ನಮ್ಮವರ ಅಭಿಮಾನ್ಯಶೂನ್ಯತೆಯ ಬಗ್ಗೆ ಯಾವಾಗಲೂ ನಾವು ಮುಂದು.
ಆದರೆ,
೧. ಹೊರಗಿನಿಂದ ಬಂದವರು ತಮ್ಮತನವನ್ನು ಉಳಿಸಿಕೊಳ್ಳುವುದಕ್ಕೆ ಹೆಚ್ಚು ಪ್ರಯತ್ನ ಪಡುತ್ತಾರೆ. ಅದಕ್ಕಾಗಿ ತಮ್ಮವರನ್ನು ಮೊದಲು ಹುಡುಕುತ್ತಾರೆ. ಇದಕ್ಕೆ ನಾವು ಹೊರತಲ್ಲ. ಉದಾಹರೆಣೆಗೆ ನಾನು ಗೋವಾ ಪ್ರವಾಸಕ್ಕೆ ಹೋದಾಗ ಕನ್ನಡ ಅಕ್ಷರಗಳನ್ನು ನೋಡಿದಾಗಲೆಲ್ಲ ಹಲ್ಲು ಕಿರಿಯುವಷ್ಟು ಸಂತೋಷವಾಗುತ್ತಿತ್ತು.
೨. ಕನ್ನಡದಲ್ಲಿ ಖಂಡಿತ ಮಾತನಾಡಿ. ಬಹಳಷ್ಟು ಜನ ನಿಸಾರ್ ಅಹಮದ್ ಹೇಳಿದಂತೆ "ಕುರಿಗಳು ಸಾರ್ ಕುರಿಗಳು".. ನೀವು ಶುರು ಮಾಡಿದ್ರ ಅವರೂ "ಚೆನ್ನಾಗಿರಲ್ಲವೇನೋ..." ಅನ್ನೋ ಭಯ ಬಿಟ್ಟು ಮಾತಾಡ್ತಾರೆ. ಹಾಗಂತ, ಇದು ಒಂದೇ ದಿನದಲ್ಲಿ ಆಗೋ ಕೆಲಸ ಅಲ್ಲ. ಮಂದಸ್ಮಿತರಾಗಿಯೇ ಕನ್ನಡದಲ್ಲಿ ಮಾತನಾಡಿ. ಕನ್ನಡ ಮಾತಾಡೊಲ್ಲ ಅನ್ನೋ ಒಂದು ಮಾತಿಗೆ ನಿಷ್ಟುರ ಕಟ್ಟಿಕೊಳ್ಳೋದು ಬೇಡ ಅಲ್ವೆ?
ನಾನಂತೂ ನಮ್ಮ ಆಫೀಸಿನಲ್ಲಿ ಕನ್ನಡಿಗರ ಜೊತೆ ಕನ್ನಡದಲ್ಲೇ ಮಾತನಾಡುವುದು. ಕನ್ನಡೇತರರಿಗೂ ಅವಕಾಶ ಸಿಕ್ಕಾಗಲೆಲ್ಲಾ ಸ್ವಲ್ಪ ಕನ್ನಡದ ಬಗ್ಗೆ ಉಪದೇಶ(ಕೊರೆತ) ಮಾಡುತ್ತೇನೆ.
ಅಭಿಮಾನ್ಯ ಶೂನ್ಯತೆಯೇ ಎಲ್ಲದಕ್ಕೂ ಉತ್ತರವಲ್ಲ
ನಮ್ಮವರ ಅಭಿಮಾನ್ಯಶೂನ್ಯತೆಯ ಬಗ್ಗೆ ಯಾವಾಗಲೂ ನಾವು ಮುಂದು.
ಆದರೆ,
೧. ಹೊರಗಿನಿಂದ ಬಂದವರು ತಮ್ಮತನವನ್ನು ಉಳಿಸಿಕೊಳ್ಳುವುದಕ್ಕೆ ಹೆಚ್ಚು ಪ್ರಯತ್ನ ಪಡುತ್ತಾರೆ. ಅದಕ್ಕಾಗಿ ತಮ್ಮವರನ್ನು ಮೊದಲು ಹುಡುಕುತ್ತಾರೆ. ಇದಕ್ಕೆ ನಾವು ಹೊರತಲ್ಲ. ಉದಾಹರೆಣೆಗೆ ನಾನು ಗೋವಾ ಪ್ರವಾಸಕ್ಕೆ ಹೋದಾಗ ಕನ್ನಡ ಅಕ್ಷರಗಳನ್ನು ನೋಡಿದಾಗಲೆಲ್ಲ ಹಲ್ಲು ಕಿರಿಯುವಷ್ಟು ಸಂತೋಷವಾಗುತ್ತಿತ್ತು.
೨. ಕನ್ನಡದಲ್ಲಿ ಖಂಡಿತ ಮಾತನಾಡಿ. ಬಹಳಷ್ಟು ಜನ ನಿಸಾರ್ ಅಹಮದ್ ಹೇಳಿದಂತೆ "ಕುರಿಗಳು ಸಾರ್ ಕುರಿಗಳು".. ನೀವು ಶುರು ಮಾಡಿದ್ರ ಅವರೂ "ಚೆನ್ನಾಗಿರಲ್ಲವೇನೋ..." ಅನ್ನೋ ಭಯ ಬಿಟ್ಟು ಮಾತಾಡ್ತಾರೆ. ಹಾಗಂತ, ಇದು ಒಂದೇ ದಿನದಲ್ಲಿ ಆಗೋ ಕೆಲಸ ಅಲ್ಲ. ಮಂದಸ್ಮಿತರಾಗಿಯೇ ಕನ್ನಡದಲ್ಲಿ ಮಾತನಾಡಿ. ಕನ್ನಡ ಮಾತಾಡೊಲ್ಲ ಅನ್ನೋ ಒಂದು ಮಾತಿಗೆ ನಿಷ್ಟುರ ಕಟ್ಟಿಕೊಳ್ಳೋದು ಬೇಡ ಅಲ್ವೆ?
ನಾನಂತೂ ನಮ್ಮ ಆಫೀಸಿನಲ್ಲಿ ಕನ್ನಡಿಗರ ಜೊತೆ ಕನ್ನಡದಲ್ಲೇ ಮಾತನಾಡುವುದು. ಕನ್ನಡೇತರರಿಗೂ ಅವಕಾಶ ಸಿಕ್ಕಾಗಲೆಲ್ಲಾ ಸ್ವಲ್ಪ ಕನ್ನಡದ ಬಗ್ಗೆ ಉಪದೇಶ(ಕೊರೆತ) ಮಾಡುತ್ತೇನೆ.