ಉ: ಸಾಯಬೇಕು ಅನ್ನಿಸಿದ ಆ ಕ್ಷಣ
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: pallavi.dharwad (Jun 1 2008 - 11:44am)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: yuvapremi (May 1 2008 - 8:41pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: Aril (Apr 30 2008 - 2:06pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: venu1968 (Apr 30 2008 - 11:47am)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: muralihr (Apr 28 2008 - 10:56am)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (Apr 29 2008 - 4:48pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: ಸಂಗನಗೌಡ (Apr 29 2008 - 5:42pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: gururajkodkani (Apr 29 2008 - 5:33pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (Apr 29 2008 - 4:48pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: madhava_hs (Apr 28 2008 - 10:52am)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: narendra (Apr 27 2008 - 8:53pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (Apr 28 2008 - 2:41pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: kalpana (Apr 27 2008 - 10:24pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: kalpana (Apr 27 2008 - 10:23am)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (Apr 28 2008 - 2:50pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: uniquesupri (Apr 29 2008 - 4:56pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (Apr 29 2008 - 5:04pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: Sunil Jayaprakash (Apr 28 2008 - 6:10pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: uniquesupri (Apr 29 2008 - 4:56pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: roopablrao (Apr 28 2008 - 2:50pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: agilenag (Apr 26 2008 - 9:31pm)
- ಉ: ಸಾಯಬೇಕು ಅನ್ನಿಸಿದ ಆ ಕ್ಷಣ By: kalpana (Apr 27 2008 - 10:51am)

RSS:
ಉ: ಸಾಯಬೇಕು ಅನ್ನಿಸಿದ ಆ ಕ್ಷಣ
ರೂಪಾರವರ ಬರಹ ಮತ್ತು ನಿಮ್ಮ ಪ್ರತಿಕ್ರಿಯೆ ಎರಡನ್ನೂ ಓದಿದೆ. ಬಹುಷಃ ಎಲ್ಲರ ಬದುಕಿನಲ್ಲೂ ಒಂದಲ್ಲಾ ಒಂದು ಘಟ್ಟದಲ್ಲಿ ‘ಯಾಕೆ ಬದುಕಬೇಕು ಇನ್ನು’ ಎನ್ನುವಂಥ ಸಂಕಟ, ನಿರಾಶೆ ಮನಸ್ಸನ್ನು ಆವರಿಸುವುದು ಇದ್ದೇ ಇರುತ್ತದೇನೋ. ಸೋಲು, ಅಪಮಾನ ಅಥವಾ ಅಂಥದ್ದರ ಭೀತಿ, ಅಸಹಾಯಕ ಸ್ಥಿತಿ, ಪಾಪಪ್ರಜ್ಞೆ, ಹಠಮಾರಿತನ ಮತ್ತು ಮೂರ್ಖತನಕ್ಕೆ ಕೂಡ ಪ್ರಾಣಕಳೆದುಕೊಳ್ಳುವ ನಿರ್ಧಾರಕ್ಕೆ ಬರುವವರಿದ್ದಾರೆ. ನಿಮ್ಮಂತೆ, ರೂಪಾರವರಂತೆ ಬದುಕನ್ನು ಕಳೆದುಕೊಂಡು ಬಿಡಬಹುದಾದ ಆ ಒಂದು ಅನಿಷ್ಟ ಕ್ಷಣವನ್ನು ಹಾದುಬಂದವರು, ನಮ್ಮಂಥವರು ಆತ್ಮಹತ್ಯೆ ಹೇಡಿತನ, ಆತ್ಮವಿಶ್ವಾಸದಿಂದ ಬದುಕನ್ನು ಎದುರಿಸಬೇಕು, ಈಸಬೇಕು ಇದ್ದು ಜೈಸಬೇಕು ಎಂದೆಲ್ಲ ಎಷ್ಟೇ ಹೇಳಿದರೂ ಆತ್ಮಹತ್ಯೆ ನಡೆಯುತ್ತಲೇ ಇದೆ. ಇವರ ಸಾವಿಗೆ ಬದುಕಿರುವ ನಾವೂ ಒಂದಲ್ಲಾ ಒಂದು ರೀತಿಯಲ್ಲಿ ಕಾರಣರು; ಇವರು ಎಸೆದು ಹೋಗುತ್ತಿರುವುದು ನಾವೂ ನೀವೂ ಸೇರಿ ನಿರ್ಮಿಸಿರುವ ಜಗತ್ತನ್ನು, ಪರಿಸ್ಥಿತಿಯನ್ನು. ಪ್ರತಿಯೊಂದು ಆತ್ಮಹತ್ಯೆಯೂ ಕಾಡುತ್ತ ಉಳಿಯುತ್ತದೆ, ಉತ್ತರವಿಲ್ಲದ ಪ್ರಶ್ನೆಗಳನ್ನು ಉಳಿಸಿ ಹೋಗುತ್ತದೆ. ಹೇಳಿ ಹೋಗು ಕಾರಣಾ ಎನ್ನುವ ಆರ್ತ ಹಾಡು ಹೃದಯದಿಂದ ಚೀರಿಡುತ್ತಲೇ ಇರುತ್ತದೆ.
ನಾನು ಕಂಡಂತೆ ಆತ್ಮಹತ್ಯೆಯ ನಿರ್ಧಾರ ನಿಧಾನವಾಗಿ, ಹಂತಗಳಲ್ಲಿ ಮತ್ತು ಸುಮಾರು ಹದಿನೈದು ಇಪ್ಪತ್ತು ದಿನಗಳಲ್ಲಿ ಮೂಡಿ ಗಟ್ಟಿಯಾಗುತ್ತದೆಯೇ ಹೊರತು ಅಚಾನಕವಾಗಿ ಮೂಡುವುದಿಲ್ಲ. ಹಾಗೆ ಕಂಡುಬರುವ ಸಂದರ್ಭಗಳಲ್ಲೂ ಒಂದು ಆತ್ಮಹತ್ಯಾತ್ಮಕ ನಿಲುವು ಅಂಥ ವ್ಯಕ್ತಿಯ ಸುಪ್ತಪ್ರಜ್ಞೆಯಲ್ಲಿ ಕೆಲವು ಕಾಲದಿಂದಲೂ ಹೆಡೆಯಾಡಿಸುತ್ತ ಇದ್ದಿರುತ್ತದೆ. ಅದು ಇತರರ ಗಮನಕ್ಕೆ ಬಂದಿರುವುದಿಲ್ಲ ಅಷ್ಟೇ. ಒಮ್ಮೆ ಅಂಥ ನಿರ್ಧಾರಕ್ಕೆ ಬಂದ ವ್ಯಕ್ತಿ ಎಲ್ಲ ಬುದ್ಧಿಮಾತು, ಸಾಂತ್ವನ, ಧೈರ್ಯದ ಮಾತುಗಳಿಗೆ ಕಿವುಡನಂತೆ ತಲೆಯಾಡಿಸುತ್ತಾನೆಯೇ ಹೊರತು ಸ್ಪಂದಿಸುವುದಿಲ್ಲ ಎನ್ನುವುದು ಗಾಭರಿ ಹುಟ್ಟಿಸುವ ವಿದ್ಯಮಾನ. ನನಗೆ ಹೇಳಬೇಕೆನಿಸಿದ ಮಾತು ಇದು. ನಮ್ಮ ಯಾವ ಮಾತೂ ವಾಸ್ತವವಾಗಿ ಆತ ಆಗಲೇ ಕಟ್ಟಿಕೊಂಡ ನಿರ್ಧಾರದ ಒಂದು ಮೊಟ್ಟೆಯನ್ನು ಒಡೆದು ಅವನ ಮನಸ್ಸಿನ ಒಳಗೆ ಪ್ರವೇಶಿಸುವುದೇ ಇಲ್ಲ. ಆತ ಎಲ್ಲ ಬಾಗಿಲುಗಳನ್ನು ಮುಚ್ಚಿಕೊಂಡು ಬಿಡುವ ಮುನ್ನವೇ ಏನಾದರೂ ಸಾಧ್ಯವೇ ಹೊರತು ಆ ಮೇಲಿನದು ವ್ಯರ್ಥ.
ಆತ್ಮಹತ್ಯೆಯಿಂದ ಆತ ಅಥವಾ ಆಕೆಯ nearest and dearest ಸಂಬಂಧಿಗಳು, ಬಂಧುಗಳು ನಿಜವಾಗಿ ಬದುಕಿದ್ದೂ ಸಾಯುವವರು. post mortem ವಿಧಿಯಿಂದ ತೊಡಗಿ ಉಳಿದ ಬದುಕಿನ ಉದ್ದಕ್ಕೂ ಅವರು ಹೊರುವ ಘೋರ ನರಕದ ಸಣ್ಣ ಕಲ್ಪನೆಯಾದರೂ ನಮಗಿರಬೇಕು. ಆಗ ಬಹುಷಃ ನಮ್ಮ ಆತ್ಮಹತ್ಯೆಯಂಥ ಶಿಕ್ಷೆಯನ್ನು ನಾವು ಬೇರೆಯವರಿಗೆ ಕೊಡಲು ಹಿಂಜರಿಯಬಹುದೇನೋ!