ಪಿ. ಬಿ. ಎಸ್. ಜೊತೆ ಹೀಗೊಂದು ಗಾಯನ - ನಮನ!

ಪಿ. ಬಿ. ಎಸ್. ಜೊತೆ ಹೀಗೊಂದು ಗಾಯನ - ನಮನ!

ಬನ್ನಿ, ನಮ್ಮೊಡನೆ ನೀವೂ ಹಾಡಿ. ಯಾರಿಗೂ ಹಾಡುಬರದೇ ಇಲ್ಲವೇ ಇಲ್ಲ. ಮೊದಲ ಎರಡು ಸಾಲುಗಳಾದರೂ - ಪಲ್ಲವಿಯಾದರೂ ಬಂದೇ ತೀರುವುದು ಎಂದು ನನಗೆ ಗೊತ್ತು. ಆದಿಯಲ್ಲಿ ಗಣೇಶನ ಪೂಜಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವಿಘ್ನ ವಿನಾಯಕನನ್ನು ಸ್ತುತಿಸೋಣ....

"ಮೂಷಿಕ ವಾಹನ ಮೋದಕ ಹಸ್ತಾ, ಚಾಮರ ಕರ್ಣ ವಿಳಂಭಿತ ಸೂತ್ರಾ! ಶರಣು ಶರಣಯ್ಯಾ ಶರಣು ಬೆನಕಾ, ನೀಡಯ್ಯ ಬಾಳು ಬೆಳಗುವಾ ತನಕ....!
ಎಂದು ಭಕ್ತಿಯಿಂದ ಪಿ.ಬಿ.ಎಸ್ ಹಾಡಲು.....ಎಲ್ಲ ಬೇರೆ ಬೇರೆ ಅವತಾರದ ದೇವರುಗಳ ಪ್ರತ್ಯಕ್ಷ ಸಿರಿಯೇ ಅಲ್ಲಿ ಅವತರಿಸಿತು. ಸಾಕ್ಷಾತ್ ನಾರಾಯಣನನ್ನು ಕಂಡಂತಾಗಿ...
"ಕಾಪಾಡು ಶ್ರೀ ಸತ್ಯ ನಾರಾಯಣ, ಪನ್ನಗ ಶಯನಾ..." ಹೇಳಿದಂತೆ ಏನೋ ಮರೆಯಾಗಿ ಗರ್ಭಗುಡಿಯ ಬಾಗಿಲು ಹಾಕಿದಂತಾಯ್ತು. ಪಿ. ಬಿ. ಎಸ್ ಅಲ್ಲಿಗೇ ನಿಲ್ಲಿಸಲಿಲ್ಲ ಹಾಡುವುದನ್ನು...
"ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ, ನರಹರಿಯೇ"....ಎಂದು ಹಾಡಲಾರಂಬಿಸಿದರು. ಇನ್ನೂ ದರುಶನ ಕಾಣದೆ, " ಭಗವಂತ ಕೈ ಕೊಟ್ಟ.." ಎನ್ನುವಾಗಲೇ ರಂಗ ಒಂದು ಕ್ಷಣಕ್ಕೆ ಬಂದು ಮರೆಯಾದಂತೆನಿಸಿತು. ಇನ್ನಷ್ಟು ಭಕ್ತಿಯಿಂದ ಹಾಡಲಾರಂಭಿಸಿದರು "ರಂಗಾ, ವಿಠಲಾ, ಎಲ್ಲಿ ಮರೆಯಾದೆ? ಏಕೇ ದೂರಾದೆ?...." ಎಂದು ಭಕ್ತಿ ಆವೇಶದಿಂದ ಪಾಂಡುರಂಗ ವಿಠಲನನ್ನು ಕರೆದು ಕಡೆಗೆ ಅವನೊಂದಿಗೆ ರಂಗಛಾಯೆಗೆ ಹೊರಟರು.

ಪಿ.ಬಿ. ಎಸ್ ಹಾಡದ ಹಾಡಿನ ವಸ್ತುಗಳೇ ಇಲ್ಲವೆನ್ನುವಂತಾಗಿದೆ. ಅಷ್ಟು ಹಾಡುಗಳನ್ನು ಕನ್ನಡ ಕುಲಬಾಂಧವರಿಗೆ ನೀಡಿದ್ದಾರೆ. ಕನ್ನಡಾಂಭೆಯೇ ಧನ್ಯಳಾಗಿದ್ದಾಳೆ ಎಂದರೆ ಅತಿಶಯೋಕ್ತಿ ಎನಿಸುವುದಿಲ್ಲ.

ಭಕ್ತಿ ಗೀತೆಗಳಲ್ಲಿ ಭಗವತ್ಲೀಲೆಯೇ ಅಡಗಿರುತಿತ್ತು. ಮೇಲೆ ಬರೆದಂತೆ ಅವರ "ಶರಣು ಶರಣಯ್ಯ ಶರಣು ಬೆನಕ" ಅಂತೂ ಎಲ್ಲರ ಅಚ್ಚು ಮೆಚ್ಚು. ಎಲ್ಲಾರು ಒಂದಾಗಿ ನಿನ್ನ, ನಕ್ಕು ನಮಿಸೋದು ನೋಡೋಕೆ ಚೆನ್ನ ಅಂತ ಹಾಡುತ್ತಿದ್ದರೆ ಸಾಕು ಅಲ್ಲಿ ಪ್ರೀತಿ, ಭಕ್ತಿ, ಶ್ರದ್ಧೆ ವಿನಾಯಕನ ಮೇಲೆ ಒಟ್ಟಿಗೇ ಉಂಟುಮಾಡುತ್ತೆ. ಪಿ.ಬಿ.ಎಸ್ ಅವರು ಭಕ್ತಿ ಭಾವವನ್ನು ಹೇಗೆ ತರಿಸೋದು ಹಾಡಿನಲ್ಲಿ, ಅದನ್ನು ಹೇಗೆ ಹಾಡೊದು ಅಂತ ತೋರಿಸಿಕೊಟ್ಟಿದ್ದಾರೆ. ಗಣೇಶ ಎಲ್ಲೇ ಹೊರಟಿರಲಿ, ಅಲ್ಲಿಗೆ ಧಾವಿಸಬೇಕು, ಹಾಗೆ ಕರೆದಿದ್ದಾರೆ. ಪ್ರತೀ ಹಬ್ಬ - ಹುಣ್ಣಿಮೆ, ಶಾಲಾ ದಿನಗಳ ಆಚರಣೆ, ಮತ್ತಿತರ ಕಾರ್ಯಕ್ರಮಗಳಲ್ಲಿ ಪ್ರಾರ್ಥನಾ ಹಾಡಾಗಿ ಹೇಳಿದ್ದು ಲೆಕ್ಕ ವಿಲ್ಲದಷ್ಟು. ಮೊನ್ನೆತಾನೆ ರಾಗ ಸಂಗೀತ ಸಂಧ್ಯಾದಲ್ಲೂ ಇದನ್ನು ಕೇಳಿ ಎಲ್ಲರೂ ಅವರೊಡನೆ ಹಾಡಿ ಆನಂದಿಸಿದ್ದಾರೆ. ರಂಗಾ ವಿಠಲಾ ..ಏಲ್ಲಿ ಮರಯಾದೆ ಅಂತೂ ಕಥೆಯನ್ನೇ ಹೇಳಿ, ಕಂಬನಿ ಬರಿಸುತ್ತೆ. ಅಷ್ಟು ಭಕ್ತಿ ಭಾವದಿಂದ ತುಂಬಿದ ಭಾವುಕತೆ ಅದರಲ್ಲಿದೆ. ಇದಲ್ಲದೇ "ಕಾಪಾಡು ಶ್ರೀ ಸತ್ಯನಾರಾಯಣ, ಪನ್ನಗ ಶಯನಾ..., ಹರಿನಾಮವೇ ಚಂದಾ, ತೂಗುವೇ ರಂಗನಾ ತೂಗುವೇ ಕೃಷ್ಣನಾ, ಇನ್ನೂ ಹಲವಾರು ಭಕ್ತಿಗೀತೆಗಳನ್ನು ನಮಗೆ ನೀಡಿದ್ದಾರೆ. ಭಕ್ತಿ ಸೂಸುವ ಇತರ ಗೀತೆಗಳಾದ ."ಈ ಲೋಕವೆಲ್ಲಾ ನೀನೇ ಇರುವ ಪೂಜಾ ಮಂದಿರ..", ಭಗವಂತ ಕೈಕೊಟ್ಟ..., ಗೊಂಬೆಯಾಟವಯ್ಯ, ಆ ದೇವನಾಡಿದ ...ಇವೂ ಕೂಡ ಭಕ್ತಿ ಭಾವವನ್ನು ಬಿತ್ತರಿಸುವಲ್ಲಿ ಯಶಸ್ವಿಯಾಗಿವೆ.

