ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಉ: ಮರೆವೆನೆಂತು ಅ.ರಾ.ಸೇ. ಅವರ ಹಾಸ್ಯವನು ?

March 10, 2006 - 3:14pm — beluru

ಅ ರಾ ಸೇ

beluru's picture

ಅ ರಾ ಸೇ ಎಂದು ನೀವು ನನ್ನನ್ನು ಮತ್ತೆ ಭರಮಸಾಗರಕ್ಕೆ ಒಯ್ದೇಬಿಟ್ಟಿರಿ!
ನಾನು ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಓದುವ ನೆಪದಲ್ಲಿ ಅಂಡಲೆಯುತ್ತಿದ್ದಾಗ, ಅರಾಸೇಯವರ ಮನೆಗೆ ಹೋಗುತ್ತಿದ್ದೆ. ಅವರ ಪರಿಚಯ ನನಗೆ ಭರಮಸಾಗರ ಕವನದ ಮೂಲಕ ಆಗಿತ್ತಾದರೂ ಅವರನ್ನು ಕಣ್ಣಾರೆ ಕಂಡಿದ್ದು ಕಣಜನಹಳ್ಳಿ ನಾಗರಾಜ್ ಎಂಬ ಈಗ ಮರೆತೇಹೋಗಿರುವ ಕನ್ನಡದ ಪ್ರಮುಖ ಕವಿಮಿತ್ರರ ಮೂಲಕ. ಅವರಿಬ್ಬರೂ ಆಧ್ಯಾತ್ಮದಾಹಿಗಳು!
ಅರಾಸೇಯವರ ಆ ಪುಟ್ಟ ಮನೆಯಲ್ಲಿ ನನಗೆ ಕಂಡುಬಂದ ಹೃದಯವೈಶಾಲ್ಯ, ಅವರ ಮಾತುಗಳಲ್ಲಿ ಎಂದೆಂದೂ ಮರೆಯಾಗದ ಜೀವನಪ್ರೀತಿ ಎಲ್ಲವೂ ಈಗ ನಿಮ್ಮ ಮಾತು ಓದಿದ ಮೇಲೆ ಮತ್ತೆ ಮತ್ತೆ ನೆನಪಾಗುತ್ತಿದೆ. ಊಟ ಮಾಡುವಾಗಲೂ ಅವರು ಎಷ್ಟು ಪ್ರೀತಿಯಿಂದ ಮಾತನಾಡುತ್ತಿದ್ದರು....
ಒಮ್ಮೆ ನಾನು ಅವರು ಸಂಜೆಯಾದ ಮೇಲೆ ಚಹಾ ಕುಡಿಯಲೆಂದು ಮುಖ್ಯರಸ್ತೆಯ ಹೋಟೆಲ್ಲಿಗೆ ಹೋಗುತ್ತಿದ್ದೆವು. ಆಗ ಅವರು ಸಡನ್ನಾಗಿ `ಸುದರ್ಶನ,ನಿನ್ನ ಹೃದಯವು ಬೆಣಚುಕಲ್ಲಿನದೆ?' ಎಂದು ಕೇಳಿದರು. `ಹಾಗೇನಿಲ್ಲ' ಎಂದೆ. `ಅಲ್ಲ ಮಾರಾಯ, ನಿನ್ನ ವಯಸ್ಸಿನ ಎಷ್ಟೋ ಹುಡುಗರ ಹೃದಯವು ಬೆಣಚುಕಲ್ಲಿನದು. ಹ್ಯಾಗೆ ಚೂರುಚೂರಾಗುತ್ತೆ ಗೊತ್ತ?' ಎಂದು ಕಣ್ಣು ಮಿಟುಕಿಸಿದರು.
ಅವರು ನನಗೆ ಹೇಳಿದ ಪ್ರೀತಿಪೂರ್ವಕ ಮಾತುಗಳು, ನಾನು ಹತಾಶೆಯ ಮಡುವಿನಲ್ಲಿ ಬಿದ್ದಿದ್ದಾಗ ನನ್ನನ್ನು ಎತ್ತಿದ ಬಗೆ, ತಾವೇ ಸ್ವತಃ ಕಷ್ಟದ, ಮಾನಸಿಕ ಒತ್ತಡಗಳ ನಡುವೆ ಇದ್ದರೂ ಎಂದೂ ಬದುಕಿನೆದುರು ಸೀದಾಸಾದಾ ತೆರೆದುಕೊಂಡ ಬಗೆ, ಎಲ್ಲವೂ ಅವರನ್ನು ನನ್ನ ಆಧ್ಯಾತ್ಮಿಕ ಗುರುಗಳ ಸ್ಥಾನದಲ್ಲಿ ಇರಿಸಿದೆ. ಇಂದೂ ಅವರು ನನ್ನ ನೆನಪಿಟ್ಟಿದ್ದಾರೆ ಎಂದು ನಾನು ಇತ್ತೀಚೆಗೆ ಕಣಜನಹಳ್ಳಿಗೆ ಹೋಗಿ ನಾಗರಾಜರನ್ನು ಭೇಟಿ ಮಾಡಿದಾಗ ತಿಳಿಯಿತು. ಈ ನಾಗರಾಜ್ ಕೂಡಾ ನನ್ನ ಬದುಕಿನ ಮೇಲೆ ಪ್ರಭಾವ ಬೀರುತ್ತಲೇ ಇರುವ ಅಪೂರ್ವ ವ್ಯಕ್ತಿ. ಅವರು ಇತ್ತೀಚೆಗೆ ಬರೆದ `ಅeತ ಅವಧೂತರು' ಪುಸ್ತಕವನ್ನು ಸಿವಿಜಿ ಪಬ್ಲಿಕೇಶನ್ಸ್ ಪ್ರಕಟಿಸಿದೆ. ಎಳಗೆರೆ ಕೃಷ್ಣಶಾಸ್ತ್ರಿಯವರು ಉಲ್ಲೇಖಿಸಿದ ಇಚ್ಛಾಮರಣಿ ಗುಜ್ಜಾರಪ್ಪನವರ ಬಗ್ಗೆ ಹೆಚ್ಚಿನ ಮಾಹಿತಿಯಲ್ಲದೆ ನಾವು ಎಂದೂ ಕೇಳರಿಯದ ವ್ಯಕ್ತಿಗಳ ಮಾಹಿತಿ ಅದರಲ್ಲಿದೆ.
ಅರಾಸೇಯವರು ಬ್ರಹ್ಮಸೂತ್ರಕ್ಕೆ ಭಾಷ್ಯ ಬರೆದ ಅಪರೂಪದ ವ್ಯಕ್ತಿ. ಅವರು ಹಾಸ್ಯಲೇಖಕರೇನೋ ಹೌದು. ಆದರೆ ಅದಕ್ಕಿಂತ ಹೆಚ್ಚಾಗಿ ಅವರು ಆಧ್ಯಾತ್ಮ ಚಿಂತಕರು ಎನ್ನುವುದು ಹಲವರಿಗೆ ಗೊತ್ತಿಲ್ಲ.
ಲಾರಿಯ ಮರ್ಮರಗಳ ನಡುವೆಯೇ ಇಂದಿಗೂ ಬದುಕನ್ನು ಬಂದಹಾಗೆ ಪ್ರೀತಿಸುತ್ತಿರುವ ಅರಾಸೇಯವರಿಗೆ ನನ್ನ ಗೌರವಪೂರ್ವಕ ಪ್ರಣಾಮಗಳು. ಈ ಬಾರಿ ರಜೆಯಲ್ಲಿ ಖಂಡಿತ ಅವರ ಮನೆಗೆ ಭೇಟಿ ನೀಡುವೆ...

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಮರೆವೆನೆಂತು ಅ.ರಾ.ಸೇ. ಅವರ ಹಾಸ್ಯವನು ? By: shreekant.mishrikoti (1 replies) March 7, 2006 - 5:01pm
  • ಅ ರಾ ಸೇ By: beluru (Mar 10 2006 - 3:14pm)

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • olnswamy
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 8:37am
  • vinayudupa
    ಉ: ಒಗಟು - ಬಿಡಿಸಿ!
    December 3, 2008 - 8:15am
  • gnanadev
    ಉ: ಮಕ್ಕಳ ಹಾಡು
    December 3, 2008 - 7:20am
  • rameshbalaganchi
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 7:16am
  • rameshbalaganchi
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 6:55am
  • lsiddappa
    ಉ: ಅಂತರ್ಜಾತಿ ವಿವಾಹ
    December 3, 2008 - 6:22am
  • lsiddappa
    ಉ: "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?":- ಭಾಗ ೨
    December 3, 2008 - 6:21am
  • kannadakanda
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 6:19am
  • kannadakanda
    ಉ: ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?
    December 3, 2008 - 6:18am
  • venkatesh
    ಉ: ಅಮೃತ್ ಮಂಗ್ಳೂರ್ ಯಾಕೊ ಕಾಣ್ವಲ್ರಲ್ಲ ; ಬ್ಯಾಸ್ರಿಕೆಆಯ್ತೇನ್ರಿ, ಎಲ್ ಹೋಗ್ಯಾರ್ರಿ ?
    December 3, 2008 - 5:59am
ಇನ್ನಷ್ಟು


ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator