ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಇದಕ್ಕೆ ಉತ್ತರವೆಲ್ಲಿ?

August 14, 2006 - 2:59pm — ಮಹೇಶ ಭೋಗಾದಿ

ಇದಕ್ಕೆ ಉತ್ತರವೆಲ್ಲಿ?

ಮಹೇಶ ಭೋಗಾದಿ's picture

ಇದು ಹಗೆತನವೂ ಅಲ್ಲ, ಜಂಭವೋ ಅಲ್ಲ, ಭಂಡತನವೂ ಅಲ್ಲ.

ಕಾವ್ಯದಲ್ಲಿ, ಕವಿತೆಯಲ್ಲಿ, ಮಹಾಪ್ರಬಂಧದಲ್ಲಿ, ಏನು ಬೇಕಾದರು ಮಾಡಲಿ, ಅದರ ಗೊಡವೆ ಬೇಡ.

ಆದರೆ ಸಾಮಾನ್ಯ ಕನ್ನಡದಲ್ಲಿ, ಅದು ಸುದ್ದಿಪತ್ರಿಕೆಗಳು, ಟಿವಿ ವಾಹಿನಿಗಳು, ಸರಕಾರಿ ಸುತ್ತೋಲೆಗಳಲ್ಲಿ, ಮುಂತಾದ ಮೂಮೂಲಿ ಜನರನ್ನು ಮುಟ್ಟುವ ಸಂಗತಿಗಳನ್ನು ಬರೆಯುವಾಗ ಅತಿಯಾದ ಶುದ್ಧ ಸಕ್ಕದದ ಬಳಕೆ ಏಕೆ?

"ಹತ್ತಿರ" - "ಸಾಮೀಪ್ಯ"
"ಆಕಳು/ಹಸು" - "ಪಶು"
"ಕೋಳಿ" - "ಕುಕ್ಕುಟ"
"ಹೆಚ್ಚು ಮಳೆ" - "ಅತಿ ವೃಷ್ಟಿ"
"ಬರ" - "ಅನಾವೃಷ್ಟಿ"
"ನಾಲ್ಕು ದಾರಿ" - "ಚತುಷ್ಪಥ"
"ಚಿನ್ನದ ಹಬ್ಬ" - "ಸುವರ್ಣಮಹೋತ್ಸವ"
"ಚಿನ್ನದ ಪದಕ" - "ಸ್ವರ್ಣ ಪದಕ"
"ಹುಡುಗರ ಸ್ಕೂಲು" - "ಬಾಲಕರ ಶಾಲೆ".

ಹೀಗೆ ಮುಂತಾದವು. ಬರಿ ೩೭%(ಸಪ್ತಾಧಿಕ ತ್ರಿಂಶತಿ) ಅಕ್ಕರಜ್ಷಾನವಿರುವ ನಮ್ಮ ರಾಜ್ಯದಲ್ಲಿ. ಹೆಚ್ಚು ಹೆಚ್ಚು ಜನರು ಕನ್ನಡವನ್ನು ಓದಬೇಡವೆ? ಪಾಪ ಅಂತಹವರು ಯಾವುದೆ ಬರೆವಣಿಗೆಯನ್ನು ತಗೆದರೂ, ಹೇರಳವಾದ ಕ್ಲಿಷ್ಟ, ಉಚ್ಚರಣೆಗೆ ಕಷ್ಟವಾದ ಸಂಸ್ಕೃತ ಪದ ಪ್ರಯೋಗಗಳು. ಇದನ್ನೇ ಬೇಡವೆಂದು ಹೇಳುತ್ತಿರುವುದು.

ಬೆನಕರೇ, ನೀವೇ ಮೊದಲು ಸಂಸ್ಕೃತವು ಕನ್ನಡದ ಅಜ್ಜಿ, ತಮಿಳು ತಾತ ಮುಂತಾದ ತಪ್ಪು ವಾದಗಳನ್ನು ಎತ್ತಿದ್ದು. ನಾವು ಕನ್ನಡದ ಅಚ್ಚಿ ತಾತರನ್ನು ನಿಂದಿಸಿದೆವು ಎಂದಿದ್ದು. ನಾನು ಅಲ್ಲಿಯವರೆಗೆ ಕೇವಲ ಕ್ಲಿಷ್ಟವಾದ ಸಂಸ್ಕೃತಪದಪ್ರಯೋಗದ ಬಗ್ಗೆ ಹೇಳುತ್ತಿದ್ದೆನು.

ಎಲ್ಲ ಪ್ರಶ್ನೆಗೆ ಕುಲಂಕುಶವಾಗಿ ವಿವರೋತ್ತರವನ್ನಿತ್ತ ನಿಮಗೆ, ಈ ಒಂದು ಪ್ರಶ್ನೆಯು ನೇತ್ರಾವಲೋನ-ಯೋಗ್ಯವಾಗಲಿಲ್ಲ. ಅಥವಾ ನಾನು ಬರೆದ ಕನ್ನಡವು ಸರಿಯಿಲ್ಲವೆ, ಅಸಾಧುವೆ. ಒಟ್ಟಿನಲ್ಲಿ ನಿಮಗೆ ಸಂಸ್ಕೃತಪದಗಳ ಅಗಾಧ ಪದಪ್ರಯೋಗದಿಂದ ಸಾಮನ್ಯ ಕನ್ನಡ ಭಾಷಿಕನಿಗೆ ಓದಲು, ಬರೆಯಲು ಕಷ್ಟವಾಗುವುದು, ಆದುದರಿಂದ ಕನ್ನಡದ ಪದಗಳನ್ನು ಕನ್ನಡದಲ್ಲಿ ಬಳಸಿರಿ ಎಂದು ಹೇಳಿದ ಮಾತ್ರಕ್ಕೆ, ಗಗನವೇ ಶಿರೋಭಾರವಾದಂತೆ ಮಾಡುವುದೇ . ನಾವು ಕಠೋರವಾಗಿರುವದರಲ್ಲಿ ನಿಷ್ಟೂರವಾಗಿರುವುದರಲ್ಲಿ ಅರ್ಥವಿದೆ, ನಮ್ಮ ಭಾಷೆಗೆ ಹಾನಿಯಾಗುತ್ತಿದೆ, ಆದರೆ ಸಂಸ್ಕೃತವೇ ಸರ್ವೋಚ್ಛವೆಂಬಂತೆ, ಅದಕ್ಕೆ ನಮ್ಮ ಮಾತುಗಳು ಅಗಾಧವಾದ ಅತ್ಯಾಚಾರವನ್ನು ಅನಾಚಾರವನ್ನು ಮಾಡುತ್ತಿದೆ ಎಂಬಂತೆ ಭಾವಿಸಿದರೆ, ಅದು ಮಾತೃಭಾಷೆಗಿಂತ ಇತರೈಕಾಭಾಷಾದಾಸ್ಯದ ತಾರಕ ಸ್ಥಿತಿ. ಅದಕ್ಕಾಗಿಯೆ ಅಗಾಧವಾದ ಸಂಸ್ಕೃತಪದಪ್ರಯೋಗದಿಂದ ವಿಜೃಂಭಿಸುವ ವಾಕ್ಯಗಳಿಂದ ಉಕ್ತವಾದುದನ್ನೆ ಹೇಳಿದ್ದೇನೆ.

ನಾನು ವಕ್ತವ್ಯವೆಂದು ಭಾವಿಸಿದ ವಚನಗಳ ಭಾವದ ಸಾರಾಂಶವು, ಅಧೋಲಿಖಿತವಾಗಿವೆ, ಕಿಞ್ಚಿತ್ತು ಅದನ್ನು ಪರಾಮರ್ಶಿಸಿಕೊಳ್ಳಿ.

Quote:
ಸಿಕ್ಕಾಪಟ್ಡೆ ಸಕ್ಕದದ ಪದಗಳನ್ನು ಕನ್ನಡಕ್ಕೆ ತುರುಕಿ, ಅವರ "ಪಾಂಡಿತ್ಯವನ್ನು", "ಭಾಷಾಪ್ರೌಢಿಮೆ"ಯನ್ನು ತೋರಿಸಿ, ಇದುವೇ "ಶಿಷ್ಟ ಭಾಷೆ", "ಅತ್ಯುನ್ನತ ಕನ್ನಡ", "ಸಾಹಿತ್ಯಿಕ ಕನ್ನಡ", ಈ ಬೆರಕೆ ಕನ್ನಡಕ್ಕಿಂತ ಮಿಗಿಲಾದ ಕನ್ನಡವಿಲ್ಲ, ಮಿಕ್ಕಲ್ಲ ಕನ್ನಡವು ಕೀಳು, "ನಾಗರಿಕ ಸಂಭಾಷಣೆಗೆ" "ಯೋಗ್ಯ"ವಲ್ಲ, ಎಂದರೆ ಅದು ಸರಿಯೆ?

ಅಂತತಃ, ನನ್ನಿಂದ ಉಕ್ತವಾದ ಚರ್ಚಾಭಾಗದ ಪೂರ್ವಭಾವನೆಗಳು.(ಪೂರ್ವ ಸಂದಾಯ ಆಟೋ ರಿಕ್ಷಾ!).

೧. ಇದು ಸಂಸ್ಕೃತಭಾಷಾ ದ್ವೇಷವಲ್ಲ.
೨. ಕನ್ನಡ-ಸಂಸ್ಕೃತ ಭಾಷಾದ್ವಯಗಳು ಜೊತೆ-ಜೊತೆಗೆ ವೃದ್ಧಿಸಬಹುದು. ಆದರೆ ಒಂದು ಇನ್ನೊಂದು ವೃದ್ಧಿಗೆ ಭಾದಕವಾಗಬಾರದು. ಒಂದು ಇನ್ನೊಂದರ ಮೇಲೆ ಸಂಪೂರ್ಣಪ್ರಭಾವಶಾಲಿನಿಯಾಗ(ಭಾಷಾ ಸ್ತ್ರೀಲಿಂಗ) ಬಾರದು.
೩. ಇಂದು ಅನ್ಯಭಾಷಿಕರು ಹೇರಳವಾಗಿರುವ ದುಸ್ಸಂದರ್ಭದಲ್ಲಿ, ಕನ್ನಡವು ಸಂಪೂರ್ಣ ಸಂಸ್ಕೃತಮಯವಾಗಿ ಕಂಡರೆ, ಅವರು ಹೇಳುವುದಿಷ್ಟೆ "ಕನ್ನಡದಲ್ಲೇನಿದೆ, ಸರ್ವವೂ ಕೇವಲ ಸಂಸ್ಕೃತದ ಪದಗಳೇ", ಇದು ನಿಜವೆ? ಇಂದಿನ ಮಟ್ಟಿಗೆ ಇದು ಅಕ್ಷರಶಃ ಶತಪ್ರತಿಶತ ಸತ್ಯ.

ನಮಗೆ ಕನ್ನಡದ ವಿಶೇಷತೆ, ಅದರದೇ ಅದ ವಿಶೇಷ ಗುಣ, ಸೌಂದರ್ಯವನ್ನು ಉಳಿಸಿ.ಬೆಳೆಸಿಕೊಂಡು ಹೋಗಬೇಕೆನ್ನಿಸಬಾರದೆ? ಈ ವಿಶೇಷತೆ, ಸೊಬಗನ್ನು ಹೆಚ್ಚು ಹೆಚ್ಚು ಕನ್ನಡದ ಪದಗಳನ್ನು ಬಳಸುವುದರಿಂದ ಉಳಿಯುವುದೋ, ಇಲ್ಲವೆ, ಹೆಚ್ಚು ಸಂಸ್ಕೃತ-ಪದ-ಪ್ರಯೋಗದಿಂದಲೋ?

ಇದು ಅವರವರ ವಿವೇಚನೆಗೆ ಬಿಟ್ಟಿದ್ದು ಎನ್ನಬಹುದು, ಆದರೆ ಇದು ಪ್ರತಿಯೊಬ್ಬ ಕನ್ನಡಭಾಷಿಕನಿಗೆ ಪರಿಣಾಮ ಬೀರುವ ಸಂಗತಿಯಲ್ಲವೆ?

Quote:

ಬೆನಕ:
ಇನ್ನೇನು ಸ್ವಾಮಿ? ನೀವು ಹೇಳಹೊರಟಿದ್ದೂ ಇದೇ ತಾನೆ? ಇನ್ನು ಹೇಳಿದ್ದಾಯಿತಲ್ಲ.... ಮಾಡಿನೋಡೋಣ!

ನಾನು ಹೇಳಿದ್ದನ್ನೆಲ್ಲಾ ನೀವು ಒಪ್ಪುವಿರೆಂಬ ಭ್ರಮೆ ನನಗಿಲ್ಲ; ಕೊಂಕು ತೆಗೆಯಲೇಬೇಕೆಂದು ಪಟ್ಟು ಹಿಡಿದು ಕುಳಿತವರಿಗೆ ಏನು ಹೇಳಲೂ ಶಕ್ತನಲ್ಲ; ಗಾದೆಯ ಮಾತಿನಂತೆ, "ಅವರ ಹೆಂಡ ಅವರ ಭಂಗಿ" ಅಷ್ಟೇ! ಯಾರೇನು ಮಾಡಲು ಸಾಧ್ಯ?