ಭಕ್ತಿಯಿಂದ ದೇಶಭಕ್ತಿಗೆ, ಕನ್ನಡನಾಡಿನ ಒಲುಮೆ, ಸಿರಿ, ಸಂಪತ್ತು ಮತ್ತು ನಾಡಹಬ್ಬದ ದಾರಿಯಲ್ಲಿ ಪಯಣಿಸಿದರೆ...........

ದಾರಿಯುದ್ದಕ್ಕೂ ದೇಶಪ್ರೇಮ, ಕನ್ನಡನಾಡಿನ ಪ್ರೀತಿ, ಸೌರಭ, ಪ್ರೇಮದ ಉಸಿರಿನಲಿ ಉಲಿದ ಉಲಿಗಳು ಕಾಣಬರುತ್ತೆ. ಹೊಸ ಮನೋಲ್ಲಾಸ ಅನುಭವ ಉಂಟಾಗುತ್ತದೆ.
ಮೊದಲನೆಯದಾಗಿ "ಬಾ ತಾಯೆ ಭಾರತಿಯೆ ಭಾವ ಭಾಗೀರತಿಯೆ..." ಯಾರಿಗೆ ಗೊತ್ತಿಲ್ಲ, ಯಾರು ಕೇಳಿಲ್ಲ?, ಅದನ್ನು ನಾನು ಕೇಳೇ ಇಲ್ಲ. ಅರ್ಥಾತ್ ಎಲ್ಲರೂ ಕೇಳಿ, ಆನಂದಿಸಿರುವ ಭವ್ಯ ಭಾರತವನ್ನು ಕಹಳೆ ಊದಿ ಕರೆದಂತಿದೆ. ಈ ಬರಹ ಇಲ್ಲೇ ಬಿಟ್ಟು ಒಂದು ಸಲ ಕೇಳೋಣವೆನ್ನಿಸುತಿದೆ. ಮಧುರವಾದ ಈ ಹಾಡನ್ನು ಪಿ.ಬಿ.ಎಸ್ ಕಂಠಸಿರಿಯಲ್ಲಿ ಆಲಿಸುತ್ತಿದ್ದರೆ, ಯಾರಿಗಾದರೂ ದೇಶ ಪ್ರೇಮದ ಭಕ್ತಿ, ಭಾವುಕತೆ ಬಂಧಿಸಿ ಹಿಡಿದಿಡಿಸುವುದರಲ್ಲಿ ಸಂಶಯವೇ ಇಲ್ಲ. "ಇಳಿದು ಬಾ ತಾಯೇ ಇಳಿದು ಬಾ, ಹರನ ಜಡೆಯಿಂದ ಹರಿಯ ಅಡಿಯಿಂದ..." ದೇಶಭಕ್ತಿಯ ಜೊತೆ, ದಿವ್ಯ ಭಕ್ತಿಯನ್ನೂ ಸೂಸುವ, ಪಂಚತತ್ವಗಳನ್ನೂ ಪರಿಚಯಿಸುವ ಈ ಕೃತಿ ದೇವಿಯ ಆದಿಶಕ್ತಿಯ ಪ್ರತೀಕವಾಗಿದೆ. ಭಾವೋಲ್ಲಾಸದೊಂದಿಗೆ ಮನೋಲ್ಲಾಸವನ್ನೂ ಪರಿಣಮಿಸುವುದು. ’ಕನ್ನಡನಾಡಿನ ವೀರರ ಮಣಿಯ ಗಂಡು ಭೂಮಿಯ ವೀರ ನಾಡಿನ ಚರಿತೆಯ’ನ್ನು ಪಿ.ಬಿ. ಎಸ್ ಎಷ್ಟು ಚೆನ್ನಾಗಿ ಹಾಡಿದರು ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ನಾಡಹಬ್ಬವನ್ನು ರಸವತ್ತಾಗಿ ಹಾಡಿ ತೋರಿಸಿದ ಗೀತೆ " ಮೈಸೂರು ದಸರಾ ಎಷ್ಟೊಂದು ಸುಂದರಾ...". "ಕನ್ನಡದ ಕುಲದೇವಿ ಕಾಪಾಡು ಬಾ ತಾಯಿ...."ಕಷ್ಟಗಳ ಮಳೆಯಿಂದ ನಮ್ಮನ್ನೆಲ್ಲಾ ಕಾಪಾಡು ಎಂದು ಕೇಳಿಕೊಂಡ ಗೀತೆ ಇದಾಗಿದೆ. ಇನ್ನೂ ಹಲವಾರು ದೇಶಭಕ್ತಿ, ನಾಡಭಕ್ತಿ ಗೀತೆಗಳ ರಸದೌತಣವನ್ನೇ ಪಿ. ಬಿ. ಎಸ್ ಅವರು ನಮಗೆ ನೀಡಿದ್ದಾರೆ, ಅವು ಸರ್ವಕಾಲಕ್ಕೂ ಸಕಾಲಿಕವಾಗಿವೆ: ಹಾಗೂ ಅಮರವಾಗಿರುವಲ್ಲಿ ನಿಸ್ಸಂಶಯವಾಗಿದೆ.

