ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಅದನ್ನೇ ನಾನೂ ಹೇಳುತ್ತಿರುವುದು!

August 14, 2006 - 12:30pm — benaka

ಅದನ್ನೇ ನಾನೂ ಹೇಳುತ್ತಿರುವುದು!

benaka's picture

ಮಹೇಶರೇ,

Quote:
೧.ಅಚ್ಚಕನ್ನಡದ ಅಕ್ಕರಗಳಾದ ೞ,ಱ ಗಳನ್ನು 'ಉಚ್ಚಾರ' ಮಾಡಬಹುದಿತ್ತಲ್ಲ, ಅವನ್ನು ತೆಗೆದುದು, ಅವು ಹೇಳಲು(ಉಚ್ಚರ) ಸಲೀಸಲ್ಲವೆಂದು ತಾನೆ? ಹಾಗಿದ್ದಲ್ಲಿ "ಷ, ಶ, ಋ" ಮತ್ತು ದೊಡ್ಡುಸಿರು(ಮಹಾಪ್ರಾಣ)ಗಳನ್ನು ತೆಗೆಯಬೇಕಿತ್ತು.

ಯಾರೂ, ಯಾವ ಅಕ್ಕರವನ್ನೂ 'ತೆಗೆದುಹಾಕಿಲ್ಲ' ಸ್ವಾಮಿ! 'ರ' ಹಾಗೂ 'ಱ' ಜೊತೆಗೆ 'ಳ' ಮತ್ತು 'ೞ'ಕಾರದ ಸದ್ದು ಒಂದೇ ರೀತಿ ಕೇಳುತ್ತಿದ್ದರಿಂದ 'ರ' ಹಾಗೂ 'ಳ'ಗಳು 'ಉಳಿದುಕೊಂಡಿವೆ' ಅಷ್ಟೆ. ಅಲ್ಲದೆ ಹೊಸಗನ್ನಡದಲ್ಲಿ ಅವೆರಡೂ ಅಕ್ಷರಗಳು ಇಲ್ಲವಾದದ್ದಕ್ಕೆ ಸಕ್ಕದವೇ ಕಾರಣ ಎಂಬ ಮಾತಿನಲ್ಲಿ ಹುರುಳಿಲ್ಲ!

Quote:
ಸಕ್ಕದ ಮತ್ತು ಕನ್ನಡ ಹೇಗೆ ಬೇರೆ ಬೇರೆ.
೧)ಸಕ್ಕದದ 'ಕ್ರಿಯಾ'ಪದಗಳು ಹೆಸರುಪದದ(ನಾಮಪದದ) 'ಲಿಂಗ'ವನ್ನು 'ಅವಲಂಬಿ'ಸಿಲ್ಲ. ಆದರೆ ಕನ್ನಡವು ಹಾಗಲ್ಲ

ಸಃ ಗಾಯತಿ - ಅವನು ಹಾಡುತ್ತಾನೆ
ಸಾ ಗಾಯತಿ - ಅವಳು ಹಾಡುತ್ತಾಳೆ
ತತ್ ಗಾಯತಿ - ಅದು ಹಾಡುತ್ತದೆ

ನನಗೆ ಗೊತ್ತು ನೀವಿದನ್ನು ಹೇಳುತ್ತೀರಿ ಎಂದು; ಕ್ರಿಯಾಪದ ಲಿಂಗವನ್ನು ಅವಲಂಬಿಸಿರುವುದೇ ದ್ರಾವಿಡಭಾಷೆಯ ಭಿನ್ನತೆಯಲ್ಲ. ಏಕೆಂದರೆ ಸಕ್ಕದದಿಂದಲೇ ಹುಟ್ಟಿದ್ದೆಂದು ಎಲ್ಲರೂ ಒಪ್ಪಿರುವ 'ಹಿಂದೀ', ಉರ್ದು ಇತ್ಯಾದಿ ಭಾಷೆಗಳಲ್ಲೂ ಕ್ರಿಯಾಪದದ ಲಿಂಗಾವಲಂಬನೆ ಇದೆ! ಉದಾ:

ರಾಮ್ ಗಾತಾ ಹೈ - ರಾಮನು ಹಾಡುತ್ತಾನೆ.
ಸೀತಾ ಗಾತೀ ಹೈ - ಸೀತೆಯು ಹಾಡುತ್ತಾಳೆ.

