ಸರಿ ಒಪ್ಪಿದೆ. ಕೆಲವು ಪ್ರಶ್ನೆಗಳು
- ಉ: ಕನ್ನಡ ಉಳಿಸುವಿಕೆ: ಭಿನ್ನ ನಿಲುವು By: kannadakanda (Jul 21 2008 - 2:14pm)
- ಉ: ಕನ್ನಡ ಉಳಿಸುವಿಕೆ: ಭಿನ್ನ ನಿಲುವು By: mahesha (Jul 21 2008 - 10:30am)
- ಕನ್ನಡ ಉಳಿಸುವದು ಹೇಗೆ? By: anant (Oct 31 2006 - 9:29am)
- ಗುತ್ತಿಗೆ By: bhatpp (Jul 12 2006 - 8:39am)
- ಅನಿವಾಸಿಗಳ ತಪ್ಪೇನು? By: benaka (Jul 12 2006 - 7:27am)
- ಕಾಫಿ ಶಾಪ್ ಸೋಷಿಯಲಿಸಂ. By: ismail (Jul 12 2006 - 1:56pm)
- ಭೌದ್ಧಿಕ ಸರ್ಕಸ್! By: bhatpp (Jul 11 2006 - 8:48pm)
- ಉಳಿಸಿಕೊಳ್ಳುವಿಕೆ-ಕೆಲವು ವಿಚಾರಗಳು By: ರಾಮಕುಮಾರ್ (Jul 11 2006 - 5:10pm)
- ಎನ್ ಆರ್ ಐ ಕನ್ನಡಿಗರ ಕನ್ನಡ ಉಳಿಸುವಿಕೆ By: ismail (Jul 11 2006 - 6:29pm)
- ಸರಿ ಒಪ್ಪಿದೆ. ಕೆಲವು ಪ್ರಶ್ನೆಗಳು By: Sunil Jayaprakash (Jul 11 2006 - 2:18pm)
- ಇಂಗ್ಲಿಷ್ ಸೇರಿಸುವುದು ಯಾರು? By: ismail (Jul 11 2006 - 3:45pm)

RSS:
ಸರಿ ಒಪ್ಪಿದೆ. ಕೆಲವು ಪ್ರಶ್ನೆಗಳು
ಸರಿ ಆಯ್ತು ಕೆಲವು ಪ್ರಶ್ನೆಗಳು
೧. ಯೆಸ್ಟರ್ ಡೇ ಮಾರ್ನಿಂಗ್ ಏನು ಈಟ್ ಮಾಡಿದಿರಿ.
೨. ಟುಮಾರೋ ನಿಮ್ಮ ಮದರ್ ಬರ್ತಾ ಇದ್ದಾರಲ್ವ. Kindly bring her to our home also.
೩. ಟುಡೇ ನೈಟ್ ಏನು ತಿಂಡಿ ಪ್ರಿಪೇರ್ ಮಾಡೋಣ.
೪. ನಾನು ಅಂದೇ ಹಾಕಿದ್ದೇೆ, ಅದು ಉದಯ ಟಿವಿಯಲ್ಲಿ ಬಂದಿತ್ತು.
ಫಂಕ್ಷನ್ ಗೆ ಟು ಡೇಸ್ ಬಿಫೋರ್ ಫೇಸ್ ಪ್ಯಾಕ್ ಅಪ್ಲೈ ಮಾಡಿ.
೫. ಲಾಸ್ಟ್ ವೀಕ್ ತುಂಬಾ ಫೀವರ್ ಇತ್ತು. ಈಗ ಬೆಟರಾಗಿದ್ದೀನಿ.
ಇಂತಹ ವಾಕ್ಯಗಳನ್ನು, ಕನ್ನಡ ಅಭ್ಯಾಸ ಮಾಡಿಯೂ ನಿರ್ಲಕ್ಷ್ಯ ಭಾವ ಹೊಂದಿರುವ ನಮ್ಮಂಥ ಪಟ್ಟಣದ ಜನರು ಉಪಯೋಗಿಸುತ್ತಾ, ನಾನು ಮಾಡುತ್ತಿರುವುದು ತಪ್ಪಲ್ಲ, ಜಾಗತೀಕರಣದ ಪ್ರಭಾವ, ನನ್ನಿಂದ ಯಾವುದೇ ಸಂಸ್ಕೃತಿ ನಾಶವಾಗಿಲ್ಲ ಎಂದು ಬೊೂಬ್ಬೆಯಿಡುತ್ತೇವೆ.
ಇಲ್ಲಿ ಗಮನಿಸುವ ಅಂಶವೆಂದರೆ: ನೆನ್ನೆ, ನಾಳೆ, ಇವತ್ತು ಇಂತಹ ಇನ್ನೂ ಅನೇಕ ನಿರ್ದಿಷ್ಟ ಪದಗಳಿಗೆ ಎಂದೂ ಸಹ ನಾವು ಸಂಸ್ಕೃತದ ಮೊರೆ ಹೋಗಿಲ್ಲ. ಕನ್ನಡ ಸಂಸ್ಕೃತಿಯ ಪ್ರಭಾವವಿರುವ ಪದಗಳಿಗೆ ನಾವು ಸಂಸ್ಕೃತ ಪದಗಳ ಮೊರೆಹೋಗಬೇಕಾಗಿಲ್ಲ ಎಂಬುದನ್ನು ಶಂಕರಭಟ್ಟರೇ ನಿರೂಪಿಸಿದ್ದಾರಲ್ಲ. ನಾವು ಎಲ್ಲೂ ಇಂಗ್ಲೀಷ್ ಬೇಡವೆಂದಿಲ್ಲ. ಬಳಕೆಯಲ್ಲಿರುವ ಕನ್ನಡ ಸಂಸ್ಕೃತಿಯ ಬಿಂಬಿಸುವ ಬದಗಳಿಗೆ ಇಂಗ್ಲೀಷ್ ಬೇಡ ಎಂದಷ್ಟೇ ಹೇಳುವುದು.
ನೀವು ಅವಾಗವಾಗ ಕೊಡುವ ಮೆಕ್ಯಾನಿಕ್ ಉದಾಹರಣೆ ಕೂಡ ಇದಕ್ಕೆ ಹೊರತಾಗಿಲ್ಲ. ಗಮನಿಸಿ ನೋಡಿ, ನಮ್ಮ ನಿಮ್ಮ ಮೆಕ್ಯಾನಿಕ್ ಮೆಕ್ಯಾನಿಕಲ್ ಇಂಜಿನಿಯರಿಂಗಿಗೆ ಸಂಬಂಧಪಟ್ಟ ಇಂಗ್ಲೀಷ್ ಪದಗಳನ್ನು ಉಪಯೋಗಿಸುತ್ತಾನೆಯೇ ಹೊರತು ಇಂಗ್ಲೀಷ್ ಸಂಸ್ಕೃತಿಯ ಪ್ರಭಾವದಿಂದ ಮಾತನಾಡುವುದಿಲ್ಲ.
ಉದಾ : Screw driver ಹಿಡ್ಕೊಂಡು - Screw driver hold ಮಾಡ್ಕೊಂಡು
ಅವನು Screw driver ಹಿಡ್ಕೊಂಡು ಕೆಲಸ ಮಾಡ್ತಾನೆಯೇ ಹೊರತು Screw driver hold ಮಾಡ್ತಾ work ಮಾಡುವುದಿಲ್ಲ. work ಮಾಡಿದರೆ ಏನೂ ತಪ್ಪಿಲ್ಲ ಎನ್ನುವ ವಾದ ಇನ್ನು ಕೆಲವರದಾದರೆ ನಾವೇನೂ ಮಾಡಲು ಸಾಧ್ಯವಿಲ್ಲ.
ನಮಗೆ ಬೇಕಿರುವುದು ಕನ್ನಡದ ಉಳಿಸುವಿಕೆಯಲ್ಲ ಬೆಳೆಸುವಿಕೆ. ಬೆಳವಣಿಗೆಯಲ್ಲಿ ಉಳಿವು ಕೂಡ ಇದೆ ಮತ್ತು ಆ ಬೆಳವಣಿಗೆ ಬಳಕೆಯಲ್ಲಲ್ಲದೆ ಬೇರೆಲ್ಲೂ ಇಲ್ಲ.
ಸಿಲ್ಲಿ ಲಲ್ಲಿಯ ಚಿಕ್ಕೋಡಿ ಚಿನ್ನಸ್ವಾಮಿಯ ನಮಸ್ಕಾರ ಮತ್ತು ಜೈ ಕರ್ನಾಟಕ ಮಾತೆ.