ಯಾರು ಏನು ಮಾಡದಿದ್ದರು ಬೇಡ, 'ಸಂಸ್ಕೃತದ ಪಂಡಿತೊತ್ತಮ'ರು ಏನೂ ಹೀಗೆ ಮಾಡದಿದ್ದರೆ ಸಾಕು. ಅವರು ತಮ್ಮ ಪಾಂಡಿತ್ಯವನ್ನು ತೋರಿಸಲೆಂದೇ ನಮಗೆ ಸಂಸ್ಕೃತಪದರಸಾಮೃತವನ್ನು ಅಜೀರ್ಣವಾಗಿ ವಾಂತಿಬೇಧಿಯಾಗುವ ವರೆಗೂ ಬಿಡದೆ, ಮೂಗು ಹಿಡಿದು ಗಂಟಲೊಳಗೆ ತುರುಕದಿದ್ದರೆ, ಆ ದೊಡ್ಡಗೆಲಸವೇ ಸಾಕು. ಅದುವೇ ದೊಡ್ಡ ಕೋರಿಕೆ, ಅಲ್ಲ ಪ್ರಾರ್ಥನೆ.

ಅದು ಅಲ್ಲದೆ, ನಾವು "ಬೆನಕರೆ, ಇದು ನಿಮಗಾಗಿ" ಎಂದು ಬರಿ ಬೆನರನ್ನು ಕುರಿತು ಹೇಳುತ್ತಿಲ್ಲವಲ್ಲ. ಈ ಮಾತುಕತೆಯು, ಯಾರನ್ನು 'ಕೊಂಕ' ಬೇಕೆಂದರೆ, ಯಾರು ಕನ್ನಡದಲ್ಲಿ ಅಪಾರ ಅಗಾಧ ಅತಿ ಅನವಶ್ಯಕ ಅನವರತ 'ಸಂಸ್ಕೃತವೊಂದೇ ಅಲ್ಲ', ಮತ್ತೆ 'ಬೇರೆ ಯಾವ ನುಡಿಯ' ಪದಗಳನ್ನು ಕನ್ನಡದಲ್ಲಿ ತುರುಕಿ, ತಮ್ಮ "ಪಾಂಡಿತ್ಯವನ್ನು", "ಭಾಷಾಪ್ರೌಢಿಮೆ"ಯನ್ನು, "ಶಿಷ್ಟ ಭಾಷೆಯನ್ನು", "ಅತ್ಯುನ್ನತ ಕನ್ನಡವನ್ನು", "ಸಾಹಿತ್ಯಿಕ ಭಾಷೆಯನ್ನು", "ನಾಗರಿಕ ಸಂಭಾಷಣೆಯನ್ನು", ತೋರಿಸಿಕೊಳ್ಳವರೋ ಅವರಿಗೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಭಾಷೆಯಲ್ಲಿ ಸರಿ ಮತ್ತು ತಪ್ಪು By: olnswamy (57 replies) August 8, 2006 - 8:17am
  • ನಿದ್ದೆ ಹತ್ತಿತ್ತು By: ಸಂಗನಗೌಡ (Aug 20 2006 - 8:11pm)
  • ನಮ್ಮ ಕೈಲಾದ್ದನ್ನು ಮಾಡೋಣ By: benaka (Aug 14 2006 - 3:03pm)
    • ಶಿಷ್ಟಭಾಷೆ! By: ಮಹೇಶ ಭೋಗಾದಿ (Aug 14 2006 - 4:36pm)
      • ಬರೆಯುತ್ತಿರುವವರನ್ನು ಹೆದರಿಸಿ ಓಡಿಸಬೇಡಿ ;-) By: hpn (Aug 15 2006 - 10:43pm)
        • ಸಂವಹನವೊಂದೇ By: ಮಹೇಶ ಭೋಗಾದಿ (Aug 16 2006 - 10:56am)
          • "ಉಳಿಸುವ, ಬೆಳೆಸುವ ಗೋಳು" ಒಂದು non-existent entity By: hpn (Aug 16 2006 - 11:28am)
  • ಮಾಡಿನೋಡೋಣ! By: benaka (Aug 14 2006 - 9:54am)
    • ಉ: ಮಾಡಿನೋಡೋಣ! By: kannadakanda (Jul 22 2008 - 1:16pm)
      • ಉ: ಮಾಡಿನೋಡೋಣ! By: mahesha (Jul 22 2008 - 1:37pm)
        • ಉ: ಮಾಡಿನೋಡೋಣ! By: savithru (Jul 22 2008 - 2:18pm)
          • ಉ: ಮಾಡಿನೋಡೋಣ! By: mahesha (Jul 22 2008 - 2:53pm)
            • ಉ: ಮಾಡಿನೋಡೋಣ! By: savithru (Jul 23 2008 - 2:15pm)
              • ಉ: ಮಾಡಿನೋಡೋಣ! By: mahesha (Jul 23 2008 - 3:13pm)
                • ಉ: ಮಾಡಿನೋಡೋಣ! By: savithru (Jul 24 2008 - 12:23pm)
