ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 16 2008 - 1:51pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 15 2008 - 6:58pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಶ್ರೀನಿಧಿ (May 15 2008 - 9:34pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 16 2008 - 6:13pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಶ್ರೀನಿಧಿ (May 19 2008 - 9:09am)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 20 2008 - 5:26pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 20 2008 - 12:37pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 20 2008 - 5:52pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಶ್ರೀನಿಧಿ (May 20 2008 - 1:35pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಶ್ರೀನಿಧಿ (May 19 2008 - 9:28am)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಶ್ರೀನಿಧಿ (May 19 2008 - 9:09am)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 16 2008 - 6:13pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಶ್ರೀನಿಧಿ (May 15 2008 - 9:34pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 13 2008 - 5:56pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: D.S.NAGABHUSHANA (May 15 2008 - 1:06pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 16 2008 - 2:30pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 16 2008 - 2:23pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 16 2008 - 2:10pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 15 2008 - 9:59pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 15 2008 - 6:12pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 15 2008 - 5:32pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: D.S.NAGABHUSHANA (May 15 2008 - 1:06pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 13 2008 - 3:29pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: hamsanandi (May 13 2008 - 9:20pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 14 2008 - 12:42pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 13 2008 - 6:40pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 13 2008 - 5:44pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 13 2008 - 3:47pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 13 2008 - 3:32pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: hamsanandi (May 13 2008 - 9:20pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 13 2008 - 3:18pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 13 2008 - 3:05pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 13 2008 - 2:58pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: anivaasi (May 12 2008 - 6:16pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 12 2008 - 9:08pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: anivaasi (May 13 2008 - 2:21am)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 13 2008 - 8:11am)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: anivaasi (May 13 2008 - 3:44pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 13 2008 - 8:11am)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: anivaasi (May 13 2008 - 2:21am)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 12 2008 - 9:08pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 12 2008 - 5:56pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 12 2008 - 8:59pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 11 2008 - 8:29pm)


RSS:
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
'ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು' ಲೇಖನಕ್ಕೆ ಬಂದಿರುವ ಪ್ರತಿಕ್ರಿಯಗಳನ್ನು ಕುರಿತಂತೆ....
'ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು' ಎಂಬ ನನ್ನ ಲೇಖನಕ್ಕೆ ಬಂದಿರುವ ವೈವಿಧ್ಯಮಯ ಪ್ರತಿಕ್ರಿಯೆಗಳನ್ನು ಗಮನಿಸಿರುವೆ. ನನ್ನ ವಿಚಾರಗಳನ್ನು ಸಹಾನುಭೂತಿಯಿಂದ ಅರ್ಥ ಮಾಡಿಕೊಳ್ಳುವ ಪ್ರಯತ್ನಗಳಿಂದ ಹಿಡಿದು, ನನ್ನ ಲೇಖನ ದುರುದ್ದೇಶಪೂರಿತವಾದದ್ದು ಎಂದು ಹೇಳುವವರೆಗೆ ಈ ಪ್ರತಿಕ್ರಿಯೆಗಳು ಹರಡಿವೆ. ಈ ಪ್ರತಿಕ್ರಿಯೆಗಳೇನೇ ಇರಲಿ, ನನ್ನ ಲೇಖನವನ್ನು ಆಸಕ್ತಿಯಿಂದ ಓದಿದ ಈ ಎಲ್ಲ ಓದುಗರಿಗೂ ನನ್ನ ಧನ್ಯವಾದಗಳು. ಆದರೆ ಅದೇ ವೇಳೆಗೆ, ಲೇಖನದಲ್ಲಿ ತಾವು ಒಪ್ಪದ ಅಥವಾ ತಮಗೆ ಪಥ್ಯವಾಗದ ಒಂದು ಸಂಗತಿ ಕಂಡೊಡನೆ, ಇಡೀ ಲೇಖನವನ್ನು ಅನುಮಾನದಿಂದ ನೋಡುವ; ಅದಕ್ಕಿಂತ ಹೆಚ್ಚಾಗಿ, ಅದರ ಬಗ್ಗೆ ಗಂಭೀರ ಚರ್ಚೆಗೆ ಆಸ್ಪದವನ್ನೇ ನೀಡದಂತಹ ಉಡಾಫೆಯ ಮಾತುಗಳನ್ನಾಡುವ ಕೆಲವು ಓದುಗರ ಪ್ರವೃತ್ತಿಯನ್ನು ಕಂಡು ವಿಷಾದವೂ ಉಂಟಾಗಿದೆ ಎಂದೂ ಇಲ್ಲಿ ಹೇಳಬಯಸುವೆ.
ನನ್ನ ಲೇಖನದಲ್ಲಿ ಉಲ್ಲೇಖಿಸಲಾಗಿರುವ ನನ್ನ ಅಧ್ಯಾಪಕ ಗೆಳೆಯರೊಬ್ಬರ ಒಂದು ಅಭಿಪ್ರಾಯ ಮತ್ತು ಒಂದು ವಚನದ ಬಗ್ಗೆ ಕೆಲವು ಓದುಗರು ಪ್ರಶ್ನೆಗಳನ್ನೆತ್ತಿದ್ದಾರೆ. ನಿಮ್ಮ ಆ ಗೆಳೆಯರ ಅಭಿಪ್ರಾಯವನ್ನು ನೀವು ಒಪ್ಪುವಿರೋ ಎಂಬುದನ್ನು ತಿಳಿಸಿ ಎಂದು ಒಬ್ಬ ಓದುಗರು ಆಗ್ರಹಿಸಿದ್ದಾರೆ. ನಾನು ಈ ಅಧ್ಯಾಪಕ ಮಿತ್ರರ ಅಭಿಪ್ರಾಯವನ್ನು ಮಾತ್ರವಲ್ಲ, ಇತರ ವಚನಗಳೊಂದಿಗೆ ಈ ಉಲ್ಲೇಖಿತ ವಚನ ಬಳಸಿ, ಬಸವಣ್ಣ ಹೆಣ್ಣಿನ ಬಗ್ಗೆ ಊಳಿಗಮಾನ್ಯಶಾಹಿ ಧೋರಣೆಯನ್ನು ಹೊಂದಿದ್ದಾನೆ ಎಂದು ವಾದಿಸುವ ಶ್ರೀಮತಿ ಆಶಾದೇವಿಯವರ 'ಸ್ತ್ರೀವಾದಿ' ವಿಮರ್ಶೆಯನ್ನೂ ನಾನು ಪೂರ್ಣವಾಗಿ ಒಪ್ಪುವುದಿಲ್ಲವೆಂದು - ಅವು ತಮಗೆ ಬೇಕಾದ ತೀರ್ಮಾನಗಳನ್ನಷ್ಟೇ ಹುಡುಕಿಕೊಳ್ಳುವ ಸೀಮಿತ ಉದ್ದೇಶಗಳುಳ್ಳ 'ಶಿಕ್ಷಿತ' ಅಧ್ಯಯನ ಮಾದರಿಗಳೆಂದು - ನಾನು ನನ್ನ ಲೇಖನದ ಉಪಸಂಹಾರದಲ್ಲ್ಲಿ ಸ್ಪಷ್ಟವಾಗಿಯೇ ಸೂಚಿಸಿದ್ದೇನೆ. ನನ್ನ ಲೇಖನವೂ ಅದೇ ಮಾದರಿಯದ್ದಾಗಿದ್ದರೆ, ಆಧಾರ ಸಹಿತವಾಗಿ ಯಾರಾದರೂ ಅದನ್ನು ಹೇಳಿದರೆ ನಾನು ಸ್ವಾಗತಿಸುತ್ತೇನೆ. ಇಲ್ಲಿ ನಾನು ಸ್ಪಷ್ಟಪಡಿಸ ಬಯಸುವ ಇನ್ನೊಂದು ವಿಷಯವೆಂದರೆ, ರಾಜ್ಯಶಾಸ್ತ್ರ ವಿಷಯದಲ್ಲಿ ಘನ ವಿದ್ವಾಂಸರಾದ ನನ್ನ ಅಧ್ಯಾಪಕ ಮಿತ್ರರು ಹಿಂದೂ ಧರ್ಮದ ಜಾತಿಪದ್ಧತಿ ಕುರಿತು ತಾವು ಕೈಗೊಂಡಿರುವ ಸಂಶೋಧನಾ ಯೋಜನೆಯ ಅಂಗವಾಗಿ ನೂರಾರು ವಚನಗಳನ್ನು ವಿಶ್ಲೇಷಿಸಿ ತಮ್ಮ ಆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆಯೇ ಹೊರತು, ಕೇವಲ ಅನ್ನಿಸಿಕೆಯ ಆಧಾರದ ಮೇಲಲ್ಲ. ಹಾಗಾಗಿ, ಅವರ ಅಭಿಪ್ರಾಯದ ಬಗ್ಗೆ ಭಿನ್ನಮತ ವ್ಯಕ್ತ ಮಡಿಸುವ ಭರದಲ್ಲಿ, ಅವರಿಗೆ ವಚನಗಳ ಜ್ಞಾನವೇ ಇಲ್ಲವೆಂಬ ಅರ್ಥದಲ್ಲಿ ಪ್ರತಿಕ್ರಿಯಿಸುವುದು ಉಚಿತವೆನಿಸುವುದಿಲ್ಲ.
ಇನ್ನೊಬ್ಬ ಓದುಗರು, ಉಲ್ಲೇಖಿತ ವಚನದಲ್ಲಿ ನೀಲಾಂಬಿಕೆಯ ಹೆಸರು ನೀಲಲೋಚನೆ ಎಂದಾಗಿರುವುದರ ಬಗ್ಗೆ ತಕರಾರು ಎತ್ತಿ ಈ ವಚನವೇ ಅನುಮಾನಾಸ್ಪದ ಎಂದಿದ್ದಾರೆ. ವಚನ ಸಾಹಿತ್ಯವನ್ನು ಸ್ವಲ್ಪ ವಿವರವಾಗಿ ಅಧ್ಯಯನ ಮಾಡಿದ ಯಾರಿಗಾದರೂ, ಈ ಎರಡೂ ಬಸವಣ್ಣನವರ ಪತ್ನಿಯ ಪರ್ಯಾಯ ಹೆಸರುಗಳಾಗಿ ಸಾಹಿತ್ಯಿಕವಾಗಿ ಬಳಕೆಯಾಗಿರುವುದು ತಿಳಿಯುತ್ತದೆ. ಆದೇನೇ ಇರಲಿ, ಇವರು ಮತ್ತು ಈ ವಚನದ ನಿಜತ್ವವನ್ನು ಇತರ ಆಧಾರಗಳ ಮೇಲೆ ಅನುಮಾನಿಸಿರುವವರು ವಚನ ಸಾಹಿತ್ಯವನ್ನು ನಮಗೆ ಸಂಪಾದಿಸಿ ಕೊಟ್ಟಿರುವ ವಿದ್ವಾಂಸರೆಲ್ಲರ ವಿದ್ವತ್ತು ಮತ್ತು ಪ್ರಾಮಾಣಿಕತೆಗಳನ್ನೇ ಅನುಮಾನಿಸುತ್ತಿದ್ದಾರೆ ಎಂದು ಹೇಳಬೇಕಾಗುತ್ತದೆ. ಇವರು, ನಮ್ಮ ನಡುವೆ ಈಗಲೂ ಇರುವ ವಚನ ಚಳುವಳಿಯ ನಿಜತ್ವವನ್ನೇ ಅನುಮಾನಿಸುವವರಿಗೆ (ಇವರ ಪ್ರಕಾರ ಶರಣ ಚಳುವಳಿ - ವಚನ ಸಾಹಿತ್ಯಗಳೆಂಬುವವೇ ಶೂನ್ಯ ಸಂಪಾದನಾಕಾರರ ಸೃಷ್ಟಿ!) ಜೊತೆಯಾಗಬಲ್ಲರೆಂದು ಕಾಣಿಸುತ್ತದೆ! ತಮ್ಮ ಅಭಿಪ್ರಾಯ ಅಥವಾ ನಂಬಿಕೆಗೆ ಪಥ್ಯವಾಗದ್ದರ ಮೇಲೆಲ್ಲ ದುರುದ್ದೇಶವನ್ನು ಆರೋಪಿಸಿ, ಅದನ್ನು ಅಳಿಸಹಾಕಬೇಕೆಂದು ಆಗ್ರಹಿಸುವ ಇಂತಹವರಿಗೆ ಬೇಕಾಗಿರುವುದು ಧರ್ಮವಲ್ಲವೆಂದು ಎಂಬುದು ಸ್ಪಷ್ಟ. ಏಕೆಂದರೆ, ಧರ್ಮ ಎಂದರೆ ಮೂಲತಃ ಆತ್ಯಂತಿಕ ಸತ್ಯದ ಹುಡುಕಾಟ. ಅದು ಬೆಳೆಯುವುದು ಅನುಭವ ಮಂಟಪದಲ್ಲಿ ನಡೆಯುತ್ತಿದ್ದಂತಹ ಧ್ಯಾನ - ಅಧ್ಯಯನ -ಬಿಚ್ಚು ಮನಸ್ಸಿನ ಚರ್ಚೆಗಳಿಂದಲೇ ಹೊರತು, ತಮ್ಮ ನಂಬಿಕೆಗಳ ಆಭದ್ರತೆಯ ಆತಂಕದಲ್ಲಿ ಶತ್ರು ಪಾಳೆಯವೊಂದನ್ನು ಕಲ್ಪಿಸಿಕೊಂಡು ಅಶಾಂತರಾಗುವುದರಿಂದಲ್ಲ. ಇರಲಿ, ಇವರು ಅನುಮಾನಿಸಿರುವ ವಚನ ಭಾಗ ಹಲವು ವಚನ ಸಂಪುಟಗಳಲ್ಲಿ ಲಭ್ಯವಿದ್ದು, ಅದನ್ನು ಉದಾಹರಣೆಗೆ ನಮ್ಮ ಕಾಲದ ಶ್ರೇಷ್ಠ ವೀರಶೈವ ವಿದ್ವಾಂಸರೆನಿಸಿರುವ ಡಾ||ಎಲ್.ಬಸವರಾಜು ಅವರು ಸಂಪಾದಿಸಿ ಬಹು ಜನಪ್ರಿಯವೂ ಆಗಿರುವ 'ಬಸವಣ್ಣನ ವಚನಗಳು' ಕ್ರತಿಯ 'ಮಾಹೇಶ್ವರ ಸ್ಥಲ' ಅಧ್ಯಾಯದ 391ನೇ ವಚನದಲ್ಲಿ ಓದಿ, ತಮಗಿಷ್ಟ ಬಂದಂತೆ ಅರ್ಥೈಸಿಕೊಂಡು ಸಮಾಧಾನಪಟ್ಟುಕೊಳ್ಳಬಹುದು ಎಂದು ತಿಳಿಸಬಯಸುತ್ತೇನೆ.
ಕಲ್ಯಾಣ ಕ್ರಾಂತಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳ ಬಗ್ಗೆ ನಮ್ಮಲ್ಲಿ ಹೆಮ್ಮೆ ಮೂಡಿಸುವಂತಹ ಮಹಾ ಘಟನೆ, ನಿಜ. ಹಾಗೇ ಇದರ ನಾಯಕತ್ವವನ್ನು ವಹಿಸಿದ್ದ ಬಸವಣ್ಣ ಕನ್ನಡ ಸಮಾಜಕ್ಕೆ ನಿರಂತರ ಸ್ಫೂರ್ತಿಕೇಂದ್ರವಾಗಬಲ್ಲವನೆಂಬುದೂ ನಿಜ. ಆದರೆ ಈ ಮಹಾಘಟನೆ ತನ್ನ ಉತ್ತುಂಗ ಸ್ಥಿತಿಯಲ್ಲಿ ಒಂದು ದೊಡ್ಡ ಸಂಚಿಗೆ ಒಳಗಾಗಿ ಸೋಲನ್ನು ಕಂಡಿತು ಎಂಬುದನ್ನೂ ನಾವು ನೆನಪಿನಲ್ಲಿಡಬೇಕು. ನಂತರ ಅದು ಜೀವವಿರಿಸಿಕೊಳ್ಳುವುದಿರಲಿ; ವ್ಯವಸ್ಥೆಯಲ್ಲಿ ಲೀನವಾಗಿ ಹೋಗಿ, ಈಗ ಒಂದು ವ್ಯವಸ್ಥಿತ ಜಾತಿಯ ರೂಪ ಪಡೆದು ಈ ಸೋಲನ್ನು ಶಾಶ್ವತಗೊಳಿಸಿಕೊಂಡಿದೆ ಎಂಬುದನ್ನೂ ಗಮನಿಸಬೇಕು. ಇದರ ಪರಿಣಾಮಗಳನ್ನು ಈ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳ ರೀತಿ - ನೀತಿಗಳಲ್ಲೂ ಗಮನಿಸಬಹುದಾಗಿದೆ. ಇದಕ್ಕೆ ಕಾರಣ, ಈ ಮಹಾಘಟನೆಯ ಸೋಲಿನ ಬಗ್ಗೆ ವಿಷಾದವೇ ಹುಟ್ಟದಂತಹ - ಆ ಮೂಲಕ ಯಾವುದೇ ರಚನಾತ್ಮಕ ಸಂಚಲನವೂ ಸಾಧ್ಯವಾಗದಂತಹ - ಒಂದು ಒಣ ಹೆಮ್ಮೆಯ ವಾತಾವರಣವನ್ನು ಸೃಷ್ಟಿಸುವ ಪಟ್ಟಭದ್ರ ಜಾತಿ ರಾಜಕಾರಣವನ್ನು, ಕಾಲಾನುಕಾಲದಿಂದ ಪೋಷಿಸಲಾಗುತ್ತಿರುವುದೇ ಆಗಿದೆ. ಇದನ್ನೇ ನಾನು ವೀರಶೈವ ಚಳುವಳಿಯ ಸಂಸ್ಥೀಕರಣ ಎಂದು ಕರೆದಿರುವುದು. ಇದರ ಪರಿಣಾಮವಾಗಿ ನಮ್ಮೆಲ್ಲರ ಹೆಮ್ಮೆಯ ಶರಣ ಚಳುವಳಿ ಒಂದು ಜಾತಿಯಾಗಿ ಅವನತಿಗೊಂಡು ನಮ್ಮ ಕಣ್ಮುಂದೆಯೇ ಪಡೆದುಕೊಳ್ಳುತ್ತಿರುವ ಆತಂಕಕಾರಿ ನೆಲೆಗಳನ್ನು ಸಂಕೇತಿಸುವಂತಿರುವ ಬಸವಣ್ಣನ ಇಂದಿನ ಮೂರ್ತೀಕರಣದ ವೈಖರಿಯ ಪ್ರಸ್ತಾಪ ಮಾಡಿರುವುದು. ಇದನ್ನು ಹೇಳಿದೊಡನೆ, ಇದನ್ನು ಕೆಟ್ಟದ್ದನ್ನೇ ಕಾಣುವ ಮನಸ್ಸಿನ ದೋಷವೆಂದೋ, ಸಿ.ಪಿ.ಐ. ತತ್ವವೆಂದೋ (ಹಾಗೆಂದರೇನೆಂದು ನನಗೆ ತಿಳಿಯದು!) ಬರೀ ಟೀಕಿಸಿದರೆ ಏನು ಉತ್ತರ ಕೊಡಲಾದೀತು? ನನ್ನ ಇಡೀ ಲೇಖನವೇ ಇಂತಹ ಸುಲಭ ತೀರ್ಮಾನಗಳಿಗೆ ಬರುವ ಪ್ರವೃತ್ತಿಯ ಅಪಾಯಗಳ ಬಗ್ಗೆಯೇ ಇರುವುದು ಎಂಬುದನ್ನು ಓದುಗರು ಗಮನಿಸುತ್ತಾರೆ ಎಂದು ಭಾವಿಸುತ್ತೇನೆ.
-ಡಿ.ಎಸ್.ನಾಗಭೂಷಣ