ಪ್ರಣಯಣದ ದಾರಿಯಲ್ಲಿ ಪಯಣಿಸುವ ಮೊದಲು ಕಷ್ಟಗಳನ್ನು ಪರಿಹರಿಸೋಣ. ಏನಂತೀರ?

"ದೀನ ನಾ ಬಂದಿರುವೆ...." ಇದು ಭಾವ ಬಿಂದುಗಳನ್ನು (ಕಂಬನಿ) ಕಣ್ಣಲ್ಲಿ ಹರಿಸುವಲ್ಲಿ ಬಿಲ್ಕುಲ್ ಸತ್ಯ. ಎಷ್ಟು ಭಾವನೆ ಭರಿತವಾಗಿದೆ ಎಂದರೆ ಕಣ್ಣೀರೇ ಇದಕ್ಕೆ ಸಾಕ್ಷಿಯಾಗಿದೆ. ಕಣ್ಣೀರು ಬರಲಿಲ್ಲವಾದರೆ ಇದಕ್ಕನುಗುಣವಾದ ಭಾವ ಹಾಡುವುದರಲ್ಲಿರಲಿಲ್ಲ ಎಂದಲ್ಲವೇ?

ಮುಂದುವರೆಯುವುದು........

Comments

Submitted by rasikathe Thu, 04/18/2013 - 00:59

ಪಿ.ಬಿ.ಎಸ್ ಅವರ‌ ಬಗ್ಗೆ ಲೇಖನ‌ ಬರೆವುದು 1‍ ಪುಟ‌ ದಲ್ಲಿ ಸಾದ್ಯವಿಲ್ಲ‌...ಇನ್ನೆರಡು ಪುಟಗಳಾದರೂ ಬೇಕು. ಮುಮ್ದಿನ‌ ಕಮ್ತೆ ಸಧ್ಯದಲ್ಲೇ ಪ್ರಕಟಿಸುತ್ತೇನೆ! ಧನ್ಯವಾದಗಳು! ಮೀನಾ
Submitted by lpitnal@gmail.com Thu, 04/18/2013 - 03:11

ಡಾ ಮೀನಾ ಸುಬ್ಬರಾವ ರೇ, ಪಿ ಬಿ ಎಸ್ ರ ಭಕ್ತಿ, ಹಾಗೂ ದೇಶಭಕ್ತಿ ಪರ ಹಾಡುಗಳ ನೆನಪುಗಳ ಗೋಪುರವನ್ನು ಚನ್ನಾಗಿ, ಅರ್ಥವತ್ತಾಗಿ ಕಟ್ಟಿಕೊಟ್ಟಿರುತ್ತೀರಿ, 'ಸಾವಿರಾರು ಗೀತೆಗಳಲ್ಲಿ' ಒಳ್ಳೆಯ ರತ್ನಗಳನ್ನು ಹುಡುಕಿ ಕೊಟ್ಟಿದ್ದೀರಿ. ಅಭಿನಂದನೆಗಳು. ಹುಡುಕಿದಷ್ಟು ಇನ್ನೂ ಸಾಕಷ್ಟು ಆಯಾಮಗಳಲ್ಲಿ ಪಿ ಬಿ ಎಸ್,ಹಾಡುಗಳು ಸಿಗುತ್ತವೆ, ಉದಾ: ರಾಷ್ಟ್ರಪ್ರಶಸ್ತಿ ಗಳಿಸಿದ ನಾಂದಿ ಚಿತ್ರದ ' ಹಾಡೊಂದು ಹಾಡುವೆ ನೀ ಕೇಳು ಮಗುವೆ, ಬರಿದಾದ ಮನೆ ಬೆಳಗೆ ನೀನೆಂದು ಬರುವೆ,' , ಭಕ್ತಿಯ ಪರಾಕಾಷ್ಠೆ ಮೆರೆದ ' ಮಾನವ ದೇಹವು ಮೂಳೆ ಮಾಂಸದ ತಡಿಕೆ,', ಕರೀಂಖಾನ ರಿಂದ ರಚಿತ ಹಾಡುಗಳು,'ನಟವರ ಗಂಗಾಧರ, ಉಮಾಶಂಕರ,' 'ಒಲವಿನ ಪ್ರಿಯಲತೆ ಅವಳದೇ ಚಿಂತೆ,ಅವಳ ಮಾತೆ ಮಧುರ ಗೀತೆ, ಅವಳೆ ಎನ್ನ ಪ್ರೇಯಸಿ, ' ಸತಿ ಅನುಸೂಯಾ ಚಿತ್ರದ ನಾರದ ಪಾತ್ರದ ಹಾಡು,' ನಾಗರಹಾವಿನ' ಬಾರೆ ಬಾರೆ ಚಂದದ ಚೆಲುವಿನ ತಾರೆ,' ' ಕನ್ನಡನಾಡಿನ ವೀರರ ಮಣಿಯ' ' ಇವಳು ಯಾರು ಬಲ್ಲೆಯೇನು, ಇವಳ ಹೆಸರು ತಿಳಿಯಲೇನು, ಇವಳು ಏತಕೋ ಬಂದು ನನ್ನ ಸೆಳೆದಳೋ' .'ಬಾಡಿಹೋದ ಬಳ್ಳಿಯಿಂದ ಹೂವು ಅರಳಬಲ್ಲುದೇ' ಇವೆಲ್ಲ ತಮ್ಮ ಮುಂದುವರೆದ ಲೇಖನದಲ್ಲಿ ಮೂಡಬಹುದಾದರೂ ನೆನಪಾಗಿದ್ದಕ್ಕೆ ಹಂಚಿಕೊಂಡೆ. ತಮ್ಮ ಲೇಖನದ ಪ್ರಭಾವವೇ ಈ ನೆನಪುಗಳಿಗೆ ಕಾರಣ. ಮೀನಾ ರವರೆ ಚನ್ನಾದ ಲೇಖನ. ಸಕಾಲಿಕ. ಬರೆಯುತ್ತಿರಿ. ಪಿ ಬಿ ಎಸ್ ಅವರೊಂದು ಅದ್ಭುತ ಶಕ್ತಿ, ಮಾಂತ್ರಿಕ. ನಮ್ಮ ಧಾರವಾಡಕ್ಕೆ ಬಂದಾಗ ನಾನೂ ಕೂಡ ಅವರೊಂದಿಗೆ ಭಾವಚಿತ್ರ ತೆಗೆಸಿಕೊಂಡು ಕಾಪಿಟ್ಟುಕೊಂಡಿದ್ದನ್ನು, ಅಂದು ಫೇಸ್ ಬುಕ್ ನಲ್ಲಿ ಹಂಚಿಕೊಂಡೆ. ಅಮರ ಗಾಯಕನಿಗೆ ನುಡಿನಮನ ಮುಂದುವರೆಯಲಿ ಎಂದು ಹಾರೈಸುತ್ತ, ಕಳೆದುಕೊಂಡದ್ದನ್ನು ಹುಡುಕುತ್ತ, ಮತ್ತೊಮ್ಮೆ ಧನ್ಯವಾದಗಳು .........
Submitted by rasikathe Thu, 04/18/2013 - 06:13

In reply to by lpitnal@gmail.com

ನಮಸ್ಕಾರ‌, ನಿಮ್ಮ‌ ಹೆಸರು ತಿಳಿಯಲಿಲ್ಲ‌. ಪರವಾಗಿಲ್ಲ‌. ಧನ್ಯವಾದಗಳು ನಿಮ್ಮ‌ ಪ್ರತಿಕ್ರಿಯೆಗೆ. ನಿಜ‌, ನಾನು ಅವರ‌ ಇನ್ನೂ ಬಹಲ‌ ಹಾಡುಗಳನ್ನು ಉಲ್ಲೇಖಿಸಿ ಮುಗಿಸಬೇಕಾಗಿದೆ. ನಿಮ್ಮ‌ ಪಟ್ಟಿಗೆ ಧನ್ಯವಾದಗಳು! ಸಧ್ಯದಲ್ಲೇ ಮುಮ್ದುವರೆಸುತ್ತೇನೆ. ಮೀನಾ
Submitted by lpitnal@gmail.com Thu, 04/18/2013 - 14:09

In reply to by rasikathe

ಕ್ಷಮೆಇರಲಿ, ಡಾ ಮೀನಾ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು ತಮ್ಮ ಪಿ ಬಿ ಎಸ್ ಕುರಿತ ಆತ್ಮೀಯ ಬರಹಕ್ಕೆ. ಈ ಮೊದಲ ಪ್ರತಿಕ್ರಿಯೆಗೆ 'ನಿಮ್ಮ‌ ಹೆಸರು ತಿಳಿಯಲಿಲ್ಲ‌. ಪರವಾಗಿಲ್ಲ‌. ಧನ್ಯವಾದಗಳು ' ಎಂದಿದ್ದಕ್ಕೆ, ಮೇಡಂ ನಾನು ಲಕ್ಷ್ಮೀಕಾಂತ ಇಟ್ನಾಳ, ಸಂಪದಿಗ ಶ್ರೋತೃ. ತಮ್ಮಂತಹ ಸಂಪದಿಗ ಬರಹಗಾರರ ಬರಹಗಳನ್ನು ಓದುತ್ತ, ಖುಷಿಪಡುವ ಸಾಮಾನ್ಯ ಓದುಗ. ಮತ್ತೇನು ವಿಶೇಷವಿಲ್ಲ. ತಮ್ಮ ಮುಂದಿನ ಎಪಸೋಡ ಎದುರು ನೋಡುತ್ತಿದ್ದೇನೆ. ಇಂತೀ..........
Submitted by ramvani Thu, 04/18/2013 - 09:16

ನಮಸ್ಕಾರ ಮೀನಾ, ನಿಮ್ಮ ಲೇಖನ ಪಿ.ಬಿ.ಎಸ್. ಹಾಡಿದ ಅನೇಕ ಭಕ್ತಿಗೀತೆಗಳ ಮೆಲುಕು ಹಾಕುವಂತೆ ಮಾಡಿತು. ಕಲ್ಲು ಸಕ್ಕರೆ ಕೊಳ್ಳಿರೋ, ಬದುಕಿದೆನು ಬದುಕಿದೆನು...ಪುಟಗಟ್ಟಲೆ ಆದೀತು.. ವಾಣಿ
Submitted by rasikathe Thu, 04/18/2013 - 10:25

In reply to by ramvani

ನಮಸ್ಕಾರ‌ ವಾಣಿಯವರೆ, ಧನ್ಯವಾದಗಳು ನಿಮ್ಮ‌ ಪ್ರತಿಕ್ರಿಯೆಗೆ. ಬದುಕಿದೆನು ಬದುಕಿದೆನು ನನಗೆ ತುಮ್ಬಾ ಇಶ್ಹ್ಟವಾದ ಹಾಡು. ನೆನಪಿಸಿದ್ದಕ್ಕೆ ನನ್ನೀ. ನಾನು ಹಾಡುಗಳ‌ ಮೇಲೆ ಹೆಣೆದು ಬರೆಯುತ್ತಿದ್ದೇನೆ. ಅವರ‌ ವ್ಯಕ್ತಿತ್ವ‌ ಮತ್ತಿತರ‌ ವಿಶಯಗಳನ್ನು ನೇವು ಕವರ್ ಮಾಡಿದೀರ‌. ಮೀನಾ
Submitted by rasikathe Thu, 04/18/2013 - 10:25

In reply to by ramvani

ನಮಸ್ಕಾರ‌ ವಾಣಿಯವರೆ, ಧನ್ಯವಾದಗಳು ನಿಮ್ಮ‌ ಪ್ರತಿಕ್ರಿಯೆಗೆ. ಬದುಕಿದೆನು ಬದುಕಿದೆನು ನನಗೆ ತುಮ್ಬಾ ಇಶ್ಹ್ಟವಾದ ಹಾಡು. ನೆನಪಿಸಿದ್ದಕ್ಕೆ ನನ್ನೀ. ನಾನು ಹಾಡುಗಳ‌ ಮೇಲೆ ಹೆಣೆದು ಬರೆಯುತ್ತಿದ್ದೇನೆ. ಅವರ‌ ವ್ಯಕ್ತಿತ್ವ‌ ಮತ್ತಿತರ‌ ವಿಶಯಗಳನ್ನು ನೇವು ಕವರ್ ಮಾಡಿದೀರ‌. ಮೀನಾ
Submitted by mannu Thu, 04/18/2013 - 15:00

ಮೂಷಿಕ ವಾಹನ ಮೋದಕ ಹಸ್ತಾ, ಚಾಮರ ಕರ್ಣ ವಿಳಂಭಿತ ಸೂತ್ರಾ! ಶರಣು ಶರಣಯ್ಯಾ ಶರಣು ಬೆನಕಾ, ನೀಡಯ್ಯ ಬಾಳು ಬೆಳಗುವಾ ತನಕ..... ನನ್ನ ಊರು ಬೇಗೂರು (ಬೆಂ.ದ.ತಾ). ನನ್ನ ಊರಿನ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮುಂಜಾನೆ ಸ್ಪೀಕರ್ ಅಲ್ಲಿ ವಾರಕೊಮ್ಮೆ ಹಾಕ್ತಿದ್ದರು... ಸಣ್ಣ ಹುಡುಗನಿದ್ದಾಗಲಿಂದಲೂ ಈ ಹಾಡು ಮನ ಅರಳಿಸುತಿತ್ತು !!! ಮನೆಯ ತೆಂಗಿನ ಮರದ ಕೆಳಗೆ ಕುಳಿತು ಕೇಳ್ತಿದ್ದ್ರೆ ಮನಸಿಗೆ ಉಲ್ಲಾಸ ... ದಯವಿಟ್ಟು ಲೇಖನ ಮುಂದುವರಿಸಿ ...ಪಿ ಬಿ ಎಸ್ ರ ಕನ್ನಡದ best ಎಲ್ಲಾ ಹಾಡುಗಳನ್ನು ಪರಿಚಯಿಸೋ ಪ್ರಯತ್ನ ಆಗಲಿ
Submitted by rasikathe Thu, 04/18/2013 - 21:29

In reply to by mannu

ಮನ್ನು ಅವರಿಗೆ ಧನ್ಯವಾದಗಳು! ಇದರಲ್ಲಿ ನನ್ನದೇನೂ ಇಲ್ಲ‌, ಎಲ್ಲ‌ ಆ ಮಹಾನುಭಾವರದ್ದು. ಪಿ. ಬಿ. ಎಸ್ ಎಮ್ಬ‌ ಮಹಾ ಕಲಾವಿದರು, ಹಾಡುಗಾರರು, ಸಾಹಿತಿ, ವಿದ್ವಾಮ್ಸರು. ಇನ್ನೂ ಬಹಳಶ್ಹ್ಟಿದೆ ಅವರ‌ ಹಾದುಗಳು! ಮೀನಾ
Submitted by dvg_shiva Thu, 04/18/2013 - 15:42

Olle lekhana Deena naa bandiruve baagilali nidiruve, idu Sandhyaraga chitrada geethe, haadiddu Pt Bheemsen Joshi Baagilani theredu seveyanu kodu hariye idu Bhakta Kanakdasa, haadiddu PBS Mostly Meena avrige confuse aagirbeku, OR Nanage confuse aagidyea?
Submitted by rasikathe Thu, 04/18/2013 - 21:31

In reply to by dvg_shiva

ತಪ್ಪು ತಿದ್ದಿದ್ದಕ್ಕೆ ಧನ್ಯವಾದ‌ ಹಾಗು ಪ್ರತಿಕ್ರಿಯೆಗೆ. ಅದನ್ನು ಸರಿಯಾಗಿ ಛೆಕ್ ಮಾಡಿ ಸರಿ ಪಡಿಸುತ್ತೆನೆ ಎರಡನೇ ಭಾಗದಲ್ಲಿ. ಮೀನಾ
Submitted by rasikathe Thu, 04/18/2013 - 21:31

In reply to by dvg_shiva

ತಪ್ಪು ತಿದ್ದಿದ್ದಕ್ಕೆ ಧನ್ಯವಾದ‌ ಹಾಗು ಪ್ರತಿಕ್ರಿಯೆಗೆ. ಅದನ್ನು ಸರಿಯಾಗಿ ಛೆಕ್ ಮಾಡಿ ಸರಿ ಪಡಿಸುತ್ತೆನೆ ಎರಡನೇ ಭಾಗದಲ್ಲಿ. ಮೀನಾ
Submitted by bhalle Thu, 04/18/2013 - 22:01

In reply to by bhalle

ಲಕ್ಷ್ಮಣ ಸಂಗೀತಗಾರನಾಗುವವರೆಗೂ ಪಿ.ಬಿ ಯವರ ದನಿ ಸಿರಿ ಲಕ್ಷ್ಮಣ ಸಂಗೀತಗಾರನಾದ ಮೇಲೆ ಭೀಮಸೇನ ಜೋಷಿಯವರ ಹಾಡಿನ ವೈಖರಿ, ಸೊಗಸೇ ಸೊಗಸು
Submitted by rasikathe Thu, 04/18/2013 - 23:20

In reply to by bhalle

ಭಲ್ಲೆ ಯವರೇ , ಭಲೇ !...ಚುರುಕಾಗಿ, ಚೊಕ್ಕಾಗಿ, ಚಲೋ ಆಗಿ ಚರಿ ಉತ್ತರಕ್ಕೆ ನನ್ನೀ, ನನಗೂ ಹಾಗೆನಿಸಿದ್ದಕ್ಕೇ ನಿರಾಳವಾಗಿ ಹಾಕಿದ್ದೆ. ಅದರಿಮ್ದ‌ ನೋಡಿ ಬರೆಯುತ್ತೇನೆ ಎಮ್ದೆ. ಧನ್ಯವಾದಗಳು! ಮೀನಾ.
Submitted by makara Thu, 04/18/2013 - 22:34

ಒಬ್ಬ ಗಾನಗಾರುಡಿಗನಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ ನಿಮ್ಮ ಬರಹ. ಚೆನ್ನಾಗಿದೆ ಮೀನಾ ಅವರೆ, ಮುಂದುವರೆಸಿ.