ನನಗೂ ಒಬ್ಬರು ಕೇಳಿದರು; ಸಿ. ಅಶ್ವತ್ಥ ? ಯಾರದು?
- ಕನ್ನಡದ ಈಗಿನ ಕವಿಗಳು ! By: venkatesh (May 31 2006 - 8:25am)
- ನಮ್ಮ ಮನೆಯಿಂದಲೇ ಶುರುಮಾಡೋಣ By: benaka (May 31 2006 - 8:16am)
- ಕನ್ನಡ ಸಾಹಿತ್ಯದ ಬಗ್ಯೆ ಅರಿವು..........! By: venkatesh (May 31 2006 - 1:37pm)
- ನಾವೇನು ಮಾಡಬಹುದು By: tksbhat (May 30 2006 - 1:36pm)
- ಕನ್ನಡದ ಈಗಿನ ಕವಿಗಳು By: ಮಹೇಶ ಭೋಗಾದಿ (May 31 2006 - 7:22am)
- ನನಗೂ ಒಬ್ಬರು ಕೇಳಿದರು; ಸಿ. ಅಶ್ವತ್ಥ ? ಯಾರದು? By: shreekant.mishrikoti (May 30 2006 - 11:59am)
- ವಿಕಿಪೀಡಿಯದಲ್ಲಿ ಬರೆಯಿರಿ! By: hpn (May 30 2006 - 10:57am)

RSS:
ನನಗೂ ಒಬ್ಬರು ಕೇಳಿದರು; ಸಿ. ಅಶ್ವತ್ಥ ? ಯಾರದು?
ನಮ್ಮ ಮನೆಗೆ ಒಬ್ಬರು ಬಂದಿದ್ದರು. ಅವರೂ ಕನ್ನಡಿಗರೇ . ನಾನು ಸಿ ಅಶ್ವಥ್ ಮತ್ತು ರತ್ನಮಾಲಾ ಅವರ ಸುಮಧುರ ಭಾವ ಗೀತೆಗಳನ್ನು ನನ್ನ ಮ್ಯೂಸಿಕ್ ಸಿಸ್ಟಂ ಅಲ್ಲಿ ಹಾಕಿದ್ದೆ . ' ಯಾರು ಹಾಡಿದ್ದು ? ಚೆನ್ನಾಗಿದೆ? ' ಎಂದು ಕೇಳಿದರು . ' ಆಗ ' ಸಿ. ಅಶ್ವತ್ಥ ಅವರದು ' ಎಂದು ಹೇಳಿದರೆ ' ಕೇಳಿದರು; 'ಸಿ. ಅಶ್ವತ್ಥ ? ಯಾರದು?' ಈಗ ಕನ್ನಡದಲ್ಲಿ ಸ್ಟಾರ್ ಸ್ಟೇಟಸ್ ಅವರಿಗಿದೆ , ಕನ್ನಡವೇ ಸತ್ಯ ಕಾರ್ಯಕ್ರಮಕ್ಕೆ ಲಕ್ಷ ಜನ ಸೇರಿದ್ದರು ' ಎಂದಷ್ಟೆ ಹೇಳಿ ಬೇಸರಪಟ್ಟುಕೊಂಡೆ.
ನಾವು ಕನ್ನಡವನ್ನೇ ಓದಬೇಕು , ಕನ್ನಡ ಟಿವಿ ನೋಡಬೇಕು . ಮಕ್ಕಳಿಗೆ ಕನ್ನಡ ಹಾಡುಗಳನ್ನು ಕಲಿಸಬೇಕು ( ಈಗಿನ ಎಷ್ಟು ಮಕ್ಕಳಿಗೆ ಪುಣ್ಯಕೋಟಿ ಗೋವಿನ ಹಾಡು ಗೊತ್ತಿದೆ? ) ಚಂದಮಾಮಾ , ಅಮರಚಿತ್ರ ಕಥೆಯಂತಹ ಕನ್ನಡ ಪುಸ್ತಕಗಳನ್ನು ಪರಿಚಯಿಸಬೇಕು. ಅಂತರ್ಜಾಲದಲ್ಲಿ ಕನ್ನಡ ಬಳಸಬೇಕು , ಬೆಳೆಸಬೇಕು. ಕನ್ನಡ ಪತ್ರಿಕೆ , ಕನ್ನಡ ಪುಸ್ತಕ ಓದಬೇಕು. ಮುಖ್ಯ ನಾವು ಸಾಧ್ಯವಾದಷ್ಟು ಕನ್ನಡ ಬಳಸಬೇಕು.
-- ಶ್ರೀಕಾಂತ ಮಿಶ್ರಿಕೋಟಿ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"