ಇದಕ್ಕೇನು ಹೇಳುತ್ತೀರಿ?

Quote:

ಕನ್ನಡವು ಸಕ್ಕದಿಂದ ಬಂದಿದ್ದರೆ, ಕನ್ನಡ "ಕೋಳಿ", "ಅರಿವು", "ಓಕುಳಿ", "ನುಸುಳು" ಮುಂತಾದ ಪದಗಳು ಯಾವ ಸಕ್ಕದದ ಪದಗಳ ತತ್ಭವಗಳು?

೪)ಸಕ್ಕದದ ಪದಗಳು ಕನ್ನಡದ ಪದಗಳಾಗಿದ್ದರೆ ತತ್ಸಮ, ತತ್ಭವಗಳು ಏಕೆ ಆಗುತ್ತಿದ್ದವು? ಇದುವೆ ದೊಡ್ಡ ಪುರಾವೆ. ಸಕ್ಕದದ ಉಚ್ಚರಣೆಗೆ ಸಲೀಸಲ್ಲದ ಪದಗಳು ಕನ್ನಡದ ಬಾಯಿಗೆ ಬಿದ್ದು ಹಾಗೆ ಆದವು, ಹೊರತು ಪಾಣಿನಿಯೆ ಅದಕ್ಕಾಗಿ ಯಾವ ಬೇಗರಣ(ವ್ಯಾಕರಣ) ಕಾನೂನನ್ನು ಬರೆದಿಲ್ಲ.

೫)ಮಂದಿಪದ(ಜಾನಪದ)ದಲ್ಲಿ ಸಕ್ಕದದ ಪದಗಳು ಕಡಮೆ, ಅಂದರೆ ಬಹಳ ಬಹಳ ಕಡಮೆ ಏಕೆ? ಏಕೆಂದರೆ ಹಳ್ಳಿಯವರಿಗೆ(ಅಚ್ಚ ಕನ್ನಡಿಗರು, ಪಟ್ಡಣದ ಬೇರೆ ನುಡಿಯ ಗಾಳಿಯು ಸೋಕದವರು) ಆ ಪದಗಳೇ ಗೊತ್ತಿಲ್ಲ. ಮಂದಿಪದದಲ್ಲಿ ತತ್ಸಮಗಳು ಕೂಡ ಕಡಮೆ ಏಕೆ?


ಕನ್ನಡ ಭಾಷೆಯ ಎಲ್ಲ ಪದಗಳೂ ತದ್ಭವಗಳಾಗುವ ಅವಶ್ಯಕತೆ ಏನಿದೆ? ಎಲ್ಲವೂ ತತ್ಸಮ-ತದ್ಭವವಾಗಿರುವ ಭಾಷೆ ಮೊದಲೇ ಇದ್ದವು - ಅವೇ ಪ್ರಾಕೃತ ಹಾಗೂ ಪಾಳೀ. ಎಲ್ಲವೂ ಹಾಗೆಯೇ ಇದ್ದಿದ್ದರೆ ಆಗ ಕನ್ನಡ ಹುಟ್ಟುತ್ತಲೇ ಇರಲಿಲ್ಲ ಅಲ್ಲವೇ!

Quote:
೨)ಅಕ್ಕರಪಟ್ಟಿಯನ್ನು ಹಿಂದಿನವರು ಸಕ್ಕದದ ಅಕ್ಕರಪಟ್ಟಿಗೆ ಹೊಂದುವಂತೆ ಮಾಡಿದ್ದರೆ ಹೊರತು, ಕನ್ನಡದ ಅಕ್ಕರಪಟ್ಟಿ ಮೊದಲಿನಿಂದಲು ಹಾಗೆ ಇರಲಿಲ್ಲ.

ಇದಕ್ಕೆ ಸಾಕ್ಷಿ ಏನು? ಎಲ್ಲಿದೆ ಪುರಾವೆ? ಕೇವಲ ಪಂಡಿತರ ಅಭಿಪ್ರಾಯ ಅಷ್ಟೆ. ಪುರಾವೆಯಿದ್ದಲ್ಲಿ ತಿಳಿಯಲು ನಾನೂ ಕುತೂಹಲಿಯಾಗಿದ್ದೇನೆ.

