'ಇ' ಟಿವಿ- ಚೆನ್ನಾಗಿದೆ. ಅದು ರಾಮೊಜಿ ರಾಯ್ರ್ದು ! ರಾಜ್ಕುಮಾರ್ದಲ್ಲ !!
- 'ಇ' ಟಿವಿ- ಚೆನ್ನಾಗಿದೆ. ಅದು ರಾಮೊಜಿ ರಾಯ್ರ್ದು ! ರಾಜ್ಕುಮಾರ್ದಲ್ಲ !! By: venkatesh (Aug 24 2006 - 8:42am)
- ಜೊತೆಯಲ್ಲಿ ಅವರೂ ಗೋಣು ಆಡಿಸೋದು ಕಡಿಮೆ ಆದರೂ ಒಳ್ಳೆಯದೇ... By: kaaloo (Aug 6 2006 - 12:37am)
- ಕಮಲಹಾಸನ್ - ಉದಯೋನ್ಮುಖ ನಟ ? By: shreekant.mishrikoti (Jul 25 2006 - 11:54am)
- ಕಮಲಹಾಸನ್ ಬಗ್ಗೆ..... By: venkatesh (Jul 25 2006 - 3:55pm)

RSS:
'ಇ' ಟಿವಿ- ಚೆನ್ನಾಗಿದೆ. ಅದು ರಾಮೊಜಿ ರಾಯ್ರ್ದು ! ರಾಜ್ಕುಮಾರ್ದಲ್ಲ !!
'ನಮ್ಮ 'ಟೀವಿ' ಚಾನಲ್ ನಿರೂಪಕರಿಗೆ.......'
ಸರಿಯಾಗಿ ಹೇಳಿದ್ದೀರಿ.
"ಬಿಡಪ್ಪ ಅತ್ಲಾಗೆ, ಏನಾರ ಮಾಡ್ಕಂಡ್ ಸಾಯ್ಲಿ" ಅಂತ ನಿಮ್ಮ ಪ್ರಶ್ನೆಗೆ ಉತ್ತರ ಹೇಳಿದ್ನಲ್ಲ, ಅವನು ನೋಡಿ, ಇವರ ಯೋಗ್ಯತೆ ಸರಿಯಾಗಿ ಅಳ್ದಿದಾನೆ. ಹಳ್ಳಿ ರೈತನದೆ ಆದ ವ್ಯಕ್ತಿತ್ವ ಇದೆ. ಭಾಷೆ ಇದೆ. ಅವನೇಕೆ ಕೆಟ್ಟ ಬೆಂಗ್ಳೂರ್ ಭಾಷೆ ಮಾತಾಡ್ಬೇಕು.ಹೇಳಿ. ಕನ್ನಡ ವೂ ಸರಿಯಾಗ್ ಬರಲ್ಲ. ಇಂಗ್ಲೀಷು ಅಷ್ಟಕ್ಕಷ್ಟೆ ! ನಮ್ಮದೂ ಅಂತ ಎಲ್ಲಿದೆ ಒಂದು ಸರಿಯಾದ್ 'ಟಿವಿ' ಹೇಳಿ.
ತಮಿಳ್ ನೊರ್ಗೆ, ಜಯಲಲಿತ, ಕರುಣಾನಿಧಿ, ಹೇಳಿ ಮಾಡಿಸಿದಂತೆ ಸಹಕರಿಸಿದಾರೆ. ಕನ್ನಡದಲ್ಲಿ ರಾಜ್ ಕುಮಾರ್, ಮನಸ್ ಮಾಡಿದ್ರೆ, ಖಂಡಿತ ಇಂತಹ ಉತ್ತಮ ಕೆಲ್ಸಾ ಮಾಡ್ಬೊದಾಗಿತ್ತು. ಮಾಡ್ಲಿಲ್ವೆ !!
ನಮ್ಮ 'ಮನದ ಇಂಗಿತ'ಗಳನ್ನು ಹೇಳಲು ಒಂದ್ 'ಛಾನಲ್' ಆದ್ರು ಬೇಡ್ವೆ ಸ್ವಾಮಿ ?
ಯಾರು ಈ 'ಕನ್ನಡ್ದೊರು' ? ಅಂತ ಅನುಮಾನ ಬರುತ್ತೆ. 'ಬಂಗಾರದ ಬೇಟೆಯಲ್ಲಿ' ಕನ್ನಡದ 'ಮಾಡಾನ' ಅಂತ ತಪ್ಪು ತಪ್ಪು ಕನ್ನಡದಲ್ಲಿ 'ನಡೆಸಿಕೊಡುವ 'ಬೆಡಗಿಯ ವೈಯ್ಯಾರ ಮುಖ್ಯವೊ', ಅಥವಾ ಅವಳ ನುಡಿಯೋ ? ಯೋಚಿಸಿ. ಎಲ್ಲಿ 'ಟಿವಿ' ಗೆ ಸಂದರ್ಶನ ತೊಗೊಂಡ್ರೂ, ಮಾತು ಕನ್ನಡ ಬಿಟ್ಟು ಹಿಂದಿಯಲ್ಲೊ ಅಥವ ಇಂಗ್ಲೀಷ್ ನಲ್ಲೊ ಇರುತ್ತೆ. ಆಮೇಲೆ "ಕನ್ನಡವನ್ನು ಅವರ ಜಾಯಮಾನದಲ್ಲೇ ಉಪಯೋಗಿಸಿಲ್ಲವೇನೊ ಎಂಬಂತೆ ಪದಗಳಿಗೆ ಹುಡುಕಾಟ". ಮೊದಲು ಜನರಿಗೆ ಕನ್ನಡ ಭಾಷೆಯ 'ಸೊಗಡೇನು' ಅಂತ ತಿಳಿಸಿಕೊಡಿ ಮಾರಾಯ್ರೆ ! ಇದು ಮುಖ್ಯ. ಕನ್ನಡದ ತತ್ಸಮ, ತದ್ಭವ, ಕ್ರಿಯಾಪದದ ಬಳಕೆ ಸರಿಯಿಲ್ಲ. ಹ್ರಸ್ವ, ದೀರ್ಘ,ಒತ್ತು, ಕೊಂಡಿ ಇತ್ಯಾದಿ, ಆಮೇಲೆ ತಿಳಿಸಿ. ಬರೀ 'ಪಂಡಿತ ಪಾಮರರ ಮಾತುಕತೆ' ಸ್ವಲ್ಪ ನಿಲ್ಲಿಸಿ. ಬನ್ನಿ ಮೈದಾನಕ್ಕೆ. ನೋಡಿ ಏನಾಗ್ತಾ ಇದೆ ಪ್ರಪಂಚದ ವಿದ್ಯಮಾನಗಳು. ಕನ್ನಡದವರನ್ನು 'ಶಕ್ತಿಶಾಲಿ'ಗಳಾಗಿ ಮಾಡಿ. ಒಮ್ಮೆ ಅವರಿಗೆ ಆಸಕ್ತಿ ಬಂತು ಅಂದರೆ ಸಾಕು ಎಂಥಾ 'ಮೋಡಿ' ಆಗುತ್ತೆ ಗಮನಿಸಿ. ಯಾರಿಗೂ ಅವರ 'ಮಾತೃ ಭಾಷೆಯಮೇಲೆ ಅಭಿಮಾನ' ಇದ್ದೇ ಇರುತ್ತೆ. "ನಿರಭಿಮಾನದ ಧೂಳ" ನ್ನು ಕೊಡವಿ ಮುಂದುವರೆಯಲು ಅನುವುಮಾಡಿಕೊಡಿ ಅಯ್ಯ !
ಇನ್ನು 'ಚಂದನ- ಇದು ಕನ್ನಡ ವಾಹಿನಿ. ಎಂದು ಹೇಳಿದರೆ ಸಾಕೆ ? ಕೇಳ್ಸಲ್ಲ, ಕಾಣಲ್ಲ....ಅಂದ್ರೆ ನಮಗೆ....ಮುಂಬೈ ನಲ್ಲಿ.
'ಇ' ಟಿವಿ- ಚೆನ್ನಾಗಿದೆ. ಅದು ರಾಮೊಜಿ ರಾಯ್ರ್ದು ! ರಾಜ್ಕುಮಾರ್ದಲ್ಲ !!