ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಸಾಯಬೇಕು ಅನ್ನಿಸಿದ ಆ ಕ್ಷಣ

April 27, 2008 - 8:53pm — narendra

ಉ: ಸಾಯಬೇಕು ಅನ್ನಿಸಿದ ಆ ಕ್ಷಣ

narendra's picture

ರೂಪಾರವರ ಬರಹ ಮತ್ತು ನಿಮ್ಮ ಪ್ರತಿಕ್ರಿಯೆ ಎರಡನ್ನೂ ಓದಿದೆ. ಬಹುಷಃ ಎಲ್ಲರ ಬದುಕಿನಲ್ಲೂ ಒಂದಲ್ಲಾ ಒಂದು ಘಟ್ಟದಲ್ಲಿ ‘ಯಾಕೆ ಬದುಕಬೇಕು ಇನ್ನು’ ಎನ್ನುವಂಥ ಸಂಕಟ, ನಿರಾಶೆ ಮನಸ್ಸನ್ನು ಆವರಿಸುವುದು ಇದ್ದೇ ಇರುತ್ತದೇನೋ. ಸೋಲು, ಅಪಮಾನ ಅಥವಾ ಅಂಥದ್ದರ ಭೀತಿ, ಅಸಹಾಯಕ ಸ್ಥಿತಿ, ಪಾಪಪ್ರಜ್ಞೆ, ಹಠಮಾರಿತನ ಮತ್ತು ಮೂರ್ಖತನಕ್ಕೆ ಕೂಡ ಪ್ರಾಣಕಳೆದುಕೊಳ್ಳುವ ನಿರ್ಧಾರಕ್ಕೆ ಬರುವವರಿದ್ದಾರೆ. ನಿಮ್ಮಂತೆ, ರೂಪಾರವರಂತೆ ಬದುಕನ್ನು ಕಳೆದುಕೊಂಡು ಬಿಡಬಹುದಾದ ಆ ಒಂದು ಅನಿಷ್ಟ ಕ್ಷಣವನ್ನು ಹಾದುಬಂದವರು, ನಮ್ಮಂಥವರು ಆತ್ಮಹತ್ಯೆ ಹೇಡಿತನ, ಆತ್ಮವಿಶ್ವಾಸದಿಂದ ಬದುಕನ್ನು ಎದುರಿಸಬೇಕು, ಈಸಬೇಕು ಇದ್ದು ಜೈಸಬೇಕು ಎಂದೆಲ್ಲ ಎಷ್ಟೇ ಹೇಳಿದರೂ ಆತ್ಮಹತ್ಯೆ ನಡೆಯುತ್ತಲೇ ಇದೆ. ಇವರ ಸಾವಿಗೆ ಬದುಕಿರುವ ನಾವೂ ಒಂದಲ್ಲಾ ಒಂದು ರೀತಿಯಲ್ಲಿ ಕಾರಣರು; ಇವರು ಎಸೆದು ಹೋಗುತ್ತಿರುವುದು ನಾವೂ ನೀವೂ ಸೇರಿ ನಿರ್ಮಿಸಿರುವ ಜಗತ್ತನ್ನು, ಪರಿಸ್ಥಿತಿಯನ್ನು. ಪ್ರತಿಯೊಂದು ಆತ್ಮಹತ್ಯೆಯೂ ಕಾಡುತ್ತ ಉಳಿಯುತ್ತದೆ, ಉತ್ತರವಿಲ್ಲದ ಪ್ರಶ್ನೆಗಳನ್ನು ಉಳಿಸಿ ಹೋಗುತ್ತದೆ. ಹೇಳಿ ಹೋಗು ಕಾರಣಾ ಎನ್ನುವ ಆರ್ತ ಹಾಡು ಹೃದಯದಿಂದ ಚೀರಿಡುತ್ತಲೇ ಇರುತ್ತದೆ.

ನಾನು ಕಂಡಂತೆ ಆತ್ಮಹತ್ಯೆಯ ನಿರ್ಧಾರ ನಿಧಾನವಾಗಿ, ಹಂತಗಳಲ್ಲಿ ಮತ್ತು ಸುಮಾರು ಹದಿನೈದು ಇಪ್ಪತ್ತು ದಿನಗಳಲ್ಲಿ ಮೂಡಿ ಗಟ್ಟಿಯಾಗುತ್ತದೆಯೇ ಹೊರತು ಅಚಾನಕವಾಗಿ ಮೂಡುವುದಿಲ್ಲ. ಹಾಗೆ ಕಂಡುಬರುವ ಸಂದರ್ಭಗಳಲ್ಲೂ ಒಂದು ಆತ್ಮಹತ್ಯಾತ್ಮಕ ನಿಲುವು ಅಂಥ ವ್ಯಕ್ತಿಯ ಸುಪ್ತಪ್ರಜ್ಞೆಯಲ್ಲಿ ಕೆಲವು ಕಾಲದಿಂದಲೂ ಹೆಡೆಯಾಡಿಸುತ್ತ ಇದ್ದಿರುತ್ತದೆ. ಅದು ಇತರರ ಗಮನಕ್ಕೆ ಬಂದಿರುವುದಿಲ್ಲ ಅಷ್ಟೇ. ಒಮ್ಮೆ ಅಂಥ ನಿರ್ಧಾರಕ್ಕೆ ಬಂದ ವ್ಯಕ್ತಿ ಎಲ್ಲ ಬುದ್ಧಿಮಾತು, ಸಾಂತ್ವನ, ಧೈರ್ಯದ ಮಾತುಗಳಿಗೆ ಕಿವುಡನಂತೆ ತಲೆಯಾಡಿಸುತ್ತಾನೆಯೇ ಹೊರತು ಸ್ಪಂದಿಸುವುದಿಲ್ಲ ಎನ್ನುವುದು ಗಾಭರಿ ಹುಟ್ಟಿಸುವ ವಿದ್ಯಮಾನ. ನನಗೆ ಹೇಳಬೇಕೆನಿಸಿದ ಮಾತು ಇದು. ನಮ್ಮ ಯಾವ ಮಾತೂ ವಾಸ್ತವವಾಗಿ ಆತ ಆಗಲೇ ಕಟ್ಟಿಕೊಂಡ ನಿರ್ಧಾರದ ಒಂದು ಮೊಟ್ಟೆಯನ್ನು ಒಡೆದು ಅವನ ಮನಸ್ಸಿನ ಒಳಗೆ ಪ್ರವೇಶಿಸುವುದೇ ಇಲ್ಲ. ಆತ ಎಲ್ಲ ಬಾಗಿಲುಗಳನ್ನು ಮುಚ್ಚಿಕೊಂಡು ಬಿಡುವ ಮುನ್ನವೇ ಏನಾದರೂ ಸಾಧ್ಯವೇ ಹೊರತು ಆ ಮೇಲಿನದು ವ್ಯರ್ಥ.

ಆತ್ಮಹತ್ಯೆಯಿಂದ ಆತ ಅಥವಾ ಆಕೆಯ nearest and dearest ಸಂಬಂಧಿಗಳು, ಬಂಧುಗಳು ನಿಜವಾಗಿ ಬದುಕಿದ್ದೂ ಸಾಯುವವರು. post mortem ವಿಧಿಯಿಂದ ತೊಡಗಿ ಉಳಿದ ಬದುಕಿನ ಉದ್ದಕ್ಕೂ ಅವರು ಹೊರುವ ಘೋರ ನರಕದ ಸಣ್ಣ ಕಲ್ಪನೆಯಾದರೂ ನಮಗಿರಬೇಕು. ಆಗ ಬಹುಷಃ ನಮ್ಮ ಆತ್ಮಹತ್ಯೆಯಂಥ ಶಿಕ್ಷೆಯನ್ನು ನಾವು ಬೇರೆಯವರಿಗೆ ಕೊಡಲು ಹಿಂಜರಿಯಬಹುದೇನೋ!

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (19 replies) April 26, 2008 - 11:03am
  • ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: pallavi.dharwad (Jun 1 2008 - 11:44am)
  • ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: yuvapremi (May 1 2008 - 8:41pm)
  • ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: Aril (Apr 30 2008 - 2:06pm)
  • ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: venu1968 (Apr 30 2008 - 11:47am)
  • ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: muralihr (Apr 28 2008 - 10:56am)
    • ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (Apr 29 2008 - 4:48pm)
      • ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: ಸಂಗನಗೌಡ (Apr 29 2008 - 5:42pm)
      • ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: gururajkodkani (Apr 29 2008 - 5:33pm)
  • ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: madhava_hs (Apr 28 2008 - 10:52am)
  • ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: narendra (Apr 27 2008 - 8:53pm)
    • ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (Apr 28 2008 - 2:41pm)
    • ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: kalpana (Apr 27 2008 - 10:24pm)
  • ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: kalpana (Apr 27 2008 - 10:23am)
    • ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (Apr 28 2008 - 2:50pm)
      • ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: uniquesupri (Apr 29 2008 - 4:56pm)
        • ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (Apr 29 2008 - 5:04pm)
      • ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: Sunil Jayaprakash (Apr 28 2008 - 6:10pm)
  • ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: agilenag (Apr 26 2008 - 9:31pm)
    • ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: kalpana (Apr 27 2008 - 10:51am)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Chamaraj
    ಉ: ಕನಸಿನ ಕನ್ಯ
    July 6, 2008 - 5:57pm
  • rameshbalaganchi
    ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
    July 6, 2008 - 4:56pm
  • Chamaraj
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 6, 2008 - 4:32pm
  • makrumanju
    ಉ: ಕನ್ನಡ ಕಸ್ತೂರಿ
    July 6, 2008 - 12:06pm
  • hamsanandi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 6, 2008 - 11:33am
  • suchara
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 6, 2008 - 10:59am
  • cmariejoseph
    ಉ: ಜಿಮೇಲ್ ಕನ್ನಡ
    July 6, 2008 - 10:38am
  • kishorpatwardhan
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 6, 2008 - 9:12am
  • ಗಣೇಶ
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 12:15am
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 11:03pm
ಇನ್ನಷ್ಟು


ಧರ್ಮವಿಲ್ಲದ ವಿಜ್ಞಾನ ಹೇಗೆ ಕುಂಟೋ ಹಾಗೆಯೇ ವಿಜ್ಞಾನವಿಲ್ಲದ ಧರ್ಮ ಕುರುಡು.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator