ಕನ್ನಡದ ಈಗಿನ ಕವಿಗಳು
- ಕನ್ನಡದ ಈಗಿನ ಕವಿಗಳು ! By: venkatesh (May 31 2006 - 8:25am)
- ನಮ್ಮ ಮನೆಯಿಂದಲೇ ಶುರುಮಾಡೋಣ By: benaka (May 31 2006 - 8:16am)
- ಕನ್ನಡ ಸಾಹಿತ್ಯದ ಬಗ್ಯೆ ಅರಿವು..........! By: venkatesh (May 31 2006 - 1:37pm)
- ನಾವೇನು ಮಾಡಬಹುದು By: tksbhat (May 30 2006 - 1:36pm)
- ಕನ್ನಡದ ಈಗಿನ ಕವಿಗಳು By: ಮಹೇಶ ಭೋಗಾದಿ (May 31 2006 - 7:22am)
- ನನಗೂ ಒಬ್ಬರು ಕೇಳಿದರು; ಸಿ. ಅಶ್ವತ್ಥ ? ಯಾರದು? By: shreekant.mishrikoti (May 30 2006 - 11:59am)
- ವಿಕಿಪೀಡಿಯದಲ್ಲಿ ಬರೆಯಿರಿ! By: hpn (May 30 2006 - 10:57am)

RSS:
ಕನ್ನಡದ ಈಗಿನ ಕವಿಗಳು
ಈಗಿರುವ ಕನ್ನಡದ ಮೇರುಕವಿಗಳನ್ನು ಪಟ್ಟಿ ಮಾಡಲು ಹೊರಟರೆ, ನಮಗೆ ನಿರಾಶೆಯಾಗುವುದು. ಒಂದು ಕಾಲದಲ್ಲಿ ಕುವೆಂಪು, ಮಾಸ್ತಿ, ಬೇಂದ್ರೆ, ವಿನಾಯಕ, ಪುತಿನ, ಕಾರಂತ, ನರಸಿಂಹಸ್ವಾಮಿ ಮುಂತಾದ ಮಹಾಕವಿಗಳಿದ್ದರು. ಈಗ ಹೇಳಲು ಜೆಎಸ್ ಎಸ್, ಕಾರ್ನಾಡ್ ಮತ್ತು ಅನಂತ ಮೂರ್ತಿ ಮೂವರು ಮಾತ್ರ. ಇಲ್ಲವೆ ಈಗಿರುವ ಕನ್ನಡ ಬರಹಗಾರರ ಪರಿಚಯವೇ ನಮಗಿಲ್ಲ. ಇದಕ್ಕೆಲ್ಲ ಕಾರಣ, ಕನ್ನಡದ ಕೃತಿಗಳನ್ನೋದುವವರು ಕಡಮೆಯಾಗಿದ್ದಾರೆ. ಕನ್ನಡಿಗರಿಗೆ ಬೇಕಾದ ಕೃತಿಗಳು ಹೊರಬರುತ್ತಿಲ್ಲವೇನೋ?
ಅಥವಾ ನಾವೆಲ್ಲರೂ ಬೇರೆ ಭಾಷೆಯ ಸಾಹಿತ್ಯವನ್ನೆ ಹೆಚ್ಚೋದುವುದೇನೋ. ನನ್ನ ವಿಷಯದಲ್ಲಿದು ನಿಜವೆ. ನಾನು ಕನ್ನಡಕ್ಕಿಂತ ಸಂಸ್ಕೃತದ ಮತ್ತು ಇಂಗ್ಲೀಷಿನ ಕೃತಿಗಳನ್ನು ಹೆಚ್ಚೋದಿದ್ದೇನೆ.
ನನ್ನ ಗೆಳೆಯರೆಲ್ಲರೂ ಕೂಡ ಹಾಗೆ. ಯಾವುದೆ ಹೊಸ ಇಂಗ್ಲೀಷ್ ಕಾದಂಬರಿ ಬರಲಿ ಓದಿ ನಮಗೆ ಚೆನ್ನಾಗಿದೆ, ಇಲ್ಲವೆಂದು ಹೇಳುವರು. ಆದರೀ ರೀತಿ ಕನ್ನಡಕೃತಿಗಳ ಬಗ್ಗೆ ಮಾಡುವವರು ಬಹಳ ಕಡಮೆ.
ಕನ್ನಡಕೃತಿಗಳನ್ನೋದುವುದರ ಜೊತೆಗವು, ಚೆನ್ನಾಗಿದೆ, ಇಲ್ಲವೆಂದು ಬೇರೆಯವರಿಗೆ ಹೇಳಿದರೆ, ಕನ್ನಡಕೃತಿಗಳ ಪ್ರಚಾರ, ಪ್ರಸಾರಕ್ಕೊಳಿತೆಂದು ನನ್ನ ಭಾವನೆ.
ಇಂತಿ,
ಮಹೇಶ