ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಪ್ಲಾನೆಟ್ ಕನ್ನಡ - "ಅನಾಮಿಕರ" ನಿರ್ಬಂಧವೇಕೆ?

August 18, 2006 - 10:52pm — mana

ಪ್ಲಾನೆಟ್ ಕನ್ನಡ - "ಅನಾಮಿಕರ" ನಿರ್ಬಂಧವೇಕೆ?

mana's picture

ಶರಣು,

ಪ್ಲಾನೆಟ್ ಕನ್ನಡದಲ್ಲಿ "ಅನಾಮಿಕರು" ಬರೆಯುವ ಬ್ಲಾಗುಗಳನ್ನು ತೆಗೆದುಹಾಕುವ ನಿರ್ಣಯವನ್ನು ಏಕೆ ರೂಪಿಸಲಾಗಿದೆ?

ಕುವೆಂಪು ಅವರು ಕುವೆಂಪು ಎಂದೇ ಎಲ್ಲೆಲ್ಲೂ ಪರಿಚಯ (ಕೆ.ವಿ.ಪುಟ್ಟಪ್ಪ ಎಂದಲ್ಲ)

ಮುದ್ದಣ ಅವರು ಮುದ್ದಣ ಎಂದೇ ಎಲ್ಲೆಲ್ಲೂ ಪರಿಚಯ (ನಂದಳಿಕೆ ಲಕ್ಷ್ಮಿನಾರಾಯಣಪ್ಪ ಎಂದಲ್ಲ)

ಕುಮಾರವ್ಯಾಸ ಅವರು ಕುಮಾರವ್ಯಾಸ ಎಂದೇ ಎಲ್ಲೆಲ್ಲೂ ಪರಿಚಯ (ಗದುಗಿನ ವೀರನಾರಣಪ್ಪ ಎಂದಲ್ಲ)

ಇನ್ನು ತ್ರಿವೇಣಿ, ಚದುರಂಗ, ಬೀಚಿ, ಇವರುಗಳ ನಿಜ ಹೆಸರುಗಳು ತಿಳಿದವರೇ ಕಡಿಮೆ.

ಇವರೆಲ್ಲರೂ ಅನಾಮಿಕರೇ?

ಪತ್ರಿಕೆಗಳ ಅಂಕಣಗಳೂ ಇದಕ್ಕೆ ಹೊರತಲ್ಲ. "ನೀವು ಕೇಳಿದಿರಿ" ಸುಧಾ ವಾರಪತ್ರಿಕೆಯ ಖ್ಯಾತ ಅಂಕಣಗಳಲ್ಲೊಂದು. ಆ ಅಂಕಣಕಾರರ ನಿಜವಾದ ಹೆಸರು ಏನೆಂದು ಯಾರಿಗಾದರೂ ತಿಳಿದಿದೆಯೇ? ಈ ರೀತಿ ಅಂಕಣಗಳು ವಿಜಯ ಕರ್ನಾಟಕ ಮುಂತಾದ ಇತರ ಪತ್ರಿಕೆಗಳಲ್ಲಿಯೂ ಇವೆ.

ಇವು ಉದಾಹರಣೆಗಳು ಮಾತ್ರ. ವಿಷಯ ಹೀಗಿರುವಾಗ ನಿಮ್ಮ ಹೆಸರನ್ನು ಹಾಕಿಯೇ ಹಾಕಬೇಕು ಎನ್ನುವ ಬಲವಂತ ಏಕೆ? ಹೆಸರುಗಳನ್ನು ಹಾಕಿಕೊಳ್ಳುವುದು, ಬಿಡುವುದು ಅವರವರ ಇಷ್ಟ.

ಅಷ್ಟಕ್ಕೂ ನಿಜ ಹೆಸರು ಎಂದರೆ ಯಾವುದು? ಹತ್ತನೇ ತರಗತಿಯ ಅಂಕಪಟ್ಟಿಯಲ್ಲಿರುವುದೇ? ಡಿಗ್ರಿ ಸರ್ಟಿಫಿಕೇಟ್ ನಲ್ಲಿ ಪ್ರಿಂಟ್ ಆದಂತಿರುವುದೇ? ಅಥವಾ ನಾಮಕರಣ ಮಾಡಿದಾಗ ಬರೆಸಿದಾಗ ಇರುವ ಜಾತಕ, ಕುಂಡಲಿಯಲ್ಲಿರುವುದೇ? "ಇದೇ ನನ್ನ ನಿಜ ಹೆಸರು" ಎಂದು ಪ್ರೂವ್ ಮಾಡಲು ಏನಾದರೂ ಸರ್ಟಿಫಿಕೇಟ್ ಕೊಡಬೇಕಿದೆಯೆ?

