂದ ನಿರ್ಮಿಸುತ್ತಾರೆ? ಶಿಲೆಯೇ,ಲೋಹವೇ , ರಾಸಾಯನಿಕಗಳ ಮಿಶ್ರಣವೇ ಎಂಬುದು ಮುಖ್ಯ ಪ್ರಶ್ನೆಯಲ್ಲ .ಅದರ ಹಿಂದಿನ , ಮನೋಭಾವ ಮುಖ್ಯ . ಜನ ಸಾಮಾನ್ಯರನ್ನು ಮೊದಲು ಬಿಡುಗಡೆಗೊಳಿಸಬೇಕಾಗಿದ್ದುದು , ಪೂಜಾರಿ, ಪುರೋಹಿತರು ಇವರುಗಳ ಕಪಿ ಮುಷ್ಟಿಯಿಂದ.
ಮೊದ ಮೊದಲು ದೇವಾಲಯಗಳು ಸಾರ್ವಜನಿಕ, ಸಾಂಸ್ಕೃತಿಕ ಕೇಂದ್ರಗಳಾಗಿದ್ದುದು ನಿಜ . ನಂತರ ಮಾನವಕೃತ ಎಲ್ಲ ಸಂಸ್ಥೆಗಳು ಅಂತಿಮವಾಗಿ ತಲುಪುವ ದುರವಸ್ಥೆಯಂತೆ, ಅವೂ ಸಹ ಶೋಷಣೆ, ಢಂಭಾಚರಣೆ, ಪಕ್ಷಪಾತ , ಬಲಾಢ್ಯರ ಆಡುಂಬೋಲಗಳಾದುದರಿಂದ , ದೇವಾಲಯ ಸಂಸ್ಕೃತಿಯನ್ನು ತಿರಸ್ಕರಿಸುವ ಅಗತ್ಯ ಬಂತು .’ನೀನು ದೇವಾಲಯದೊಳಗೆ ಬರಬೇಡ’ ಎಂದರೆ ’ನಿನ್ನದೇವಾಲಯ ಯಾರಿಗೆ ಬೇಕು?’ ಎನ್ನುವ ಮಾನವ ಘನತೆಯ ಪ್ರಶ್ನೆ ಇಲ್ಲಿ ಮುಖ್ಯವಾಯಿತು .
ವೀರಶೈವದ ಇಷ್ಟಲಿಂಗದ ಪರಿಕಲ್ಪನೆ ,ಮಧ್ಯವರ್ತಿಗಳ ಅವಶ್ಯಕತೆ ಇಲ್ಲದ ಅವರವರ ಮನಸ್ಸಿನ , ಆತ್ಮದ ಅನುಸಂಧಾನದ ಹಕ್ಕು ಅವರದೇ ,ಎನ್ನುವ ಮೂಲ ತತ್ವಗಳೊಡನೆ ಮಿಳಿತವಾದ ಒಂದು ಆಚರಣೆ. ಯೋಗದ ಕೆಲವು ಸರಳ ತತ್ವಗಳನ್ನು ಜನ ಸಾಮಾನ್ಯರ ಅಗತ್ಯಕ್ಕೆ ಅನುಗುಣವಾಗಿ ಅಳವಡಿಸಿದ ಔಪಾಸನಾ ವಿಧಾನ ಅದು . ಆದರೆ ಇದು ಸಹ ಯಾಂತ್ರೀಕರಣಗೊಳ್ಳುವ,ಪಂಥೀಕರಣಗೊಳ್ಳುವ , ಮನುಷ್ಯರ ನಡುವೆ ಭೇದ ತರುವ ಅಪಾಯವನ್ನು ಮನಗಂಡವರು ಅಲ್ಲಮ .
ಅಲ್ಲಮ ಬಸವಣ್ಣನವರ ಮೊದಲ ಭೇಟಿಯೇ ಸಾಂಕೇತಿಕವಾಗಿ ಈ ವಿಷಯವನ್ನು ಕೈಗೆತ್ತಿಕೊಳ್ಳುತ್ತದೆ .ಅಲ್ಲಮ ಬಸವಣ್ಣನವರನ್ನು ಕಾಣಲು ಅವರ ಮನೆಯ ಮುಂದೆ ಬಂದಾಗ . ಬಸವಣ್ಣ ಇಷ್ಟಲಿಂಗ ಪೂಜೆಯಲ್ಲಿ ಮೈ ಮರೆತಿರುವ ವಿಷಯ ತಿಳಿಯುತ್ತದೆ .ಇದರಿಂದ ಮುನಿದ ಅಲ್ಲಮ ಅಲ್ಲಿಂದ ಹೊರಟೇಬಿಡುತ್ತಾನೆ .ನಂತರ ಬಸವಣ್ಣನವರು ಅಲ್ಲಮನನ್ನು ಸಾಂತ್ವನಗೊಳಿಸುವಲ್ಲಿಯೇ ಈ ಇಷ್ಟಲಿಂಗದ ಚರ್ಚೆ ಮೊದಲಾಗುತ್ತದೆ ...........’ಅನನ್ಯ ಅಲ್ಲಮ’ದಲ್ಲಿಯೇ ಶರಣರ ವಚನಗಳ ಆಧಾರಗಳ ಮೇಲೆಯೇ ಈ ವಿಷಯವನ್ನು ಹಂಚಿಕೊಳ್ಳವ ಆಸೆ ಇರುವುದರಿಂದ ಇಲ್ಲಿ ಇಷ್ಟು ಸಾಕು . ಚರ್ಚೆಯನ್ನು ಮುಂದುವರಿಸಿದ್ದಕ್ಕಾಗಿ ಧನ್ಯವಾದಗಳು
ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.
ಉ: ಅನನ್ಯ ಅಲ್ಲಮ ೭
ಪ್ರಿಯ ಸವಿತೃ
ಇಲ್ಲಿ ಇಷ್ಟಲಿಂಗವನ್ನು ಯಾವ ಭೌತಿಕ ಪದಾರ್ಥದಿಂದ ನಿರ್ಮಿಸುತ್ತಾರೆ? ಶಿಲೆಯೇ,ಲೋಹವೇ , ರಾಸಾಯನಿಕಗಳ ಮಿಶ್ರಣವೇ ಎಂಬುದು ಮುಖ್ಯ ಪ್ರಶ್ನೆಯಲ್ಲ .ಅದರ ಹಿಂದಿನ , ಮನೋಭಾವ ಮುಖ್ಯ . ಜನ ಸಾಮಾನ್ಯರನ್ನು ಮೊದಲು ಬಿಡುಗಡೆಗೊಳಿಸಬೇಕಾಗಿದ್ದುದು , ಪೂಜಾರಿ, ಪುರೋಹಿತರು ಇವರುಗಳ ಕಪಿ ಮುಷ್ಟಿಯಿಂದ.
ಮೊದ ಮೊದಲು ದೇವಾಲಯಗಳು ಸಾರ್ವಜನಿಕ, ಸಾಂಸ್ಕೃತಿಕ ಕೇಂದ್ರಗಳಾಗಿದ್ದುದು ನಿಜ . ನಂತರ ಮಾನವಕೃತ ಎಲ್ಲ ಸಂಸ್ಥೆಗಳು ಅಂತಿಮವಾಗಿ ತಲುಪುವ ದುರವಸ್ಥೆಯಂತೆ, ಅವೂ ಸಹ ಶೋಷಣೆ, ಢಂಭಾಚರಣೆ, ಪಕ್ಷಪಾತ , ಬಲಾಢ್ಯರ ಆಡುಂಬೋಲಗಳಾದುದರಿಂದ , ದೇವಾಲಯ ಸಂಸ್ಕೃತಿಯನ್ನು ತಿರಸ್ಕರಿಸುವ ಅಗತ್ಯ ಬಂತು .’ನೀನು ದೇವಾಲಯದೊಳಗೆ ಬರಬೇಡ’ ಎಂದರೆ ’ನಿನ್ನದೇವಾಲಯ ಯಾರಿಗೆ ಬೇಕು?’ ಎನ್ನುವ ಮಾನವ ಘನತೆಯ ಪ್ರಶ್ನೆ ಇಲ್ಲಿ ಮುಖ್ಯವಾಯಿತು .
ವೀರಶೈವದ ಇಷ್ಟಲಿಂಗದ ಪರಿಕಲ್ಪನೆ ,ಮಧ್ಯವರ್ತಿಗಳ ಅವಶ್ಯಕತೆ ಇಲ್ಲದ ಅವರವರ ಮನಸ್ಸಿನ , ಆತ್ಮದ ಅನುಸಂಧಾನದ ಹಕ್ಕು ಅವರದೇ ,ಎನ್ನುವ ಮೂಲ ತತ್ವಗಳೊಡನೆ ಮಿಳಿತವಾದ ಒಂದು ಆಚರಣೆ. ಯೋಗದ ಕೆಲವು ಸರಳ ತತ್ವಗಳನ್ನು ಜನ ಸಾಮಾನ್ಯರ ಅಗತ್ಯಕ್ಕೆ ಅನುಗುಣವಾಗಿ ಅಳವಡಿಸಿದ ಔಪಾಸನಾ ವಿಧಾನ ಅದು . ಆದರೆ ಇದು ಸಹ ಯಾಂತ್ರೀಕರಣಗೊಳ್ಳುವ,ಪಂಥೀಕರಣಗೊಳ್ಳುವ , ಮನುಷ್ಯರ ನಡುವೆ ಭೇದ ತರುವ ಅಪಾಯವನ್ನು ಮನಗಂಡವರು ಅಲ್ಲಮ .
ಅಲ್ಲಮ ಬಸವಣ್ಣನವರ ಮೊದಲ ಭೇಟಿಯೇ ಸಾಂಕೇತಿಕವಾಗಿ ಈ ವಿಷಯವನ್ನು ಕೈಗೆತ್ತಿಕೊಳ್ಳುತ್ತದೆ .ಅಲ್ಲಮ ಬಸವಣ್ಣನವರನ್ನು ಕಾಣಲು ಅವರ ಮನೆಯ ಮುಂದೆ ಬಂದಾಗ . ಬಸವಣ್ಣ ಇಷ್ಟಲಿಂಗ ಪೂಜೆಯಲ್ಲಿ ಮೈ ಮರೆತಿರುವ ವಿಷಯ ತಿಳಿಯುತ್ತದೆ .ಇದರಿಂದ ಮುನಿದ ಅಲ್ಲಮ ಅಲ್ಲಿಂದ ಹೊರಟೇಬಿಡುತ್ತಾನೆ .ನಂತರ ಬಸವಣ್ಣನವರು ಅಲ್ಲಮನನ್ನು ಸಾಂತ್ವನಗೊಳಿಸುವಲ್ಲಿಯೇ ಈ ಇಷ್ಟಲಿಂಗದ ಚರ್ಚೆ ಮೊದಲಾಗುತ್ತದೆ ...........’ಅನನ್ಯ ಅಲ್ಲಮ’ದಲ್ಲಿಯೇ ಶರಣರ ವಚನಗಳ ಆಧಾರಗಳ ಮೇಲೆಯೇ ಈ ವಿಷಯವನ್ನು ಹಂಚಿಕೊಳ್ಳವ ಆಸೆ ಇರುವುದರಿಂದ ಇಲ್ಲಿ ಇಷ್ಟು ಸಾಕು . ಚರ್ಚೆಯನ್ನು ಮುಂದುವರಿಸಿದ್ದಕ್ಕಾಗಿ ಧನ್ಯವಾದಗಳು