~
ಉ: ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧
- ಉ: ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧ By: prashantvc (Jun 16 2008 - 2:11pm)
- ಉ: ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧ By: pallavi.dharwad (Jun 16 2008 - 4:31pm)
- ಉ: ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧ By: sprasad (Jun 19 2008 - 4:42pm)
- ಉ: ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧ By: pallavi.dharwad (Jun 22 2008 - 1:27pm)
- ಉ: ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧ By: sprasad (Jun 19 2008 - 4:42pm)
- ಉ: ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧ By: pallavi.dharwad (Jun 16 2008 - 4:31pm)

RSS:
ಉ: ಗೊಬ್ಬರದ ಹೆಸರಲ್ಲಿ ಧಗಧಗಿಸಿದ ಧಾರವಾಡ-೧
ವಿಚಾರ ಮಾಡಿ ನೋಡಿ ಪ್ರಶಾಂತ್! ಇವತ್ತಿನ ಜೋಳ, ಗೋದಿ, ಅಕ್ಕಿ, ತರಕಾರಿ, ಕೊನೆಗೆ ವರ್ಷಕ್ಕೊಮ್ಮೆ ಬರುವ ಮಾವಿನ ಹಣ್ಣುಗಳು ಮೊದಲಿನಷ್ಟು ರುಚಿಯಾಗಿ ಉಳಿದಿವೆಯೆ? ವೀಳ್ಯದೆಲೆಗೂ ಮೊದಲಿನ ರುಚಿಯಿಲ್ಲ. ಪ್ರತಿಯೊಂದರಲ್ಲೂ ರಾಸಾಯನಿಕ ಮಿಶ್ರವಾಗುತ್ತ ಆಗುತ್ತ ಭೂಮಿ ಸತ್ವ ಕಳೆದುಕೊಳ್ಳುತ್ತಿದೆ. ಮೂಲ ಬೀಜಗಳ ಗುಣ ಹೈಬ್ರಿಡ್ ಬೀಜಗಳಲ್ಲಿ ಇಲ್ಲ. ಈ ಕುರಿತು ಬೇಕಾದಷ್ಟು ಸಾಹಿತ್ಯ ಕನ್ನಡದಲ್ಲಿದೆ. ದಯವಿಟ್ಟು ನೋಡಿ, ನಿಮ್ಮ ಅಭಿಪ್ರಾಯ ರೂಪಿಸಿಕೊಳ್ಳಿ.
ಇವತ್ತು ರೈತ ಆತ್ಮಹತ್ಯೆ ಮಾಡಿಕೊಳ್ಳಲು ಇತರ ಎಲ್ಲ ಕಾರಣಗಳಿಗಿಂತ ಹೆಚ್ಚಿನದು, ಆತ ಚಟಕ್ಕೆ ಬಿದ್ದಿರುವುದು. ಕುಡಿತಕ್ಕೆ, ಇಸ್ಪೀಟಿಗೆ, ದುಬಾರಿ ಬದುಕಿಗೆ, ಹಾಗೂ ಇತರ ಹವ್ಯಾಸಗಳಿಗೆ ರೈತ ಮಾರು ಹೋಗಿದ್ದಾನೆ. ಇದರಿಂದಾಗಿ ಹೆಚ್ಚು ಬೆಳೆಯುವ ಅನಿವಾರ್ಯತೆಗೆ, ಪುಕ್ಕಟೆ ವಿದ್ಯುತ್ಗೆ, ಸಬ್ಸಿಡಿ ದರದ ಗೊಬ್ಬರ, ಬೀಜಕ್ಕೆ, ಬೆಂಬಲ ಬೆಲೆಗೆ ರೈತ ಸಿಲುಕಿದ್ದಾನೆ. ಇವುಗಳಲ್ಲಿ ಯಾವುದಾದರೂ ಒಂದು ದೊರೆಯದೇ ಹೋದರೂ ಆತ ಬೀದಿಗಿಳಿಯುತ್ತಾನೆ. ಇಲ್ಲದಿದ್ದರೂ, ನಮ್ಮ ಪುಢಾರಿಗಳು, ಸಂಘಟನೆಗಳು ಅವನನ್ನು ಬೀದಿಗೆ ಇಳಿಸುತ್ತವೆ.
ತುಂಬ ಯೋಚಿಸಿ ’ದುರಾಸೆ’ ಶಬ್ದ ಬಳಸಿದ್ದೇನೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...