~
ದೊಡ್ಡವರ ಸಣ್ಣತನ
- ದೊಡ್ಡವರ ಸಣ್ಣತನ By: sada (Mar 24 2006 - 11:28am)
- ಜಾಣಪೆದ್ದರ ಜಗಳ By: mahesh_b_s (Mar 24 2006 - 12:13pm)
- ಹಹ್ಹಹ್ಹಾ.. By: sanket (Mar 24 2006 - 12:12pm)
- ಹಾವು ಚೇಳು By: mahesh_b_s (Mar 23 2006 - 5:29pm)
- Re: ಹಾವು ಚೇಳು By: pavanaja (Mar 23 2006 - 6:11pm)
- ಮಜಾನೋ ಮಜಾ By: ಶ್ರೀಶಕಾರಂತ (Mar 24 2006 - 5:02pm)
- Re: ಮಜಾನೋ ಮಜಾ By: ಶ್ಯಾಮ ಕಶ್ಯಪ (Mar 25 2006 - 2:02am)
- Re: ಮಜಾನೋ ಮಜಾ By: srivathsajoshi (Mar 24 2006 - 5:40pm)
- 'ಗಳಿಸುವ' ತೆ By: hpn (Mar 24 2006 - 7:03pm)
- Re: 'ಗಳಿಸುವ' ತೆ By: srivathsajoshi (Mar 24 2006 - 7:27pm)
- ಪಾತ್ರತೆ By: bhatpp (Mar 24 2006 - 10:01pm)
- Re: ಪಾತ್ರತೆ By: srivathsajoshi (Mar 25 2006 - 12:10am)
- ಪಾತ್ರತೆ By: bhatpp (Mar 24 2006 - 10:01pm)
- Re: 'ಗಳಿಸುವ' ತೆ By: srivathsajoshi (Mar 24 2006 - 7:27pm)
- 'ಗಳಿಸುವ' ತೆ By: hpn (Mar 24 2006 - 7:03pm)
- ಮಜಾನೋ ಮಜಾ By: ಶ್ರೀಶಕಾರಂತ (Mar 24 2006 - 5:02pm)
- Re: ಹಾವು ಚೇಳು By: pavanaja (Mar 23 2006 - 6:11pm)

RSS:
ದೊಡ್ಡವರ ಸಣ್ಣತನ
ಗಣಪತಿ ಮತ್ತು ಬಸವಣ್ಣನಿಗೆ ನಿಮ್ಮ ಬಿನ್ನಪ ತಲುಪಿದ ಹಾಗೆ ಕಾಣುತ್ತದೆ. ಪ್ರಹಸನ ಮುಂದುವರಿದಿದೆ.ಇನ್ನು ಕೆಲವು ಪಾತ್ರಧಾರಿಗಳ ರಂಗಪ್ರವೇಶ ಆಗಿದೆ.
ನಿನ್ನೆಯ ದಿನಪತ್ರಿಕೆಯಲ್ಲಿ ಓದಿದ್ದು:
ಅನಂತಮೂರ್ತಿ:ದೇಜಗೌಗೆ ವ್ಯಾಧಿ!
ಚಿದಾನಂದಮೂರ್ತಿಗೆ, ಕಲ್ಲಿನಲ್ಲಿ ಬರೆದುದನ್ನು ಓದುವ ಹಾಗೆ ಹೃದಯದ ಬರಹವನ್ನು ಓದಲಿಕ್ಕೆ ಬರುವುದಿಲ್ಲ.
ಇವತ್ತಿನ ದಿನಪತ್ರಿಕೆಯಲ್ಲಿ ಓದಿದ್ದು:
ಅನಂತಮೂರ್ತಿಯವರ ವಿರುದ್ದ ವಾಕ್ಸಮರ ಹೂಡಲು ಪತ್ರಿಕಾ ವರದಿಗಾರರನ್ನು ಕರೆಸಿ, ಈ ನಾಲ್ವರು ಹೇಳಿದ್ದು(ವದರಿದ್ದು?) ಹೀಗಿದೆ,
ದೇಜಗೌ : ಅನಂತಮೂರ್ತಿ ನನ್ನ ಕಾಲು ಹಿಡಿದಿದಕ್ಕೆ, ನಾನು ಅವನಿಗೆ ಯೂನಿವರ್ಸಿಟಿಯಲ್ಲಿ ರೀಡರ್ ಹುದ್ದೆ ಕೊಟ್ಟೆ.ಹೀಗೆ ಕಾಲು ಹಿಡಿದೇ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡಿರಬೇಕು..ಮೂರ್ತಿ ಸಾಹಿತ್ಯವನ್ನೇ ಬರೆದಿಲ್ಲ.ಅನಂತನ ಸಾಹಿತ್ಯವೆಲ್ಲಾ ಬೇರೆಡೆಯಿಂದ ಲೂಟಿ ಹೊಡೆದಿರುವುದಾಗಿದೆ.ಸಂಸ್ಕಾರ ಇಂಗ್ಲೀಷ್ನ ಭಾಷಾಂತರವಾಗಿದ್ದು,ಇವರ ಭಾಷಾಶೈಲಿ ಯಾರಿಗೂ ಮೆಚ್ಚಿಗೆಯಾಗಿಲ್ಲ. (ಇನ್ನೂ ಪತ್ರಿಕೆಯಲ್ಲಿ ಬರೆಯಲಾಗದ ಶಬ್ಧಗಳನ್ನು ಬಳಸಿದ್ದಾರಂತೆ! )
ಹೆಚೆಸ್ಕೆ ಅಯ್ಯಾಂಗಾರ್: ಜ್ಞಾನಪೀಠ ಪ್ರಸಸ್ತಿ ಬಂದ ಮೇಲೆ ಅನಂತಮೂರ್ತಿಗೆ ಜ್ಞಾನದ ಪಿತ್ತ ನೆತ್ತಿಗೇರಿದೆ.ಆತನೊಬ್ಬ ಅವಕಾಶವಾದಿ.ಕುಲ ಮತ್ತು ಐಶ್ವರ್ಯದ ಮದ ತುಂಬಿ ತುಳುಕುತ್ತಿದೆ.
ಸಿಪಿಕೆ:: ಅನಂತಮೂರ್ತಿ ದ್ವಂದ್ವ ಮೂರ್ತಿ!
ಇವು ಎಲ್ಲದಕ್ಕಿಂತ ಹೆಚ್ಚು ಇಷ್ಟವಾಗಿದ್ದು,ಕೊನೆಗೆ ಮಾತನಾಡಿದ ಲಕ್ಕಪ್ಪ ಗ್ಡರ ಈ ಹೇಳಿಕೆ:"ನಾಲಗೆಯ ತೀಟೆ ತೀರಿಸಿಕೊಳ್ಳಲು ಮತ್ತೊಬ್ಬರನ್ನು ಟೀಕಿಸುವುದು ಅಸಂಸ್ಕೃತರ ಲಕ್ಷಣ!"