ಪ್ಲಾನೆಟ್ ಕನ್ನಡ, ಕನ್ನಡದ ಬ್ಲಾಗುಗಳ ಕ್ರೋಢಿಕರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ಕೆಲಸ ಸಾಗಬೇಕಿದೆ ಹೊರತು, "ನಿಜ ಹೆಸರು" ಹಾಕಿಕೊಂಡಿಲ್ಲ ಎಂಬ ಕಾರಣಕ್ಕೆ ತೆಗೆಯುತ್ತಾ ಹೋಗಬಾರದು.

ನನ್ನ ಅಭಿಪ್ರಾಯದಲ್ಲಿ, ಪ್ಲಾನೆಟ್ ಕನ್ನಡದಲ್ಲಿ ತುರ್ತಾಗಿ ಆಗಬೇಕಿರುವ ಕೆಲಸ: ಕನ್ನಡೇತರ ಬ್ಲಾಗುಗಳಿಗೆ ನಿರ್ಬಂಧವನ್ನೇರುವುದು. ಹೆಸರೇ ಪ್ಲಾನೆಟ್ ಕನ್ನಡ. ಅಂದರೆ ಪ್ರಪಂಚದಾದ್ಯಂತ ಇರುವ ಕನ್ನಡ ಬ್ಲಾಗುಗಳ ಸಂಗಮ. "ಕನ್ನಡಿಗ" ಎಂಬ ಬೋರ್ಡ್ ನೇತುಹಾಕಿಕೊಂಡು ಕನ್ನಡೇತರ ಬರಹಗಳನ್ನು ಬರೆಯುವವರಿಗೆ ಏಕೆ ಮಣೆ ಹಾಕಬೇಕು?

- ಮನ

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಪ್ಲಾನೆಟ್ ಕನ್ನಡದಲ್ಲಿ ಬದಲಾವಣೆಗಳು By: hpn (2 replies) July 25, 2006 - 1:08pm
  • ಪ್ಲಾನೆಟ್ ಕನ್ನಡ - "ಅನಾಮಿಕರ" ನಿರ್ಬಂಧವೇಕೆ? By: mana (Aug 18 2006 - 10:52pm)
    • ಸಂಬಂಧವಿಲ್ಲದ ಉದಾಹರಣೆಗಳು By: hpn (Aug 18 2006 - 11:53pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • asuhegde
    ಉ: ಬರಿದಾದ ಭಾವನೆಗಳು
    January 9, 2009 - 9:39am
  • nkumar
    ಉ: ಹಂಸನಾದ
    January 9, 2009 - 9:38am
  • anil.ramesh
    ಉ: ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
    January 9, 2009 - 9:33am
  • asuhegde
    ಉ: ಕಾಗದ ಬಂದಿದೆ-ಓದುವಿರಾ?
    January 9, 2009 - 9:19am
  • hariharapurasridhar
    ಉ: ಬರಿದಾದ ಭಾವನೆಗಳು
    January 9, 2009 - 9:03am
  • mahesha
    ಉ: ಬರಿದಾದ ಭಾವನೆಗಳು
    January 9, 2009 - 8:50am
  • savithasr
    ಉ: ಬರಿದಾದ ಭಾವನೆಗಳು
    January 9, 2009 - 8:38am
  • savithasr
    ಉ: ಸ್ಯಾರಿ....ಸ್ಯಾಲರಿ (ಶಾಯರಿ )
    January 9, 2009 - 8:19am
  • hariharapurasridhar
    ಉ: ಗಿಳಿಯು ಪಂಜರದೊಳಿಲ್ಲ
    January 9, 2009 - 8:18am
  • savithasr
    ಉ: ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
    January 9, 2009 - 8:16am
ಇನ್ನಷ್ಟು


ದುರ್ಬಲಮತಿಗಿಲ್ಲಾತ್ಮ ರಸೋದಯ
ದುರ್ಬಲ ಸಮಾಜಕದು ಮೃಗ್ಯ
ಹಬ್ಬುಗೆಯರಿವರ್ಗವ ಪಳಗಿಸಿ ಮನ
ದುಬ್ಬ ಪಡೆವವರಿಗಾ ಭಾಗ್ಯ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator