ಎನ್ ಆರ್ ಐ ಕನ್ನಡಿಗರ ಕನ್ನಡ ಉಳಿಸುವಿಕೆ
- ಉ: ಕನ್ನಡ ಉಳಿಸುವಿಕೆ: ಭಿನ್ನ ನಿಲುವು By: kannadakanda (Jul 21 2008 - 2:14pm)
- ಉ: ಕನ್ನಡ ಉಳಿಸುವಿಕೆ: ಭಿನ್ನ ನಿಲುವು By: mahesha (Jul 21 2008 - 10:30am)
- ಕನ್ನಡ ಉಳಿಸುವದು ಹೇಗೆ? By: anant (Oct 31 2006 - 9:29am)
- ಗುತ್ತಿಗೆ By: bhatpp (Jul 12 2006 - 8:39am)
- ಅನಿವಾಸಿಗಳ ತಪ್ಪೇನು? By: benaka (Jul 12 2006 - 7:27am)
- ಕಾಫಿ ಶಾಪ್ ಸೋಷಿಯಲಿಸಂ. By: ismail (Jul 12 2006 - 1:56pm)
- ಭೌದ್ಧಿಕ ಸರ್ಕಸ್! By: bhatpp (Jul 11 2006 - 8:48pm)
- ಉಳಿಸಿಕೊಳ್ಳುವಿಕೆ-ಕೆಲವು ವಿಚಾರಗಳು By: ರಾಮಕುಮಾರ್ (Jul 11 2006 - 5:10pm)
- ಎನ್ ಆರ್ ಐ ಕನ್ನಡಿಗರ ಕನ್ನಡ ಉಳಿಸುವಿಕೆ By: ismail (Jul 11 2006 - 6:29pm)
- ಸರಿ ಒಪ್ಪಿದೆ. ಕೆಲವು ಪ್ರಶ್ನೆಗಳು By: Sunil Jayaprakash (Jul 11 2006 - 2:18pm)
- ಇಂಗ್ಲಿಷ್ ಸೇರಿಸುವುದು ಯಾರು? By: ismail (Jul 11 2006 - 3:45pm)

RSS:
ಎನ್ ಆರ್ ಐ ಕನ್ನಡಿಗರ ಕನ್ನಡ ಉಳಿಸುವಿಕೆ
ಪ್ರಿಯ ರಾಮ್ ಕುಮಾರ್ ನಿಮ್ಮ ಅಭಿಪ್ರಾಯವನ್ನು ನಾನೂ ಒಪ್ಪುತ್ತೇನೆ.
ಮಲೆನಾಡಿನ ಊರುಗಳೆಲ್ಲಾ ಹೀಗೆಯೇ ಇರುತ್ತವೆ. ನಮ್ಮ ಮನೆಯ ಉದಾಹರಣೆಯನ್ನು ಹೇಳುವುದಾದರೆ ನಾವು ಮನೆಯಲ್ಲಿ ಮಲಯಾಳಂ ಮಾತನಾಡುತ್ತೇವೆ. ಬೀದಿಯಲ್ಲಿ ಕನ್ನಡ ಮಾತನಾಡುತ್ತೇವೆ. ಈ ಬಗೆಯ ದ್ವಿ ಭಾಷಾ ವಾತಾವರಣ ನನ್ನ ಕನ್ನಡವನ್ನು ಪ್ರಭಾವಿಸಿದೆ ಎಂದಾಗಲೀ ಮಲೆಯಾಳಂ ಅನ್ನು ಪ್ರಭಾವಿಸಿದೆ ಎಂದಾಗಲೀ ನನಗನ್ನಿಸುತ್ತಿಲ್ಲ. ಹಾಗೆ ನೋಡಿದರೆ ನನಗೆ ಕನ್ನಡವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮಲೆಯಾಳಂ ಹಾಗೆಯೇ ಮಲೆಯಾಳಂ ಅನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಕನ್ನಡ ಸಹಕರಿಸಿದೆ.
ದಕ್ಷಿಣ ಕನ್ನಡದಲ್ಲಿ ಇದು ಬೇರೆಯೇ ರೀತಿಯಲ್ಲಿದೆ. ದಕ್ಷಿಣ ಕನ್ನಡಿಗರು ಗ್ರಾಂಥಿಕ ಕನ್ನಡ ಮಾತನಾಡುತ್ತಾರೆ. ಏಕೆಂದರೆ ಅಲ್ಲಿ ಆಡು ನುಡಿ ತುಳು, ಕೊಂಕಣಿ ಇಲ್ಲವೇ ಬ್ಯಾರಿ. ಕೊಂಕಣಿ ಅಥವಾ ಬ್ಯಾರಿ ಮಾತನಾಡುವವರು ಬೀದಿಯಲ್ಲಿ ತುಳು ಮಾತನಾಡುತ್ತಾರೆ. ಕನ್ನಡ ಅವರಿಗೆ ಹೊರ ಜಗತ್ತಿನ ಜತೆಗೆ ಸಂಪರ್ಕ ಇರಿಸಿಕೊಳ್ಳುವ ಇಂಗ್ಲಿಷ್ ನಂಥ ಭಾಷೆ. ಆದರೂ ಕನ್ನಡಕ್ಕೆ ಸಂಬಂಧಿಸಿದ ಪ್ರಮುಖ ಕೆಲಸಗಳು ದಕ್ಷಿಣ ಕನ್ನಡದಲ್ಲಿಯೇ ನಡೆದವು ಎಂಬುದನ್ನು ನಾವು ಮರೆಯಲು ಸಾಧ್ಯವೇ.
ಕನ್ನಡ ಉಳಿಸುವ ಎನ್ ಆರ್ ಐ ಕನ್ನಡಿರ ಭ್ರಮೆಯಿಂದ ಕನ್ನಡಿಗರನ್ನು ಹೊರತರಬೇಕಾದ ಅಗತ್ಯವಿದೆ. ಕನ್ನಡಕ್ಕೆ ಅಪಾಯವಿದೆ ಎಂದು ಭಾವಿಸುತ್ತಿರುವವರಲ್ಲಿ ಹೆಚ್ಚಿನವರು ಆರ್ಥಿಕ ಅಗತ್ಯಗಳಿಗಾಗಿ ಇಂಗ್ಲಿಷನ್ನು ಬಳಸುತ್ತಿರುವವರು (ಇವರು ಕನ್ನಡ ನಾಡಿನೊಳಗಿದ್ದೇ ಎನ್ ಆರ್ ಐ ಕನ್ನಡಿಗರಾದವರು) ಎಂಬುದು ಗಮನಾರ್ಹ. ತಮಾಷೆ ಎಂದರೆ ಆಗುಂಬೆಯ, ಇಲ್ಲ ಸಕಲೇಶಪುರದ ಸಹಜವಾಗಿ ಕನ್ನಡ ಬಳಸುವ ಜನ ಬ್ಲಾಗ್ ಬರೆಯುವುದೂ ಇಲ್ಲ. ಬ್ಲಾಗ್ ಓದುವುದೂ ಇಲ್ಲ. ಹಾಗಾಗಿ ಅವರಿಗೆ ಕನ್ನಡಕ್ಕೆ ಅಪಾಯವಿದೆ ಎಂಬ ಭಯವೂ ಕಾಡುತ್ತಿಲ್ಲ.