ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಕರ್ದಿಂಗಳು - ಅಮಾವಾಸ್ಯೆ

May 6, 2006 - 2:21pm — benaka

ಕರ್ದಿಂಗಳು - ಅಮಾವಾಸ್ಯೆ

benaka's picture

ಮಹೇಶರೆ,

'ತಿಂಗಳ್ ' ನೀವೆಂದಂತೆ ಆದಿದ್ರಾವಿಡಭಾಷೆಯ ಮೂಲದ್ದೇ ಇರಬಹುದು. ಕರಿ + ತಿಂಗಳು = ಕರಿದಿಂಗಳು(ಆದೇಶಸಂಧಿ) ಕೂಡ ಸರಿಯೇ; ಆದರೂ ಅದು ' ಕರ್ದಿಂಗಳು ' ಆದದ್ದು ಹೇಗೆಂಬುದೇ ನನ್ನ ಕುತೂಹಲ! ಅದೇನೇ ಇರಲಿ, ನನ್ನ ಪ್ರಿಯ ಮಿತ್ರರೊಬ್ಬರು ಮೊನ್ನೆ ' ಕರ್ದಿಂಗಳು' ಎಂಬ ಪ್ರಯೋಗ ಕುವೆಂಪುರವರ ರಕ್ತಾಕ್ಷಿ ನಾಟಕದಲ್ಲಿದೆ ಎಂದು ನೆನಪಿಸಿದರು. ಅಲ್ಲಿಗೆ ಪದವಿರುವುದು ಸ್ಪಷ್ಟವಾದರೂ, ವ್ಯುತ್ಪತ್ತಿ ಬಗೆಹರಿಯಲಿಲ್ಲ. ನೀವು ಕೊಟ್ಟ ಉದಾಹರಣೆಗಳು 'ರ ಕಾರ' ದ ಮುಂದಿನ ಪದಕ್ಕೆ ಆದೇಶ ಸೂಚಿಸಿವೆ; 'ರೇಫ'ದ ಮುಂದೆ ಅಲ್ಲ! ಒಂದುವೇಳೆ ರೇಫದ ಮುಂದಿನ ವರ್ಗೀಯ ವ್ಯಂಜನಕ್ಕೆ ಆದೇಶವಾಗುವ ಉದಾಹರಣೆ ತೆಗೆದುಕೊಂಡರೆ:
ಕಾರ್ + ಕತ್ತಲ್ = ಕಾರ್ಗತ್ತಲ್ (ಕಪ್ಪು ಕತ್ತಲೆ)
ಕಾರ್ + ಕಾಲ = ಕಾರ್ಗಾಲ (ಕರಿದಾದ ಕಾಲ) ಅಂತೆಯೇ,
ಕಾರ್ + ತಿಂಗಳ್ = ಕಾರ್ತಿಂಗಳ್, ಕಾರ್ದಿಂಗಳ್ ಆಗಿರುವ ಸಾಧ್ಯತೆಯಿದೆ. ಆದರೆ 'ಕರ್ದಿಂಗಳ್' ಆಗಿರಲಿಕ್ಕಿಲ್ಲವೆನಿಸುತ್ತದೆ.
ಆದ್ದರಿಂದ, ನೀವೆಂದಂತೆ ಕರಿ + ತಿಂಗಳು = ಕರಿದಿಂಗಳು ಆಗಿದ್ದು, ನಂತರ ಅದೇ ಆಡುಭಾಷೆಯ ರೂಪಾಂತರದಿಂದ ಕರ್ದಿಂಗಳು ಆಗಿರಬಹುದು.

ಆದರೆ, ಕರ್ದಿಂಗಳು ನೀವೆಂದಂತೆ 'ಕೃಷ್ಣ ಪಕ್ಷ'ವಾಗಲೀ, 'ತಿಂಗಳಿನ ಕರಿಯ ಭಾಗ' ವಾಗಲೀ ಅಲ್ಲ! ಏಕೆಂದರೆ :
ಪಕ್ಷ = ಹದಿನೈದು ತಿಥಿಗಳ ಗುಂಪು; ಭಾಗವಾಗಲೀ, ಆಂಗ್ಲದ 'ಪಾರ್ಟ್' ಆಗಲೀ ಅಲ್ಲ!
ಕರ್ದಿಂಗಳು = ಕರಿಯ ತಿಂಗಳು ; ಆದ್ದರಿಂದ ಅದು 'ಕರಿಯ ಪಕ್ಷ' ಹೇಗಾಗಲು ಸಾಧ್ಯ? ಅಲ್ಲವೇ?
ನಮಗೆ 'ತಿಂಗಳು' ಎಂಬ ಪದಕ್ಕೆ ಅರ್ಥ 'ಮಾಸ' ಎಂದು ಅಭ್ಯಾಸವಾಗಿ ಹೋಗಿರುವುದರಿಂದ ಈ ಗಲಿಬಿಲಿ. ತಿಂಗಳ್ ಎಂದರೆ ನಿಜವಾಗಿ 'ಚಂದ್ರ' ಎಂದರ್ಥ. ಆದ್ದರಿಂದ, ಕರ್ದಿಂಗಳು = ಕರಿಯ ಚಂದ್ರ = ಅಮಾವಾಸ್ಯೆ ಎಂದಾಗುತ್ತದೆಯಲ್ಲವೇ?

ಈಗ ರಕ್ತಾಕ್ಷಿಯ ಈ ಸಾಲನ್ನು ಓದಿದಾಗ ಏನೆನಿಸುತ್ತದೆಯೋ ನೋಡಿ:
"ಕರ್ದಿಂಗಳ ಕಗ್ಗತ್ತಲ ಕಾರ್ಗಾಲದ ರಾತ್ರಿ......."

ಇತರರೇನೆನ್ನುತ್ತಾರೋ ನೋಡೋಣ.
ನಿಮ್ಮವ
ಬೆನಕ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಬೆಳ್ದಿಂಗಳು ಮತ್ತು ಕರ್ದಿಂಗಳು By: shreekant.mishrikoti (17 replies) April 26, 2006 - 10:23am
  • 'ಕಾರ್ತಿಂಗಳ್'? By: benaka (Apr 26 2006 - 11:17am)
    • ಉ: 'ಕಾರ್ತಿಂಗಳ್'? By: kannadakanda (Jun 12 2008 - 3:45pm)
      • ಉ: 'ಕಾರ್ತಿಂಗಳ್'? By: kannadakanda (Jun 12 2008 - 3:47pm)
    • ಉ: 'ಕಾರ್ತಿಂಗಳ್'? By: kannadakanda (Jun 12 2008 - 3:39pm)
    • ಬಿಳಿಪಕ್ಷ ಮತ್ತು ಕರಿಪಕ್ಷ. By: ಮಹೇಶ ಭೋಗಾದಿ (Apr 26 2006 - 3:17pm)
      • ಕರ್ದಿಂಗಳು - ಅಮಾವಾಸ್ಯೆ By: benaka (May 6 2006 - 2:21pm)
        • ಉ: ಕರ್ದಿಂಗಳು - ಅಮಾವಾಸ್ಯೆ By: poornimas (Jun 12 2008 - 6:36pm)
          • ಉ: ಕರ್ದಿಂಗಳು - ಅಮಾವಾಸ್ಯೆ By: hamsanandi (Jun 13 2008 - 10:11pm)
            • ಉ: ಕರ್ದಿಂಗಳು - ಅಮಾವಾಸ್ಯೆ By: kannadakanda (Jun 14 2008 - 9:54am)
          • ಉ: ಕರ್ದಿಂಗಳು - ಅಮಾವಾಸ್ಯೆ By: kannadakanda (Jun 13 2008 - 9:43am)
            • ಉ: ಕರ್ದಿಂಗಳು - ಅಮಾವಾಸ್ಯೆ By: poornimas (Jun 13 2008 - 6:51pm)
              • ಉ: ಕರ್ದಿಂಗಳು - ಅಮಾವಾಸ್ಯೆ By: kannadakanda (Jun 14 2008 - 9:57am)
                • ಉ: ಕರ್ದಿಂಗಳು - ಅಮಾವಾಸ್ಯೆ By: poornimas (Jun 16 2008 - 6:30pm)
        • ಉ: ಕರ್ದಿಂಗಳು - ಅಮಾವಾಸ್ಯೆ By: kannadakanda (Jun 12 2008 - 3:52pm)
        • ತಿಂಗಳು By: ಮಹೇಶ ಭೋಗಾದಿ (May 7 2006 - 5:51pm)
          • ಉ: ತಿಂಗಳು By: kannadakanda (Jun 12 2008 - 3:12pm)
            • ಉ: ತಿಂಗಳು By: kannadakanda (Jun 12 2008 - 3:30pm)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • prameela
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 21, 2008 - 12:02am
  • pallavi.dharwad
    ಉ: ಸಂಪದಕ್ಕಾಗಿ ಒಂದು ಮಾತು
    August 20, 2008 - 11:51pm
  • pallavi.dharwad
    ಉ: ನಮ್ಮೂರಲ್ಲಿ...
    August 20, 2008 - 11:45pm
  • gangadharg
    ಉ: ನಿಸ್ವಾರ್ಥಿ ಪಾರಂಪರಿಕ ವೈದ್ಯರ ಮುಂದೆ ಸ್ವಾರ್ಥದ ‘ಪೇಟೆಂಟ್’ ಹಾವಳಿ!
    August 20, 2008 - 11:44pm
  • prameela
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 11:44pm
  • pallavi.dharwad
    ಉ: ಮಿನಿಗವನ
    August 20, 2008 - 11:43pm
  • gangadharg
    ಉ: ತಪ್ಪಿ ನಡೆಸ ಸರ್ಕಾರ
    August 20, 2008 - 11:41pm
  • pallavi.dharwad
    ಉ: ಶಂಖದ ಹುಳು
    August 20, 2008 - 11:41pm
  • pallavi.dharwad
    ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
    August 20, 2008 - 11:33pm
  • pallavi.dharwad
    ಉ: ಒಂಚೂರು ಕೋಗಿಲೆ
    August 20, 2008 - 11:28pm
ಇನ್ನಷ್ಟು


ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator