ಸಂಕಲ್ಪದ ಸಂಕೋಲೆ

ಸಂಕಲ್ಪದ ಸಂಕೋಲೆ

ಸಂಕಲ್ಪದ ಸಂಕೋಲೆ - ಮಹೇಶ ಕಲಾಲ ಯಾದಗಿರಿ

ಹಳದಿ ದೀಪ ಮಿನುಗುತ್ತಿದ್ದಂತೆ ರಘು ಕಿಟಾರನೆ ಕಿರುಚಿದ. ಹೊರ ಬಾಗಿಲ ಬಳಿ ಕುಳಿತಿದ್ದ ರಂಗಮ್ಮ ಮಗನಿಗೆ ಏನಾಯ್ತು ಎಂದು ಓಡೋಡಿ ಮನೆಯ ಒಳಗೆ ಬಂದಳು. 
ಮಗ ಮೂಲೆಯಲ್ಲಿ ಒಬ್ಬನೆ ಏನೇನೋ ಎಣಿಸುತ್ತಿರುವಂತೆ ತಾನೋಬ್ಬನೆ ತನ್ನ ಬೆರಳನ್ನು ಹಿಂದೆ ಮುಂದೆ ಮಾಡುತ್ತಿರುವದನ್ನು ನೋಡಿ ರಂಗಮ್ಮನ ಮಾತೃ ಹೃದಯ ಕಿವಿಚಿದಂತಾಗಿ ಹಾಗೆ ನೆಲಕ್ಕುರುಳುವಂತೆ ಕುಳಿತುಬಿಟ್ಟಳು.
ಕೆಲವು ವರ್ಷಗಳಿಂದ ನಡೆದು ಬಂದ ಸಂಪ್ರದಾಯದಂತೆ ದಿನಾ ಸಂಜೆ ಕರೆಂಟ್ ಬರುವದು ರಘು ಹೀಗೆ ಚೀರುವುದು ರಂಗಮ್ಮನಿಗೆ ರೂಢಿಯಾಗಿದ್ದರು. ದಿನಾ ಹೊಸದರಂತೆ ಭಯಪಡುತ್ತಿದ್ದಳು. ಅವಳ ಭಯಕ್ಕಿಲ್ಲದ ಅಂತ್ಯಕ್ಕೆ ತತ್ತರಿಸಿದ ಆ ಜೀವ ಶೀವನೆ ಯಾಕಾದರೂ ನನ್ನ ಈ ರೀತಿ ಬದುಕಿಸಿದ್ದಿಯಾ ಎಂದು ಶೀವನಲ್ಲಿ ಕರುಣಾಭಾವದಿಂದ ಕೈಮುಗಿದು ಕುಳಿತಿದ್ದಳು. 
ರಘು ರಘು ಬಾ ಮಗ ಎಲ್ಲಿದ್ದಿಯಾ ನಿನ್ನೆ ನಿಮ್ಮಪ್ಪ ಕೊಟ್ಟ ದುಡ್ನ ಕಳುವು ಮಾಡಿದೇನಾ ಪಲ್ಯಾ ತರಲಿಕ್ಕೆ ಬೇಕೋ ಅದು ಎಂದು ಒಂದೇ ಉಸಿರಿನಲ್ಲಿ ರಂಗಮ್ಮ ತನ್ನ ಮಗನಿಗೆ ಕರೆಯುತ್ತಿದ್ದಳು.
ಇಗಾ ಅದು ಎಲ್ಯಾದ ಅಂತ ಹೇಳ ಇಲ್ಲಂದ್ರ ನೀನಗ ಸಾಲಿಗೆ ಕಳಸಲಿಕ್ಕಾ ಡಬ್ಬಿ ತುಂಬಂಗಿಲ್ಲ ನೋಡ. ಉಪಾಸ ಇರಬೇಕಾಗತದ. ಎಂದು ಒಂದೇ ಸಮನೆ ತಾಯಿ ಮನೆಯ ಒಳಗಿಂದ ಕರೆಯುತ್ತಿದ್ದ್ರು. ರಘು ತಾ ಕುಳಿತಲ್ಲಿಂದ ಮೇಲೆಳಲೇ ಇಲ್ಲ. ಅವ ತನ್ನ ಆಟದಲ್ಲೆ ಮಗ್ನನಾಗಿದ್ದ.
ಹೊರಗಡೆಯಿಂದ ಬಂದ ರಂಗಪ್ಪ ಏ ರಘ್ಯಾ ನಿಮ್ಮವ್ವ ಅಷ್ಟು ಕರಿತಾಳ ಗ್ಯಾನ್ ಎಲ್ಲಿ ಆದಲೇ ನಿಂದು ಕಳ್ಳನನ್ನ ಮಗನೆ ಎಂದು ಹೊಡೆಯಲು ಬಡಿಗಿ ತೆಗೆದುಕೊಂಡು ಬಂದದನ್ನು ನೋಡಿದ ಕೂಡಲೇ ರಘು ಎದ್ದು ಮನೆಯೋಳಗೆ ಓಡಿದ. ಹೇ ಏನ್ ಮಾಡಲಕತ್ತಿದಿ ಅಲಾ ನೀರ್ ತಾಂಬ ಎಂದು ಹೆಂಡತಿಗೆ ದಬಾಯಿಸಿದ.
ಅಯ್ಯಾ ಏನ್ ಅಷ್ಟೊಂದು ಬಾಯ್ಬಡ್ಕಂತಿದಿ ಇರಾ, ಹುಡಗಾ ಇನ್ನ ಸಾಲಿಗಿ ಹೋಗಿಲ್ಲ. ಅವನಿಗೆ ಏನಾರಾ ಮಾಡಮಂದ್ರ ಮನ್ಯಾಗ ಪಲ್ಯಾನ ಇಲ್ಲ. ವಾದ್ ವಾರ ತಂದ ಪಲ್ಯಾನಾ ಇಲ್ಲಿತನಕ ಆಯ್ತ. ಈ ವಾರ ಸಂತಿಗಿ ಹೋಗಿ ತರಬೇಕಂದ್ರ ಮನ್ಯಾನ ಕೆಲಸ ಬಿಡಂಗಿಲ್ಲ ನೀಯಾರ ಮನಿಕೆಲಸ ಮಾಡದಕ್ಕಿಂತ ಮಂದಿ ಚಾಕ್ರಿ ಮಾಡತಿದಿ ಎಂದು ವಟಗುಟ್ಟುತ್ತ ನೀರ ತಂದ ಗಂಡನ ಕೈಯ್ಯಲ್ಲಿಟ್ಟಳು. 
ಏ ನಿಮ್ಮಪ್ಪ ಆಸ್ತಿ ಕೊಟ್ಟಾನೇನಲೇ ಇಷ್ಟು ಮಾತಾಡತಿ ಎಂದು ರಂಗಪ್ಪ ಬುಸುಗುಟ್ಟಿದನು. ಆಹಾ ಆಸ್ತಿ ಕೊಡತಾನಾ ನೀನ್ ಮಾರಿಗಿ ನನ್ನ ಕೊಟ್ಟದ್ದ ಸಾಕಾಗ್ಯಾದ ತಗಾ ಉಣ್ಣುವಂತಿ ಬಾ ಹೊತ್ತಾಗ್ಯಾದ ಎಲ್ಲಿ ಚಾಕ್ರಿ ಮಾಡಕ್ಹೋಗಿದಿ ಎಂದು ಗಂಡನನ್ನ ದಬಾಯಿಸಿದಳು.
ಎಲ್ಲಿ ಇಲ್ಲಲೇ ಮುಂದಿನ ವರ್ಷ ನಮ್ ರಘುನಾ ಪಟ್ಣಕ್ ಸಾಲಿಗಿ ಹಾಕಬೇಕಲ್ಲ. ಗೌಡನ ಮಗಾ ಅಲ್ಲೆ ಸಾಲಿ ಓದತಾನಲ್ಲ ಅದಕಾ ಗೌಡರ ಮನಿಗಿ ಹೋಗಿದ್ದೆ ಎಂದು ಹೆಂಡತಿಗೆ ಹೇಳಿದ.
ಏನಂದ್ರ ಗೌಡ್ರು, ಎಂದು ನಡುವೆ ಬಾಯಿ ಹಾಕಿದಳು. ತಡಿಲೇ ಹೇಳೋ ಮಟ. ಮಗ ಅಂದ್ರ ಅಷ್ಟು ಬಹಳ ಪ್ರಾಣ ನೋಡ ನಿಂಗ. ಹಿಂಗಾದ್ರ ಸಾಲಿ ಕಲಸ್ಲಿಕ್ಕಾಗತಾದ. ಅಲ್ಲಾ! ಅಂವಾ ನನಗ ಒಬ್ಬ ಮಗ ಅಲ್ಲ ನಿನಗ ಕೂಡ ಮಗ ಅಂತ ಮರತಿಯೇನ್. ಎಳ್ಳವiವಾಸಿ ಹಬ್ಬಕ್ಕ ನಮ್ ಗೌರಾ ಬರ್ತಾಳಂತ. ಎನ್ನುತ್ತಲೆ ಯಾರೆಳಿದ್ರ ಅಂತ ಆಶ್ಚರ್ಯದಿಂದ ಕೇಳಿದ ರಂಗಪ್ಪ.!! 
ಬ್ಯಾಡರ ಬಸ್ಸಪ್ಪ ಸಂತಿಗಿ ಹೋದಾಗ ಅಕಿ ಗಂಡಾ ಇಂವಾಗ ಬೇಟ್ಟ್ಯಾಗಿದ್ದನಂತ ಅವಾಗ ಹೇಳಿದ್ನಂತ. ಸಾಕ್ ಸಾಕ್ ಮಗಳ ಮಾತಿನಾಗ ಊಟಕ್ಕೇಳದ ಮರತ್ಯಲ್ಲ ಎದೇಳ ಉಂಡೋಗು ಎಂದು ತಡಬಡಸಿ ಎದ್ದಳು.
ಅನಿವಾರ್ಯತೆ ಮತ್ತು ಅತಂತ್ರ ಮನುಷ್ಯನಲ್ಲಿರುವ ಅಹಂಕಾರ ಮತ್ತು ಸಿಟ್ಟನ್ನು ಒಡೆದೋಡಿಸಿ ಅವನನ್ನ ಅಧಿರನ್ನಾಗಿಸುತ್ತದೆ ಎನ್ನುವುದು ನಿಜ.
ಕಳೆದ ಕೆಲವು ತಿಂಗಳ ಹಿಂದೆ ಯಾವುದೋ ಸಣ್ಣ ವಿಷಯಕ್ಕ ಮಾವನ ಮನೆಯಲ್ಲಿ ಹತ್ತಿದ ಜಗಳ ದೊಡ್ಡದಾಗಿ ನಡೆದಿತ್ತು. ಆ ಸಂದರ್ಭದಲ್ಲಿ ಶಿವಪ್ಪ ಮಾವನ ಮನೆ ಬಿಟ್ಟು ತನ್ನ ಹೆಂಡತಿನ ಕರೆದುಕೊಮಡು ಊರಿಗೆ ಹೋಗುವಾಗ ಈ ಜನ್ಮದಾಗ ನಿಮ್ಮ ಹೊಸ್ತಿಲ ತುಳಿಯಂಗಿಲ್ಲ ತಿಳಿರಿ ಎಂದು ಸಿಟ್ಟಿಲೇ ಹೋರಹೋಗಿದ್ದ. ಈಗ ಅನಿರ್ವಾತೆಯಿಂದ ಮಾವನ ಮನಿಗೆ ಹೋಗಲೇಬೇಕಾಗಿ ಬಂದಿದೆ. 
ಮಗಳು ದೊಡ್ಡವಳಾಗಿ ಎದಿಮ್ಯಾಗ ಕುಂತಾಳ ಹೆಂಗಾರ ಮಡಿ ಅಕಿನ ಒಬ್ಬಾಕೀನ ಸಾಗ ಹಾಕಿದರ ಸಾಕಾ ಎಂದ ಹೆಂಡತಿ ಮಾತಿಗೆ ಶಿವಪ್ಪ ಸುಮ್ಮನೆ ಕುಳಿತಲ್ಲೆ ತಲೆಯಾಡಿಸಿದ.
ಅಲ್ರಿ ಸುಮ್ಮನೆ ಕುಂತಿರಲ್ಲ ಮಾತಾಡ್ರಿ ಅಂತ ಹೆಣ್ತಿ ಅಂದಾಗ ಅಲ್ವೆ ನಮ್ಮ ಸ್ವಾರ್ಥಕ್ಕ ಪರರನ್ನ ಅಷ್ಟೆ ಏಕೆ ನಮ್ಮವರನ್ನು ಕೂಡ ಸಮಯಕ್ಕೆ ಸರಿಯಾಗಿ ಬಲಿಕೋಡಬೇಕಾಗುತ್ತದಲ್ಲ ಎಂಬ ಚಿಂತೆ ನನಗೆ ಎನ್ನುವ ಗಂಡನ ಮಾತು ಕೇಳಿ ಕ್ಷಣಕಾಲ ದಿಗ್ಬ್ರಾಂಥಳಾಗಿ ಅಲ್ರಿ. 
ನಾವೇನು ಅವರಿಗೆ ಮೋಸ ಮಾಡ್ಲಿಕತ್ತಿಲ್ಲವಲ್ಲ. ನನ್ನ ಮಗಳು ಗೌರಮ್ಮ ಆಗ್ಯಾಳ. ಇನ್ನ ನೋಡಿದ್ರ ನಮ್ಮ ರಘುನಾ ಅವಳಿಗೆ ಒಪ್ಪಲ್ಲ. ಯಾಕ ನಮ್ಮಪ್ಪನ ಆಸ್ರಿ ಬ್ಯಾರೆಯೋರಿಗೆ ಆಗುತ್ತಲ್ಲ. ಅಂತ ಮನಸ ಮಾಡಿನಿ ಅಂದ ಹೆಣ್ತಿ ಮಾತಿಗೆ ಸುಮ್ಮನೆ ಮುಗುಳ್ನಕ್ಕ.
ಹೇ ಈ ಸರತಿ ಊರಿಗಿ ಹ್ವಾದ ಮ್ಯಾಲ ನಿಮ್ಮಪ್ಪ ಅವ್ವನ ಜೋಡಿ ಮಾತಾಡಿ ಬಾ ನೋಡ. ಇಲ್ಲಂದ್ರ ನಮ್ಮ ಸಂಗುಗಾ ಬ್ಯಾರೆ ಕಡೆ ವರ ನೋಡಿತಿನಿ ನೋಡ ಎಂದು ಶಿವಪ್ಪ ತನ್ನ ಹೆಂಡತಿ ಗೌರಮ್ಮನಿಗೆ ಹೇಳುತ್ತಿದ್ದಂತೆ. 
ಅಲ್ರಿ ನಾನೆ ಆ ಮಾತಂದ್ರ ನೀ ಸ್ವಾರ್ಥ ಗೀರ್ಥ ಅಂತಂದ್ರಿ ಈಗ ನಿವೇ ಇಂಗಂತಿರಲ್ಲ ಅಲ್ವೆ ಹಾಗೆ ಅನ್ನೋದು ಮತೆ ಹೇಳಾಕ ಆಚಾರ ಅನ್ನೋದು ಬದನೆಕಾಯಿ ತಿನ್ನೋದು.
ಮೊದ್ಲ ಆ ಕೆಲಸ ಮಾಡ್ ನೋಡು ಇಲ್ಲಂದ್ರ ಕೈಮಿರಿ ಹೋಗತಾದ. ತಡರ್ರಿ ಯಾಕ್ ಹಂಗ ಮಾಡತಿರಿ ಈಗೇನ್ ಅಕಿ ದೊಡ್ಡಾಕಿ ಆಗಿ ಇನ್ನ ತಿಂಗಳ ಕಳಿದಿಲ್ಲ. ಅಲ್ಲಲೇ ಹುಚ್ಚುಕ್ವಾಡಿ ಹೀಗ್ಯಾ ಹೇಳಿಡದಪಾ ಮುಂದಿನ ವರ್ಷ ಮದವಿ ಮಾಡಲಿಕ್ಕಾಗತದ ಇಲ್ಲಂದ್ರ ನಿಮ್ಮಪ್ಪ ರಘುಗ ಪಟ್ನಕಾ ಸಾಲಿಗಿ ಹಾಕತಾನಂತ ಮೊನ್ನಿ ಸಂತ್ಯಾಗ ಬ್ಯಾಡರ ಬಸ್ಸಪ್ಪ ಹೇಳಿದ. 
ಛಲೋ ಆತಲಾ. ಏನ್ ಛಲೋ ಆತು ಅವ ಪಟ್ನಕ್ ಹೋಗತಾನ ಅಲ್ಲಿ ಸಿಟಿ ಹುಡಿಗಿ ಹಿಂದ ಬಿದ್ದ ನಿನ್ನ ನಿನ್ನ ಮಗಳನಾ ಯಾರಂತ ಕೇಳತಾನ ಅವಗ ಏನ್ ಮಾಡ್ತಿ. ಅವಿವೇಕಿನ ತಂದು. ಮೊದ್ಲ ಊರಿಗಿ ಹೋಗ ನಾಳೆ ಎಂದು ಶಿವಪ್ಪ ಹೆಂಡತಿಯ ಕಿವಿಯೂದಿದ. ಆತರಿ. ಇಲ್ಲಂದ್ರ ಎಲ್ಲ ಕೆಟ್ಟಹೋಗತಾದ ನೋಡ್ರಿ ಎಂದಳು.
ಏವ್ವಾ ಅಕ್ಕ ಬಂದಳಾ ನೀರ ತಾಂಬ. ಯಾಕ ರಘಪಾ ನೀ ದೊಡ್ಡಂವಾ ಆಗಿಯೇನ್ ನೀ ನೀರ್ ತರದಬಿಟ್ಟು ಅವ್ವಂಗ ಹೇಳಿತಿ. ಲಗ್ನಕ್ ಬಂದಿಪ. ಎಂದು ಅಕ್ಕ ಮಗನಿಗೆ ದಬಾಯಿಸೊದು ನೋಡಿ. ಏ ಗೌರವ್ವಾ ನಿಂಗ ಅವನ ಲಗ್ನದ ಚಿಂತಿ ನೋಡ. ಬ್ಯಾಡ ಬ್ಯಾಡ ಅಂದ್ರ ನಾಕ್ ಹೆಣ್ಣ ಹಡದಿ ಕುಂತಿ. ಈಗ ಪಾರಗ ಲಗ್ನಗಿಗ್ನ ಅಂತ ತಲಿ ತುಂಬಸಾಕ ಬಂದೇನ್. ಎನ್ನುತಾ ಅವರವ್ವ ರಂಗಮ್ಮ ಹೊರಬಂದಳು.
ಯಾಕಂಗೆ ಇವಂಗ ಲಗ್ನ ಮಾಡಲ್ಲೇನ್ ಮತಾ. ಇಲ್ಲವಾ ಅವರಪ್ಪ ಅವಂಗ ಪಟ್ನಕಾ ಸಾಲಿಗಿ ಹಾಕ್ತನಂತ. ಅಲ್ಲಿ ಸರಕರ ಹಾಸ್ಟೇಲ್ ಆದ ಎಲ್ಲ ಫ್ರಿ ಅಂತ ಗೌಡರ ಹೇಳ್ಯಾರಂತ ಅದಕಾ ಗೌಡರ ಮನಿಗಿ ಹೋಗ್ಯಾನ ನಿಮ್ಮಪ್ಪ. ಕರೆಕ್ಟ್ ಟೈಮಿಗಿ ಬಂದಿನಿ ನೋಡ ನಾ ಇಲ್ಲಂದ್ರ ನನ್ ಗಂಡಂದಂಗ ಇವ್ರ ಕೆಲಸ ಕೆಡಿಸಿಡತಿದ್ರ ಅಂತ ಮನಸಿನ್ಯಾಗ ಲೆಕ್ಕ ಹಾಕಿದ ಗೌರಮ್ಮ. ಏ ರಘು ಅಪ್ಪನಾ ಕರದಬಾ ಹೋಗೋ. ಅಂದಳು.
ಹೇ ಇನ್ನ ಇರತಿಯಲ್ಲ ಬರಲಿಬಿಡು ರಾತ್ರಿ ಬರತಾನಾಲ್ಲ ಅವಗ ಮಾತಾಡವಂತಿಗಿ ಎಂದ ಅವರವ್ವನ ಮಾತ ಕಿವಿಗಿ ಹಾಕಿಕೊಳ್ಳದೆ. ಹೋಗು ಅಕ್ಕ ಬಂದಾಳ ಅಂತ ಹೇಳ. ಅತಗಾ ನನಗಿಂತ ಕೆಲಸ ಜಾಸ್ತಿ ಏನ್ ಎಂದು ತಮ್ಮನ ದಬಾಯಿಸಿದಳು.
ಯಾಕವಾ ಗೌರವ್ವ ಇಷ್ಟ ಜಲ್ದಿ ಬಂದ್ಯಲಾ ಮತ್ತೇನ ಲೆಕ್ಕಾ ಹಾಕ್ಕೊಂಡ ಬಂದಿ ಅಸಾಲಿ ಬಂದಾಗ ಜ್ವಾಳ ಇಲ್ಲಂತ ಜ್ವಾಳ ವೈಯಿದಿ. ಈಗ ಏನ್ ಬೇಕ. ರೊಕ್ಕಗಿಕ್ಕ ನಮ್ಮಲ್ಲಿ ಇಲ್ಲ ನೋಡವಾ ನಮ್ಮಗಾ ಮಗನ್ ಸಾಲಿಗಿ ರೊಕ್ಕಿಲ್ಲ. ಗೌಡರಂತ್ಯಾಕ ಸಾಲ ಕೇಳಿ ಬಂದಿನಿ ಎನ್ನುತ್ತಾ ಮನೆಯ ಒಳಗಡೆ ಬಂದನು. 
ರೊಕ್ಕ ನನ್ಗಂಡನಲ್ಲಿ ಬಾಳ ಅದಾಂವಾ ನಿ ಏನ್ ಕೊಡದಾ ಬ್ಯಾಡ ನೋಡ. ನಾವ ನಿನಗ ಕೊಡತಿವಿ. ಹಂಗಾರ ಕೊಡ ಮತ್ಯಾ ಗೌಡನಲ್ಲ್ಯಾಕ ಸಾಲ ಮಾಡದ ಬಡ್ಡಿಗಿಡ್ಡಿ ಅಂತ ಬಾಳ್ ತ್ರಾಸ್ ಆಗತಾದ ನಮಗಾ ಎಂದು ತನ್ನ ನೋವನ್ನು ರಂಗಪ್ಪ ಮಗಳ ಹತ್ತಿರ ತೊಡಿಕೊಂಡನು.
ಏನಪ್ಪ ನೀನು ಇಷ್ಟು ವಿಷಯಕ್ಕೆಲ್ಲ ಕಣ್ಣಿರು ತೆಗಿತಿಯಲ್ಲ. ಅಷ್ಟಕ್ಕ ನಾವಿಲ್ಲೇನು. ಯಾಕ್ ಚಿಂತಿ ಮಾಡ್ತಿದಿ, ಹೆಂಗೊ ನಿನ್ನ ಅಳಿಯ ಹಬ್ಬಕ ಬರ್ತಾನಲ್ಲ ಏನಾರ ಒಂದು ವಿಚಾರ ಮಾಡೋಣಂತ ಎಂದು ಸಮಸ್ಯೆ ಬಗೆಹರಿಸುವದರ ಜೊತೆ ತನ್ನ ಬಯಕೆ ಇಡೇರಿಸಿಕೊಳ್ಳುವ ವಿಚಾರವನ್ನು ನಿಧಾನವಾಗಿ ಗೌರವ್ವ ತನ್ನ ತಂದೆ ಹತ್ತಿರ ಬಿತ್ತರಿಸಿದಳು.
ರಾತ್ರಿ ಊಟ ಮಾಡಿ ಮಲಗುವ ವೇಳೆ ತಂದೆಯ ಹತ್ತಿರ ಬಂದ ಕುಳಿತ ಗೌರವ್ವ ಎಪ್ಪಾ ಹೆಂಗೋ ರಘು ದೊಡ್ಡವ ಆಗ್ಯಾನ ನನ್ ಮಗಳು ದೊಡ್ಯಾಕಿ ಆಗ್ಯಾಕತ್ಯಾಳ. ಇದೇ ವೇಳೆದ್ಯಾಗ ನಾವ್ ಯಾಕ ಅವರಿಗೆ ಲಗ್ನ ಮಾಡಬಾರದು ಎಂದು ಸಣ್ಣಗೆ ದನಿ ಎತ್ತಿದಳು.
ಅಲವಾ ಗೌರವ್ವ ನಾ ಇನ್ನ ಅವನಿಗೆ ಓದಿಸಬೇಕು ಅಂತ ಮಾಡಿನಿ ನೀ ನೋಡಿದ್ರ ಅವನಿಗೆ ಲಗ್ನ ಗಿಗ್ನ ಅಂತ ತಲೆ ತುಂಬೊ ವಿಚಾರ ನಡಿಸಿಯಲ್ಲ. ಅಲ್ಲಪ್ಪ ಹೆಂಗೊ ನಿನಗೂ ರೊಕ್ಕದ ಸಮಸ್ಯೆ ಆದ ಆದ್ರ ಇಬ್ರಿಗಿ ಲಗ್ನ ಮಾಡಿದ್ರ ನಾವು ಅಲ್ಲೆ ಬೆಂಗಳೂರಿನ್ಯಾಗ ನಮ್ಮ ಮಗಳ ಜೋಡಿನಾ ರಘುಗ ಕೂಡ ಸಾಲಿ ಕಲಸ್ತಿವಿ. ಅವಾ ನನ್ನ ತಮ್ಮ ಅಲ್ಲೇನು. ಹೆಂಗಿದ್ರೂ ನಮ್ ಸಂಗುಗಾ ಅವನಿಗೆ ಕೊಡಬೇಕು ಅಂತ ಹೆಸರಿಟ್ಟಿವಲ್ಲ. ಇಬ್ರುನು ಓದಿಸ್ತಿವಿ ಏನಂತಿ? ಮಗನಿಗೆ ಓದಿಸುವ ನಿನ್ನ ಆಸೆನೂ ಇಡೇರುತ್ತೆ. ಈಗ್ಲೆ ಮಕ್ಕಳ ಲಗ್ನನೂ ಮಾಡಿದಂಗ ಆಗುತ್ತದಲ್ಲ. ಅದು ಸರಿಯವ್ವ ನಿಮ್ಮವ್ವ ಏನಂತಳೇನು. ಹೇ ಅಕಿ ಏನಂತಳಾ ಬಿಡಪಾ ಅಕಿನಾ ಒಪ್ಪಿಸೋ ಜವಾಬ್ದಾರಿ ನನಗಾ ಬಿಡು ಅಂದು ಮಲಗಲು ಎದ್ದು ಹೋದಳು.
ಏನ್ ರಂಗ ಮಗನಾ ಸಾಲಿಗಿ ಹಾಕಕ ರೊಕ್ಕ ಬೇಕು ಅಂದು ಈಗ ಮಗನಿಗೆ ಲಗ್ನ ಮಾಡಕತ್ತಿದಿಯಂತಲ್ಲ. ಇಲ್ರೀ ಗೌಡ್ರಾ. ಹೆಂಗೋ ನಮ್ಮ ಗೌರವ್ವನ ಮಗಳನಾ ಅವನಿಗಿ ತೆಗಿಬೇಕು ಅಂತ ಮಾಡಿದ್ದಿವಿ. ಅವರು ಬೆಂಗಳೂರನಲ್ಲಿರುತ್ತಾರಲ್ಲ ಈ ಹಬ್ಬಕ್ಕ ತಮ್ಮೂರಿಗಿ ಬಂದರಾ. ಒಮ್ಮಿಗೆ ಲಗ್ನ ಮಾಡಿಕೊಂಡು ಹೋಗ್ತಿವಿ ಅಂದ್ರು ಇಬ್ರು ಮಕ್ಕಳಿಗಿ ಅಲ್ಲೆ ಸಾಲಿ ಕಲಿಸ್ತಿವಿ ಅಂದ್ರ ಅದಕಾ ತಡ ಯಾಕ ಮಾಡೋದು ಅಂತ ಲಗ್ನ ಹಿಡದಿವಿ ಗೌಡ್ರ. ಸರಿಯಪ್ಪ ನಿನಗ ತಿಳದಂಗ ಮಾಡು. ರೊಕ್ಕ ಏನಾರ ಬೇಕಿದ್ರ ಮನಿಕಡಿ ಬಾ. ಎಂದು ಗೌಡ್ರು ಹೇಳಿ ಮನೆಕಡೆ ಹೊದರು.
ಹೇ ನೀರಿಗಿಟ್ಟಿನಿ ಬರ್ರಿ ಜಲ್ದಿ ಹೊತ್ತಾಗ್ಯಾದ ಊಟ ಮಾಡಾದಿಲ್ಲ ಅಂತ ಗೌಡಶ್ಯಾನಿ ಮನೆಯೊಳಗಿಂದ ಕರೆದಳು. 
ಹೇ ತಡಿಲೇ ಸ್ವಲ್ಪ ಆ ರಂಗಪ್ಪ ಬರತೀನಿ ಅಂತ ಹೇಳ್ಯಾನ. ಯಾಕಂತ ಹೇ ಇರತಾವಲೇ ಕೆಲಸ ಹೊಲದ ಬಾಜು ಹೊಲ ಆದಾವ ಒಬ್ಬರಿಗೊಬ್ಬರು ಸಮಯಕ್ಕೆ ಸರಿಯಾಗಿ ಆಗ್ಲಿಲ್ಲ ಅಂದ್ರ ಹೆಂಗ.
ಪ್ಯಾಲಿ ಉಚ್ಚಪ್ಯಾಲಿ ನಿನಗೇನು ಗೊತ್ತಾಗತದ. ಬರಿ ಉಣ್ಣೋದು ನಿಮ್ಮಪ್ಪನ ಮನಿ ಉದ್ರಿ ಪೌರುಷ ಹೇಳ್ಕಾಂತ ಕುಂಡ್ರೊದು. ಅದು ಬಿಟ್ರ ನಿನಗೇನ್ ಗೊತ್ತಾದಲೇ ಅರಿವಿಲ್ಲದ್ಯಾ.
ಆ ಗೋತ್ತತ್ ಬಿಡ್ರಿ ನಮ್ಮಪ್ಪಗ್ ಒಂದ್ ದಾರಿ ಕಾಣಿಸಿದ್ರಿ ಈಗ ಅಂವ ರಂಗಪ್ಪ ಹುಚ್ಚ ನಿನ್ನ ಕೈಯಾಗ ಸಿಕ್ಕನಾ ಅವನ ದೇವರೇ ಕಾಪಾಡಬೇಕು.
ಶಿವ ಶಿವಾ ರಂಗಾ.
ಹೆಂಗಾರ ಮಾಡಿ ಒಂದಿಷ್ಟು ಸಾಲ ಕೊಟ್ಟಂಗ ಮಾಡಿ ರಂಗಪ್ಪನ ಮಗನ ನಮ್ಮ ಹುಡುಗನಗೂಡ ಜತಿಗೆ ಸಾಲಿಗೆ ಹಾಕಿಸಿದ್ರ ನಮ್ಮ ಹುಡುಗಂಗೆ ಜತಿನಿ ಆತು ಅವನಿಗೆ ಗೆಳೆಯ ಸಿಕ್ಕಂಗಾತು. ಅವನಿಗೆ ಸಾಲ ಕೊಟ್ರ ಯಾವಾಗಾರ ಕೂಲಿ ನಾಲಿಗಿ ಅಂತ ಒಂದ್ ಆಳ್ ಸಿಕ್ಕಂಗಾತು.
ಈಗಬ್ಯಾರಿ ಕೂಲಿ ಆಳು ಸಿಗುವಲ್ಲವು ಕೊಟ್ಟ ಸಾಲ ಎಲ್ಲಿಗಿ ಹೋಗತಾದ ಬಡ್ಡಿ ಸಮೇತ ಬರತಾದ. ಅವರು ಬಹಳ ಸಂಭಾವಿತ ಮಂದಿ ಆದಾರ. 
ಇಲ್ಲಂದ್ರ ನಮ್ಮ ಹೊಲದ ಬಾಜುನೇ ಅವನ ಹೋಲ ಆದ ಇನ್ನೊಂದಿಷ್ಟು ಅವನಿಗೆ ರೊಕ್ಕ ಕೊಟ್ಟ ಆ ಹೊಲನಾ ನಾವೇ ತಗೊಂಡ್ರಾತು. 
ಎರಡು ಹೊಲ ಕುಡಿಸಿದ್ರ ಕುದ್ರಿ ಓಡೋಂಗ ದೊಡ್ಡ ಹೊಲ ಆಗತಾದ.
ಅಂತ ಗೌಡ ವಿಚಾರ ಮಾಡ್ತ ಕುಳಿತಿದ್ದ.
ಏ ಗೌರಿ ದನಬಿಡೋ ಒತ್ತಾಯ್ತು ಎಲ್ಲಿ ಹಾಳಾಗಿ ಹೋಗಿದ್ದಿ ಜಲ್ದಿ ಗೂಟಕ್ಕ ಕಟ್ಟಿದ್ದ ದನ ಬಿಡು ಕತ್ತೆ. ಹೊತ್ತು ನೆತ್ತಿಗಿ ಏರಕತ್ಯಾದ ಗೋತ್ತಾಗಲ್ಲೇನ್ ಅಂತ ದನಕಾಯೋ ಹುಡುಗಿಗೆ ದಬಾಯಿಸಿದ ಗೌಡಸ್ಯಾನಿ ಮನೆಯೊಳಗೆ ಹೋದಳು.
ಹೇ ಬಾರಪಾ ರಂಗ ನೀ ಬರತಿನಿ ಅಂದದಕಾ ನಾ ಕಾಯ್ತಿದ್ದೆ ಇಲ್ಲಂದ್ರ ನಿಮ್ಮ ಗೌಡಶ್ಯಾನಿ ಊಟಕ್ಕ ಬಾ ಅಂತ ಆಗ್ಲೇ ಒಂದ್ ಅವಾಜ್ ಹಾಕಿ ಹೋಗ್ಯಾಳ ಬರಿ ಉದ್ರಿ ಚಾಕ್ರಿ ಮಾಡ್ತಿದಿ ನೀ ಅಂತ ಸಿಟ್ಟಿಗೇರಾಳಲೇ.
ಹೇ ಬಿಡ್ರಿ ಗೌಡ್ರಾ ನಮ್ಮವ್ವ ಅಂತಾಕಿ ಅಲ್ರಿ. ನಾ ಎಷ್ಟು ದಿನದಿಂದ ನೋಡ್ತಿನಿ ನೀವಾ ಅವ್ವಾರಿಗಿ ಅವರ ತೌರಮನಿಗಿ ಬಯ್ತಿರಿ.
ಅಲ್ಲಲೇ ಕೋಡಿ ರಂಗ ಅದ್ ಬಿಡು ನಮ್ಮನಿ ವಿಷ್ಯಾ. ನೀ ಬಂದ್ಯಲಾ ಯಾಕ.
ಏನಿಲ್ಲರಿ ಗೌಡ್ರಾ ನಮ್ಮ ಸಂಗವ್ವ ಬಂದಾಳಲ್ಲಕ ಮತ್ತೆ ಅದಕೆ ಮನಿಗಿ ಹೋಗಿದ್ದ ಆಕಿ ತನ್ನ ಮಗಳನ್ನ ಕೊಡ್ತನಿ ಅಂತ ಬಂದಾಳ. ಯಾರಿಗಿ ಲೇ ನಿನಗಾ ಹೇ ಬಿಡ್ರಿ ಗೌಡ್ರಾ ನಿಮಗ್ ಇಷ್ಟು ವಯಸ್ಸಾದ್ರೂ ಇನ್ನ ರಸಿಕರಂಗ ಮಾತಾಡತಿರಿ. ಅಲ್ಲಲೇ ಕೋಡಿ ಮರ ಮುಪ್ಪಾದರ ಹುಳಿ ಮುಪ್ಪಾಗತದ ಏನಲೇ.
ಹಂಗಲ್ರಿ ಗೌಡ ನಮ್ಮ ರಘುಗಾ ಕೊಡ್ತಾಳಂತ 
ರಂಗಪ್ಪನಾ ಮಾತು ಕೇಳಿ ಗೌಡ ಒಂದು ಕ್ಷಣ ದಂಗಾಗಿ ಹೋದ. ಯಾಕಂದ್ರ ಏನೇನೋ ಲೆಕ್ಕಾಚಾರ ಹಾಕಿಕೊಂಡು ಕುಳಿತಿದ್ದ ಎಲ್ಲಾ ತಲೆಕೆಳಗಾಗಿ ಹೋಯ್ತು ಅಂತ ಗೌಡನ ಭಾವನೆ. 
ಆಶ್ಚರ್ಯಭಾವದಿಂದ ಅಲ್ಲ ರಂಗ ನಿನ ಮಗನಾ ಸಾಲಿಗಿ ಹಾಕ್ತಿನಿ ರೊಕ್ಕಬೇಕು ಅಂದಿದಿ ಅಂತ ಸಣ್ಣಗೆ ರಾಗ ತೆಗೆದ ಗೌಡನ ಮುಖ ನೋಡಿ ರಂಗಪ್ಪ ರೊಕ್ಕ ಬೇಕ್ರಿ ಗೌಡ್ರಾ ಆದ್ರ ಸಾಲಿಗಿ ಅಲ್ಲ ಮತ್ತಾ ಯಾಕಲೇ ಲಗ್ನಾಕಾ.
ಲಗ್ನ ಮಾಡಿಕೊಟ್ರ ಸಾಕಂತ್ರಿ ಅವರೇ ಅಳ್ಯಾಗ ಮಗಳಿಗಿ ಓದಿಸ್ತಾರಂತ.
ಹೌದಾ?
ಎಲ್ಲಿ ತಾನು ಹಾಕಿದ್ದ ಲೇಕ್ಕಾಚಾರ ತಲೆಕೆಳಗಾಗತದ ಅಂತ ಮಂಕಾಗಿದ್ದ ಗೌಡನಿಗೆ ಬರಡು ಭೂಮ್ಯಾಗ ನೀರಿನ ಬಸಿ ಹೊಂಟಂಗಾಯ್ರು.
ಸರಿ ಎಷ್ಟು ಬೇಕಾಗಬಹುದಪ್ಪಾ ಲಗ್ನ ಸ್ವಲ್ಪ ಬಹಳ ಬೇಕಾಗಬಹುದುರಿ ಸರಿ ಸರಿ ನೋಡೊಕೊಂಡು ಲೆಕ್ಕಾ ಮಾಡಿಕೊಂಡು ಬಾ ಆಹಾ ಒಂದ್ ವಿಷ್ಯ ತಿಳ್ಕೊ ನಿಮ್ಮ ಮನ್ಯಾಗ ಕೇಳಿ ಸಾಲ ಮಾಡ್ ಸಾಲದ ಪತ್ರಕಾ ನಿನ್ನ ಹೆಂಡತಿ ಮಗ ಸಹಿ ಹಾಕಬೇಕು.
ಹೇ ಗೌಡ್ರಾ ಹೋಲಾನ ಬರದಕೊಡ್ತಿನಿ ನೀ ನಮ್ಮಪ್ಪ ಇದ್ದಂಗ ನಮ್ಮೂರ ಧಣಿ ಇದ್ದಿರಿ. ನಿಮ್ಮ ಸಾಲಕ್ಕ ಎದುರಾಗಿ ನಾವು ಬಾಳವು ಮಾಡಿಲ್ಲಿಕ್ಕಾಗತದಾ.
ಅಲ್ಲಲೇ ಈಗ ಕಾಲ ಬಹಳ ಕೆಟ್ಟುಹೊಗ್ಯಾದ. ನೀ ಇದ್ದಂಗ ನಿನ್ನ ಮಗ ಇಲ್ಲಲೇ ಕಾಲಕ್ಕ ತಕ್ಕಂಗ ನಾವ್ ನಡಿಬೇಕಲ್ಲ. ಆಯ್ತು ಬಿಡ್ರಿ ಗೌಡ್ರ ನಾ ಬರತಿನಿ ಹಂಗಾರ ಗಟ್ಟಿ ನೋಡ್ರಿ.
ಮದುವ್ಯಾಗ ನಡದ ಒಂದ್ ಸಣ್ಣ ಘಟನೆ ಎರಡು ಮನಿ ಇಬ್ಬಾಗ ಮಾಡಿತ್ತು. ಮದುವೆ ಬಟ್ಟಿ ತರಲ್ಲಾಕ ಬಟ್ಟಿ ದುಖಾನ್ಗೆ ಹೋದಾಗ ಮದುವಿ ಹೆಣ್ಣಿನ ಸೀರಿ ತಗೋದ್ರಾಗ ಇಬ್ರಿಗೂ ಪಸಂದ ಬರಲಾರದ ಒಣ ಪ್ರತಿಷ್ಠೆಗೆ ಬಿದ್ದು ಒಬ್ಬರಿಗೊಬ್ಬರು ಮಾತಾಡಲಾರದ ಅಂಗಡಿಯಿಂದ ಎದ್ದು ಬಂದಿದ್ರು. ಅಲ್ಲಿ ಸುರುವಾದ ಜಗಳ ಮದುವೆ ಮನಿವರೆಗೆ ನಡೆದು ಕಡಿಗೆ ಮದಿವ್ಯಾಗ ಬೀಗರಿಗೆ ನಾಸ್ಟ ಹಾಕಿಲ್ಲ. ಊಟ ಸರಿಗಿ ಮಾಡಿಲ್ಲ ಅಂತೇಳಿ ಮದುವೆ ಹೆಣ್ಣನ್ನ ಬಿಟ್ಟು ತಾಳಿ ಸಮಯದಲ್ಲಿ ಎಲ್ಲ ಬೀಗರು ನೆಂಟರು ಎರಡು ಭಾಗ ಆಗಿ ಯಾರ್ ಊರಿಗಿ ಅವರು ಹೋಗಿಬಿಟ್ಟರು.
ಆಗ ಹೆಂಗೋ ಮದುವಿ ಮುಗಿಸಿ ಮಗಳನ್ನ ಕರೆದುಕೊಂಡು ಮನಿಗಿ ಬಂದವರು ತಿರುಗಿ ಮತ್ತೆ ಮಗನ ಗಂಡನ ಮನಿಗಿ ಕಳಸ್ಲೆ ಇಲ್ಲ.
ಅಲ್ಲಪಾ ನಿಮ್ಮಪ್ಪ ಲಗ್ನ ಸಾಲದಸಲುವಾಗಿ ಆ ಗೌಡಗ ಹೊಲ ಬರದ ಕೊಟ್ಟಾನಂತಲ್ಲ. ನೀ ಎಷ್ಟೊಂದು ಹೇಳಿದಿ. ನಮ್ಮಪ್ಪನ್ ಆಸ್ತಿ ಬೇರೋರಿಗೆ ಆಗ್ತಾದ ಅದಕ್ಕಾ ಇದಕಾ ಅಂತ ಹೀಗೇನಾಯ್ತು. ಹೊಲಕ ಹೊಲ ಹೋಯ್ತು. ಹೊಲ ಇಲ್ಲದವನ ಮನಿಗಿ ಮಗಳನಾ ಕೊಟ್ಟಂಗಾಯ್ತು. 
ಅದಕಾ ಹೇಳೋದು ಮೂರ್ಕಾಸಿನ ಹೆಣ್ಣ ಅಂತ. ಮೊಳ್ಕಾಲ್ ಕೆಳಗಿನ ಬುದ್ದಿ ನಿಮ್ದು ಅಂತ.
ಅಂವಾಗ ನಿನ್ನ ಬುದ್ದಿ ಎಲ್ಲಿಗೋಗಿತ್ತು ಸಗಣಿ ತಿಂತಿತ್ತಾ ನನಗಾ ದುರಾಸಿ ನಿಮ್ಮನ ಆಸ್ತಿ ಅದು ಇದು ಹಾಳು ಮೂಳ್ ಅಂತ ಅವತ್ತು ಸಂತಿಲಿಂದ ಬಂದ್ ತಲಿ ತುಂಬಿ ನೀ ಈಗ ನನಗಾ ಜೋರ್ ಮಾಡ್ತಾನ.
ನಿನ್ನ ಮಗಳು ಮಣಿಪುರದ ರಾಜಕುಮಾರಿ ನನ್ನ ತಮ್ಮ ನೋಡಲಾರದ ಬಂದ್ ಮದುವ್ಯಾಗ್ಯಾನ. ಮದ್ವಿ ಆಗಿ ಆರು ತಿಂಗಳಾತು ಗಂಡೆಂಬ ಜ್ಞಾನ ಇಲ್ಲ. ಬಣ್ಣ ಮಾಡಿಕೊಂಡ್ ಬೀದಿ ಬೀದಿ ತಿರುಗುತಾಳ. ಇಂತಕಿನಾ ಅವನಿಗೆ ಗಂಟ್ಹಾಕಿ ಅವನ ಬಾಳ್ ಹಾಳ್ ಮಾಡಿದಿ ಅಂತ ಒಂದೇ ಸಮನೆ ರಪರಪನೆ ಮಳಿ ಬಂದಂಗ್ ಹಾರಾಡಿದಳು.
ಅಲ್ಲ ಆಕಡಿ ಹುಡುಗುನ ಸಾಲಿ ಆಗಲಿಲ್ಲ ಈ ಕಡಿ ಮನಿಗಿ ಸೊಸಿ ಬರ್ಲಿಲ್ಲ ಎಂಬ ಚಿಂತಿ ರಂಗಪ್ಪನಿಗೆ ಕಾಡಹತ್ತಿತು. 
ಇತ್ತ ಹೊಲ ಹೋಯ್ತು ಆ ಕಡಿ ಮಗನಾ ಸಾಲಿ ಹಾಳಾಯ್ತು ಮನಿಗಿ ಸೊಸಿ ಬರಲಾದ ಮಗನಾ ಬಾಳ್ ಹಾಳಾಯ್ತು. ಇರೋ ಒಬ್ಬ ಮಗಳು ಮನಿಯಿಂದ ದೂರಾದಂಗಾಯ್ತು ಅಂತ ರಂಗಪ್ಪ ಅದೇ ಕೊರಗಿನಲ್ಲಿ ತೀರಿಹೋದ.
ಒಂದ್ ಕಡಿ ತಂದಿ ಸಾವು ಲಗ್ನ ಆದ್ರ ಹೆಂಡತಿ ಮುಖ ನೋಡಲಾರದ ನೋವು. ಇದ್ದ ಒಬ್ಬ ಅಕ್ಕ ಮನಿಗಿ ಬರದಂಗಾಯ್ತು ಬದುಕಾಕ ಇದ್ದ ಹೋಲ ಗೌಡನ ಪಾಲಾಯ್ತು. ಅಂತ ಚಿಂತ್ಯಾಗ ನನ ಮಗನಿಗಿ ಹುಚ್ಚು ಹಿಡಿತಲ್ಲ ಅಮತ ಕುಳಿತಲ್ಲೆ ಕಣ್ಣಿರಿನ ಹನಿ ಸಿರಿಮ್ಯಾಗಿಂದ ನೆ ತೊಯಸ್ತಿದ್ರ ಅರಿವಿಲ್ದೇ ಹಾಗೆ ಕುಳಿತಿದ್ದ ರಂಗಮ್ಮ ಅವ್ವ ಅವ್ವ ಅವ್ವ ಎನ್ನುವ ದ್ವನಿ ಕೇಳಿ ಬೆಚ್ಚಿ ಬಿದ್ದಳು.
ಇದ್ದಕ್ಕಿದ್ದಂತೆ ಎಚ್ಚರವಾದಾಗ ಕಣ್ಣುಬಿಟ್ಟು ನೋಡಿದರೆ ಗಡಿಯಾರದ ಮುಳ್ಳು ಆಗಲೆ ಒಂಬತ್ತಕ್ಕೆ ಬಂದಿತ್ತು. ಧಾವಿಸಿ ಎದ್ದ ರಂಗಮ್ಮ ಅಯ್ಯೋ ಮಗನಿಗೆ ಇನ್ನೂ ಮಾತ್ರೆನೆ ಕೊಟ್ಟಿಲ್ಲ ನನ್ನ ಬುದ್ದಿಗಿಷ್ಟು ಎಂದು ತನ್ನಷ್ಟಕ್ಕೆ ತಾನೆ ಗೊಣಗುತ್ತಾ ಮಾತ್ರೆ ತರಲು ಹೋದಳು.
ಸ್ವಾರ್ಥ ಸಂಕಲ್ಪದ ನಡುವಣ ಕೊಳ ಬಿಳುವುದು ಅರಿಯುವದರ ಹೊತ್ತಿಗೆ ರಘುವಿನ ಜೀವನ ಮಂಕಾಗಿ ಹೋಗಿತ್ತು.

 

Comments

Submitted by mounyogi Tue, 04/04/2017 - 20:36

ಕತೆ ಓದಿದ ಹಿರಿಯರು ಶೈಲಿಯ ಮಾರ್ಗದರ್ಶನ ನೀಡಬೇಕು ಎನ್ನುವುದು ನನ್ನ ಕಳಕಳಿಯ ಮನವಿ.