ಕನ್ನಡಿಗರು ಕೇಳದೆ, ಕರ್ನಾಟಕದಲ್ಲಿ ಅಲ್ಲಲ್ಲ...ಭಾರತದಲ್ಲಿ ಏನೂ ಸಿಗುವುದಿಲ್ಲ ಎನ್ನುವುದು ಸಿದ್ಧ ಸತ್ಯ. ಕರ್ನಾಟಕದ ಸೈಬರ್ ಕೆಫೆಗಳಲ್ಲಿ ಕನ್ನಡ ತಂತ್ರಾಂಶಗಳನ್ನು ಅಳವಡಿಸಬೇಕಾದ ಅಗತ್ಯ-ಆಲೋಚನೆ ಯಾರಿಗೂ ಇಲ್ಲಿಯವರೆಗೂ ಬಂದಿರಲಿಲ್ಲವೆನ್ನುವುದು..ನಮ್ಮಂತಹ ಸೈಬರ್-ಮೋಹಿಗಳಿಗೆ ನಾಚಿಕೆಗೇಡಿನ ಸಂಗತಿ. ಆವತ್ತು ಕನ್ನಡಸಾಹಿತ್ಯ.ಕಾಂನ ಶೇಖರಪೂರ್ಣರವರು ಈ ವಿಷಯವನ್ನು ಕನ್ನಡಸಾಹಿತ್ಯ.ಕಾಂನ ೬ನೇ ವಾರ್ಷಿಕೋತ್ಸವದಂದು ನೆರೆದ ಚಿಂತಕರು, ಸಾಹಿತಿ, ಕವಿಗಳ ಮುಂದೆ ಪ್ರಸ್ತಾಪಿಸುವುದರೊಂದಿಗೆ ನಮಗೆ ಸಮಸ್ಯೆ ಏನೆಂದು ಮನವರಿಕೆ ಮಾಡಿಕೊಟ್ಟರು. ಸಿದ್ಧಲಿಂಗಯ್ಯನವರು ವೇದಿಕೆ ಮೇಲಿಂದಲೇ ಇದರ ಅಗತ್ಯ ಮನಗಂಡಿದ್ದು, ಈ ಕುರಿತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು ಸ್ವಾಗತಾರ್ಹ. ಆದರೆ ಪೆಪ್ಸಿ-ಕೋಲ ನಿಷೇಧಿಸಲು ೩ ವರ್ಷ(ಅದು ವಿಷವೆಂದು ಸಾಬೀತಾದ ಮೇಲೂ) ತೆಗೆದುಕೊಂಡ ಕೇಂದ್ರ ಸರ್ಕಾರದ ನಿರ್ಧಾರದಂತಹ ಮೂರ್ಖ ನಿಲುವನ್ನು ರಾಜ್ಯ ಸರ್ಕಾರ ತಾಳದಿರಲಿ. ತಕ್ಷಣದಿಂದಲೇ ಸೈಬರ್ ಕೆಫೆಗಳಲ್ಲಿ ಕನ್ನಡ ತಂತ್ರಾಂಶಗಳನ್ನು ಕಡ್ಡಾಯವಾಗಿ ಅನುಸ್ಥಾಪನೆ ಮಾಡುವ ಆದೇಶ ಜಾರಿಯಾಗಲಿ. ಅದಕ್ಕಾಗಿ ನಿಮ್ಮದೊಂದು ಕೂಗು ಸರ್ಕಾರದ ಕಿವಿ ಮುಟ್ಟಲಿ.... ಸಮಸ್ಯೆಗಳ ಪ್ರಸ್ತಾಪ ಮತ್ತು ಅವುಗಳನ್ನು ಅನುಷ್ಟಾನಗೊಳಿಸಲು ಸಮುದಾಯವನ್ನು,ಸರ್ಕಾರವನ್ನು ಎಚ್ಚರಿಸುವ ದಿಕ್ಕಿನಲ್ಲಿ ಕನ್ನಡಸಾಹಿತ್ಯ.ಕಾಂ ಮುಂಚೂಣಿಯಲ್ಲಿರಲಿ.... ಹೊಸ ಚರ್ಚೆಗಳಿಗೆ ಅದು ಸದಾ ಮುನ್ನುಡಿ ಬರೆಯಲೆನ್ನುತ್ತಾ... --
ಕೇಳಿ ಪಡೆಯದಿದ್ದರೆ ಕನ್ನಡಕ್ಕೆ ಏನೂ ಸಿಗೋದಿಲ್ವಂತೆ...! --.ಹೊಸ ಗಾದೆ
ಸ್ನೇಹಿತರೆ,
ಕನ್ನಡಿಗರು ಕೇಳದೆ, ಕರ್ನಾಟಕದಲ್ಲಿ ಅಲ್ಲಲ್ಲ...ಭಾರತದಲ್ಲಿ ಏನೂ ಸಿಗುವುದಿಲ್ಲ ಎನ್ನುವುದು ಸಿದ್ಧ ಸತ್ಯ. ಕರ್ನಾಟಕದ ಸೈಬರ್ ಕೆಫೆಗಳಲ್ಲಿ ಕನ್ನಡ ತಂತ್ರಾಂಶಗಳನ್ನು ಅಳವಡಿಸಬೇಕಾದ ಅಗತ್ಯ-ಆಲೋಚನೆ ಯಾರಿಗೂ ಇಲ್ಲಿಯವರೆಗೂ ಬಂದಿರಲಿಲ್ಲವೆನ್ನುವುದು..ನಮ್ಮಂತಹ ಸೈಬರ್-ಮೋಹಿಗಳಿಗೆ ನಾಚಿಕೆಗೇಡಿನ ಸಂಗತಿ. ಆವತ್ತು ಕನ್ನಡಸಾಹಿತ್ಯ.ಕಾಂನ ಶೇಖರಪೂರ್ಣರವರು ಈ ವಿಷಯವನ್ನು ಕನ್ನಡಸಾಹಿತ್ಯ.ಕಾಂನ ೬ನೇ ವಾರ್ಷಿಕೋತ್ಸವದಂದು ನೆರೆದ ಚಿಂತಕರು, ಸಾಹಿತಿ, ಕವಿಗಳ ಮುಂದೆ ಪ್ರಸ್ತಾಪಿಸುವುದರೊಂದಿಗೆ ನಮಗೆ ಸಮಸ್ಯೆ ಏನೆಂದು ಮನವರಿಕೆ ಮಾಡಿಕೊಟ್ಟರು. ಸಿದ್ಧಲಿಂಗಯ್ಯನವರು ವೇದಿಕೆ ಮೇಲಿಂದಲೇ ಇದರ ಅಗತ್ಯ ಮನಗಂಡಿದ್ದು, ಈ ಕುರಿತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು ಸ್ವಾಗತಾರ್ಹ. ಆದರೆ ಪೆಪ್ಸಿ-ಕೋಲ ನಿಷೇಧಿಸಲು ೩ ವರ್ಷ(ಅದು ವಿಷವೆಂದು ಸಾಬೀತಾದ ಮೇಲೂ) ತೆಗೆದುಕೊಂಡ ಕೇಂದ್ರ ಸರ್ಕಾರದ ನಿರ್ಧಾರದಂತಹ ಮೂರ್ಖ ನಿಲುವನ್ನು ರಾಜ್ಯ ಸರ್ಕಾರ ತಾಳದಿರಲಿ. ತಕ್ಷಣದಿಂದಲೇ ಸೈಬರ್ ಕೆಫೆಗಳಲ್ಲಿ ಕನ್ನಡ ತಂತ್ರಾಂಶಗಳನ್ನು ಕಡ್ಡಾಯವಾಗಿ ಅನುಸ್ಥಾಪನೆ ಮಾಡುವ ಆದೇಶ ಜಾರಿಯಾಗಲಿ. ಅದಕ್ಕಾಗಿ ನಿಮ್ಮದೊಂದು ಕೂಗು ಸರ್ಕಾರದ ಕಿವಿ ಮುಟ್ಟಲಿ....
ಸಮಸ್ಯೆಗಳ ಪ್ರಸ್ತಾಪ ಮತ್ತು ಅವುಗಳನ್ನು ಅನುಷ್ಟಾನಗೊಳಿಸಲು ಸಮುದಾಯವನ್ನು,ಸರ್ಕಾರವನ್ನು ಎಚ್ಚರಿಸುವ ದಿಕ್ಕಿನಲ್ಲಿ ಕನ್ನಡಸಾಹಿತ್ಯ.ಕಾಂ ಮುಂಚೂಣಿಯಲ್ಲಿರಲಿ....
ಹೊಸ ಚರ್ಚೆಗಳಿಗೆ ಅದು ಸದಾ ಮುನ್ನುಡಿ ಬರೆಯಲೆನ್ನುತ್ತಾ...
--
ವಂದನೆಗಳೊಂದಿಗೆ.. ಅರೇಹಳ್ಳಿ ರವಿ