ಕನ್ನಡದ ಈಗಿನ ಕವಿಗಳು !
- ಉ: ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ? By: kannadakanda (Jul 30 2008 - 3:44pm)
- ಕನ್ನಡದ ಈಗಿನ ಕವಿಗಳು ! By: venkatesh (May 31 2006 - 8:25am)
- ನಮ್ಮ ಮನೆಯಿಂದಲೇ ಶುರುಮಾಡೋಣ By: benaka (May 31 2006 - 8:16am)
- ಕನ್ನಡ ಸಾಹಿತ್ಯದ ಬಗ್ಯೆ ಅರಿವು..........! By: venkatesh (May 31 2006 - 1:37pm)
- ನಾವೇನು ಮಾಡಬಹುದು By: tksbhat (May 30 2006 - 1:36pm)
- ಕನ್ನಡದ ಈಗಿನ ಕವಿಗಳು By: ಮಹೇಶ ಭೋಗಾದಿ (May 31 2006 - 7:22am)
- ನನಗೂ ಒಬ್ಬರು ಕೇಳಿದರು; ಸಿ. ಅಶ್ವತ್ಥ ? ಯಾರದು? By: shreekant.mishrikoti (May 30 2006 - 11:59am)
- ವಿಕಿಪೀಡಿಯದಲ್ಲಿ ಬರೆಯಿರಿ! By: hpn (May 30 2006 - 10:57am)

RSS:
ಕನ್ನಡದ ಈಗಿನ ಕವಿಗಳು !
ಮಹೇಶ್,
ನಿಮ್ಮ ಪ್ರಕಾರ ಮೇರು ಕೃತಿಗಳು ಬರುತ್ತಿಲ್ಲ ನಿಜ. ಇದು ನಿಮ್ಮ ನಮ್ಮ ಅಭಿಪ್ರಾಯ. ಕೃತಿಗಳೂ ಹೆಚ್ಚು ಗುಣಮಟ್ಟದ್ದಿಲ್ಲ ಅನ್ನಿಸುವುದು ನಿಜ. ಆದರೆ ಒಂದು ಕಾಲಘಟ್ಟ ದಲ್ಲಿ ನಿಂತು ವೀಕ್ಷಿಸಿದಾಗ ಅದು ಬೇರೆಯವರನ್ನು ನೋಡಿ ನಿರ್ಧರಿಸುವ ಮಾತು ! ನಾನು ಚಿಕ್ಕವನಾಗಿದ್ದಾಗ, ಶ್ರೀ ಎ.ಆರ್.ಕೃಷ್ಣ ಶಾಸ್ತ್ರಿ ಗಳು, ಶಿವಮೂರ್ತಿ ಶಾಸ್ತ್ರಿಗಳು, ದೇವುಡು, ಹಿರಿಯಣ್ಣ, ರಾಧಾಕೃಷ್ಣನ್, ವೀ.ಸೀ. ಇತ್ಯಾದಿಗಳಿದ್ದರು. ಕುವೆಂಪುರವರೇ ಅವರ ಕಣ್ಣಿನಲ್ಲಿ ಮೇಲೇಳಲು ಬಹಳ ವರ್ಷ ಕಾಯಬೇಕಾಯಿತು. ನನಗೆ ಇನ್ನೂ ನೆನಪಿದೆ. ಡೀ.ವೀ.ಜಿ.ಕುವೆಂಪು ರವರನ್ನು, ಸಂಭೋಧಿಸುತ್ತಿದ್ದದ್ದು ! (ಪುಸ್ತಕದಲ್ಲಿ ಅವರ ಕವನಗಳನ್ನು ಓದಿ ಪ್ರರಿಕ್ರಿಯಿಸಿದ್ದು)
ಹೆಚ್.ಎಸ್.ವಿ. ಇದ್ದಾರೆ.ಇನ್ನೂ ಎಲ್.ಎಸ್.ಶೇಶಗಿರೆರಾಯರು ಬದುಕಿದ್ದಾರೆ. ದಿವಾಕರ್ ,ಪ್ರಕಾಶ್, ಅಹಮತ್ ತರಿಕೆರೆ , ಅಮೂರ,ನೇಮೀಚಂದ್ರ ಇನ್ನೂ ಬೇಕಾದಷ್ಟು ಜನ ಇದ್ದಾರೆ. (ಕೆಲವರು ಅಂಕಣಕಾರರು, ಆದರೆ ಅವರು ಸಮರ್ಥರು, ಶ್ರೇಷ್ಟ ಕೃತಿಗಳನ್ನು ಅವರಿಂದನಿರೀಕ್ಷಿಸಬಹುದು !)
ಆದರೆ ಅವರು ತೆಗೆದುಕೊಳ್ಳುವ ವಿಷಯಗಳು ಬೇರೆ ಅಷ್ಟೆ. ದಿವಂಗತರಾದ ಮೇರು ವ್ಯಕ್ತಿ ಗಳ ಬಗ್ಯೆ ಎಲ್ಲರೂ ಹೇಳುವುದೇ ಹಾಗೆ.ಕೆಲವೇ ವರ್ಷಗಳಲ್ಲಿ ಆ ಜಾಗವನ್ನು ಇನ್ನೊಬ್ಬರು ತುಂಬುತ್ತಾರೆ. ಆದರೆ ಅವರು ಖಂಡಿತ ಕುವೆಂಪು, ಪು.ತಿ.ನ, ಆಗದಿರಲಿ ! "ಅವರ್ಯಾರೋ, ಅವರೇ ಆಗಲಿ " ಎಂದು ಹಾರೈಸೋಣ !
'ಥಟ್ಟನೆ ಹೇಳಿ ಕಾರ್ಯಕ್ರಮ'ದಲ್ಲಿ (ಟೀ.ವಿ) ಅದೆಷ್ಟು ಹೊಸ ಪುಸ್ತಕ ಬಂದಿವೆ ಎಂದು ಊಹಿಸುವುದೂ ಕಶ್ಟ ! ಅವುಗಳ ಗುಣಮಟ್ಟ ನಿರ್ಧರಿಸುವರು ....!