ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು)
- ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು) By: Prabhu Murthy (May 5 2008 - 12:36pm)
- ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು) By: hamsanandi (May 6 2008 - 12:04am)
- ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು) By: hamsanandi (May 6 2008 - 12:11am)
- ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು) By: hamsanandi (May 6 2008 - 12:04am)
- ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು) By: Narayana (May 2 2008 - 12:33am)
- ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು) By: Narayana (May 2 2008 - 12:05am)
- ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು) By: hamsanandi (May 2 2008 - 2:00am)

RSS:
ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು)
.....ಆದರೆ, ಅದರಲ್ಲಿ ಒಂದು ತಪ್ಪು ಕಾಣುತ್ತದೆ. ಇಡೀ ರಚನೆಯು ದ್ವಿತೀಯಾ ವಿಭಕ್ತಿಯಲ್ಲಿದೆ. ಅಂದರೆ "ವೆಂಕಟಾಚಲದಲ್ಲಿ (ತಿರುಪತಿಯಲ್ಲಿ) ನೆಲೆಸಿದವನನ್ನು, ವೈಕುಂಠ ಪುರದಲ್ಲಿ ವಾಸಮಾಡುವನನ್ನು , ತಾವರೆಯಂಥ ಕಣ್ಣುಳ್ಳವನನ್ನು, ...." - ಹೀಗೆ ಬಂದಾಗ ಕೊನೆಯಲ್ಲಿ ನೆನೆಯುತ್ತೇನೆ ಎಂದೋ, ಸ್ಮರಿಸುತ್ತೇನೆ ಎಂತಲೋ, ಪೂಜಿಸುತ್ತೇನೆ ಎಂದೋ ಇರಬೇಕಿತ್ತಲ್ಲವೇ? ಅದಿಲ್ಲದೇ ಇದ್ದಾಗ ರಚನೆ ಅಪೂರ್ಣ ಎನ್ನಿಸದೇ? ಹಾಗಾಗಿ ನನಗೆ ಇದು "ವೆಂಕಟಾಚಲ ನಿಲಯ, ವೈಕುಂಠಪುರವಾಸ..." ಮೊದಲಾಗಿ ಇದ್ದಿದ್ದರೆ,(ಪ್ರಥಮಾ ವಿಭಕ್ತಿ) ಈ ತೊಂದರೆ ಇರದೇ ಹೋಗುತ್ತಿತ್ತು. ...
ಸಂಸ್ಕೃತದಲ್ಲಿ "ಅಶ್ರುತಸ್ಯ ಅನುಸಂಧಾನಮ್" ಅಂತ ಒಂದು ಸೂತ್ರ ಇದೆ ಅಂತ ನಮ್ಮ ಸಂಸ್ಕೃತ ಪಂಡಿತರು ಹೇಳಿದ್ದು ಜ್ಞಾಪಕ. ಅಂದರೆ ಹೇಳದೆಯೇ ಇದ್ದುದನ್ನು assume ಮಾಡಿಕೊಳ್ಳುವುದು ಎಂದು . ಅದರ ಪ್ರಕಾರ ಕ್ರಿಯಾಪದವನ್ನು assume ಮಾಡಿಕೊಳ್ಳಬೇಕು ಎಂದು ತೋರುತ್ತದೆ.
ಇನ್ನೊಂದು ಉದಾಹರಣೆ :
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮರತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ
ಅರ್ಥ : ಸತ್ಯ ಧರ್ಮಗಳಲ್ಲಿ ಮಗ್ನರಾದ, ಭಜಿಸುವವರಿಗೆ ಕಲ್ಪವೃಕ್ಷದೋಪಾದಿಯಲ್ಲಿಯೂ, ನಮಿಸಿದವರಿಗೆ ಕಾಮಧೇನುವಿನಂತೆಯೂ ಇರುವ ಪೂಜ್ಯರಾದ ರಾಘವೇಂದ್ರರಿಗೆ ...
ಇಲ್ಲಿಯೂ "ನಮಾಮಿ" ಕ್ರಿಯಾಪದ ಇಲ್ಲ. ನಮಿಸುವೆನು ಎಂದು ಅಂದುಕೊಳ್ಳಬೇಕು.