    • ಹೇಗೆ ಬೇರೆ ಮತ್ತು ಯಾವುದು ತುರುಕಾಟ By: ಮಹೇಶ ಭೋಗಾದಿ (Aug 14 2006 - 11:19am)
      • ಅದನ್ನೇ ನಾನೂ ಹೇಳುತ್ತಿರುವುದು! By: benaka (Aug 14 2006 - 12:30pm)
        • ಇದಕ್ಕೆ ಉತ್ತರವೆಲ್ಲಿ? By: ಮಹೇಶ ಭೋಗಾದಿ (Aug 14 2006 - 2:59pm)
  • ದೆವ್ವ ದೊಡ್ಡದೈತೆ ಕಣಪ್ಪೊ! By: ಸಂಗನಗೌಡ (Aug 13 2006 - 6:20pm)
    • ಸಮ್ಮೇಳನ By: ಮಹೇಶ ಭೋಗಾದಿ (Aug 14 2006 - 11:22am)
  • ಸಕ್ಕದವದು ಕಲ್ಲು By: ಸಂಗನಗೌಡ (Aug 12 2006 - 11:52am)
    • ಕಲ್ಲು-ಸಕ್ಕರೆ-ಹಾಲು By: ಮಹೇಶ ಭೋಗಾದಿ (Aug 12 2006 - 2:53pm)
  • ಭೂತ ಚೇಷ್ಟೆ By: benaka (Aug 12 2006 - 7:35am)
  • ಕನ್ನಡಂಗಳ್ By: ಸಂಗನಗೌಡ (Aug 11 2006 - 4:43pm)
  • ರಸಂನೇ ರಸ ಮಾಡಿ By: ಸಂಗನಗೌಡ (Aug 11 2006 - 3:58pm)
  • ರಸಂನೂ ಬೇಡ,ಸಾರೂ ಬೇಡ By: ಸಂಗನಗೌಡ (Aug 11 2006 - 3:36pm)
    • ಏನ್ ಮಾಡೋದು By: nareshov (Aug 11 2006 - 7:56pm)
  • ಭೂತ ಅಂದುಕೊಳ್ಳಿ By: ಸಂಗನಗೌಡ (Aug 11 2006 - 3:02pm)
    • ಒರಟು By: ಮಹೇಶ ಭೋಗಾದಿ (Aug 12 2006 - 9:33am)
    • ಸಂಸ್ಕೃತದ ತದ್ಭವ ಸಕ್ಕದ By: ಮಹೇಶ ಭೋಗಾದಿ (Aug 11 2006 - 3:27pm)
  • ದೆವ್ವವನ್ನು ಬೇಗ ಬಿಡಿಸಿಕೊಳ್ಳಿ By: benaka (Aug 11 2006 - 1:56pm)
    • ತಪ್ಪು ಮಾಹಿತಿ By: ಮಹೇಶ ಭೋಗಾದಿ (Aug 11 2006 - 2:34pm)
    • - By: ಮಹೇಶ ಭೋಗಾದಿ (Aug 11 2006 - 2:30pm)
  • ನನ್ನ ತಾಯ್ನುಡಿ ಕನ್ನಡ By: ಸಂಗನಗೌಡ (Aug 11 2006 - 12:52pm)
    • ಸಾರು, By: nareshov (Aug 11 2006 - 7:36pm)
    • ದೆವ್ವ ತೊಲಗಲಿ By: ಮಹೇಶ ಭೋಗಾದಿ (Aug 11 2006 - 1:29pm)
  • ರಸಂ:ಸರಸಂ-ವಿರಸಂ! By: benaka (Aug 11 2006 - 11:35am)
    • ರಸಾಭಾಸ By: ismail (Aug 11 2006 - 3:37pm)
    • ಅಯ್ಯೊ ಒಂದು ಕನ್ನಡದಲ್ಲಿ ಸಾರಿಗೆ ರಸಂ ಎನ್ನುವರೇನೋ! By: ಮಹೇಶ ಭೋಗಾದಿ (Aug 11 2006 - 11:53am)
  • ತಿಳಿಸಿ By: ಸಂಗನಗೌಡ (Aug 11 2006 - 8:54am)
    • ಪ್ರಯತ್ನ By: ಮಹೇಶ ಭೋಗಾದಿ (Aug 11 2006 - 9:46am)
  • ಟ್ರಾಯ್ ಮಾಡೋಣ By: ಸಂಗನಗೌಡ (Aug 10 2006 - 3:15pm)
    • ತಿಳಿ/ಅರಿ By: ಮಹೇಶ ಭೋಗಾದಿ (Aug 10 2006 - 3:48pm)
  • ಕನ್ನಡ ಬಳಸಲು ಹೆದರಿಕೆಯೇಕೆ? By: benaka (Aug 10 2006 - 8:04am)
