ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?
- ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ? By: ಸಂಗನಗೌಡ (May 21 2008 - 5:48pm)
- ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ? By: kannadakanda (Jul 29 2008 - 6:24am)
- ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ? By: kannadakanda (May 21 2008 - 3:04pm)
- ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ? By: sushil (May 12 2008 - 1:19pm)
- ಬಹುಶ: By: muralihr (Dec 24 2005 - 10:19am)
- ಹೆಚ್ಚಿನ ಪ್ರೇಮ By: tvsrinivas41 (Dec 23 2005 - 9:08pm)
- ಅಜ್ಞಾನದ ಪರೀಕ್ಷೆಯಲ್ಲ, ನನಗಾದ ದಿಗ್ಭ್ರಮೆ By: olnswamy (Dec 23 2005 - 10:31pm)
- ಕೆಲವೊಮ್ಮೆ ಹಾಗೆ By: tvsrinivas41 (Dec 24 2005 - 9:34am)
- ಅಜ್ಞಾನದ ಪರೀಕ್ಷೆಯಲ್ಲ, ನನಗಾದ ದಿಗ್ಭ್ರಮೆ By: olnswamy (Dec 23 2005 - 10:31pm)

RSS:
ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ನಿಜ.ಹೀಗನಿಸುವುದು ಸುಳ್ಳಲ್ಲ.ಆದರೆ ಬಸವಣ್ಣನವರ ಕಾಲಾನಂತರ ವಚನಗಳು ಹಂಚಿ ಹೋಗಿದ್ದವು.ಏಳು ನೂರು ವರ್ಷಗಳ ನಂತರ ಅವು ಈಗಲೂ ಅಷ್ಟೊಂದು ಪ್ರಭಾವ ಬೀರಬಲ್ಲವಾದರೆ ಆಗ ಶರಣರ ಬಾಯಲ್ಲಿ ಉದಿಸಿದ ಈ ವಾಕ್ಯಗಳಿಗೆಂಥ ಶಕ್ತಿ ಇದ್ದಿರಬೇಡ.ಈ ಅಂತರದಲ್ಲಿ ಅವುಗಳನ್ನು ಕೆಲವಡೆ ತಮಗನುಕೂಲವಾಗುವಂತೆ ತಿರುಚಲಾಗಿದೆ/ವ್ಯಾಖ್ಯಾನಿಸಲಾಗಿದೆ.ಎಷ್ಟೋ ವಚನಗಳ ಸರಿಯಾದ ವ್ಯಾಖ್ಯಾನವೂ ಆಗಿಲ್ಲ.ಈಗ ಆ ಕಾರ್ಯ ಕೆಲವೆಡೆ ನಡೆಯುತ್ತಿದೆ ಎಂದು ಕೇಳಿದ್ದೇನೆ.ಉದಾಹರಣೆ 'ಜಂಗಮ' ಎನ್ನುವ ಪದದ ಅರ್ಥ ಎಲ್ಲರಂತೆ ನಾನು ಯಾರೋ ಸ್ವಾಮಿಗಳಿಗೆ ಹೇಳಿರಬೇಕೆಂದು ತಿಳಿದಿದ್ದೆ.ಆದರೆ ಅದರರ್ಥ 'ಸಮಾಜ' ಎಂದು ನಮ್ಮಪ್ಪಾಜಿ ಹೇಳಿದಾಗಲೇ ಗೊತ್ತಾಗಿದ್ದು.'ಜಂಗಮ ದಾಸೋಹ' ಎಂದರೆ ಸ್ವಾಮಿಗಳಿಗೆ ಊಟ ಹಾಕಿಸು ಎಂದರ್ಥವಲ್ಲ..ನೀನು ದುಡಿದಿದ್ದರಲ್ಲಿ ಕೊಂಚವಾದರೂ ಸಮಾಜಕ್ಕೆ ಮೀಸಲಿಡು ಎಂದು..ಅದು ಭಿಕ್ಷುಕನಿಗೋ,ಅನಾಥಾಶ್ರಮಕ್ಕೋ ಯಾವುದೇ ರೀತಿಯಲ್ಲಾಗಬಹುದು.
ವಚನ ಸಾಹಿತ್ಯ ಅರ್ಥಗರ್ಭಿತ.ಅದನ್ನು ಜನಸಾಮಾನ್ಯನಿಗೆ ಅರ್ಥವಾಗುವಂತೆ ಮಾಡಿದ ಬಸವಣ್ಣ ಇಂಥ ಮಾತು ಹೇಳಿರಲಾರ ಎಂಬುದು ಅವರ ವಚನ, ಜೀವನ ಚರಿತ್ರೆ ಓದಿದ ಯಾರಿಗಾದರೂ ತಿಳಿಯುವಂಥದ್ದು.ಅಷ್ಟಕ್ಕೂ ಕೋಗಿಲೆ ಮರಿಗಳೊಂದಿಗೆ ಕಾಗೆ ಮರಿಗಳನ್ನಿಟ್ಟರೂ ಎಂದಾದರೂ ಸತ್ಯ ಹೊರಬರಲೇಕಲ್ಲವೇ?
ಬಹುಶಃ ಈ ವಚನವೂ ಅರ್ಥವಾಗದಿದ್ದುದು ಸರಿಯಾದ ವ್ಯಖ್ಯಾನ ನೀಡದಿದ್ದುದಕ್ಕೆ ಎನಿಸುತ್ತದೆ.ವ್ಯಾಖ್ಯಾನ ನನಗೆ ತಿಳಿದಲ್ಲಿ ಖಂಡಿತವಾಗಿಯೂ ತಿಳಿಸುವೆ.
-ಸುಶೀಲ್.