ಹುತಾತ್ಮ ಚೌಕ್ ನಿರ್ಮಾಣವಾಗಿದ್ದು ಕೇವಲ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದಿಂದಲ್ಲ ಎಂಬುದು ನನ್ನ ಗ್ರಹಿಕೆ. ಅದೂ ಒಂದು ಕಾರಣವಷ್ಟೇ. ರಾಜ್ಯಗಳ ಪುರ್ನವಿಂಗಡನೆಯ ಸಂದರ್ಭದಲ್ಲಿ ಆ ಕಾಲಕ್ಕೆ ಹೆಚ್ಚು ಗುಜರಾತಿಗಳು, ದಕ್ಷಿಣ ಭಾರತೀಯರು ಹೀಗೆ ವಲಸೆ ಬಂದವರು ಹೆಚ್ಚಾಗಿದ್ದ ಮುಂಬಯಿಯನ್ನು ಮರಾಠಿ ಬಹುಸಂಖ್ಯಾತ ಮಹಾರಾಷ್ಟ್ರದಿಂದ ಪ್ರತ್ಯೇಕಿಸಿ ಪ್ರತ್ಯೇಕ ಪ್ರಾಂತ್ಯ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ವಿಚಾರ ಆಗಿನ ಮುಂಬಯಿ-ಮರಾಠಿ ಸಮುದಾಯದಲ್ಲಿ ಪ್ರಚಾರಕ್ಕೆ ಬಂದು, ಇದಕ್ಕೆ ಕಾರಣ, ಆಗಿನ ಅಮರಾಠಿ ಮುಖ್ಯಮಂತ್ರಿ ಮೊರಾರ್ಜಿ ದೇಸಾಯಿಯವರು ಎಂಬ ಗುಮಾನಿಯೂ ಸೇರಿ ಮಿಲ್ ಕಾರ್ಮಿಕರ ಸಂಘರ್ಷದ ರೂಪದಲ್ಲಿ ಸಂಯುಕ್ತ ಮಹಾರಾಷ್ಟ್ರ ಹೋರಾಟ ಪ್ರಾರಂಭವಾಯಿತು. ಮುಂಬಯಿಯಲ್ಲಿ ಪ್ರಾರಂಭವಾದ ಈ ಹೋರಾಟ ಮುಂದೆ, ಬೆಳಗಾವಿ, ಗೋವಾ ಭಾಗಗಳಲ್ಲಿದ್ದ ಮರಾಠಿ ಜನರ ಅಸಮಾಧಾನವೂ ಸೇರಿಕೊಂಡು 'ಸಂಯುಕ್ತ ಮಹಾರಾಷ್ಟ್ರ ಹೋರಾಟವು' ಉಗ್ರ ರೂಪ ತಳೆಯಿತು. ಈ ಹೋರಾಟದ ಸಂದರ್ಭದಲ್ಲಿ ನಡೆದ ಗೋಲಿಬಾರ್ಗಳಲ್ಲಿ ೧೦೫ ಜನರು ಸಾವಿನ್ನಪ್ಪಿದರು. ಇವರುಗಳಲ್ಲಿ ಬೆಳಗಾವಿಯಲ್ಲಿ ಇಬ್ಬರು ಹಾಗೂ ನಿಪ್ಪಾಣಿಯಲ್ಲಿ ಒಬ್ಬರು ಸೇರಿದ್ದಾರೆ. ಈ ಹೋರಾಟದಲ್ಲಿ ನಾಶಿಕದಲ್ಲಿಯೂ ಕೆಲವರು ಮಡಿದರು. ಹೆಚ್ಚಿನವರು ಮಡಿದದ್ದು ಮುಂಬಯಿಯಲ್ಲಿ. ಈ ಒಟ್ಟೂ ಹೋರಾಟದ ಸ್ಮರಣೆಗೆ ಹುತಾತ್ಮ ಚೌಕ್ ನರ್ಮಿಸಲಾಯಿತು, ೧೯೬೧ ರಲ್ಲಿ. ಹಿಂದೆ ಫ್ಲೋರಾ ಫೌಂಟೇನ್ ಎಂದಿದ್ದ ಈ ಪ್ರದೇಶ ಈಗ ಹುತಾತ್ಮ ಚೌಕ್ ಆಗಿದೆ. ತಪ್ಪಿದ್ದರೆ ತಿದ್ದಿಕೊಳ್ಳುತ್ತೇನೆ.
ಹುತಾತ್ಮ ಚೌಕ್
ಸರ್ ಕ್ಷಮಿಸಿ,
ಹುತಾತ್ಮ ಚೌಕ್ ನಿರ್ಮಾಣವಾಗಿದ್ದು ಕೇವಲ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದಿಂದಲ್ಲ ಎಂಬುದು ನನ್ನ ಗ್ರಹಿಕೆ. ಅದೂ ಒಂದು ಕಾರಣವಷ್ಟೇ. ರಾಜ್ಯಗಳ ಪುರ್ನವಿಂಗಡನೆಯ ಸಂದರ್ಭದಲ್ಲಿ ಆ ಕಾಲಕ್ಕೆ ಹೆಚ್ಚು ಗುಜರಾತಿಗಳು, ದಕ್ಷಿಣ ಭಾರತೀಯರು ಹೀಗೆ ವಲಸೆ ಬಂದವರು ಹೆಚ್ಚಾಗಿದ್ದ ಮುಂಬಯಿಯನ್ನು ಮರಾಠಿ ಬಹುಸಂಖ್ಯಾತ ಮಹಾರಾಷ್ಟ್ರದಿಂದ ಪ್ರತ್ಯೇಕಿಸಿ ಪ್ರತ್ಯೇಕ ಪ್ರಾಂತ್ಯ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ವಿಚಾರ ಆಗಿನ ಮುಂಬಯಿ-ಮರಾಠಿ ಸಮುದಾಯದಲ್ಲಿ ಪ್ರಚಾರಕ್ಕೆ ಬಂದು, ಇದಕ್ಕೆ ಕಾರಣ, ಆಗಿನ ಅಮರಾಠಿ ಮುಖ್ಯಮಂತ್ರಿ ಮೊರಾರ್ಜಿ ದೇಸಾಯಿಯವರು ಎಂಬ ಗುಮಾನಿಯೂ ಸೇರಿ ಮಿಲ್ ಕಾರ್ಮಿಕರ ಸಂಘರ್ಷದ ರೂಪದಲ್ಲಿ ಸಂಯುಕ್ತ ಮಹಾರಾಷ್ಟ್ರ ಹೋರಾಟ ಪ್ರಾರಂಭವಾಯಿತು. ಮುಂಬಯಿಯಲ್ಲಿ ಪ್ರಾರಂಭವಾದ ಈ ಹೋರಾಟ ಮುಂದೆ, ಬೆಳಗಾವಿ, ಗೋವಾ ಭಾಗಗಳಲ್ಲಿದ್ದ ಮರಾಠಿ ಜನರ ಅಸಮಾಧಾನವೂ ಸೇರಿಕೊಂಡು 'ಸಂಯುಕ್ತ ಮಹಾರಾಷ್ಟ್ರ ಹೋರಾಟವು' ಉಗ್ರ ರೂಪ ತಳೆಯಿತು. ಈ ಹೋರಾಟದ ಸಂದರ್ಭದಲ್ಲಿ ನಡೆದ ಗೋಲಿಬಾರ್ಗಳಲ್ಲಿ ೧೦೫ ಜನರು ಸಾವಿನ್ನಪ್ಪಿದರು. ಇವರುಗಳಲ್ಲಿ ಬೆಳಗಾವಿಯಲ್ಲಿ ಇಬ್ಬರು ಹಾಗೂ ನಿಪ್ಪಾಣಿಯಲ್ಲಿ ಒಬ್ಬರು ಸೇರಿದ್ದಾರೆ. ಈ ಹೋರಾಟದಲ್ಲಿ ನಾಶಿಕದಲ್ಲಿಯೂ ಕೆಲವರು ಮಡಿದರು. ಹೆಚ್ಚಿನವರು ಮಡಿದದ್ದು ಮುಂಬಯಿಯಲ್ಲಿ. ಈ ಒಟ್ಟೂ ಹೋರಾಟದ ಸ್ಮರಣೆಗೆ ಹುತಾತ್ಮ ಚೌಕ್ ನರ್ಮಿಸಲಾಯಿತು, ೧೯೬೧ ರಲ್ಲಿ. ಹಿಂದೆ ಫ್ಲೋರಾ ಫೌಂಟೇನ್ ಎಂದಿದ್ದ ಈ ಪ್ರದೇಶ ಈಗ ಹುತಾತ್ಮ ಚೌಕ್ ಆಗಿದೆ. ತಪ್ಪಿದ್ದರೆ ತಿದ್ದಿಕೊಳ್ಳುತ್ತೇನೆ.
ರೋಹಿತ್.