ಹಾಸನದಲ್ಲಿ ಯೋಗ-ವೇದ-ಸಂಸ್ಕೃತ ಸಂಗಮ

ಹಾಸನದಲ್ಲಿ ಯೋಗ-ವೇದ-ಸಂಸ್ಕೃತ ಸಂಗಮ

     ಹಾಸನದ ವೇದಭಾರತಿ ಮೂರು ವರ್ಷಗಳನ್ನು ಪೂರ್ಣಗೊಳಿಸಿ ನಾಲ್ಕನೆಯ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಒಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. 5.08.2015ರಿಂದ 9.08.2015ರವರೆಗೆ 5 ದಿನಗಳ ಕಾಲ "ಯೋಗ-ವೇದ-ಸಂಸ್ಕೃತ ಸಂಗಮ" ಎಂಬ ಹೆಸರಿನಲ್ಲಿ ನಡೆಸುತ್ತಿರುವ ಕಾರ್ಯಕ್ರಮದ ವಿವರ ಹೀಗಿದೆ:

ಪ್ರತಿನಿತ್ಯ ಬೆ. 5.15ರಿಂದ6.30 ಮತ್ತು ಸಾ. 5.30ರಿಂದ 6.30ರವರೆಗೆ ಯೋಗ, ಪ್ರಾಣಾಯಾಮದ ಅಭ್ಯಾಸ - ನುರಿತ ಯೋಗಪಟುಗಳು ಮಾರ್ಗದರ್ಶನ ಮಾಡುವರು.

ಪ್ರತಿನಿತ್ಯ ಬೆ. 6.30ರಿಂದ 7.00 ಮತ್ತು ಸಾ.6.30ರಿಂದ 7.00 -  ಅಗ್ನಿಹೋತ್ರ

ಪ್ರತಿನಿತ್ಯ ಬೆ. 7.00ರಿಂದ 8.30 ಮತ್ತು ಸಾ. 7.00ರಿಂದ 8.30 - ಪೂಜ್ಯ ಸ್ವಾಮಿರಾಮರ ಶಿಷ್ಯರಾದ ಗುರೂಜಿ ಪಟ್ಟಾಭಿರಾಮರಿಂದ ಗಾಯತ್ರಿ ಮಹಾಮಂತ್ರದ ಅನುಷ್ಠಾನ, ಮಹತ್ವ, ಪರಿಣಾಮ, ಇತ್ಯಾದಿಗಳ ಕುರಿತು ಉಪನ್ಯಾಸಗಳು.

ಪ್ರತಿನಿತ್ಯ ಬೆ. 8.30ಕ್ಕೆ ಉಪಹಾರದ ವ್ಯವಸ್ಥೆ ಮಾಡಿದೆ.

9.08.2015ರ ಸಾ. 5.00ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಾ. 6.00ಕ್ಕೆ ಬೆಂಗಳೂರಿನ ಸಂಗೀತ ವಿದುಷಿ ವಿನಯ ವಿ.ಪ್ರಭು ಮತ್ತು ಬಳಗದವರಿಂದ ಭಕ್ತ ಸಂಗೀತ ಕಛೇರಿ ಏರ್ಪಡಿಸಿದೆ.

ಆಸಕ್ತರು ಸದುಪಯೋಗ ಪಡೆಯಬಹುದಾಗಿದೆ. ಎಲ್ಲರಿಗೂ ಆದರದ ಸ್ವಾಗತವಿದೆ.

-ಕ.ವೆಂ.ನಾಗರಾಜ್.

Comments

Submitted by kavinagaraj Thu, 07/30/2015 - 08:37

ಪ್ರಕಟಿಸುವ ಆತುರದಲ್ಲಿ ಪ್ರಮುಖ ವಿಷಯವನ್ನೇ ಸೇರಿಸುವುದು ಮರೆತಿದ್ದೆ. ಪ್ರತಿದಿನ ಬೆ.11.00ರಿಂದ ಮ.1.00 ಮತ್ತು ಮ.3.00ರಿಂದ 5.00ರವರೆಗೆ ಸಂಸ್ಕೃತ ಸಂಭಾಷಣಾ ಕಲಿಕಾ ಶಿಬಿರವೂ ಏರ್ಪಾಡಾಗಿದೆ. ಈ ಮಾಹಿತಿ ಸೇರಿಸಿ ಓದಿಕೊಳ್ಳಲು ವಿನಂತಿ.

Submitted by Nagaraj Bhadra Fri, 07/31/2015 - 09:32

ಯೋಗ-ವೇದ-ಸಂಸ್ಕೃತ ಈ ಮೂರು ಇಂದಿನ ಯುವ ಪೀಳಿಗೆಗೆ ಅತ್ಯಂತ ಅವಶ್ಯಕತೆಯಿದೆ.ಇವು ಭಾರತದ ಇತಿಹಾಸವು ಬಿಂಬಿಸುತ್ತವೆ.ಒಳ್ಳೆಯ ಕಾರ್ಯಕ್ರಮ ಸರ್.

Submitted by swara kamath Fri, 07/31/2015 - 17:02

ಆತ್ಮೀಯ ಕವಿನಾಗರಾಜರಿಗೆ ನಮಸ್ಕಾರಗಳು.
ಸಮಾನ ಮನಸ್ಕರೆಲ್ಲರೂ ಒಂದೆಡೆ ಸೇರಿ ಹುಟ್ಟುಹಾಕಿದ 'ವೇದಭಾರತಿ'ಗೆ ಈಗ ನಾಲ್ಕರ ಹುಟ್ಟುಹಬ್ಬದ ಸಂಬ್ರಮ.ನಾನು ಸಹ ನಿರಂತರ ವೇದಭಾರತಿಯ ನಡಾವಳಿಗಳನ್ನು ಅದರ ಬ್ಲಾಗ್‍ ಪೇಜ್ ನಲ್ಲಿ ಓದಿ ಮನಗಂಡಿದ್ದೇನೆ..ದಿನಾಕ 5-8-2015 ರಿಂದ ನಡೆಯಲ್ಪಡುವ ವಿಶೇಷ ಕಾರ್ಯಕ್ರಮವು ಸುಂದರವಾಗಿ ಅತ್ಯಂತ ಯಶಸ್ವಿಯಾಗಿ ಆಚರಿಸಲ್ಪಡಲಿ ಎಂದು ಶುಭಕೋರುತ್ತೇನೆ.
ಮತ್ತೊಮ್ಮೆ ವಂದನೆಗಳು.......ರಮೇಶ ಕಾಮತ್.

Submitted by kavinagaraj Fri, 07/31/2015 - 21:06

In reply to by swara kamath

ಧನ್ಯವಾದಗಳು, ರಮೇಶಕಾಮತರೇ. ವೇದಭಾರತಿಯ ಸಮಾಜಮುಖಿ ಕಾರ್ಯಗಳಿಗೆ ಎಲ್ಲರ ಬೆಂಬಲ ಸಿಗುತ್ತಿರುವುದೂ ನಮಗೆ ಸಂತಸ ತಂದಿದೆ.