Quote:
೩)ಕೇಶಿರಾಜನೇ ಆಗಲಿ ಇಲ್ಲವೆ ನೃಪತುಂಗನೇ ಆಗಲಿ ತಮ್ಮ ಕೃತಿಗಳಲ್ಲಿ ಸಕ್ಕದದ ಪದಗಳನ್ನು ಹೇಗೆ ಬಳಸಬೇಕೆಂದು ಹೇಳಿದ್ದಾರಂತೆ. >ಅಂದರೆ ಅವರಿಗೆ ಕೂಡ ಅದು ಕನ್ನಡದಲ್ಲ, ಹೊರಗಿನಿಂದ ಬರುವುವ ಪದಗಳೆಂದು ಗೊತ್ತಿತ್ತು. ಅದಕ್ಕಾಗಿಯೆ ಆ ಪದಗಳ ಬಗ್ಗೆ, ಹಾಗೆ ಬರೆದದ್ದು.
ಆದರೆ ಸಿಕ್ಕಾಪಟ್ಡೆ ಸಕ್ಕದದ ಪದಗಳನ್ನು ಕನ್ನಡಕ್ಕೆ ತುರುಕಿ, ಅವರ "ಪಾಂಡಿತ್ಯವನ್ನು", "ಭಾಷಾಪ್ರೌಢಿಮೆ"ಯನ್ನು ತೋರಿಸಿ, ಇದುವೇ "ಶಿಷ್ಟ ಭಾಷೆ", "ಅತ್ಯುನ್ನತ ಕನ್ನಡ", "ಸಾಹಿತ್ಯಿಕ ಕನ್ನಡ", ಈ ಬೆರಕೆ ಕನ್ನಡಕ್ಕಿಂತ ಮಿಗಿಲಾದ ಕನ್ನಡವಿಲ್ಲ, ಮಿಕ್ಕಲ್ಲ ಕನ್ನಡವು ಕೀಳು, "ನಾಗರಿಕ ಸಂಭಾಷಣೆಗೆ" "ಯೋಗ್ಯ"ವಲ್ಲ, ಎಂದರೆ ಅದು ಸರಿಯೆ?

ಅದನ್ನೇ ನಾನೂ ಕೇಳುತ್ತಿರುವುದು!

Quote:
ಇದು ಬರಿ ಒಬ್ಬಿಬ್ಬರು ಮಾಡಬೇಕಾದುದಲ್ಲ, ದಿಟವಾಗಿ ಕನ್ನಡಿಗರಾಗಿದ್ದರೆ, ತಾಯಿನುಡಿಯೇ ನಮಗೆ ಎಲ್ಲದಕ್ಕಿಂದ ಮಿಗಿಲು ಎಂದು ಅನ್ನಿಸುವವರೆಲ್ಲರು ಮಾಡಬೇಕಾದುದು. ಹಾಗೆ ಅನ್ನಿಸದವರು ಕನ್ನಡದ ಬಗ್ಗೆ ಆಡಿದ ಮಾತುಗಳು, ಬರಿ ಪೊಳ್ಳಮಾತುಗಳಾಗುವುವು. (ಏನು ಮಾಡುವುದು ಅಂತಹವರೇ ಎಲ್ಲಡೆ ಹೆಚ್ಚು)

ಅದನ್ನೇ ನಾನೂ ಹೇಳುತ್ತಿರುವುದು!

ಮಹೇಶರೇ, ಗುಟ್ಟಲ್ಲದ ಗುಟ್ಟನ್ನು ಹೇಳುತ್ತೇನೆ ಕೇಳಿ. ಸಂಸ್ಕೃತ - ದ್ರಾವಿಡ ಭಾಷೆಗಳನ್ನು ಬೇರ್ಪಡಿಸಿ ನೋಡುವ ಉದ್ದೇಶ ಯಾವ ಭಾರತೀಯನಿಗೂ ಇರಲಿಲ್ಲ; ಇದನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡು ಇಲ್ಲದ ಭೇದವನ್ನು ಕಲ್ಪಿಸಿ ತಮಾಷೆ ನೋಡಿದವರೇ ಬ್ರಿಟಿಷರು! ಇದರಿಂದ ಆರ್ಯಾವರ್ತ - ದಕ್ಷಿಣಾಪಥಗಳಲ್ಲಿ ಹಗೆತನ ಹೆಚ್ಚಿ ಹದಗೆಟ್ಟು ಈ ಪರಿಸ್ಥಿತಿಗೆ ಬಂದಿದೆ. ಊಹೆಯಲ್ಲಿದ್ದ ತೆಂಕಣದ ತಾಯ್ನುಡಿಗೆ 'ದ್ರಾವಿಡ' ಎಂಬ ಹೆಸರಿಟ್ಟವರೇ ಆಂಗ್ಲರು! ಇದಕ್ಕೆ ಅವರು 'ಸಂಶೋಧನೆ' ಎಂಬ ಹಣೆಪಟ್ಟಿ ಹಚ್ಚಿದರು ಅಷ್ಟೇ. ಇನ್ನೂ ಈ ಹಗೆತನ ಮುನ್ನಡೆಯಲಿ ಎನ್ನುವಿರಾ? ಉತ್ತರದೊಂದಿಗೆ ದಕ್ಷಿಣವನ್ನು ಬೆಸೆಯುವ ಮಹಾನ್ ಕೊಂಡಿಯೇ ಸಂಸ್ಕೃತಭಾಷೆ ಎಂಬುದನ್ನು ಮರೆಯದಿರಿ. ನಮ್ಮ-ನಿಮ್ಮೆಲ್ಲರಿಗಿಂತ ಕನ್ನಡವನ್ನು ಚೆನ್ನಾಗಿ ತಿಳಿದಿದ್ದ ಹಳೆ-ನಡು-ಹೊಸಗನ್ನಡದ ಆಗಿಹೋದ ಕವಿ-ಕಲಿಗಳು ತಮ್ಮ ಕೃತಿಗಳಲ್ಲಿ ಸಕ್ಕದವನ್ನು ಕೊಲ್ಲದೆ ಉಳಿಸಿಕೊಂಡಿದ್ದೂ ಇದೇ ಕಾರಣಕ್ಕಾಗಿಯೇ. 'ನಮಗೆ ಹಿಂದೀ ಬೇಡವೇ ಬೇಡ' ಎಂದ ನೆರೆರಾಜ್ಯದ ದುರಭಿಮಾನದ ಫಲವಾಗಿ ಆಂಗ್ಲದ ಅಟ್ಟಹಾಸ ಮೆರೆದಿರುವ ದುರ್ಗತಿ ನಮಗೂ ಬಾರದಿರಲಿ!

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಭಾಷೆಯಲ್ಲಿ ಸರಿ ಮತ್ತು ತಪ್ಪು By: olnswamy (57 replies) August 8, 2006 - 8:17am
  • ನಿದ್ದೆ ಹತ್ತಿತ್ತು By: ಸಂಗನಗೌಡ (Aug 20 2006 - 8:11pm)
  • ನಮ್ಮ ಕೈಲಾದ್ದನ್ನು ಮಾಡೋಣ By: benaka (Aug 14 2006 - 3:03pm)
    • ಶಿಷ್ಟಭಾಷೆ! By: ಮಹೇಶ ಭೋಗಾದಿ (Aug 14 2006 - 4:36pm)
      • ಬರೆಯುತ್ತಿರುವವರನ್ನು ಹೆದರಿಸಿ ಓಡಿಸಬೇಡಿ ;-) By: hpn (Aug 15 2006 - 10:43pm)
        • ಸಂವಹನವೊಂದೇ By: ಮಹೇಶ ಭೋಗಾದಿ (Aug 16 2006 - 10:56am)
          • "ಉಳಿಸುವ, ಬೆಳೆಸುವ ಗೋಳು" ಒಂದು non-existent entity By: hpn (Aug 16 2006 - 11:28am)
  • ಮಾಡಿನೋಡೋಣ! By: benaka (Aug 14 2006 - 9:54am)
    • ಉ: ಮಾಡಿನೋಡೋಣ! By: kannadakanda (Jul 22 2008 - 1:16pm)
      • ಉ: ಮಾಡಿನೋಡೋಣ! By: mahesha (Jul 22 2008 - 1:37pm)
        • ಉ: ಮಾಡಿನೋಡೋಣ! By: savithru (Jul 22 2008 - 2:18pm)
          • ಉ: ಮಾಡಿನೋಡೋಣ! By: mahesha (Jul 22 2008 - 2:53pm)
            • ಉ: ಮಾಡಿನೋಡೋಣ! By: savithru (Jul 23 2008 - 2:15pm)
              • ಉ: ಮಾಡಿನೋಡೋಣ! By: mahesha (Jul 23 2008 - 3:13pm)
                • ಉ: ಮಾಡಿನೋಡೋಣ! By: savithru (Jul 24 2008 - 12:23pm)
    • ಹೇಗೆ ಬೇರೆ ಮತ್ತು ಯಾವುದು ತುರುಕಾಟ By: ಮಹೇಶ ಭೋಗಾದಿ (Aug 14 2006 - 11:19am)
      • ಅದನ್ನೇ ನಾನೂ ಹೇಳುತ್ತಿರುವುದು! By: benaka (Aug 14 2006 - 12:30pm)
        • ಇದಕ್ಕೆ ಉತ್ತರವೆಲ್ಲಿ? By: ಮಹೇಶ ಭೋಗಾದಿ (Aug 14 2006 - 2:59pm)
  • ದೆವ್ವ ದೊಡ್ಡದೈತೆ ಕಣಪ್ಪೊ! By: ಸಂಗನಗೌಡ (Aug 13 2006 - 6:20pm)
    • ಸಮ್ಮೇಳನ By: ಮಹೇಶ ಭೋಗಾದಿ (Aug 14 2006 - 11:22am)
  • ಸಕ್ಕದವದು ಕಲ್ಲು By: ಸಂಗನಗೌಡ (Aug 12 2006 - 11:52am)
    • ಕಲ್ಲು-ಸಕ್ಕರೆ-ಹಾಲು By: ಮಹೇಶ ಭೋಗಾದಿ (Aug 12 2006 - 2:53pm)
  • ಭೂತ ಚೇಷ್ಟೆ By: benaka (Aug 12 2006 - 7:35am)
  • ಕನ್ನಡಂಗಳ್ By: ಸಂಗನಗೌಡ (Aug 11 2006 - 4:43pm)
  • ರಸಂನೇ ರಸ ಮಾಡಿ By: ಸಂಗನಗೌಡ (Aug 11 2006 - 3:58pm)
  • ರಸಂನೂ ಬೇಡ,ಸಾರೂ ಬೇಡ By: ಸಂಗನಗೌಡ (Aug 11 2006 - 3:36pm)
    • ಏನ್ ಮಾಡೋದು By: nareshov (Aug 11 2006 - 7:56pm)
  • ಭೂತ ಅಂದುಕೊಳ್ಳಿ By: ಸಂಗನಗೌಡ (Aug 11 2006 - 3:02pm)
    • ಒರಟು By: ಮಹೇಶ ಭೋಗಾದಿ (Aug 12 2006 - 9:33am)
    • ಸಂಸ್ಕೃತದ ತದ್ಭವ ಸಕ್ಕದ By: ಮಹೇಶ ಭೋಗಾದಿ (Aug 11 2006 - 3:27pm)
  • ದೆವ್ವವನ್ನು ಬೇಗ ಬಿಡಿಸಿಕೊಳ್ಳಿ By: benaka (Aug 11 2006 - 1:56pm)
    • ತಪ್ಪು ಮಾಹಿತಿ By: ಮಹೇಶ ಭೋಗಾದಿ (Aug 11 2006 - 2:34pm)
    • - By: ಮಹೇಶ ಭೋಗಾದಿ (Aug 11 2006 - 2:30pm)
  • ನನ್ನ ತಾಯ್ನುಡಿ ಕನ್ನಡ By: ಸಂಗನಗೌಡ (Aug 11 2006 - 12:52pm)
    • ಸಾರು, By: nareshov (Aug 11 2006 - 7:36pm)
