ಅನಿವಾಸಿಗಳ ತಪ್ಪೇನು?
- ಉ: ಕನ್ನಡ ಉಳಿಸುವಿಕೆ: ಭಿನ್ನ ನಿಲುವು By: kannadakanda (Jul 21 2008 - 2:14pm)
- ಉ: ಕನ್ನಡ ಉಳಿಸುವಿಕೆ: ಭಿನ್ನ ನಿಲುವು By: mahesha (Jul 21 2008 - 10:30am)
- ಕನ್ನಡ ಉಳಿಸುವದು ಹೇಗೆ? By: anant (Oct 31 2006 - 9:29am)
- ಗುತ್ತಿಗೆ By: bhatpp (Jul 12 2006 - 8:39am)
- ಅನಿವಾಸಿಗಳ ತಪ್ಪೇನು? By: benaka (Jul 12 2006 - 7:27am)
- ಕಾಫಿ ಶಾಪ್ ಸೋಷಿಯಲಿಸಂ. By: ismail (Jul 12 2006 - 1:56pm)
- ಭೌದ್ಧಿಕ ಸರ್ಕಸ್! By: bhatpp (Jul 11 2006 - 8:48pm)
- ಉಳಿಸಿಕೊಳ್ಳುವಿಕೆ-ಕೆಲವು ವಿಚಾರಗಳು By: ರಾಮಕುಮಾರ್ (Jul 11 2006 - 5:10pm)
- ಎನ್ ಆರ್ ಐ ಕನ್ನಡಿಗರ ಕನ್ನಡ ಉಳಿಸುವಿಕೆ By: ismail (Jul 11 2006 - 6:29pm)
- ಸರಿ ಒಪ್ಪಿದೆ. ಕೆಲವು ಪ್ರಶ್ನೆಗಳು By: Sunil Jayaprakash (Jul 11 2006 - 2:18pm)
- ಇಂಗ್ಲಿಷ್ ಸೇರಿಸುವುದು ಯಾರು? By: ismail (Jul 11 2006 - 3:45pm)

RSS:
ಅನಿವಾಸಿಗಳ ತಪ್ಪೇನು?
ಮಿತ್ರರೇ,
ಗಿಡ-ಮರಗಳು ಕಾಡಿನಲ್ಲಿ ತಾವೇ ಬೆಳೆಯುತ್ತವೆ; ಏಕೆಂದರೆ ಅಲ್ಲಿ ಮೊದಲೇ ಸಸ್ಯ ಸಮೃದ್ಧಿಗೆ ಅಗತ್ಯವಾದ ಎಲ್ಲವೂ ದೊರಕುತ್ತವೆ. ನಾವು ಬೆಳೆಸಬೇಕಿರುವುದು ಪಸೆಯಾರಿಹೋಗಿರುವ ಒಣ ನಾಡಿನಲ್ಲಿ; ಏಕೆಂದರೆ ಅಲ್ಲಿ ನೆಲದ ಜಲ ಇಂಗುತ್ತಿದೆ; ಮರಗಳು ಉರುಳುತ್ತಿವೆ; ಹೊಸ ಸಸಿಗಳಿಗೆ ಕಳ್ಳಿ ಹಬ್ಬುತ್ತಿದೆ! ಹಾಗಾಗಿ, "ಸಸ್ಯಸಂಕುಲ ನಾಶವಾಗುತ್ತಿದೆ, ರಕ್ಷಿಸಿ!" ಎಂದರೆ, "ಏನಿಲ್ಲ, ಕಾಡುಗಳೆಲ್ಲಾ ಚೆನ್ನಾಗಿಯೇ ಇವೆ" ಎಂಬ ಉತ್ತರ ದೊರಕಿದಂತಾಯಿತು! ಆ ಎಲ್ಲ ಕಾಡುಗಳು ಶುಷ್ಕ ನಾಡಾಗಿ ಪರಿವರ್ತನೆ ಹೊಂದಲು ಬಿಡಬಾರದೆಂಬುದೂ ಮರೆತು ಹೋದಂತಿದೆ!
ಯಾವುದನ್ನೇ ಆದರೂ ಸರಿಯಾಗಿ ಕಲಿಯೋಣವೆಂಬ ಆಸೆಯೇ ಇಲ್ಲವಾದ್ದರಿಂದ ಕೆಲವರಿಗೆ, ಅದು 'ಬೌದ್ಧಿಕ ಕಸರತ್ತು' ಎನಿಸುವುದು; ತಮಗೆ ಇಷ್ಟವಾಗದೆ, ಕಷ್ಟವಾದಲ್ಲಿ, ಹೋಗಲಿ ಎಂದು ಬಿಡದೆ, ಇತರರೂ ಕಲಿಯಬೇಕಿಲ್ಲ ಎಂದು ವಾದಿಸುವವರಿಗೆ ಏನು ಹೇಳುವುದು? ಅಸಂಬದ್ಧ ಎನ್ ಆರ್ ಐ ವಾದವನ್ನು ಇಲ್ಲಿ ಬಲವಂತವಾಗಿ ತೂರಿಸುವ ಅಗತ್ಯವಿಲ್ಲ. ಕನ್ನಡ ಉಳಿಸಲು ಹಂಬಲಿಸುವ ಅನಿವಾಸಿಗಳ ತಪ್ಪೇನು? ತಾವು ಕನ್ನಡದಲ್ಲಿ ಬರೆಯಬೇಕೆಂಬ ಹಂಬಲದಿಂದ ಬ್ಲಾಗುತ್ತಿರುವವರ ತಪ್ಪೇನು? ಈ ಹಂಬಲ, ಚರ್ಚೆ ಕೇವಲ ಒಣ ಪ್ರತಿಷ್ಠೆಯೇ ಆಗಿದೆ ಎಂಬುದು ಅವರವರ ಪೂರ್ವಾಗ್ರಹ ಅಷ್ಟೇ. ಕನ್ನಡವನ್ನು ಕೆಲವರು ಅಥವಾ ಕೆಲವು ಭಾಗದ ಜನರು ಗುತ್ತಿಗೆಗೆ ತೆಗೆದುಕೊಂಡಂತೆ ಮಾತನಾಡುವುದು ಭಾಷಾದೃಷ್ಟಿಯಿಂದ ಸರಿಯಲ್ಲ. ಕನ್ನಡದ ಅಭಿವೃದ್ಧಿಗೆ ಒಳ-ಹೊರ ನಾಡಿನವರು 'ಏನನ್ನು' 'ಹೇಗೆ' ಮಾಡಬೇಕೆಂದು ಚರ್ಚಿಸಬೇಕೇ ಹೊರತು, ಈ ಚರ್ಚೆ ಕೇವಲ ಬೌದ್ಧಿಕ ಕಸರತ್ತು ಎನ್ನುವವರು ತಮ್ಮ ಬುದ್ಧಿ ಖರ್ಚು ಮಾಡದೆ, ಕಸರತ್ತಿನಲ್ಲಿ ಭಾಗವಹಿಸದೆ ಸುಮ್ಮನಿರುವುದು ಎಲ್ಲರಿಗೂ ಒಳಿತು.
ಇಲ್ಲಿ ಯಾರನ್ನೂ ಟೀಕಿಸುವ ಉದ್ದೇಶ ನನಗಿಲ್ಲ. ನನ್ನ ಅಭಿಪ್ರಾಯವನ್ನು ನಾನು ಹೇಳಿದ್ದೇನೆ; ಬದಲಿ ನಿಲುವುಗಳಿರಬಹುದು, ಚಿಂತೆಯಿಲ್ಲ; ಎಲ್ಲವೂ ಕನ್ನಡಕ್ಕೆ ಒಳಿತನ್ನು ಮಾಡುವುದಾದರೆ ಸಂತೋಷ. ಇನ್ನು ಕೀಲಿ ಮಣೆ ನಿಮ್ಮ ಮುಂದಿದೆ. ನಾನು ವಿಶ್ರಮಿಸುತ್ತೇನೆ.
ನಿಮ್ಮವ
ಬೆನಕ