    • ಮೞೆ ಬೇಳುತ್ತಿದೆ... :P By: nareshov (Aug 11 2006 - 7:30pm)
    • ಒಂದು ರಸಂ ಮೀಮಾಂಸೆ By: ismail (Aug 10 2006 - 1:30pm)
  • ಧನ್ಯವಾದಗಳು ಮತ್ತು 'ಮೈ ಫೇರ್‍ ಲೇಡಿ' By: Rohit (Aug 9 2006 - 4:57pm)
    • ಸೇವಂತಿ ಪ್ರಸಂಗ ಮತ್ತು ಭಾಷೆ By: shreekant.mishrikoti (Aug 9 2006 - 5:11pm)
      • ಹೃದಯವೇಕೆ, ಎದೆ/ಗುಂಡಿಗೆಯಿಲ್ಲವೆ? By: ಮಹೇಶ ಭೋಗಾದಿ (Aug 10 2006 - 12:39pm)
        • facts: By: nareshov (Aug 11 2006 - 2:46pm)
  • ಯಾರ ಕನ್ನಡ, ಕನ್ನಡ? By: Kamalakar (Aug 9 2006 - 3:12pm)
    • ಭಾಷಾಭಿಮಾನ By: ismail (Aug 9 2006 - 3:56pm)
  • ಕನ್ನಡಂಗಳ್ By: ಮಹೇಶ ಭೋಗಾದಿ (Aug 9 2006 - 1:45pm)
    • ಕನ್ನಡಂಗಳು ಬಗೆ ಬಗೆಯ ದೇಸಿಗಳು By: ismail (Aug 9 2006 - 10:35pm)
      • ಕನ್ನಂಡಂಗಳೊ ಅಂದರೆ? By: ಮಹೇಶ ಭೋಗಾದಿ (Aug 10 2006 - 11:33am)
  • ಕಳಿಸು By: gvmt (Aug 8 2006 - 10:18pm)
    • ಉ: ಕಳಿಸು By: kannadakanda (Jul 21 2008 - 3:51pm)
    • ಕಳುಹು. By: ಮಹೇಶ ಭೋಗಾದಿ (Aug 9 2006 - 12:34pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಗೆಳೆಯ
    August 29, 2008 - 12:26am
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:37pm
  • Rajeshwari
    ಉ: ಕಚೇರಿ ಎಂಬ ನರಕ-೧
    August 28, 2008 - 10:36pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 10:29pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:19pm
  • Sunil Jayaprakash
    ಉ: ಆರದ ದೀಪ
    August 28, 2008 - 10:19pm
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:18pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:12pm
  • ಸಂಗನಗೌಡ
    ಉ: "ಈಗ" ಅಪ್ಪ ಎಲ್ಲಿದ್ದಾನೆ?!
    August 28, 2008 - 10:04pm
  • uniquesupri
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 28, 2008 - 9:43pm
ಇನ್ನಷ್ಟು


ನನಗೆ ಯಾರೂ ಶತ್ರುಗಳಿಲ್ಲ. ಅವರೆಲ್ಲರೂ ಈಗಾಗಲೇ ಸತ್ತಿದ್ದಾರೆ

— ವಿನ್ ಸ್ಟನ್ ಚರ್ಚಿಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator