ಮಿತ್ರರೇ,
ಚಿದಂಬರ ರಹಸ್ಯ ಎಂದರೆ ಮುಖ್ಯವಾಗಿ ಎರಡು ಅರ್ಥಗಳಿವೆ:
೧.ಚಿದಂಬರದ ದೇಗುಲದ ರಹಸ್ಯ
೨.ಎಂದಿಗೂ ಬಗೆಹರಿಯದ, ಬಿಡಿಸಲಸಾಧ್ಯವಾದ ರಹಸ್ಯ
೧.ಚಿದಂಬರವೆಂದರೆ - ಚಿತ್ + ಅಂಬರ = ತಿಳಿ + ಆಕಾಶ = 'ಆಕಾಶವನ್ನು ತಿಳಿಯುವುದು ಹೇಗೆಂಬ' ರಹಸ್ಯ.
ತಮಿಳುನಾಡಿನ ಚಿದಂಬರಂ ಎಂಬ ಸ್ಥಳದಲ್ಲಿರುವ ಶಿವದೇವಾಲಯ ಇತಿಹಾಸ ಪ್ರಸಿದ್ಧವಾದುದು. ಪರಮೇಶ್ವರನ ಐದು ಮುಖಗಳನ್ನು ಪಂಚಭೂತಗಳಿಗೆ ಹೋಲಿಸಿ ಸುಮಾರು ಚೋಳರ ಕಾಲದಲ್ಲಿ ನಿರ್ಮಿತವಾದ ಪ್ರಸಿದ್ಧ ಐದು ದೇವಾಲಯಗಳಲ್ಲಿ ಇದೂ ಒಂದು. ಈ ದೇಗುಲದ ಅಂಶವಾದ 'ಆಕಾಶತತ್ವ'ವನ್ನು ಆರಾಧಿಸಲೆಂದು ದೇಗುಲದ ಗರ್ಭಗುಡಿಯಲ್ಲಿ ಯಾವ ಪ್ರತಿಮೆಯೂ ಇಡಲ್ಪಟ್ಟಿಲ್ಲವೆನ್ನುತ್ತಾರೆ. ಈ 'ನಿರಾಕಾರ ಬ್ರಹ್ಮ'ವನ್ನು ಸಾಕಾರ ಪರಮಶಿವನೆಂದು ಕಾಣುವ ಬಗೆಯೇ ಇಲ್ಲಿನ 'ರಹಸ್ಯ'! ಅರ್ಥಾತ್ ಇಲ್ಲದ್ದನ್ನು ಇದೆಯೆಂದೂ, ಇರುವುದೆಲ್ಲವೂ ಇಲ್ಲವೆಂದೂ ತಿಳಿಯಲೆತ್ನಿಸಿದಾಗ ಹೇಗಾಗುವುದೆಂದು ಕಾಣುವ ನಿಗೂಢತೆಯೇ ಈ 'ಚಿದಂಬರ ರಹಸ್ಯ'.
೨.ಚಿದಂಬರವೆಂದರೆ - ಚಿತ್ + ಅಂಬರ = ತೆರೆ + ವಸ್ತ್ರ = ತೆಳುವಾದ ತೆರೆಯ ವಸ್ತ್ರದಿಂದ ಮುಚ್ಚಲ್ಪಟ್ಟ ರಹಸ್ಯ.
ಅದೇ ಚಿದಂಬರ ದೇವಾಲಯದಲ್ಲಿ ಕಾಣಲಾಗದ 'ಆಕಾಶ'ವನ್ನು ತೆರೆಯಿಂದ ಮುಚ್ಚಿ, ಅದರ ಮುಂಭಾಗದಲ್ಲಿ ತಾಂಡವನೃತ್ಯವನ್ನಾಡುವ ರುದ್ರನ 'ನಟರಾಜ' ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಈ ಸಾಕಾರ ನಟರಾಜನ ಹಿಂಬದಿಯ ತೆರೆಯ ಮರೆಯ ನಿರಾಕಾರದ ರಹಸ್ಯವೇ 'ಚಿದಂಬರ ರಹಸ್ಯ'.
ಕಾಲಾಂತರದಲ್ಲಿ ಇದೇ ನುಡಿಗಟ್ಟು ಜನಜನಿತವಾಗಿ, ಯಾವುದೇ ತಿಳಿಯಲಸಾಧ್ಯ ವಿಷಯವಿದ್ದರೂ, ತೆರೆ-ಮರೆಯ ಕತೆಯಾಗಿದ್ದರೂ ಅದನ್ನು ರೂಢಿಯಿಂದ 'ಚಿದಂಬರ ರಹಸ್ಯ' ಎನ್ನುತ್ತಾರೆ.
ದೊಡ್ಡ ಕಂಪನಿಯೊಂದಕ್ಕೆ ಕೆಲಸ ಮಾಡುವುದೆಂದರೆ ರೈಲು ಪ್ರಯಾಣಮಾಡಿದಂತೆ. ನೀವು ಅರವತ್ತು ಮೈಲು ವೇಗದಲ್ಲಿದ್ದರೂ ಅಥವಾ ರೈಲು ಅರವತ್ತು ಮೈಲು ವೇಗದಲ್ಲಿದ್ದರೂ, ನೀವು ಮಾತ್ರ ಕುಳಿತಿರಲೇ ಬೇಕು.
ಚಿದಂಬರ ರಹಸ್ಯ ಎಂದರೆ
ಮಿತ್ರರೇ,
ಚಿದಂಬರ ರಹಸ್ಯ ಎಂದರೆ ಮುಖ್ಯವಾಗಿ ಎರಡು ಅರ್ಥಗಳಿವೆ:
೧.ಚಿದಂಬರದ ದೇಗುಲದ ರಹಸ್ಯ
೨.ಎಂದಿಗೂ ಬಗೆಹರಿಯದ, ಬಿಡಿಸಲಸಾಧ್ಯವಾದ ರಹಸ್ಯ
೧.ಚಿದಂಬರವೆಂದರೆ - ಚಿತ್ + ಅಂಬರ = ತಿಳಿ + ಆಕಾಶ = 'ಆಕಾಶವನ್ನು ತಿಳಿಯುವುದು ಹೇಗೆಂಬ' ರಹಸ್ಯ.
ತಮಿಳುನಾಡಿನ ಚಿದಂಬರಂ ಎಂಬ ಸ್ಥಳದಲ್ಲಿರುವ ಶಿವದೇವಾಲಯ ಇತಿಹಾಸ ಪ್ರಸಿದ್ಧವಾದುದು. ಪರಮೇಶ್ವರನ ಐದು ಮುಖಗಳನ್ನು ಪಂಚಭೂತಗಳಿಗೆ ಹೋಲಿಸಿ ಸುಮಾರು ಚೋಳರ ಕಾಲದಲ್ಲಿ ನಿರ್ಮಿತವಾದ ಪ್ರಸಿದ್ಧ ಐದು ದೇವಾಲಯಗಳಲ್ಲಿ ಇದೂ ಒಂದು. ಈ ದೇಗುಲದ ಅಂಶವಾದ 'ಆಕಾಶತತ್ವ'ವನ್ನು ಆರಾಧಿಸಲೆಂದು ದೇಗುಲದ ಗರ್ಭಗುಡಿಯಲ್ಲಿ ಯಾವ ಪ್ರತಿಮೆಯೂ ಇಡಲ್ಪಟ್ಟಿಲ್ಲವೆನ್ನುತ್ತಾರೆ. ಈ 'ನಿರಾಕಾರ ಬ್ರಹ್ಮ'ವನ್ನು ಸಾಕಾರ ಪರಮಶಿವನೆಂದು ಕಾಣುವ ಬಗೆಯೇ ಇಲ್ಲಿನ 'ರಹಸ್ಯ'! ಅರ್ಥಾತ್ ಇಲ್ಲದ್ದನ್ನು ಇದೆಯೆಂದೂ, ಇರುವುದೆಲ್ಲವೂ ಇಲ್ಲವೆಂದೂ ತಿಳಿಯಲೆತ್ನಿಸಿದಾಗ ಹೇಗಾಗುವುದೆಂದು ಕಾಣುವ ನಿಗೂಢತೆಯೇ ಈ 'ಚಿದಂಬರ ರಹಸ್ಯ'.
೨.ಚಿದಂಬರವೆಂದರೆ - ಚಿತ್ + ಅಂಬರ = ತೆರೆ + ವಸ್ತ್ರ = ತೆಳುವಾದ ತೆರೆಯ ವಸ್ತ್ರದಿಂದ ಮುಚ್ಚಲ್ಪಟ್ಟ ರಹಸ್ಯ.
ಅದೇ ಚಿದಂಬರ ದೇವಾಲಯದಲ್ಲಿ ಕಾಣಲಾಗದ 'ಆಕಾಶ'ವನ್ನು ತೆರೆಯಿಂದ ಮುಚ್ಚಿ, ಅದರ ಮುಂಭಾಗದಲ್ಲಿ ತಾಂಡವನೃತ್ಯವನ್ನಾಡುವ ರುದ್ರನ 'ನಟರಾಜ' ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಈ ಸಾಕಾರ ನಟರಾಜನ ಹಿಂಬದಿಯ ತೆರೆಯ ಮರೆಯ ನಿರಾಕಾರದ ರಹಸ್ಯವೇ 'ಚಿದಂಬರ ರಹಸ್ಯ'.
ಕಾಲಾಂತರದಲ್ಲಿ ಇದೇ ನುಡಿಗಟ್ಟು ಜನಜನಿತವಾಗಿ, ಯಾವುದೇ ತಿಳಿಯಲಸಾಧ್ಯ ವಿಷಯವಿದ್ದರೂ, ತೆರೆ-ಮರೆಯ ಕತೆಯಾಗಿದ್ದರೂ ಅದನ್ನು ರೂಢಿಯಿಂದ 'ಚಿದಂಬರ ರಹಸ್ಯ' ಎನ್ನುತ್ತಾರೆ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.