ಉ: ಸಾಯಬೇಕು ಅನ್ನಿಸಿದ ಆ ಕ್ಷಣ
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: pallavi.dharwad (Jun 1 2008 - 11:44am)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: yuvapremi (May 1 2008 - 8:41pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: Aril (Apr 30 2008 - 2:06pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: venu1968 (Apr 30 2008 - 11:47am)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: muralihr (Apr 28 2008 - 10:56am)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (Apr 29 2008 - 4:48pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: ಸಂಗನಗೌಡ (Apr 29 2008 - 5:42pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: gururajkodkani (Apr 29 2008 - 5:33pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (Apr 29 2008 - 4:48pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: madhava_hs (Apr 28 2008 - 10:52am)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: narendra (Apr 27 2008 - 8:53pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (Apr 28 2008 - 2:41pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: kalpana (Apr 27 2008 - 10:24pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: kalpana (Apr 27 2008 - 10:23am)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (Apr 28 2008 - 2:50pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: uniquesupri (Apr 29 2008 - 4:56pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (Apr 29 2008 - 5:04pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: Sunil Jayaprakash (Apr 28 2008 - 6:10pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: uniquesupri (Apr 29 2008 - 4:56pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (Apr 28 2008 - 2:50pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: agilenag (Apr 26 2008 - 9:31pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: kalpana (Apr 27 2008 - 10:51am)

RSS:
ಉ: ಸಾಯಬೇಕು ಅನ್ನಿಸಿದ ಆ ಕ್ಷಣ
ರೂಪಾರವರೇ,
ನಿಮ್ಮ ಅನುಭವ ಕಥನವನ್ನು ಓದಿದಾಗ ನನಗೆ ಅನಿಸಿದ್ದು ಯಾವುದೋ ದುರ್ಬಲ ಕ್ಷಣದಲ್ಲಿ, ಮನಸ್ಸು ಖಾಲಿಯಾಗಿಹೋದಾಗ, ಅಸಹಾಯಕತೆ ತಲೆದೋರಿದಾಗ ಜೀವ ತೆಗೆದುಕೊಳ್ಳುವ ಪ್ರಯತ್ನವನ್ನು ಮಾನವ ಮಾಡುತ್ತಾನೆ. ಕೆಲವರು ಅದರಲ್ಲಿ ಯಶಸ್ವಿಯಾದರೂ, ಅದು ಹೊಗಳುವ ಪ್ರಯತ್ನವಲ್ಲ. ಪರಿಸ್ಥಿತಿಯನ್ನು ಎದುರಿಸಲಾಗದ ಹೇಡಿತನ ಎನ್ನಬಹುದು. ಇರಲಿ, ನೀವು ನಿಮ್ಮ ಸ್ನೇಹಿತೆಯ ಮಾತನ್ನು ಕೇಳಿದ್ದಕ್ಕೆ ಅಭಿನಂದನೆಗಳು. ನೀವು ಬದುಕುಳಿದು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಸಾಧ್ಯವಾಯಿತು.
ಅಂದಹಾಗೆ, ನಾನು ಹೈದರಾಬಾದಿನಲ್ಲಿ ನಮ್ಮ ಬ್ಯಾಂಕಿನ ಪ್ರಮುಖ ಶಾಖೆಯ ಪ್ರಬಂಧಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ, ದಿನ ನಿತ್ಯವೂ ಒಂದಲ್ಲಾ ಒಂದು ತೊಂದರೆಯನ್ನು ಎದುರಿಸಬೇಕಾಗುತ್ತಿತ್ತು. ಈಗ ಆ ರಾಜ್ಯದ ಬಹು ಪ್ರಮುಖ ಸ್ಥಾನದಲ್ಲಿರುವವರೊಬ್ಬರು ನನಗೆ ಒಂದು ದಿನ ಫೋನಾಯಿಸಿ, ನೀನು ಇಂಥವರಿಗೆ ಇಂತಹ ಹಣ ಸಹಾಯ ಮಾಡದಿದ್ದರೆ, ನಾಳೆ ಬೆಳಗ್ಗೆಯ ಹೊತ್ತಿಗೆ ನಿನ್ನ ದೇಹದ ತುಂಡುಗಳನ್ನು ನಿನ್ನ ಹೆಂಡತಿಗೆ ಕಳುಹಿಸಿಕೊಡುತ್ತೇನೆ, ತಿಳಿದಿರಲಿ ಎಂದು ಹೆದರಿಸಿದ್ದರು. ನಾನು ಅವರ ಮಾತಿಗೆ ಬಗ್ಗಿದ್ದರೆ, ಇಂದು ಕೆಲಸದಿಂದ ವಜಾ ಮಾಡಿಸಿಕೊಂಡು ಮನೆಯಲ್ಲಿ ಕೂರಬೇಕಾಗುತ್ತಿತ್ತು. ಆದ್ದರಿಂದ ನಾವು ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಬೇಕು. ದೇವರು ಯಾವುದಾದರೂ ಒಂದು ದಾರಿಯನ್ನು ಇಟ್ಟೇ ಇರುತ್ತಾನೆ. ಆತ್ಮ ವಿಶ್ವಾಸದಿಂದ ಮುಂದುವರೆಯಬೇಕು ಅಷ್ಟೆ.
ಧನ್ಯವಾದಗಳು. ವಂದನೆಗಳೊಂದಿಗೆ,
ಎ.ವಿ. ನಾಗರಾಜು