ಆತಂಕ ಸಕಾರಣವಾಗಿದೆ
- ಆತಂಕ ಸಕಾರಣವಾಗಿದೆ By: Rohit (Jul 28 2006 - 3:45pm)
- ಕಮಲಾಕರ್, By: hpn (Jul 28 2006 - 12:27pm)
- ಉ:ಕನ್ನಡ ನಶಿಸುತ್ತಿದೆ ಎಂಬ ಗಾಭರಿಗೆ ಬಿದ್ದರೆ ಹೇಗೆ. By: shreekant.mishrikoti (Jul 28 2006 - 11:43am)
- ಗಾಬರಿ OR ಗಾಭರಿ? By: hpn (Jul 28 2006 - 12:25pm)
- ಬೆಂಕಿಯಿರದೇ ಹೊಗೆಯಾಡದು By: ಸಂಗನಗೌಡ (Jul 28 2006 - 11:10am)

RSS:
ಆತಂಕ ಸಕಾರಣವಾಗಿದೆ
ಇಂತಹ ಒಂದು ಚರ್ಚೆ ಕನ್ನಡದ ಸಂದರ್ಭದಲ್ಲಿ ಈಹೊತ್ತು ಬಲು ಅಗತ್ಯವಾಗಿದೆ. ಇದಕ್ಕೆ ನಾಂದಿ ಹಾಡಿರುವ ಗೆಳೆಯ ಕಮಲಾಕರರಿಗೆ ಧನ್ಯವಾದಗಳು. ಈ ವಿಚಾರದ ಕುರಿತಾದ ನನ್ನ ಅನಿಸಿಕೆಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.
ಒಂದು ಭಾಷಿಕ ಜನಸಮುದಾಯವಾಗಿ ಕನ್ನಡ ಇಂದು ಆತ್ಮವಿಶ್ವಾಸದ ಕೊರತೆ ಹಾಗೂ ಕೀಳರಿಮೆಯಿಂದ ಸೊರಗಿದೆ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಕನ್ನಡ, ಕನ್ನಡಿಗರನ್ನು ಬಾಧಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಇದುವೇ ಮೂಲಭೂತ ಕಾರಣ. ಬಹುಭಾಷಾ ದೇಶವಾದ ಭಾರತದಲ್ಲಿ ಪ್ರತಿಯೊಂದು ಭಾಷಾಸಮುದಾಯದವರೂ ತಮ್ಮನ್ನು ತಾವು Assert ಮಾಡಿಕೊಂಡು, ತಮಗೆ ನ್ಯಾಯವಾಗಿ ದಕ್ಕಬೇಕಾದ ಸೌಲಭ್ಯಗಳನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ, ಕನ್ನಡಿಗರು ಈಗಲೂ ತಮ್ಮ ಅಗತ್ಯಗಳನ್ನು ತಮ್ಮ ಭಾಷಾ identityಗೆ ಬೆಸೆಯಲು ತಿಣುಕಾಡುತ್ತಿದ್ದಾರೆ.
ಅದು ಕೃಷ್ಣೆಯ ಬಗೆಗಿನ ಹೋರಾಟವಾಗಿರಬಹುದು. ಗದಗ-ಬಿಜಾಪುರ ಬ್ರಾಡ್ ಗೇಜ್ ರೈಲುಮಾರ್ಗದ ಸಮಸ್ಯೆಯಾಗಿರಬಹುದು, ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವಾಗಿರಬಹುದು, ಬೆಳಗಾವಿಯ ಗಡಿ ಸಮಸ್ಯೆಯಾಗಿರಬಹುದು, ಇವುಗಳ್ಯಾವುವು ನಮಗೆ ಒಟ್ಟೂ ಕನ್ನಡಿಗರ ಬದುಕಿನ ಹೋರಾಟ ಎಂದೆನಿಸಿಯೇ ಇಲ್ಲ. ಕೃಷ್ಣಾ ನದಿ ನೀರಿನ ಸಮಸ್ಯೆ ಅದು ಕೇವಲ ಉತ್ತರ ಕರ್ನಾಟಕದ ಸಮಸ್ಯೆ. ಕನ್ನಡದ ಸಮಸ್ಯೆಯಲ್ಲ.... ನಾವು ಕನ್ನಡಿಗರು ಬಹಳ rational ಆಗಿ ಯೋಚನೆ ಮಾಡುವವರು. ನಾವ್ಯಾವಾಗಲೂ level headed. We dont mix emotions. ಕೊನೆಗೆ ಹೊಡೆತ ತಿನ್ನುತ್ತಿರುವವರೂ ನಾವುಗಳೇ.
Aggressiveness ಹಾಗೂ Assertion ಮಧ್ಯೆ ಬಹಳ ತೆಳು ಪದರವಿದೆಯೆಂಬುದೇನೋ ನಿಜ. Morally/Statutorily Unabiding ಆಗಿ ಗುರುತಿಸಿಕೊಳ್ಳಲು ಬಹುಶಃ ನಾವು ಕನ್ನಡಿಗರು ಹೆದರುತ್ತೇವೆ ಎಂಬುದು ನನ್ನ ಗುಮಾನಿ. ಇದನ್ನೇ ನಮ್ಮ ದೌರ್ಬಲ್ಯವೆಂದು ತೆಗೆದುಕೊಂಡು ನಮ್ಮ ನೆರೆ ರಾಜ್ಯಗಳು ಸೌಹಾರ್ದತೆಯನ್ನು ಕದಡುತ್ತಿವೆ.
ಇನ್ನು ಕನ್ನಡಿಗರಲ್ಲೇ ಮನೆಮಾಡಿರುವ ಈ ಆತ್ಮವಿಶ್ವಾಸದ ಕೊರತೆಯು ಅನ್ಯಭಾಷಾ ಪ್ರೀತಿಯಾಗಿ ಕಂಡುಬರುತ್ತದೆ. ದಕ್ಷಿಣದಲ್ಲಿ ತಮಿಳು, ತೆಲುಗು, ಇಂಗ್ಲೀಷು, ಉತ್ತರದಲ್ಲಿ, ಮರಾಠಿ, ಉರ್ದುಗಳ ಬಗೆಗೆ ಕನ್ನಡಿರರಿಗೆ ಇರುವ affinityಯನ್ನು ಮತ್ತೇನೆನ್ನಬೇಕು.
ನಗರ ಕೇಂದ್ರಿತ ಸಮಾಜವ್ಯವಸ್ಥೆಯತ್ತ ದಾಪುಗಾಲು ಹಾಕುತ್ತಿರುವ ಈ ನಮ್ಮ ರಾಜ್ಯದಲ್ಲಿ ಕನ್ನಡವು ಹಳ್ಳಿಗಳಲ್ಲಿ ಬೆಚ್ಚಗಿದೆ ಎಂದು ತಿಳಿಯುವುದೂ ಅಪಾಯದ ಸಂಕೇತವಲ್ಲವೇ. ಹೊಸ ತಂತ್ರಜ್ಞಾನ/ಅಭಿವೃದ್ಧಿ ಮೊದಲು ಕಾಲಿಡುವುದು ನಗರಕ್ಕೇನೇ. ಅಲ್ಲಿಯೇ ಕನ್ನಡಕ್ಕೆ ಪೂರಕ ಪರಿಸ್ಥಿತಿಯಿಲ್ಲದಿದ್ದರೆ ಕನ್ನಡದ ಅಭಿವೃದ್ಧಿ ಪೋಷಣೆ ಹೇಗಾದೀತು. ಇದಕ್ಕೆ ಒಂದು ಜ್ವಲಂತ ಉದಾಹರಣೆ ಎಫ್. ಎಂ. ರೇಡಿಯೋ ವಾಹಿನಿಗಳು. ನಗರ ಕೇಂದ್ರಿತವಾದ ಈ ವಾಹಿನಿಗಳಿಗೆ, ಗ್ರಾಮಾಂತರ ಪ್ರದೇಶದಲ್ಲಿ ಬಳಕೆಯಾಗುವ ಕನ್ನಡ ಭಾಷೆ ತುಚ್ಛವಾಗಿ ಕಾಣಿಸುತ್ತದೆ. ಹಾಗಾಗಿ ತಮ್ಮ ಕಾರ್ಯಕ್ರಮಗಳಲ್ಲಿ ಕನ್ನಡವನ್ನು ಉಪೇಕ್ಷಿಸುತ್ತಾರೆ. ಇದರಿಂದಾಗಿ ಕನ್ನಡಕ್ಕೆ ಅಭಿವ್ಯಕ್ತಿಯ ಒಂದು ಮಾಧ್ಯಮದ ಬಾಗಿಲು ಮುಚ್ಚಿದಂತಲ್ಲವೇ....
ಕಡೆ ಪಕ್ಷ ಈ ಆತಂಕವಾದರೂ ನಮ್ಮನ್ನು ಯೋಚನೆಗೆ ಹಚ್ಚೀತು. ಚರ್ಚೆಗಳೂ, ಆರೋಗ್ಯಕರ ಸಮುದಾಯ ಚಿಂತನೆಯ ಕುರುಹುಗಳು. ನಮ್ಮನ್ನು ಇನ್ನಷ್ಟು Creative ಆಗಿ ಕೆಲಸಮಾಡಲು ಹಚ್ಚಬಲ್ಲದ್ದೂ ಅದೇ....