    • ದೆವ್ವ ತೊಲಗಲಿ By: ಮಹೇಶ ಭೋಗಾದಿ (Aug 11 2006 - 1:29pm)
  • ರಸಂ:ಸರಸಂ-ವಿರಸಂ! By: benaka (Aug 11 2006 - 11:35am)
    • ರಸಾಭಾಸ By: ismail (Aug 11 2006 - 3:37pm)
    • ಅಯ್ಯೊ ಒಂದು ಕನ್ನಡದಲ್ಲಿ ಸಾರಿಗೆ ರಸಂ ಎನ್ನುವರೇನೋ! By: ಮಹೇಶ ಭೋಗಾದಿ (Aug 11 2006 - 11:53am)
  • ತಿಳಿಸಿ By: ಸಂಗನಗೌಡ (Aug 11 2006 - 8:54am)
    • ಪ್ರಯತ್ನ By: ಮಹೇಶ ಭೋಗಾದಿ (Aug 11 2006 - 9:46am)
  • ಟ್ರಾಯ್ ಮಾಡೋಣ By: ಸಂಗನಗೌಡ (Aug 10 2006 - 3:15pm)
    • ತಿಳಿ/ಅರಿ By: ಮಹೇಶ ಭೋಗಾದಿ (Aug 10 2006 - 3:48pm)
  • ಕನ್ನಡ ಬಳಸಲು ಹೆದರಿಕೆಯೇಕೆ? By: benaka (Aug 10 2006 - 8:04am)
    • ಮೞೆ ಬೇಳುತ್ತಿದೆ... :P By: nareshov (Aug 11 2006 - 7:30pm)
    • ಒಂದು ರಸಂ ಮೀಮಾಂಸೆ By: ismail (Aug 10 2006 - 1:30pm)
  • ಧನ್ಯವಾದಗಳು ಮತ್ತು 'ಮೈ ಫೇರ್‍ ಲೇಡಿ' By: Rohit (Aug 9 2006 - 4:57pm)
    • ಸೇವಂತಿ ಪ್ರಸಂಗ ಮತ್ತು ಭಾಷೆ By: shreekant.mishrikoti (Aug 9 2006 - 5:11pm)
      • ಹೃದಯವೇಕೆ, ಎದೆ/ಗುಂಡಿಗೆಯಿಲ್ಲವೆ? By: ಮಹೇಶ ಭೋಗಾದಿ (Aug 10 2006 - 12:39pm)
        • facts: By: nareshov (Aug 11 2006 - 2:46pm)
  • ಯಾರ ಕನ್ನಡ, ಕನ್ನಡ? By: Kamalakar (Aug 9 2006 - 3:12pm)
    • ಭಾಷಾಭಿಮಾನ By: ismail (Aug 9 2006 - 3:56pm)
  • ಕನ್ನಡಂಗಳ್ By: ಮಹೇಶ ಭೋಗಾದಿ (Aug 9 2006 - 1:45pm)
    • ಕನ್ನಡಂಗಳು ಬಗೆ ಬಗೆಯ ದೇಸಿಗಳು By: ismail (Aug 9 2006 - 10:35pm)
      • ಕನ್ನಂಡಂಗಳೊ ಅಂದರೆ? By: ಮಹೇಶ ಭೋಗಾದಿ (Aug 10 2006 - 11:33am)
  • ಕಳಿಸು By: gvmt (Aug 8 2006 - 10:18pm)
    • ಉ: ಕಳಿಸು By: kannadakanda (Jul 21 2008 - 3:51pm)
    • ಕಳುಹು. By: ಮಹೇಶ ಭೋಗಾದಿ (Aug 9 2006 - 12:34pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 11:03pm
  • Narayana
    ಉ: ಚೌರದವನ ಕಷ್ಟ ಸುಖ
    October 13, 2008 - 10:57pm
  • muralihr
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 10:19pm
  • muralihr
    ಉ: ಬನ್ನೇರುಗಟ್ಟ ಯಾವು ಪ್ರಾಣಿಯ ಬೀಡು?
    October 13, 2008 - 10:10pm
  • kishoreyc
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೧೦
    October 13, 2008 - 9:57pm
  • pradeep_adiga
    ಉ: ಏಶ್ಯಾದ ಮೊದಲ ಮಹಿಳಾ ಸ್ಕೈ ಡೈವರ್
    October 13, 2008 - 9:54pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 13, 2008 - 9:51pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 13, 2008 - 9:49pm
  • agilenag
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 8:25pm
  • kannadakanda
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 8:09pm
ಇನ್ನಷ್ಟು


ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator