ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: ಸಂಗನಗೌಡ (May 18 2008 - 12:48pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: Prabhu Murthy (May 18 2008 - 10:48pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: hamsanandi (May 19 2008 - 12:52am)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: rameshbalaganchi (May 18 2008 - 4:23pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: ಸಂಗನಗೌಡ (May 20 2008 - 10:55pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: muralihr (May 18 2008 - 2:26pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: Sunil Jayaprakash (May 19 2008 - 10:06am)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: ವೈಭವ (May 18 2008 - 8:06pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: rameshbalaganchi (May 18 2008 - 4:27pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: Prabhu Murthy (May 18 2008 - 10:48pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: ವೈಭವ (May 18 2008 - 12:05am)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: rameshbalaganchi (May 18 2008 - 5:23am)


RSS:
ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
ರಮೇಶ್,
ನೀವು ಈ ಪದ್ಯಗಳನ್ನು ಇಲ್ಲ ಹಾಕಿದ್ದಕ್ಕೆ ಮತ್ತು ಅದನ್ನು ಬಿಡಿಸಿರುವುದಕ್ಕೆ ನನ್ನಿಗಳು.
--> "...ತೆನೆಯಿಂ ಕಾಲ್ಗೆಱಗುವ ಕೞವೆಗಳವೆಲ್ಲಿಯುಂ ಸೊಗಯಿಸುಗುಂ"
ಇದರ ಅರ್ತ ಹೀಗಿರಬಹುದೆ:-?
ಎಲ್ಲೆಲ್ಲಿಯೂ ಬತ್ತದ ಪಯಿರುಗಳು(ಕೞಮೆ) ತಮ್ಮ ತುದಿಗಳಿಂದ/ತೆನೆಗಳಿಂದ(ಇದರ ಮೂಲಕ) ಕಾಲ್ಗೆ ಎರಗುತ್ತಿದ್ದವು. ಇದು ಸೊಗಸಾದುದು
--> "...ಸಂಸ್ಕೃತ ಕವಿಗಳು ಮಾಡಿದ ತಪ್ಪನ್ನೇ ಕನ್ನಡ ಕವಿಗಳೂ ಮಾಡಿರುವುದನ್ನು ಇಲ್ಲಿ ಗಮನಿಸಬೇಕು. ತಾವರೆ, ನೈದಿಲೆಗಳಂಥ ನೀರಿನ ಹೂಗಳು ಮಲೆತ ನೀರುನಲ್ಲಿ ಬೆಳೆಯುತ್ತವೆಯೇ ಹೊರತು ಹರಿಯುವ ನೀರಿನಲ್ಲಲ್ಲ. ಈ ವಿಷಯ ಕನ್ನಡದ ಕವಿಗಳ ಗಮನಕ್ಕೂ ಬಾರದೆ ಹೋಯಿತೆ?! ..."
ಈ ಮಾತು ಸಿರಿವಿಜಯ(ಕವಿರಾಜಮಾರ್ಗಕ್ಕೆ) ಹೊಂದುವುದಿಲ್ಲ. ಕವಿರಾಜಮಾರ್ಗದ ಪರಿಚ್ಚೇದ - ೩, ೧೬೬ ನೆ ಕಂದಪದ್ಯ ಹೀಗಿದೆ.
ಬೆಳೆದೊಱಗಿದ ಕೞಮೆಗಳುಂ
ತಿಳಿಗೊಳದೊಳಗಲರ್ದ ಸರಸಿಜಪ್ರತತಿಗಳುಂ
ಕಳಹಂಸೆಗಳ್ಗೆ ಕೋಮಳ
ವಿಳಾಸವತಿಗಳ್ಗೆ ಪಡೆಗುಮೊಸಗೆಯನಾಗಳ್
ತಿರುಳು(ಎಮ್.ವಿ.ಸೀತಾರಾಮಯ್ಯನವರ 'ಕವಿರಾಜಮಾರ್ಗಂ" ಹೊತ್ತಿಗೆಯಿಂದ):
"ಬೆಳೆದು ಒಱಗಿದ (=ಬಾಗಿದ) ಕೞಮೆಗಳುಂ(=ಬತ್ತದ ಪಯಿರು) ತಿಳಿಗೊಳದೊಳಗೆ ಅಲರ್ದ(=ಅರಳಿದ) ಸರಸಿಜಪ್ರತತಿಗಳು(= ತಾವರೆಗಳ ಗುಂಪೂ), ಕಳಹಂಸೆಗಳ್ಗೆ ಕೋಮಳ ವಿಳಾಸವತಿಗಳ್ಗೆ (=ಇಂಪಾದ ಸ್ವರವುಳ್ಳ ಹೆಣ್ಣು ಹಂಸಗಳಿಗೂ ಕೋಮಲೆಯರಾದ ವಿಲಾಸವತಿಯರಿಗೂ), ಆಗಳ್ ಒಸಗೆಯಂ ಪಡೆಗುಂ(= ಆಗ ಸಂತೋಶವನ್ನು ಕೊಡುತ್ತಿದ್ದವು).
ಗಮನಿಕೆ:
೧) ಸಿರಿವಿಜಯನಿಗೆ ತಾವರೆಗಳು ತಿಳಿಗೊಳದಲ್ಲೇ ಬೆಳೆಯುತ್ತವೆ ಅಂತ ಗೊತ್ತಿತ್ತು
೨) ಆಂಡಯ್ಯ(ಎಱಗಿದ ಕೞಮೆ), ಸಿರಿವಿಜಯ (ಬೆಳೆದು ಒಱಗಿದ ಕೞಮೆ) ಬಗ್ಗೆಯೇ ಮಾತಾಡಿರುವುದು ಸೋಜಿಗ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು