ಕನ್ನಡ ಸಾಹಿತ್ಯದ ಬಗ್ಯೆ ಅರಿವು..........!
- ಕನ್ನಡದ ಈಗಿನ ಕವಿಗಳು ! By: venkatesh (May 31 2006 - 8:25am)
- ನಮ್ಮ ಮನೆಯಿಂದಲೇ ಶುರುಮಾಡೋಣ By: benaka (May 31 2006 - 8:16am)
- ಕನ್ನಡ ಸಾಹಿತ್ಯದ ಬಗ್ಯೆ ಅರಿವು..........! By: venkatesh (May 31 2006 - 1:37pm)
- ನಾವೇನು ಮಾಡಬಹುದು By: tksbhat (May 30 2006 - 1:36pm)
- ಕನ್ನಡದ ಈಗಿನ ಕವಿಗಳು By: ಮಹೇಶ ಭೋಗಾದಿ (May 31 2006 - 7:22am)
- ನನಗೂ ಒಬ್ಬರು ಕೇಳಿದರು; ಸಿ. ಅಶ್ವತ್ಥ ? ಯಾರದು? By: shreekant.mishrikoti (May 30 2006 - 11:59am)
- ವಿಕಿಪೀಡಿಯದಲ್ಲಿ ಬರೆಯಿರಿ! By: hpn (May 30 2006 - 10:57am)

RSS:
ಕನ್ನಡ ಸಾಹಿತ್ಯದ ಬಗ್ಯೆ ಅರಿವು..........!
ಬೆನಕರ ಮಾತುಗಳು ಇಲ್ಲಿ ಬಹಳ ಪ್ರಸ್ತುತ. ನಾವೆಲ್ಲಾ ಇನ್ನೇನೂ ಮಾಡದಿದ್ದರೂ, ಕನ್ನಡದಲ್ಲಿಯೆ ಮಾತಾಡುವುದು ಒಂದು ಅತಿ ಮುಖ್ಯ ವಿಶಯ.ಕನ್ನಡದಲ್ಲೂ ಇಂತಹ ಸಂಪದ್ಭರಿತ ಸಾಹಿತ್ಯ ಇದೆ ಅನ್ನೋದನ್ನು ನಾವು ನಮ್ಮ ಮಕ್ಕಳಿಗೆ ಮನವರಿಕೆ ಮಾಡಿಕೊಡಲು ನಮಗೆ ಮೊದಲು ಸಾಹಿತ್ಯದ ಬಗ್ಯೆ ಗೊತ್ತಿರಬೇಕು. ನಂತರ ಕುವೆಂಪು ಹಾಗೂ ಬೇರೆಯವರ ಬಗ್ಯೆ ತಿಳುವಳಿಕೆ ಕೋಡೋಣ.....
ಇನ್ನು ಕುವೆಂಪು, ಮಾಸ್ತಿ ಮತ್ತು ಹಲವರ ಬಗ್ಯೆ ಅವರಿಗೆ ಗೊತ್ತಿಲ್ಲ ಎಂದರೆ ಬೇಸರ ಬೇಡ. ನಮ್ಮ ವಯೋ ಮಿತಿಯ ಜನರನ್ನೇ ತೆಗೆದುಕೊಳ್ಳಿ. ಬೆಂಗಳೂರಿನಲ್ಲೇ ಬಹಳ ಜನ ನಿಮಗೆ/ನಮಗೆ ಸಿಗುತ್ತಾರೆ. ಶ್ರೀಕಾಂತ್ ಪ್ರಕಾರ ಸಿ.ಅಶ್ವಥ್ ಬಗ್ಯೆ ಗೊತ್ತಿಲ್ಲ. ಇದು ನಿಜ. ಹಾಗಿದೆ ಪರಿಸ್ತಿತಿ ! ಮೊದಲು ನಮ್ಮ ಮಕ್ಕಳು ಇರುವುದು ೨೧ ನೇ ಶತಮಾನದ ಪ್ರವೇಶ ದ್ವಾರದಲ್ಲಿ.ಅವರು ನೋಡುತ್ತಿರುವ ವಿಶ್ವದ ದರ್ಶನವೇ ಬೇರೆ. ಅವರಿಗಿರುವ ಸಮಸ್ಯೆಗಳನ್ನು ನೋಡಿದರೆ ಅವು ತೀರಭಿನ್ನ. ಅವರನ್ನು ನಾವು ಕುವೆಂಪು ಬಗ್ಯೆ ಪ್ರಚೋದಿಸಲು ಸಾಧ್ಯವೇ ? ನೋಡಿ. ಅವರು ಸಮಕಾಲೀನ ಸಾಹಿತ್ಯ ಓದಲಿ. ಅವರು ಕನ್ನಡ ಮಾಧ್ಯಮ ತೆಗೆದುಕೊಂಡರೆ ಮಾತ್ರ ಸುಲಭ ! ನಾನು ನೋಡಿದಂತೆ ಡಾ.ರಾಜ್ ನಮಗೆ ದೇವರು ! (ಶತಮಾನದಲ್ಲಿ ಒಮ್ಮೆ ಅಂಥಹವರು ಹುಟ್ಟುತ್ತಾರೆ; ಇದು ನಮಗೆಲ್ಲಾ ಗೊತ್ತು !) ಆದರೆ ಉತ್ತರದ ಎಷ್ಟು ಜನರಿಗೆ ಅವರ ಬಗ್ಯೆ ಗೊತ್ತಿತ್ತು. ಅವರೆಲ್ಲಾ ತಿಳಿದದ್ದು ಹಿಂದೀ ರಾಜ್ ಕುಮಾರ್ ಬಗ್ಯೆ ! ಬಹುಶಃ ವೀರಪ್ಪನಿಂದ ರಾಜ್ ಬಗ್ಯೆ ಸ್ವಲ್ಪ ತಿಳಿಯಿತು- ಪ್ರಚಾರವಾಯಿತು ! ದೇವೇ ಗೌಡರ ಕಾಲದಲ್ಲಿ ಸಿಕ್ಕ 'ಫಾಲ್ಕೆ ಪುರಸ್ಕಾರ ದೊರೆತಮೇಲೆ ಸ್ವಲ್ಪ ವಾಸಿ. ಇದು ನಿಜ. ಇದನ್ನು ನಾವು ಮನೆಯಲ್ಲಿ ಬದಲಾಯಿಸುವ ಸಾಧ್ಯತೆಗಳಿವೆ !!